AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದ ಹಕ್ಕಾನಿ ಬಾಂಬರ್ ಬಂಧನ; ಕಾಬೂಲ್ ಸ್ಫೋಟದ ನಂತರ ಮುೂರನೇ ಸ್ಫೋಟಕ್ಕೆ ಸಂಚು?

ಬಾಂಬರ್ ಎಂದು ಹೇಳಿರುವ ಫೋಟೊವನ್ನೂ ಕೂಡಾ ಉಗ್ರರ ಗುಂಪು ಹೇಳಿಕೆಯೊಂದಿಗೆ ಬಿಡುಗಡೆ ಮಾಡಿದೆ. ಚಿತ್ರವು ಆಪಾದಿತ ದಾಳಿಕೋರನು ಕಪ್ಪು ಐಎಸ್ ಧ್ವಜದ ಮುಂದೆ ಸ್ಫೋಟಕ ಬೆಲ್ಟ್ ಧರಿಸಿ ಕಪ್ಪು ಬಟ್ಟೆಯಲ್ಲಿ ಮುಖವನ್ನು ಮುಚ್ಚಿದ ಗೆ ನಿಂತಿದ್ದಾನೆ ಎಂದು ತೋರಿಸುತ್ತದೆ .ಅವನ ಕಣ್ಣುಗಳು ಮಾತ್ರ ಕಾಣಿಸುತ್ತವೆ.

ಪಾಕಿಸ್ತಾನದ ಹಕ್ಕಾನಿ ಬಾಂಬರ್ ಬಂಧನ; ಕಾಬೂಲ್ ಸ್ಫೋಟದ ನಂತರ ಮುೂರನೇ ಸ್ಫೋಟಕ್ಕೆ ಸಂಚು?
ಕಾಬೂಲ್ ಸ್ಫೋಟ (ಸಂಗ್ರಹ ಚಿತ್ರ)
TV9 Web
| Edited By: |

Updated on:Aug 27, 2021 | 5:37 PM

Share

ಕಾಬೂಲ್: ಕಾಬೂಲ್ ವಿಮಾನ ನಿಲ್ದಾಣ ಮತ್ತು ಬ್ಯಾರನ್ ಹೋಟೆಲ್‌ನಲ್ಲಿ ಗುರುವಾರ ಎರಡು ಸ್ಫೋಟಗಳು ಸಂಭವಿಸಿದ್ದು, 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಹಕ್ಕಾನಿ ನೆಟ್‌ವರ್ಕ್‌ಗೆ ಸೇರಿದ ಪಾಕಿಸ್ತಾನದ ಬಾಂಬರ್ ಅನ್ನು ಬಂಧಿಸಲಾಗಿದೆ ಎಂದು ಅಫ್ಘಾನಿಸ್ತಾನದ ಉನ್ನತ ಮೂಲಗಳು ಸಿಎನ್‌ಎನ್-ನ್ಯೂಸ್ 18 ಗೆ ತಿಳಿಸಿವೆ. ಕಾಬೂಲ್ ಸ್ಫೋಟದಲ್ಲಿ ಹಕ್ಕಾನಿ ನೆಟ್ವರ್ಕ್ ಮತ್ತು ಪಾಕಿಸ್ತಾನದ ನಡುವಿನ ಸಂಬಂಧದ ಬಗ್ಗೆ ತಾಲಿಬಾನ್ ತಿಳಿದಿತ್ತು ಮತ್ತು ಟರ್ಕ್ ಮೆನಿಸ್ತಾನ್ ರಾಯಭಾರ ಕಚೇರಿಯಲ್ಲಿ ಮೂರನೇ ಸ್ಫೋಟವನ್ನು ಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಸ್ಫೋಟ ಸಂಭವಿಸುವ ಮೊದಲು ಇಬ್ಬರನ್ನು ಬಂಧಿಸಲಾಯಿತು ಎಂದು ಮೂಲಗಳು ತಿಳಿಸಿವೆ. ವಿಚಾರಣೆ ವೇಳೆ ಇಬ್ಬರೂ ಪಾಕಿಸ್ತಾನದವರು ಎಂದು ತಿಳಿದುಬಂದಿದ್ದು, ಅವರು ಇನ್ನೂ ತಾಲಿಬಾನ್ ವಶದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.  ಕಾಬೂಲ್ ವಿಮಾನ ನಿಲ್ದಾಣದ ಸ್ಫೋಟದಲ್ಲಿ ಸಾವಿಗೀಡಾದವರ  ಸಂಖ್ಯೆ 100 ದಾಟಿದ್ದು, 150 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ. ಇಸ್ಲಾಮಿಕ್ ಸ್ಟೇಟ್ ಅಂಗವಾದ ಐಸಿಸ್-ಕೆ ಈ ದಾಳಿಯ ಹೊಣೆ ಹೊತ್ತಿದೆ.

ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಲೆವಂಟ್-ಖೊರಾಸನ್ ಪ್ರಾಂತ್ಯದ ಆತ್ಮಾಹುತಿ ಬಾಂಬರ್‌ಗಳು ಹಮೀದ್ ಕರ್ಜಾಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಗುರುವಾರ ತಾಲಿಬಾನ್ ನಿಯಂತ್ರಣದಲ್ಲಿರುವ ಅಫ್ಘಾನಿಸ್ತಾನದಿಂದ ಪಲಾಯನ ಮಾಡುವ ನಿರೀಕ್ಷೆಯಲ್ಲಿದ್ದ ಜನರ ಮೇಲೆ ದಾಳಿ ನಡೆದಿದೆ. ಕನಿಷ್ಠ 12 ಅಮೆರಿಕ ಯೋಧರು ಸ್ಫೋಟದಲ್ಲಿ ಬಲಿಯಾಗಿದ್ದು   ಇದಕ್ಕೆ ಕಾರಣರಾದವರನ್ನು ಪತ್ತೆಹಚ್ಚಿಯೇ ತೀರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬಿಡನ್ ಹೇಳಿದ್ದಾರೆ.

ಐಎಸ್ ಶಾಖೆಯು ತನ್ನ ಹೊಣೆಗಾರಿಕೆಯಲ್ಲಿ ಅಮೆರಿಕದ ಸೈನ್ಯ ಮತ್ತು ಅವರ ಅಫ್ಘಾನ್ ಜನರನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದೆ.

ಬಾಂಬರ್ ಎಂದು ಹೇಳಿರುವ ಫೋಟೊವನ್ನೂ ಕೂಡಾ ಉಗ್ರರ ಗುಂಪು ಹೇಳಿಕೆಯೊಂದಿಗೆ ಬಿಡುಗಡೆ ಮಾಡಿದೆ. ಚಿತ್ರವು ಆಪಾದಿತ ದಾಳಿಕೋರನು ಕಪ್ಪು ಐಎಸ್ ಧ್ವಜದ ಮುಂದೆ ಸ್ಫೋಟಕ ಬೆಲ್ಟ್ ಧರಿಸಿ ಕಪ್ಪು ಬಟ್ಟೆಯಲ್ಲಿ ಮುಖವನ್ನು ಮುಚ್ಚಿದ ಗೆ ನಿಂತಿದ್ದಾನೆ ಎಂದು ತೋರಿಸುತ್ತದೆ .ಅವನ ಕಣ್ಣುಗಳು ಮಾತ್ರ ಕಾಣಿಸುತ್ತವೆ. ಈ ಹೇಳಿಕೆಯಲ್ಲಿ ಎರಡನೇ ಆತ್ಮಾಹುತಿ ಬಾಂಬರ್ ಅಥವಾ ಬಂದೂಕುಧಾರಿಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಈ ವಾದವನ್ನು ಯಾರೂ ಪರಿಶೀಲಿಸಿಲ್ಲ. ತನ್ನ ಸ್ಫೋಟಕಗಳನ್ನು ಸ್ಫೋಟಿಸುವ ಮೊದಲು ಬಾಂಬರ್, ಅಮೆರಿಕದ ಸೈನಿಕರು ಭಾಷಾಂತರಕಾರರು ಮತ್ತು ಸಹಯೋಗಿಗಳ ಒಟ್ಟುಗೂಡುವಿಕೆಯಿಂದ 5 ಮೀಟರ್ (ಗಜಗಳಷ್ಟು) ಒಳಗೆ ತಾಲಿಬಾನ್ ಭದ್ರತಾ ಚೆಕ್‌ಪೋಸ್ಟ್‌ಗಳನ್ನು ದಾಟಲು ಸಾಧ್ಯವಾಯಿತು ಎಂದು ಐಎಸ್ ಹೇಳಿದೆ. ಸಾವನ್ನಪ್ಪಿದವರಲ್ಲಿ ತಾಲಿಬಾನ್ ಕೂಡ ಸೇರಿದ್ದಾರೆ ಎಂದು ಅದು ಹೇಳಿದೆ.

ಬಾಂಬರ್ ಅಮೆರಿಕ ಭದ್ರತಾ ವ್ಯವಸ್ಥೆಯನ್ನು ಸುತ್ತುವರಿದಿದ್ದು ಮಿಲಿಟರಿಯೊಂದಿಗೆ ಕೆಲಸ ಮಾಡಿದವರಿಗೆ ಯುಎಸ್ ಪಡೆಗಳು ಪೇಪರ್ ವರ್ಕ್ ಅನ್ನು ಸಂಗ್ರಹಿಸುತ್ತಿದ್ದ ಶಿಬಿರವನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಏತನ್ಮಧ್ಯೆ  ತಾಲಿಬಾನ್ ಕಾಬೂಲ್ ವಿಮಾನ ನಿಲ್ದಾಣವನ್ನು ನಿರ್ವಹಿಸಲು ಟರ್ಕಿಯನ್ನು ಕೇಳಿದೆ ಆದರೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್ ಶುಕ್ರವಾರ ಹೇಳಿದ್ದಾರೆ.

