AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕ ಜತೆ ಹದಗೆಟ್ಟ ಸಂಬಂಧ ಮತ್ತೆ ಭಾರತಕ್ಕೆ ಮಣೆ ಹಾಕಲು ಹೊರಟಿತೇ ಚೀನಾ?

ಚೀನಾವು ಕಳೆದ ನಾಲ್ಕು ತಿಂಗಳುಗಳಿಂದ 85 ಸಾವಿರ ಭಾರತೀಯರಿಗೆ ವೀಸಾಗಳನ್ನು ನೀಡಿದೆ. ಅಮೆರಿಕದ ಜತೆ ಈಗಾಗಲೇ ಚೀನಾ(China) ಸಂಬಂಧ ಹದಗೆಟ್ಟಿದೆ, ಮುಯ್ಯಿಗೆ ಮುಯ್ಯಿ ಎಂಬಂತೆ ಸುಂಕದ ವಿಚಾರದಲ್ಲಿ ಕಾದಾಡುತ್ತಿವೆ. ಇದೇ ಸಮಯದಲ್ಲಿ ಭಾರತದೊಂದಿಗೆ ಉತ್ತಮ ಸಂಬಂಧ ರೂಪಿಸಲು ಹೊರಟಂತಿದೆ. 4 ತಿಂಗಳುಗಳಲ್ಲಿ ಚೀನಾವು 85 ಸಾವಿರ ಭಾರತೀಯರಿಗೆ ವೀಸಾ ನೀಡಿದೆ.

ಅಮೆರಿಕ ಜತೆ ಹದಗೆಟ್ಟ ಸಂಬಂಧ ಮತ್ತೆ ಭಾರತಕ್ಕೆ ಮಣೆ ಹಾಕಲು ಹೊರಟಿತೇ ಚೀನಾ?
ನರೇಂದ್ರ ಮೋದಿ Image Credit source: The Print
ನಯನಾ ರಾಜೀವ್
|

Updated on: Apr 16, 2025 | 9:46 AM

Share

ಬೀಜಿಂಗ್, ಏಪ್ರಿಲ್ 16: ಅಮೆರಿಕದ ಜತೆ ಈಗಾಗಲೇ ಚೀನಾ(China) ಸಂಬಂಧ ಹದಗೆಟ್ಟಿದೆ, ಮುಯ್ಯಿಗೆ ಮುಯ್ಯಿ ಎಂಬಂತೆ ಸುಂಕದ ವಿಚಾರದಲ್ಲಿ ಕಾದಾಡುತ್ತಿವೆ. ಇದೇ ಸಮಯದಲ್ಲಿ ಭಾರತದೊಂದಿಗೆ ಉತ್ತಮ ಸಂಬಂಧ ರೂಪಿಸಲು ಹೊರಟಂತಿದೆ. 4 ತಿಂಗಳುಗಳಲ್ಲಿ ಚೀನಾವು 85 ಸಾವಿರ ಭಾರತೀಯರಿಗೆ ವೀಸಾ ನೀಡಿದೆ. ಆದರೆ ಈಗೇನು ಭಾರತ ಹಾಗೂ ಚೀನಾ ಸಂಬಂಧ ಸರಿ ಇಲ್ಲ, ಮೂರು ವರ್ಷಗಳ ಹಿಂದೆ ಭಾರತದ ಸರ್ಕಾರವು ಹಲವು ಚೀನಾ ಆ್ಯಪ್​ಗಳಿಗೆ ನಿರ್ಬಂಧ ಹೇರಿತ್ತು. ಅದಾದ ಬಳಿಕ ಆದಷ್ಟು ದೇಸೀ ಉತ್ಪನ್ನಗಳನ್ನೇ ಖರೀದಿಸಲು ಸಲಹೆ ನೀಡಲಾಗಿತ್ತು. ಜತೆಗೆ ಗಡಿಯಲ್ಲಿ ಕೂಡ ಉದ್ವಿಗ್ನತೆ ಉಂಟಾಗಿತ್ತು.

ಹೀಗಿರುವಾಗ ಚೀನಾವು ಇಷ್ಟೊಂದು ಮಂದಿ ಭಾರತೀಯರಿಗೆ ವೀಸಾ ಕೊಟ್ಟಿದ್ದು, ಅಚ್ಚರಿ ಮೂಡಿಸಿದೆ, ಅಷ್ಟೇ ಅಲ್ಲದೆ ಕೆಲವು ವೀಸಾ ನಿಯಮಗಳಲ್ಲಿ ಬದಲಾವಣೆಗಳನ್ನು ಕೂಡ ಮಾಡಿದೆ. ಪೂರ್ವ ಲಡಾಖ್‌ನಲ್ಲಿ ತಮ್ಮ ಎರಡೂ ಸೇನೆಗಳನ್ನು ಹಿಂಪಡೆದ ನಂತರ ಎರಡೂ ರಾಷ್ಟ್ರಗಳ ನಡುವಿನ ಜನರಿಂದ ಜನರಿಗೆ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.

