AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೂರ್ವ ಲಡಾಖ್​ ಗಡಿ ಸಮೀಪ ಹೆದ್ದಾರಿ ನಿರ್ಮಾಣ ಮಾಡಿದ ಚೀನಾ; ಕ್ಷಿಪಣಿ, ರಾಕೆಟ್​ ರೆಜಿಮೆಂಟ್​ ನಿಯೋಜನೆ

ಟಿಬೆಟ್​ ಸ್ವಾಯತ್ತ ಪ್ರದೇಶದ ಹಿಂಭಾಗದ ಸ್ಥಳಗಳಲ್ಲಿ ಚೀನಾ ಹೆಚ್ಚಿನ ಸಂಖ್ಯೆಯಲ್ಲಿ ರಾಕೆಟ್​ ಮತ್ತು ಕ್ಷಿಪಣಿ ರೆಜಿಮೆಂಟ್​​ಗಳನ್ನು ನಿಯೋಜಿಸಿದೆ. ಹಾಗೇ ಅಲ್ಲಿ ಅಡಗಿಕೊಳ್ಳಲು ಅನುಕೂಲವಾಗುವ ತಾಣಗಳ ನಿರ್ಮಾಣವನ್ನೂ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಪೂರ್ವ ಲಡಾಖ್​ ಗಡಿ ಸಮೀಪ ಹೆದ್ದಾರಿ ನಿರ್ಮಾಣ ಮಾಡಿದ ಚೀನಾ; ಕ್ಷಿಪಣಿ, ರಾಕೆಟ್​ ರೆಜಿಮೆಂಟ್​ ನಿಯೋಜನೆ
ಸಾಂಕೇತಿಕ ಚಿತ್ರ
TV9 Web
| Edited By: |

Updated on:Nov 28, 2021 | 2:55 PM

Share

ಭಾರತ-ಚೀನಾ ನಡುವೆ ಮಿಲಿಟರಿ ಸಂಘರ್ಷ ಬೂದಿ ಮುಚ್ಚಿದ ಕೆಂಡದಂತೆ ಇದ್ದು, ಆಗಾಗ ಸಣ್ಣಮಟ್ಟದಲ್ಲಿ ಹೊತ್ತಿ ಉರಿಯುತ್ತಿದೆ. ಈ ಮಧ್ಯೆ ಪೂರ್ವ ಲಡಾಖ್​​ ಸಮೀಪದಲ್ಲಿಯೇ ಹೆದ್ದಾರಿ ಮತ್ತು ರಸ್ತೆ ನಿರ್ಮಾಣ ಕಾಮಗಾರಿ ಶುರು ಮಾಡಿದೆ ಮತ್ತು ಕ್ಷಿಪಣಿ, ರಾಕೆಟ್​ ರೆಜಿಮೆಂಟ್​ಗಳನ್ನು ನಿಯೋಜಿಸುತ್ತಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಪೂರ್ವ ಲಡಾಖ್​ ವಲಯದ ಎದುರು ಭಾಗದಲ್ಲಿರುವ ಅಕ್ಸಾಯ್​ ಚೀನಾ ಏರಿಯಾದಲ್ಲಿ ಹೊಸದಾಗಿ ಹೆದ್ದಾರಿ, ರಸ್ತೆಗಳು ನಿರ್ಮಾಣವಾಗುತ್ತಿವೆ. ವಾಸ್ತವ ಗಡಿ ನಿಯಂತ್ರಣ ರೇಖೆಯನ್ನು ಅತಿ ಕಡಿಮೆ ಸಮಯದಲ್ಲಿ ತಲುಪುವಂತೆ ಈ ರಸ್ತೆಯನ್ನು ಚೀನಾ ನಿರ್ಮಾಣ ಮಾಡಿಕೊಂಡಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ. 

