Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ನೂ ಕೆಲವರನ್ನು ಭೇಟಿಯಾಗುವುದಿದೆ, ಬೆಂಗಳೂರಿಗೆ ಹೋಗಿ ಎಲ್ಲ ವಿಷಯಗಳನ್ನು ಮಾತಾಡುತ್ತೇನೆ: ಸತೀಶ್ ಜಾರಕಿಹೊಳಿ

ಇನ್ನೂ ಕೆಲವರನ್ನು ಭೇಟಿಯಾಗುವುದಿದೆ, ಬೆಂಗಳೂರಿಗೆ ಹೋಗಿ ಎಲ್ಲ ವಿಷಯಗಳನ್ನು ಮಾತಾಡುತ್ತೇನೆ: ಸತೀಶ್ ಜಾರಕಿಹೊಳಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 26, 2025 | 7:57 PM

ರಾಜ್ಯದ ರಾಜಕೀಯ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತಿದೆ. ಬಿಜೆಪಿಯು ರೆಬೆಲ್ ಶಾಸಕ ಎನಿಸಿಕೊಂಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಪಕ್ಷದಿಂದ ಉಚ್ಚಾಟಿಸಿದೆ. ಸಹಕಾರ ಸಚಿವ ಕೆಎನ್ ರಾಜಣ್ಣ ತಮ್ಮ ಪಕ್ಷದವರಿಂದಲೇ ಹನಿ ಟ್ರ್ಯಾಪ್ ಪ್ರಯತ್ನ ನಡೆದಿದೆಯೆಂದು ಹೇಳುತ್ತಾರೆ. ಸಿದ್ದರಾಮಯ್ಯ ಮಂಡಿನೋವಿನ ಕಾರಣ ಹೊರಗಡೆ ಜಾಸ್ತಿ ಕಾಣುತ್ತಿಲ್ಲ. ಎಲ್ಲ ಗೋಜಲು ಗೋಜಲು.

ದೆಹಲಿ, ಮಾರ್ಚ್ 26: ಮೊನ್ನೆಯಿಂದ ದೆಹಲಿಯಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ಅವರು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಜೊತೆ ಓಡಾಡುತ್ತಿದ್ದಾರೆ ಮತ್ತು ಹೆಚ್​ಡಿ ದೇವೇಗೌಡರ ಜೊತೆ ಕೂತು ಚರ್ಚೆ ಮಾಡುತ್ತಿದ್ದಾರೆ. ಅವರ ಉದ್ದೇಶವಾದರೂ ಏನು? ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ದ್ವೇಷಿಸುವ ಜೆಡಿಎಸ್ ಪಕ್ಷದ ನಾಯಕರನ್ನು ಯಾಕೆ ಭೇಟಿಯಾಗುತ್ತಿದ್ದಾರೆ? ಅವರನ್ನೇ ಕೇಳಿದಾಗ ಸ್ಪಷ್ಟ ಉತ್ತರವಿಲ್ಲ. ಇನ್ನ 2-3 ನಾಯಕರನ್ನು ಭೇಟಿಯಾಗುವುದಿದೆ, ಅವರೊಂದಿಗೆ ಮಾತಾಡಿ ಗುರುವಾರ ಬೆಂಗಳೂರಿಗೆ ಹೋಗುತ್ತೇನೆ, ಶುಕ್ರವಾರ ಅಲ್ಲಿರುವ ಮಾಧ್ಯಮದವರಿಗೆ ಎಲ್ಲ ವಿಷಯಗಳನ್ನು ಹೇಳುತ್ತೇನೆ ಎನ್ನುತ್ತಾರೆ.

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲೇ ಅಸಮಾಧಾನದ ಹೊಗೆ: ಸತೀಶ್ ಜಾರಕಿಹೊಳಿ ವಿರುದ್ಧ ರವಿ ಗಣಿಗ ಆಕ್ಷೇಪ