ಪುಣ್ಯಭೂಮಿಗೆ ಅದೇ ಜಾಗ ಬೇಕು: ಪಟ್ಟು ಹಿಡಿದ ವಿಷ್ಣುವರ್ಧನ್ ಅಭಿಮಾನಿಗಳು
ಅಭಿಮಾನ್ ಸ್ಟುಡಿಯೋದಲ್ಲಿ ಇದ್ದ ನಟ ವಿಷ್ಣುವರ್ಧನ್ ಸಮಾಧಿಯನ್ನು ಕೆಲ ದಿನಗಳ ಹಿಂದಷ್ಟೇ ನೆಲಸಮ ಮಾಡಲಾಯಿತು. ಆ ನಂತರ ವಿಷ್ಣುವರ್ಧನ್ ಅವರ ಅಭಿಮಾನಿಗಳು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂದು (ಆ.17) ಈ ಕುರಿತು ಅನಿರುದ್ಧ್ ಜತ್ಕರ್ ಅವರ ನಿವಾಸದಲ್ಲಿ ಅಭಿಮಾನಿಗಳ ಸಭೆ ಮಾಡಲಾಗಿದೆ.
ಅಭಿಮಾನ್ ಸ್ಟುಡಿಯೋದಲ್ಲಿ ಇದ್ದ ವಿಷ್ಣುವರ್ಧನ್ ಸಮಾಧಿಯನ್ನು (Vishnuvardhan Samadhi) ಕೆಲವು ದಿನಗಳ ಹಿಂದೆ ನೆಲಸಮ ಮಾಡಲಾಯಿತು. ಆ ಬಳಿಕ ವಿಷ್ಣುವರ್ಧನ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅನಿರುದ್ಧ್ ಜತ್ಕರ್ (Anirudh Jatkar) ಅವರ ನಿವಾಸದಲ್ಲಿ ಇಂದು (ಆಗಸ್ಟ್ 17) ಈ ಕುರಿತು ಅಭಿಮಾನಿಗಳ ಸಭೆ ಮಾಡಲಾಗಿದೆ. ಅದಕ್ಕೂ ಮುನ್ನ ಟಿವಿ9 ಜೊತೆ ಫ್ಯಾನ್ಸ್ ಮಾತನಾಡಿದರು. ‘ಕುಟುಂಬದವರ ಮಾತಿಗೆ ನಾವು ಬದ್ಧರಾಗಿ ಇರುತ್ತೇವೆ. ಯಾವುದೇ ಕಾರಣಕ್ಕೂ ನಾವು ಬೇರೆ ಜಾಗ ಕೇಳಲ್ಲ. ಆ ಜಾಗವನ್ನೇ ಖರೀದಿ ಮಾಡಬೇಕು ಎಂದರೂ ನಾವು ತಲಾ 1 ಲಕ್ಷ ರೂಪಾಯಿ ನೀಡಲು ಸಿದ್ಧರಾಗಿದ್ದೇವೆ. ಪುಣ್ಯಭೂಮಿಗೆ ಅದೇ ಜಾಗ ಬೇಕಾಗುತ್ತದೆ’ ಎಂದು ವಿಷ್ಣುವರ್ಧನ್ ಫ್ಯಾನ್ಸ್ (Vishnuvardhan Fans) ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Aug 17, 2025 01:27 PM
Follow Us
Latest Videos
ಹೆಚ್ಡಿಕೆ ವಿರುದ್ಧ ‘ಕೋಳಿ’ ಪೋಸ್ಟರ್ ಅಂಟಿಸಿ ಕಾಂಗ್ರೆಸ್ ವ್ಯಂಗ್ಯ
ಗೆಳೆಯ ವಾಸುಕಿ ವೈಭವ್ ಕಾನ್ಸರ್ಟ್ಗೆ ಟಿಕೆಟ್ ಖರೀದಿಸಿ ಬಂದ ಶೈನ್ ಶೆಟ್ಟಿ
ಇಂದು ಮಾಸ ಶಿವರಾತ್ರಿ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಭಾರತ-ಚೀನಾ ಗಡಿ ಬಳಿ ಪ್ರವಾಹ; ಉತ್ತರಾಖಂಡದಲ್ಲಿ ಕೊಚ್ಚಿಹೋದ ಬಿಆರ್ಒ ಸೇತುವೆ

