AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಪ್ಪು ಸರ್ ನೆನಪಿನಲ್ಲಿ ಗಡ್ಡ ಬಿಟ್ಟೆ’: ಭಾವುಕವಾಗಿ ಮಾತನಾಡಿದ ನಟ ಎಂ.ಕೆ. ಮಠ

‘ಅಪ್ಪು ಸರ್ ನೆನಪಿನಲ್ಲಿ ಗಡ್ಡ ಬಿಟ್ಟೆ’: ಭಾವುಕವಾಗಿ ಮಾತನಾಡಿದ ನಟ ಎಂ.ಕೆ. ಮಠ

ಮಂಗಳ ರಾಜಗೋಪಾಲ್​
| Edited By: |

Updated on: Aug 24, 2026 | 8:52 PM

Share

‘ಲಾಕ್​ಡೌನ್ 21 ಡೇಸ್’ ಸಿನಿಮಾದಲ್ಲಿ ಎಂ.ಕೆ. ಮಠ ಅವರು ನಟಿಸಿದ್ದಾರೆ. ಈ ಸಿನಿಮಾದ ಮುಹೂರ್ತ ಸಂದರ್ಭದಲ್ಲಿ ಅವರು ಕೆಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಟಿವಿ9 ಜೊತೆ ಮಾತನಾಡಿದ ಅವರು ಪುನೀತ್ ರಾಜ್​ಕುಮಾರ್ ಅವರನ್ನು ಸ್ಮರಿಸಿಕೊಂಡರು. ಅವರು ಮಾತನಾಡಿದ ವಿಡಿಯೋ ಇಲ್ಲಿದೆ ನೋಡಿ..

‘ಲಾಕ್​ಡೌನ್ 21 ಡೇಸ್’ ಸಿನಿಮಾದಲ್ಲಿ ಎಂ.ಕೆ. ಮಠ ಅವರು ನಟಿಸಿದ್ದಾರೆ. ಈ ಸಿನಿಮಾದ ಮುಹೂರ್ತ ಸಂದರ್ಭದಲ್ಲಿ ಅವರು ಕೆಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಟಿವಿ9 ಜೊತೆ ಮಾತನಾಡಿದ ಅವರು ಪುನೀತ್ ರಾಜ್​ಕುಮಾರ್ (Puneeth Rajkumar) ಅವರನ್ನು ಸ್ಮರಿಸಿಕೊಂಡರು. ‘ನಾನು ಇಷ್ಟು ಉದ್ದ ಗಡ್ಡ ಬಿಟ್ಟಿದ್ದೇನೆ. ಅದಕ್ಕೆ ಒಂದು ಕಾರಣ ಇದೆ. ಅಪ್ಪು ಸರ್ ಸಿನಿಮಾಗೋಸ್ಕರ ನಾನು ಗಡ್ಡ ಬಿಟ್ಟೆ. ಇನ್ನೇನು ಆ ಸಿನಿಮಾ ಮುಗಿದ ಕೂಡಲೇ ಗಡ್ಡ ತೆಗೆಯಬೇಕು ಅಂದುಕೊಂಡಿದ್ದೆ. ಅಷ್ಟರಲ್ಲಿ ಅಪ್ಪು ಸರ್ ಹೊರಟುಹೋದರು. ಇನ್ನು ಗಡ್ಡ ತೆಗೆಯುವುದು ಯಾಕೆ ಅಂತ ನಾನು ಕಂಟಿನ್ಯೂ ಮಾಡಿದೆ. ಇಷ್ಟು ಉದ್ದ ಗಡ್ಡವನ್ನು ನಾನು ಜೀವನಪರ್ಯಂತ ಬಿಡುತ್ತೇನೆ ಅಂತ ಹರಕೆ ಹೊತ್ತುಕೊಂಡಿಲ್ಲ. ಅಪ್ಪು ಸರ್ ನೆನಪಿಗೋಸ್ಕರ ಹಾಗೆಯೇ ಬಿಟ್ಟಿದ್ದೇನೆ. ಯಾವುದಾದರೂ ಪಾತ್ರಕ್ಕೆ ಗಡ್ಡ ತೆಗೆಯಬೇಕು ಎಂದರೆ ಖಂಡಿತಾ ತೆಗೆಯಬಲ್ಲೆ’ ಎಂದು ಎಂ.ಕೆ. ಮಠ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us