ಟಿಬೆಟ್​ ಸ್ವಾಯತ್ತ ಪ್ರದೇಶದ ಹಿಂಭಾಗದ ಸ್ಥಳಗಳಲ್ಲಿ ಚೀನಾ ಹೆಚ್ಚಿನ ಸಂಖ್ಯೆಯಲ್ಲಿ ರಾಕೆಟ್​ ಮತ್ತು ಕ್ಷಿಪಣಿ ರೆಜಿಮೆಂಟ್​​ಗಳನ್ನು ನಿಯೋಜಿಸಿದೆ. ಹಾಗೇ ಅಲ್ಲಿ ಅಡಗಿಕೊಳ್ಳಲು ಅನುಕೂಲವಾಗುವ ತಾಣಗಳ ನಿರ್ಮಾಣವನ್ನೂ ಮಾಡಿದೆ ಎಂದು ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ. ಇಷ್ಟೆಲ್ಲದರ ಜತೆ, ಕಣ್ಗಾವಲು ಡ್ರೋನ್​ಗಳ ಸಂಖ್ಯೆಯನ್ನೂ ಚೀನಾ ಮಿಲಿಟರಿ ಹೆಚ್ಚಿಸಿದೆ.  ಚೀನಾ ತನ್ನ ಮುಖ್ಯ ಸೇನಾ ನೆಲೆಗಳಾದ ಕಶ್ಗರ್​, ಗರ್​ ಗುನ್ಸಾ ಮತ್ತು ಹೋಟಾನ್​​ಗಳನ್ನು ಹೊರತು ಪಡಿಸಿ ಇದೀಗ ಹೆದ್ದಾರಿಗಳ ವಿಸ್ತರಣೆ ಮಾಡುತ್ತಿದೆ. ಏರ್​ಸ್ಟ್ರಿಪ್​​ಗಳನ್ನು ನಿರ್ಮಿಸುತ್ತಿದೆ. ಹೀಗೆ ಮೂಲಸೌಕರ್ಯಗಳ ನವೀಕರಣ ಮಾಡುತ್ತಿರುವುದು ತುಂಬ ಮಹತ್ವದ ಬೆಳವಣಿಗೆಯಾಗಿದೆ ಎಂದು ಹೇಳಲಾಗಿದೆ.

ಇಷ್ಟೇ ಅಲ್ಲ ಚೀನಾ ಸೇನೆ ಗಡಿ ಪೋಸ್ಟ್​ಗಳಿಗೆ ಹೆಚ್ಚೆಚ್ಚು ಟಿಬೆಟಿಯನ್​​ರನ್ನು ನೇಮಕ ಮಾಡುವ ಕೆಲಸವನ್ನೂ ವೇಗಗೊಳಿಸಿದೆ ಎಂದೂ ಹೇಳಲಾಗಿದೆ. ಅಂದರೆ ಚೀನಾ ಸೇನೆಯಲ್ಲಿರುವ ಇತರ ಸೈನಿಕರಿಗೆ ಗಡಿ ಭಾಗದಲ್ಲಿ ವಾಸ ಕಷ್ಟ. ಇಲ್ಲಿನ ಚಳಿಗೆ ಅವರು ಹೊಂದಿಕೊಳ್ಳಲಾರರು.  ಹೀಗಾಗಿ ಅದೇ ಪ್ರದೇಶದ ಜನರನ್ನೇ ಸೇನೆಗೆ ತೆಗೆದುಕೊಂಡು, ಗಡಿ ಭಾಗದಲ್ಲಿ ಕಾಯಲು ಬಿಡುವುದು ಅದರ ಯೋಚನೆ ಎನ್ನಲಾಗಿದೆ. ಒಟ್ಟಿನಲ್ಲಿ ಚೀನಾ ನಡೆ ನಿಗೂಢವಾಗುತ್ತಿದೆ. ಇತ್ತ ಅರುಣಾಚಲ ಗಡಿ ಭಾಗದಲ್ಲೂ ಒಂದೇ ಸಮನೆ ಗ್ರಾಮಗಳ ನಿರ್ಮಾಣ ಮಾಡುತ್ತಿದೆ.

ಇದನ್ನೂ ಓದಿ: ನೆಲಮಂಗಲದಲ್ಲಿ ವ್ಯಕ್ತಿಯ ಮೇಲೆ ಹರಿದ ಹಲವು ವಾಹನಗಳು! ತುಂಡು ತುಂಡಾದ ದೇಹ

Published On - 2:54 pm, Sun, 28 November 21

Follow Us
Web contact
Web contact

TV9 Kannada

Read More
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