ನನಗೆ ತ್ರಿವಿಕ್ರಮ್ ಪರಿಚಯವೇ ಇರಲಿಲ್ಲ: ಆ ಘಟನೆ ನೆನೆದ ಕಿಚ್ಚ ಸುದೀಪ್
ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಎಂದರೆ ಬರೀ ಕ್ರಿಕೆಟ್ ಅಲ್ಲ. ಅದು ಕಲಾವಿದರ ನಡುವಿನ ಬಾಂಧವ್ಯಕ್ಕೂ ಕಾರಣ ಆಗಿದೆ. ಕನ್ನಡ ಮಾತ್ರವಲ್ಲದೇ ಪರಭಾಷೆಯ ಚಿತ್ರರಂಗದ ಸೆಲೆಬ್ರಿಟಿಗಳ ನಡುವೆ ನಂಟು ಬೆಳೆಯಲು ಕೂಡ ಸಿಸಿಎಲ್ ಕಾರಣವಾಗಿದೆ. ಈ ಬಗ್ಗೆ ಕಿಚ್ಚ ಸುದೀಪ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ತ್ರಿವಿಕ್ರಮ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ರನ್ನರ್ ಅಪ್ ಆದರು. ಕಿಚ್ಚ ಸುದೀಪ್ ಅವರಿಗೆ ತ್ರಿವಿಕ್ರಮ್ ಪರಿಚಯ ಆಗಿದ್ದು ಸಿಸಿಎಲ್ ಮೂಲಕ. ಅದಕ್ಕೂ ಮೊದಲು ಅವರಿಗೆ ಪರಿಚಯವೇ ಇರಲಿಲ್ಲ. ಆ ಬಗ್ಗೆ ಸುದೀಪ್ ಅವರು ಪ್ರೆಸ್ಮೀಟ್ನಲ್ಲಿ ಮಾತಾಡಿದ್ದಾರೆ. ‘ಕರಣ್, ತ್ರಿವಿಕ್ರಮ್, ರಾಜೀವ್, ಜೆಕೆ ಯಾರು ಎಂಬ ಪರಿಚಯ ನನಗೆ ಇರಲಿಲ್ಲ. ಕ್ರಿಕೆಟ್ಗೆ ಬಂದಾಗ ಕ್ಲೋಸ್ ಆದರು’ ಎಂದು ಸುದೀಪ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.