AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

4 ದಿನದ ಅವಳಿ ಶಿಶುಗಳ ಜನನ ಪ್ರಮಾಣಪತ್ರ ಮಾಡಿಸಲು ಹೋದಾಗ ಬಾಂಬ್​ ಸ್ಫೋಟ, ಮಕ್ಕಳು ಸಾವು

ಅವಳಿ ಶಿಶುಗಳ ಜನನ ಪ್ರಮಾಣಪತ್ರ ಮಾಡಿಸುತ್ತಿದ್ದಾಗ ಬಾಂಬ್​ ಸ್ಫೋಟಗೊಂಡು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಗಾಜಾದಲ್ಲಿ ನಡೆದಿದೆ. ಇಬ್ಬರು ಮಕ್ಕಳ ಜನನವನ್ನು ನೋಂದಾಯಿಸಲು ಅವರು ಸರ್ಕಾರಿ ಕಚೇರಿಗೆ ತೆರಳಿದ್ದರು, ಅಲ್ಲಿ ಇಸ್ರೇಲ್​ ವೈಮಾನಿಕ ದಾಳಿ ನಡೆಸಿದ್ದು, ಮೊಹಮ್ಮದ್ ಅಬು ಅಲ್ ಕುಮ್ಸನ್​ ಅವರ ಎರಡು ಶಿಶುಗಳು, ಪತ್ನಿ, ಅತ್ತೆ, ಮಗ ಅಸ್ರ್​ ಮಗಳು ಐಸಲ್ ಕೂಡ ಮೃತಪಟ್ಟಿದ್ದಾರೆ.

4 ದಿನದ ಅವಳಿ ಶಿಶುಗಳ ಜನನ ಪ್ರಮಾಣಪತ್ರ ಮಾಡಿಸಲು ಹೋದಾಗ ಬಾಂಬ್​ ಸ್ಫೋಟ, ಮಕ್ಕಳು ಸಾವು
ಶಿಶುಗಳ ಸಾವುImage Credit source: Thelallanntop.com
ನಯನಾ ರಾಜೀವ್
|

Updated on:Aug 14, 2024 | 10:20 AM

Share

ನಾಲ್ಕು ದಿನದ ಅವಳಿ ಶಿಶುಗಳ ಜನನ ಪ್ರಮಾಣಪತ್ರ ಮಾಡಿಸುತ್ತಿದ್ದಾಗ ಬಾಂಬ್​ ಸ್ಫೋಟಗೊಂಡು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಗಾಜಾದಲ್ಲಿ ನಡೆದಿದೆ. ಇಬ್ಬರು ಮಕ್ಕಳ ಜನನವನ್ನು ನೋಂದಾಯಿಸಲು ಅವರು ಸರ್ಕಾರಿ ಕಚೇರಿಗೆ ತೆರಳಿದ್ದರು, ಅಲ್ಲಿ ಇಸ್ರೇಲ್​ ವೈಮಾನಿಕ ದಾಳಿ ನಡೆಸಿದ್ದು, ಮೊಹಮ್ಮದ್ ಅಬು ಅಲ್ ಕುಮ್ಸನ್​ ಅವರ ಎರಡು ಶಿಶುಗಳು, ಪತ್ನಿ, ಅತ್ತೆ, ಮಗ ಅಸ್ರ್​ ಮಗಳು ಐಸಲ್ ಕೂಡ ಮೃತಪಟ್ಟಿದ್ದಾರೆ.

ಕುಮ್ಸನ್ ಸರ್ಕಾರಿ ಕಚೇರಿಯಲ್ಲಿದ್ದಾಗ ಅಕ್ಕಪಕ್ಕದ ಮನೆಯವರು ಕರೆ ಮಾಡಿ ಬಾಲಾಹ್​ನಲ್ಲಿರುವ ನಿಮ್ಮ ಮನೆಯ ಮೇಲೆ ಬಾಂಬ್​ ದಾಳಿ ನಡೆದಿದೆ ಎನ್ನುವ ವಿಚಾರ ಕೇಳಿದಾಗ ಅವರು ಅಲ್ಲೇ ಕುಸಿದು ಬಿದ್ದಿದ್ದಾರೆ.

ಇಸ್ರೇಲ್-ಹಮಾಸ್ ಯುದ್ಧದಲ್ಲಿ 115 ನವಜಾತ ಶಿಶುಗಳು ಸಾವನ್ನಪ್ಪಿವೆ. ಕುಮ್ಸನ್ ಮನೆಯ ಮೇಲೆ ಶೆಲ್ ಬಿದ್ದಿದೆ. ಯುದ್ಧದ ಆರಂಭಿಕ ವಾರಗಳಲ್ಲಿ, ಕುಮ್ಸನ್ ಹಿಂದೆ ವಾಸಿಸುತ್ತಿದ್ದ ಸ್ಥಳವನ್ನು ಬಿಟ್ಟು ಬೇರೆಡೆಗೆ ಬಂಂದಿದ್ದರು. ಇಸ್ರೇಲಿ ಸೇನೆಯ ಸೂಚನೆ ಮೇರೆಗೆ ಗಾಜಾ ಪಟ್ಟಿಯ ಕೇಂದ್ರ ಭಾಗದಲ್ಲಿ ಆಶ್ರಯ ಪಡೆದರು.

ಮತ್ತಷ್ಟು ಓದಿ: ಹಮಾಸ್‌ನ ರಾಕೆಟ್ ದಾಳಿ ವಿಫಲವಾದ ಬಳಿಕ ಇಸ್ರೇಲಿ ಮಿಲಿಟರಿ ಸೈಟ್‌ಗಳ ಮೇಲೆ ವೈಮಾನಿಕ ದಾಳಿ ಮಾಡಿದ ಇರಾನ್

ಗಾಜಾ ನಗರದಲ್ಲಿ ಸ್ಥಳಾಂತರಗೊಂಡ ಪ್ಯಾಲೆಸ್ಟೀನಿಯಾದವರಿಗೆ ಆಶ್ರಯ ನೀಡುವ ಶಾಲೆಯ ಮೇಲೆ ದಾಳಿ ನಡೆಸಲಾಯಿತು. ಈ ಇಸ್ರೇಲ್ ವೈಮಾನಿಕ ದಾಳಿಯಲ್ಲಿ 70 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಈ ಶಾಲೆಯು ಹಮಾಸ್‌ನ ಸಕ್ರಿಯ ಸೇನಾ ಕೇಂದ್ರವಾಗಿದೆ ಎಂದು ಇಸ್ರೇಲಿ ಮಿಲಿಟರಿ ವಕ್ತಾರರು ತಿಳಿಸಿದ್ದಾರೆ. ಆದರೆ, ಹಮಾಸ್ ಇದನ್ನು ನಿರಾಕರಿಸಿದೆ.

ಅಕ್ಟೋಬರ್ 7, 2023 ರಂದು, ಹಮಾಸ್ ದಕ್ಷಿಣ ಇಸ್ರೇಲ್ ಮೇಲೆ ದಾಳಿ ಮಾಡಿತು. ಮತ್ತು ಸರಿಸುಮಾರು 1,200 ಜನರನ್ನು ಕೊಂದರು. ಅವರಲ್ಲಿ ಹೆಚ್ಚಿನವರು ನಾಗರಿಕರು ಮತ್ತು ಸುಮಾರು 250 ಜನರನ್ನು ಅಪಹರಿಸಲಾಯಿತು. ಇದು ಯುದ್ಧದ ಆರಂಭವಾಗಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:19 am, Wed, 14 August 24

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?