“ಕಾಬೂಲ್ ವಿಮಾನ ನಿಲ್ದಾಣವನ್ನು ನಿರ್ವಹಿಸಲು ತಾಲಿಬಾನ್ ನಮಗೆ ವಿನಂತಿಯನ್ನು ಮಾಡಿದೆ. ಈ ವಿಷಯದ ಬಗ್ಗೆ ನಾವು ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ, “ಎಂದು ಬೋಸ್ನಿಯಾ ಪ್ರವಾಸಕ್ಕೆ ಹೊರಡುವ ಮುನ್ನ ಇಸ್ತಾಂಬುಲ್‌ನ ಅಟತುರ್ಕ್ ವಿಮಾನ ನಿಲ್ದಾಣದಲ್ಲಿ ನಡೆಸಿದ ಎರ್ಡೋಗನ್ ಹೇಳಿದರು.

ಇದನ್ನೂ ಓದಿ:  ಬ್ಲ್ಯಾಕ್‌ಹಾಕ್ ಹೆಲಿಕಾಪ್ಟರ್ ನೆಲದಲ್ಲಿ ಓಡಾಡುತ್ತಿರುವ ವಿಡಿಯೊ; ಪೈಲಟ್​​ಗಳಿಗೆ ತರಬೇತಿ ನೀಡುತ್ತಿದೆಯೇ ತಾಲಿಬಾನ್?

(Pakistani bomber of Haqqani network arrested after two blasts rocked the Kabul airport and Baron Hotel )

Published On - 5:37 pm, Fri, 27 August 21

Follow Us
ರಶ್ಮಿಕಾ-ವಿಜಯ್ ಫ್ಯಾನ್ಸ್​​ಗೆ ಕೊಟ್ಟ ಸ್ವೀಟ್ ಬಾಕ್ಸ್ ಅಲ್ಲಿ ಏನೆಲ್ಲ ಇದೆ?
ರಶ್ಮಿಕಾ-ವಿಜಯ್ ಫ್ಯಾನ್ಸ್​​ಗೆ ಕೊಟ್ಟ ಸ್ವೀಟ್ ಬಾಕ್ಸ್ ಅಲ್ಲಿ ಏನೆಲ್ಲ ಇದೆ?
ಕಾರಿಗೆ ಡಿಕ್ಕಿ ಹೊಡೆದು 1.5 ಕಿ.ಮೀ ಎಳೆದೊಯ್ದ ಟ್ರಕ್
ಕಾರಿಗೆ ಡಿಕ್ಕಿ ಹೊಡೆದು 1.5 ಕಿ.ಮೀ ಎಳೆದೊಯ್ದ ಟ್ರಕ್
2ನೇ ಇನ್ನಿಂಗ್ಸ್​ಗೂ ಮುನ್ನ ಮಾರಿಕಾಂಬಾ ದರ್ಶನ ಪಡೆದ ಅನಂತ್ ಕುಮಾರ್ ಹೆಗಡೆ
2ನೇ ಇನ್ನಿಂಗ್ಸ್​ಗೂ ಮುನ್ನ ಮಾರಿಕಾಂಬಾ ದರ್ಶನ ಪಡೆದ ಅನಂತ್ ಕುಮಾರ್ ಹೆಗಡೆ
ಕುಸ್ತಿ ಕಾಳಗದಲ್ಲಿ ದಾವಣಗೆರೆ ಜನರ ಗಮನ ಸೆಳೆದ ಇರಾನ್ ಪೈಲ್ವಾನ್ ಮಿರ್ಜಾ
ಕುಸ್ತಿ ಕಾಳಗದಲ್ಲಿ ದಾವಣಗೆರೆ ಜನರ ಗಮನ ಸೆಳೆದ ಇರಾನ್ ಪೈಲ್ವಾನ್ ಮಿರ್ಜಾ
ಆನೇಕಲ್: ರೈಲು ಹಳಿಯ ಮೇಲೆಯೇ ಕೆಟ್ಟು ನಿಂತ BMTC ಬಸ್, ಆಮೇಲೇನಾಯ್ತು ನೋಡಿ
ಆನೇಕಲ್: ರೈಲು ಹಳಿಯ ಮೇಲೆಯೇ ಕೆಟ್ಟು ನಿಂತ BMTC ಬಸ್, ಆಮೇಲೇನಾಯ್ತು ನೋಡಿ
ತಮ್ಮ ವಿವಾಹದ ಬಳಿಕ ಮತ್ತೊದು ಮದುವೆಗೆ ಹಾಜರಿ ಹಾಕಿದ ವಿಜಯ್-ರಶ್ಮಿಕಾ
ತಮ್ಮ ವಿವಾಹದ ಬಳಿಕ ಮತ್ತೊದು ಮದುವೆಗೆ ಹಾಜರಿ ಹಾಕಿದ ವಿಜಯ್-ರಶ್ಮಿಕಾ
ಬೆಂಗಳೂರು ಏರ್​ಪೋರ್ಟ್​ಗೂ ತಟ್ಟಿದ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು
ಬೆಂಗಳೂರು ಏರ್​ಪೋರ್ಟ್​ಗೂ ತಟ್ಟಿದ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು
ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?
ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?
ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ
ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