AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಂದು ಶಾಕ್‌! ಹಸಿ ಮೀನು ತಿಂದ ಚೀನಾದವನಿಗೆ ಏನಾಗಿದೆ ಗೊತ್ತಾ?

ಚೀನಾ: ಕೊರೊನಾ ಹೆಮ್ಮಾರಿ ಹುಟ್ಟಿಗೆ ಚೀನಾನೇ ಕಾರಣ ಅಂತಾ ಇಡಿ ಜಗತ್ತಿಗೆ ಜಗತ್ತೇ ಅದರ ಮೇಲೆ ಮುರಿದುಕೊಂಡು ಬಿದ್ದಿದೆ. ಇದನ್ನ ಪುಷ್ಠಿಕರಿಸುವಂತೆ ಈಗ ಚೀನಾಗೆ ಮತ್ತೊಂದು ಶಾಕ್‌ ಸಿಕ್ಕಿದೆ. ಹಸಿ ಮೀನು ತಿಂದ ವ್ಯಕ್ತಿಯೊಬ್ಬ ತನ್ನ ಅರ್ಧ ಲೀವರ್‌ ಅನ್ನೇ ಕತ್ತರಿಸಿಕೊಂಡ ಘಟನೆ ಜೀನಾದ ಹಾಂಗ್‌ಜೌ ಸಿಟಿಯಲ್ಲಿ ಸಂಭವಿಸಿದೆ. ಹೌದು ಚೀನಾದ ಹಾಂಗ್‌ಜೌ ನಗರದ ಸಮೀಪದ ವ್ಯಕ್ತಿಯೊಬ್ಬ ನಾಲ್ಕು ತಿಂಗಳ ಹಿಂದೆ ಅದೇನು ಅರ್ಜೆಂಟ್‌ ಇತ್ತೋ ಗೊತ್ತಿಲ್ಲ, ಹಸಿ ಮೀನನ್ನು ಗುಳುಂ ಮಾಡಿದ್ದಾನೆ. ಇದಾದ ನಂತರ ಹೊಟ್ಟೆ […]

ಮತ್ತೊಂದು ಶಾಕ್‌! ಹಸಿ ಮೀನು ತಿಂದ ಚೀನಾದವನಿಗೆ ಏನಾಗಿದೆ ಗೊತ್ತಾ?
Guru
| Edited By: |

Updated on:Jul 24, 2020 | 8:28 PM

Share

ಚೀನಾ: ಕೊರೊನಾ ಹೆಮ್ಮಾರಿ ಹುಟ್ಟಿಗೆ ಚೀನಾನೇ ಕಾರಣ ಅಂತಾ ಇಡಿ ಜಗತ್ತಿಗೆ ಜಗತ್ತೇ ಅದರ ಮೇಲೆ ಮುರಿದುಕೊಂಡು ಬಿದ್ದಿದೆ. ಇದನ್ನ ಪುಷ್ಠಿಕರಿಸುವಂತೆ ಈಗ ಚೀನಾಗೆ ಮತ್ತೊಂದು ಶಾಕ್‌ ಸಿಕ್ಕಿದೆ. ಹಸಿ ಮೀನು ತಿಂದ ವ್ಯಕ್ತಿಯೊಬ್ಬ ತನ್ನ ಅರ್ಧ ಲೀವರ್‌ ಅನ್ನೇ ಕತ್ತರಿಸಿಕೊಂಡ ಘಟನೆ ಜೀನಾದ ಹಾಂಗ್‌ಜೌ ಸಿಟಿಯಲ್ಲಿ ಸಂಭವಿಸಿದೆ.

ಹೌದು ಚೀನಾದ ಹಾಂಗ್‌ಜೌ ನಗರದ ಸಮೀಪದ ವ್ಯಕ್ತಿಯೊಬ್ಬ ನಾಲ್ಕು ತಿಂಗಳ ಹಿಂದೆ ಅದೇನು ಅರ್ಜೆಂಟ್‌ ಇತ್ತೋ ಗೊತ್ತಿಲ್ಲ, ಹಸಿ ಮೀನನ್ನು ಗುಳುಂ ಮಾಡಿದ್ದಾನೆ. ಇದಾದ ನಂತರ ಹೊಟ್ಟೆ ನೋವು ಆರಂಭವಾಗಿದೆ. ಇದೇನೊ ಮಾಮೂಲಿ ನೋವು ಅಂತಾ ಹಾಗೂ ಹೀಗೂ ನಾಲ್ಕು ತಿಂಗಳು ತಳ್ಳಿದ್ದಾನೆ. ಯಾವಾಗ ನೋವು ಜಾಸ್ತಿಯಾಯಿತೋ, ಆಸ್ಪತ್ರೆಗೆ ದಾಖಲಾಗಿದ್ದಾನೆ.

ಈತನನ್ನು ಪರೀಕ್ಷಿಸಿದ ವೈದ್ಯರು ಸ್ಕ್ಯಾನ್‌ ಮಾಡಿ ನೋಡಿದ್ದಾರೆ. ಸ್ಕ್ಯಾನ್‌ನಲ್ಲಿ ಈತನ ಲೀವರ್‌ನಲ್ಲಿ ಬ್ಯಾಕ್ಟೀರಿಯಾ ಕಂಡಿವೆ. ಅಷ್ಟೇ ಅಲ್ಲ, ಮುಂದೆ ಅದೇ ಒಂದು ದೊಡ್ಡ ಹುಣ್ಣಾಗಿ ಬೆಳೆದಿದೆ. ತಕ್ಷಣ ಈತನ ಹೊಟ್ಟೆಗೆ ಆಪರೇಶನ್‌ ಮಾಡಿರುವ ವೈದ್ಯರು, ಹುಳು ಹಿಡಿದಿದ್ದ ಅರ್ಧ ಲೀವರ್‌ ಅನ್ನೇ ಕಟ್‌ ಮಾಡಿ ಹಾಕಿದ್ದಾರೆ.

ಆದ್ರೆ ಈ ಘಟನೆ ಈಗ ಮತ್ತೆ ಕೊರೊನಾ ಆರಂಭದ ನೆನಪು ತರಿಸಿದೆ. ಕೊರೊನಾದ ಹುಟ್ಟು ಕೂಡಾ ಚೀನಾದಲ್ಲಿಯೇ ಅಂದ್ರೆ ವುಹಾನ್‌ನಲ್ಲಿ ಶುರುವಾಗಿತ್ತು. ಈಗ ಹಸಿ ಮೀನು ತಿಂದು ಅರ್ಧ ಲೀವರ್‌ ಡ್ಯಾಮೇಜ್‌ ಆದ ಘಟನೆ ಮೀನುಗಳತ್ತಲೂ ಜನರು ಸಂಶಯದಿಂದ ನೋಡುವಂತಾಗಿದೆ. ಅಷ್ಟೇ ಅಲ್ಲ ಹಸಿ ಮಾಂಸ ತಿನ್ನೋರು ಒಂದು ಕ್ಷಣ ಯೋಚಿಸುವಂತೆಯೂ ಆಗಿದೆ.

Published On - 1:59 pm, Thu, 23 July 20

ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?