AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Stampede: ಸ್ಟೇಡಿಯಂ ಗೇಟ್​ಗಳ ಬಳಿಯೇ ಯಮರಾಜ ಸುಳಿದಾಡುತ್ತಿದ್ದಿದ್ದು ಯಾರಿಗೂ ಗೊತ್ತಾಗಲಿಲ್ಲ

Bengaluru Stampede: ಸ್ಟೇಡಿಯಂ ಗೇಟ್​ಗಳ ಬಳಿಯೇ ಯಮರಾಜ ಸುಳಿದಾಡುತ್ತಿದ್ದಿದ್ದು ಯಾರಿಗೂ ಗೊತ್ತಾಗಲಿಲ್ಲ

ಅರುಣ್​ ಕುಮಾರ್​ ಬೆಳ್ಳಿ
|

Updated on:Jun 05, 2025 | 11:04 AM

Share

ಚಿನ್ನಸ್ವಾಮಿ ಸ್ಟೇಡಿಯಂನ ಸಾಮರ್ಥ್ಯವಿರೋದು 35,000 ಜನಕ್ಕೆ ಮಾತ್ರ, ಅದರೆ ಜಮಾ ಆಗಿದ್ದು ಒಂದೂವರೆ ಲಕ್ಷಕ್ಕೂ ಹೆಚ್ಚು. ಅರ್​ಸಿಬಿ ಅಟಗಾರರು ಅಲ್ಲಿಗೆ ಬರುತ್ತಾರೆ, ಮೆರವಣಿಗೆ ನಡೆಯುತ್ತದೆ, ಸತ್ಕಾರ ನಡೆಯುತ್ತದೆ ಎಂಬ ಕಾರಣಕ್ಕೆ ಅಭಿಮಾನಿಗಳು ಆಟಗಾರರನ್ನು ನೋಡಲು ಕಾಯುತ್ತಿದ್ದರು. ಸ್ಟೇಡಿಯಂ ಗೇಟ್​ಗಳ ಬಳಿಯೇ ಯಮರಾಯ ಸುಳಿದಾಡುತ್ತಿರೋದು ಯಾರಿಗೂ ಗೊತ್ತಾಗಲಿಲ್ಲ.

ಬೆಂಗಳೂರು, ಜೂನ್ 5: ನಿನ್ನೆ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಮುಂಭಾಗದಲ್ಲಿ ನಡೆದಿರುವ ಘೋರ ದುರಂತವನ್ನು ಕನ್ನಡಿಗರು ಮರೆಯಲು ಸಾಧ್ಯವಿಲ್ಲ. ದುರಂತ ನಡೆದ ಸ್ಥಳದಲ್ಲಿ ನಮ್ಮ ವರದಿಗಾರ ಇದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂ ಮೇನ್ ಗೇಟ್ ಮತ್ತು ಬೇರೆ ಗೇಟ್​ಗಳಲ್ಲಿ ಅದರಲ್ಲೂ ಮುಖ್ಯವಾಗಿ ಗೇಟ್ ನಂಬರ್ 17 ರ ಬಳಿ ಕಾಲ್ತುಳಿತದ ಘಟನೆ ಸಂಭವಿಸಿ 11 ಜನ ಅಸುನೀಗಿದರು ಮತ್ತು 20ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಸತ್ತವರಿಗೆ ₹ 10 ಲಕ್ಷ ಪರಿಹಾರವನ್ನೇನೋ ಘೋಷಿಸಿದೆ, ಆದರೆ ಆ ಹಣದಿಂದ ಆಗೋದಾದರೂ ಏನು? ಸತ್ತವರಲ್ಲಿ ವರ್ಷಕ್ಕೆ ₹ 10 ಲಕ್ಷಕ್ಕಿಂತ ಹೆಚ್ಚು ದುಡಿಯುತ್ತಿದ್ದ ಜನರೂ ಇದ್ದಿರಬಹುದು. ಸಂಭ್ರಮಾಚರಣೆಯ ಸಂದರ್ಭ ಹೀಗೆ ಶೋಕದಲ್ಲಿ ಪರ್ಯಾವಸನಗೊಂಡಿದ್ದನ್ನು ಕನ್ನಡಿಗ ಅರಗಿಸಿಕೊಳ್ಳುತ್ತಿಲ್ಲ.

ಇದನ್ನೂ ಓದಿ:  RCB IPL Victory Stampede: ಕಾಲ್ತುಳಿತ ಪ್ರಕರಣದ ತನಿಖೆ ಮ್ಯಾಜಿಸ್ಟ್ರೇಟ್ ಹೆಗಲಿಗೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Jun 05, 2025 10:56 AM