Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನಗೆ ತ್ರಿವಿಕ್ರಮ್ ಪರಿಚಯವೇ ಇರಲಿಲ್ಲ: ಆ ಘಟನೆ ನೆನೆದ ಕಿಚ್ಚ ಸುದೀಪ್

ನನಗೆ ತ್ರಿವಿಕ್ರಮ್ ಪರಿಚಯವೇ ಇರಲಿಲ್ಲ: ಆ ಘಟನೆ ನೆನೆದ ಕಿಚ್ಚ ಸುದೀಪ್

ಮದನ್​ ಕುಮಾರ್​
|

Updated on: Jan 29, 2025 | 7:52 PM

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಎಂದರೆ ಬರೀ ಕ್ರಿಕೆಟ್ ಅಲ್ಲ. ಅದು ಕಲಾವಿದರ ನಡುವಿನ ಬಾಂಧವ್ಯಕ್ಕೂ ಕಾರಣ ಆಗಿದೆ. ಕನ್ನಡ ಮಾತ್ರವಲ್ಲದೇ ಪರಭಾಷೆಯ ಚಿತ್ರರಂಗದ ಸೆಲೆಬ್ರಿಟಿಗಳ ನಡುವೆ ನಂಟು ಬೆಳೆಯಲು ಕೂಡ ಸಿಸಿಎಲ್​ ಕಾರಣವಾಗಿದೆ. ಈ ಬಗ್ಗೆ ಕಿಚ್ಚ ಸುದೀಪ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ತ್ರಿವಿಕ್ರಮ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನಲ್ಲಿ ರನ್ನರ್​ ಅಪ್ ಆದರು. ಕಿಚ್ಚ ಸುದೀಪ್ ಅವರಿಗೆ ತ್ರಿವಿಕ್ರಮ್ ಪರಿಚಯ ಆಗಿದ್ದು ಸಿಸಿಎಲ್​ ಮೂಲಕ. ಅದಕ್ಕೂ ಮೊದಲು ಅವರಿಗೆ ಪರಿಚಯವೇ ಇರಲಿಲ್ಲ. ಆ ಬಗ್ಗೆ ಸುದೀಪ್ ಅವರು ಪ್ರೆಸ್​ಮೀಟ್​ನಲ್ಲಿ ಮಾತಾಡಿದ್ದಾರೆ. ‘ಕರಣ್, ತ್ರಿವಿಕ್ರಮ್, ರಾಜೀವ್, ಜೆಕೆ​ ಯಾರು ಎಂಬ ಪರಿಚಯ ನನಗೆ ಇರಲಿಲ್ಲ. ಕ್ರಿಕೆಟ್​ಗೆ ಬಂದಾಗ ಕ್ಲೋಸ್​ ಆದರು’ ಎಂದು ಸುದೀಪ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.