AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಗೋಲಾದ ಮಾಜಿ ಅಧ್ಯಕ್ಷ ಡೋಸ್ ಸಾಂಟೋಸ್ ನಿಧನ

ಆಫ್ರಿಕಾದಲ್ಲಿ ಎರಡನೇ ಅತೀ ದೊಡ್ಡ ತೈಲ ಉತ್ಪಾದಕರಾಗಿರುವ ಅಂಗೋಲಾವನ್ನು ನಾಲ್ಕು ದಶಕಗಳ ಕಾಲ ಆಳಿದ್ದ ಜೋಸ್ ಎಡುವಾರ್ಡೊ ಡೋಸ್ ಸಾಂಟೋಸ್ ಅವರು 79ನೇ ವಯಸ್ಸಲ್ಲಿ ನಿಧನರಾಗಿದ್ದಾರೆ.

ಅಂಗೋಲಾದ ಮಾಜಿ ಅಧ್ಯಕ್ಷ ಡೋಸ್ ಸಾಂಟೋಸ್ ನಿಧನ
ಜೋಸ್ ಎಡುವಾರ್ಡೊ ಡೋಸ್ ಸಾಂಟೋಸ್
TV9 Web
| Edited By: |

Updated on:Jul 08, 2022 | 6:18 PM

Share

ಬಾರ್ಸಿಲೋನಾ: ಅಂಗೋಲಾದ (Angola) ಮಾಜಿ ಅಧ್ಯಕ್ಷ ಜೋಸ್ ಎಡುವಾರ್ಡೊ ಡೋಸ್ ಸಾಂಟೋಸ್(Jose Eduardo dos Santos) ಶುಕ್ರವಾರ ನಿಧನರಾಗಿದ್ದಾರೆ. ಆಫ್ರಿಕಾದಲ್ಲಿ ಎರಡನೇ ಅತೀ ದೊಡ್ಡ ತೈಲ ಉತ್ಪಾದಕರಾಗಿರುವ ಅಂಗೋಲಾವನ್ನು ನಾಲ್ಕು ದಶಕಗಳ ಕಾಲ ಆಳಿದ್ದ ಸಾಂಟೋಸ್ ಅವರು 79ನೇ ವಯಸ್ಸಲ್ಲಿ ನಿಧನರಾಗಿದ್ದಾರೆ ಎಂದು ಅಂಗೋಲನ್ ಪ್ರೆಸಿಡೆನ್ಸಿ  ಫೇಸ್​​ಬುಕ್​​ನಲ್ಲಿ ಹೇಳಿದೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಅಧ್ಯಕ್ಷರು ಸ್ಪಾನಿಶ್ ಸಮಯ ಬೆಳಗ್ಗೆ 11.10ಕ್ಕೆ ಬಾರ್ಸಿಲೊನಾ ಟೆಕ್ನಾನ್ ಕ್ಲಿನಿಕ್ ನಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪ್ರೆಸಿಡೆನ್ಸಿ ಹೇಳಿದೆ. ಬಾರ್ಸಿಲೋನಾ ಟೆಕ್ನಾನ್ ಕ್ಲಿನಿಕ್ ವಕ್ತಾರರು ಈ ಬಗ್ಗೆ ಹೇಳಿಕೆ ನೀಡಲು ನಿರಾಕರಿಸಿದ್ದಾರೆ. 2019ರಿಂದ ಡೋಸ್ ಸಾಂಟೋಸ್ ಚಿಕಿತ್ಸೆಯಲ್ಲಿದ್ದರು. ಬಾರ್ಸಿಲೋನಾದಲ್ಲಿರುವ ಆಸ್ಪತ್ರೆಯಲ್ಲಿ ಸಾಂಟೋಸ್ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊರ್ಚುಗೀಸ್ ನ್ಯೂಸ್ ಏಜೆನ್ಸಿ ಕಳೆದ ತಿಂಗಳು ವರದಿ ಮಾಡಿತ್ತು. ಅತೀ ಹೆಚ್ಚು ಕಾಲ ಆಫ್ರಿಕಾದಲ್ಲಿ ಅಧಿಕಾರ ಚಲಾಯಿಸಿದ್ದ ಸಾಂಟೋಸ್ 5 ವರ್ಷಗಳ ಹಿಂದೆ ಅಧಿಕಾರದಿಂದ ಕೆಳಗಿಳಿದಿದ್ದರು. ಅವರ ಅಧಿಕಾರವಧಿಯಲ್ಲಿ ಅಮೆರಿಕ ವಿರುದ್ಧ ರಕ್ತಸಿಕ್ತ ಅಂತರ್ಯುದ್ಧ ನಡೆದಿತ್ತು. ಇದರಲ್ಲಿ ಸಾಂಟೋಸ್ ಗೆದ್ದಿದ್ದರು.

2017ರಲ್ಲಿ ಸಾಂಟೋಸ್ ಅವರನ್ನು ಕೆಳಗಿಳಿಸಿ ಜಾವೊ ಲೌರೆಂಕೊ ಅಧ್ಯಕ್ಷ ಸ್ಥಾನಕ್ಕೇರಿದರು. ಡಾಸ್ ಸಾಂಟೋಸ್ ಕಾಲದಲ್ಲಿ ಬಹುಕೋಟಿ ಹಗರಣ ನಡೆದಿದೆ ಎಂದು ಪೀಪಲ್ಸ್ ಮೂವ್ ಮೆಂಟ್ ಫಾರ್ ದಿ ಲಿಬರೇಷನ್ ಆಫ್ ಅಂಗೋಲಾ (ಎಂಪಿಎಲ್ಎ) ನಾಯಕ ಲೌರೆಂಕೊ ತ್ವರಿತ ತನಿಖೆಗೆ ಆದೇಶಿಸಿದ್ದು ಮಾಜಿ ಅಧ್ಯಕ್ಷರ ಮಕ್ಕಳನ್ನು ಗುರಿಯಾಗಿಕೊಂಡಿದ್ದರು.

Published On - 5:54 pm, Fri, 8 July 22

Follow Us
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ದೇವಿಯರಿಗೆ ಉಡಿ ತುಂಬಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ ಮುಸ್ಲಿಮರು
ದೇವಿಯರಿಗೆ ಉಡಿ ತುಂಬಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ ಮುಸ್ಲಿಮರು
ಹುಲಿ ಕಾರ್ತಿಕ್​​ಗೆ ಚಾಲೆಂಜ್ ಮಾಡಿದ ಅನುಶ್ರೀ; ಗೆದ್ದಿದ್ದು ಯಾರು?
ಹುಲಿ ಕಾರ್ತಿಕ್​​ಗೆ ಚಾಲೆಂಜ್ ಮಾಡಿದ ಅನುಶ್ರೀ; ಗೆದ್ದಿದ್ದು ಯಾರು?
ಪೆನ್ ಕ್ಯಾಪ್ ನುಂಗಿದ ಬಾಲಕನ ಜೀವ ಉಳಿಸಿದ ವೈದ್ಯರು
ಪೆನ್ ಕ್ಯಾಪ್ ನುಂಗಿದ ಬಾಲಕನ ಜೀವ ಉಳಿಸಿದ ವೈದ್ಯರು