AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ

ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ

ರಾಚಪ್ಪಾಜಿ ನಾಯ್ಕ್
| Updated By: ಕಿರಣ್ ಹನುಮಂತ್​ ಮಾದಾರ್|

Updated on:Jul 06, 2024 | 8:53 PM

Share

ರೇಣುಕಾ ಸ್ವಾಮಿ(Renuka Swamy) ಎಂಬಾತನ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಮತ್ತು ಗ್ಯಾಂಗ್​ನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಅದರಂತೆ ಇಂದು(ಶನಿವಾರ) ಬಸವೇಶ್ವರನಗರ(Basaveshwara Nagar) ಠಾಣೆಯಲ್ಲಿ ಆರೋಪಿ ಪ್ರದೋಶ್ ಸ್ನೇಹಿತ,​ ಕಾರ್ತಿಕ್ ಪುರೋಹಿತ್ ಎಂಬಾತನ​ ವಿಚಾರಣೆ ಮಾಡಲಾಗಿತ್ತು.

ಬೆಂಗಳೂರು, ಜು.06: ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ(Renuka Swamy) ಎಂಬಾತನ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಮತ್ತು ಗ್ಯಾಂಗ್​ನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಅದರಂತೆ ಇಂದು(ಶನಿವಾರ) ಬಸವೇಶ್ವರನಗರ(Basaveshwara Nagar) ಠಾಣೆಯಲ್ಲಿ ಆರೋಪಿ ಪ್ರದೋಶ್ ಸ್ನೇಹಿತ,​ ಕಾರ್ತಿಕ್ ಪುರೋಹಿತ್ ಎಂಬಾತನ​ ವಿಚಾರಣೆ ಮಾಡಲಾಗಿತ್ತು. ಈ ಕುರಿತು ಮಾತನಾಡಿದ ಕಾರ್ತಿಕ್, ‘ವಿಚಾರಣೆಗೆ ಬರುವಂತೆ ನನಗೆ ನೋಟಿಸ್ ಕೊಟ್ಟಿದ್ದರಿಂದ ಹಾಜರಾಗಿದ್ದೇನೆ ಎಂದಿದ್ದಾರೆ.

‘ಪ್ರದೋಶ್ ಸ್ನೇಹಿತ ಎನ್ನುವ ಕಾರಣಕ್ಕೆ ನನಗೆ ನೋಟಿಸ್ ಕೊಡಲಾಗಿತ್ತು. ಕೊಲೆ ಪ್ರಕರಣದಲ್ಲಿ ನನ್ನ ಪಾತ್ರದ ಬಗ್ಗೆ ಪೊಲೀಸರಿಗೆ ಹೇಳಿದ್ದೀನಿ. ಸೋಮವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ ಎಂದು ಬಸವೇಶ್ವರನಗರ ಪೊಲೀಸ್ ಠಾಣೆ ಬಳಿ ಕಾರ್ತಿಕ್ ಪುರೋಹಿತ್ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published on: Jul 06, 2024 08:42 PM