AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mysore Dasara 2026: ಇಂದು ಅರಮನೆ ಪ್ರವೇಶಿಸಲಿರುವ ಗಜಪಡೆ, ಅರಣ್ಯ ಭವನದಲ್ಲಿ ವಿಶೇಷ ಪೂಜೆ

Mysore Dasara 2026: ಇಂದು ಅರಮನೆ ಪ್ರವೇಶಿಸಲಿರುವ ಗಜಪಡೆ, ಅರಣ್ಯ ಭವನದಲ್ಲಿ ವಿಶೇಷ ಪೂಜೆ

ರಾಮ್​, ಮೈಸೂರು
| Edited By: |

Updated on: Aug 28, 2026 | 9:20 AM

Share

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ಕ್ಕೆ ಗಜಪಡೆ ಇಂದು ಅರಮನೆ ಪ್ರವೇಶಿಸಲಿದೆ. ಇಂದು ಬೆಳಗ್ಗೆ 9.55 ರಿಂದ 10.19ರ ಶುಭ ತುಲಾ ಲಗ್ನದಲ್ಲಿ ಅರಮನೆಗೆ ಆಗಮಿಸುವ ಆನೆಗಳಿಗೆ ಅರಣ್ಯ ಭವನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮೊದಲ ಹಂತದಲ್ಲಿ ಧನಂಜಯ, ಮಹೇಂದ್ರ ಸೇರಿದಂತೆ 9 ಆನೆಗಳು ಅರಮನೆಗೆ ಆಗಮಿಸುತ್ತಿವೆ.

ಮೈಸೂರು, ಆಗಸ್ಟ್ 28: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ರ ಸಿದ್ಧತೆಗಳು ಭರದಿಂದ ಸಾಗಿವೆ. ಈ ವರ್ಷದ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಗಜಪಯಣಕ್ಕೆ ಇಂದು ಚಾಲನೆ ಸಿಗುತ್ತಿದ್ದು, ಅರಣ್ಯ ಭವನದಲ್ಲಿ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆ 9.55 ರಿಂದ 10.19ರ ಶುಭ ತುಲಾ ಲಗ್ನದಲ್ಲಿ ಆನೆಗಳು ಸಾಂಪ್ರದಾಯಿಕವಾಗಿ ಮೈಸೂರು ಅರಮನೆಗೆ ಪ್ರವೇಶ ಮಾಡುತ್ತಿವೆ. ಅರಣ್ಯ ಇಲಾಖೆಯ ವತಿಯಿಂದ ಗಜಪಡೆಗೆ ಪೂಜೆ ಸಲ್ಲಿಸಿದ ನಂತರ, ಆನೆಗಳು ಅರಣ್ಯ ಭವನದಿಂದ ಅರಮನೆಯತ್ತ ಹೆಜ್ಜೆ ಹಾಕಿವೆ. ಅರಮನೆ ಆವರಣದಲ್ಲಿ ಅರಮನೆ ಮಂಡಳಿ ವತಿಯಿಂದ ಗಜಪಡೆಗೆ ಅದ್ಧೂರಿ ಸ್ವಾಗತ ಕೋರಲಾಗುತ್ತದೆ.

ದಸರಾ ಮಹೋತ್ಸವಕ್ಕೆ ಆಯ್ಕೆಯಾದ 9 ಆನೆಗಳು ಈಗಾಗಲೇ ಮೊದಲ ಹಂತದಲ್ಲಿ ಮೈಸೂರಿಗೆ ಆಗಮಿಸಿವೆ. ಈ ಗಜಪಡೆಯು ಧನಂಜಯ, ಮಹೇಂದ್ರ, ಲಕ್ಷ್ಮೀ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಶ್ರೀಕಂಠ ಮತ್ತು ಕಾವೇರಿ ಆನೆಗಳನ್ನು ಒಳಗೊಂಡಿದೆ. ಈ ಆನೆಗಳು ಮುಂದಿನ ದಿನಗಳಲ್ಲಿ ದಸರಾ ಮೆರವಣಿಗೆಗೆ ತಾಲೀಮು ನಡೆಸಲಿವೆ. ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಸಂಭ್ರಮಕ್ಕೆ ಗಜಪಡೆಯ ಆಗಮನ ಹೊಸ ಮೆರುಗು ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us