ಇದನ್ನೂ ಓದಿ
Image
ಅಮೆರಿಕದ ಆಮದು ಮೇಲಿನ ಸುಂಕವನ್ನು ಶೇ. 84ರಿಂದ ಶೇ. 125ಕ್ಕೆ ಏರಿಸಿದ ಚೀನಾ
Image
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌
Image
ಛತ್ತೀಸ್​ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಮನೆ ಸೇರಿ ಹಲವೆಡೆ ಇಡಿ ದಾಳಿ
Image
ಮೊಬೈಲ್​ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದು ವಿದ್ಯಾರ್ಥಿ ಸಾವು

ಏಪ್ರಿಲ್ 9, 2025 ರ ಹೊತ್ತಿಗೆ, ಭಾರತದಲ್ಲಿನ ಚೀನೀ ರಾಯಭಾರ ಕಚೇರಿ ಮತ್ತು ದೂತಾವಾಸಗಳು ಈ ವರ್ಷ ಚೀನಾಕ್ಕೆ ಪ್ರಯಾಣಿಸುವ ಭಾರತೀಯ ನಾಗರಿಕರಿಗೆ 85,000 ಕ್ಕೂ ಹೆಚ್ಚು ವೀಸಾಗಳನ್ನು ನೀಡಿವೆ. ಎರಡೂ ದೇಶಗಳ ನಡುವಿನ ಪ್ರಯಾಣವನ್ನು ಮತ್ತಷ್ಟು ಸುಗಮಗೊಳಿಸಲು, ಚೀನಾ ಭಾರತೀಯ ಅರ್ಜಿದಾರರಿಗೆ ಹಲವಾರು ವೀಸಾ ನೀತಿ ಸಡಿಲಿಕೆಗಳನ್ನು ಪರಿಚಯಿಸಿದೆ.

ಮತ್ತಷ್ಟು ಓದಿ: ಟ್ರಂಪ್​ಗೆ ಚೀನಾ ತಿರುಗೇಟು; ಅಮೆರಿಕದ ಎಲ್ಲಾ ಆಮದು ಮೇಲೆ ಶೇ. 84 ಸುಂಕ ವಿಧಿಸಿದ ಬೀಜಿಂಗ್

ಸಣ್ಣ ಭೇಟಿಗಾಗಿ ಬರುವ ಪ್ರಯಾಣಿಕರಿಗೆ ಬಯೋಮೆಟ್ರಿಕ್ ಡೇಟಾವನ್ನು ಒದಗಿಸುವುದರಿಂದ ವಿನಾಯಿತಿ ನೀಡಲಾಗಿದೆ, ಇದು ಅರ್ಜಿ ಸಲ್ಲಿಸುವ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ವೀಸಾ ಶುಲ್ಕವನ್ನು ಸಹ ಕಡಿಮೆ ಮಾಡಲಾಗಿದ್ದು, ಈ ಪ್ರಕ್ರಿಯೆಯನ್ನು ಹೆಚ್ಚು ಕೈಗೆಟುಕುವಂತೆ ಮಾಡಿದೆ.

ಒಟ್ಟಾರೆ ವೀಸಾ ಪ್ರಕ್ರಿಯೆಯ ಸಮಯವನ್ನು ಸುವ್ಯವಸ್ಥಿತಗೊಳಿಸಲಾಗಿದ್ದು, ವ್ಯಾಪಾರ ಮತ್ತು ಇತರೆ ಪ್ರಯಾಣಿಕರಿಬ್ಬರಿಗೂ ಅನುಕೂಲವಾಗಲಿದೆ. ಭಾರತ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಂಬಂಧಗಳು – ವಿಶೇಷವಾಗಿ ಗಡಿ ಸಮಸ್ಯೆಗಳಿಂದಾಗಿ – ಒತ್ತಡಗಳನ್ನು ಎದುರಿಸುತ್ತಿದ್ದರೂ, ಆರ್ಥಿಕ ಸಂಬಂಧವು ಪರಸ್ಪರ ಪ್ರಯೋಜನಕಾರಿಯಾಗಿ ಒತ್ತಿಹೇಳಲಾಗುತ್ತಿದೆ.

ವಿಶ್ವದ ಎರಡು ದೊಡ್ಡ ಅಭಿವೃದ್ಧಿಶೀಲ ಆರ್ಥಿಕತೆಗಳಾಗಿ ಭಾರತ ಮತ್ತು ಚೀನಾ ಜಾಗತಿಕ ಸವಾಲುಗಳನ್ನು ಎದುರಿಸಲು ಒಟ್ಟಾಗಿ ಕೆಲಸ ಮಾಡಬೇಕು, ವಿಶೇಷವಾಗಿ ಅಮೆರಿಕದ ಸುಂಕಗಳಂತಹ ರಕ್ಷಣಾ ನೀತಿಗಳಿಗೆ ಪ್ರತಿಕ್ರಿಯೆಯಾಗಿ ಎಂದು ಚೀನಾ ರಾಯಭಾರ ಕಚೇರಿಯ ವಕ್ತಾರ ಯು ಜಿಂಗ್ ಹೇಳಿದ್ದರು.

ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (LAC) ಮಿಲಿಟರಿ ಬಿಕ್ಕಟ್ಟು ಸೇರಿದಂತೆ ನಡೆಯುತ್ತಿರುವ ಉದ್ವಿಗ್ನತೆಗಳ ಹೊರತಾಗಿಯೂ, ವೀಸಾ ಅನುಮೋದನೆಗಳಲ್ಲಿನ ಈ ಹೆಚ್ಚಳವು ಚೀನಾದ ಮೃದು ಶಕ್ತಿಯ ಸೂಚಕವೆಂದು ಪರಿಗಣಿಸಲಾಗಿದೆ. ಚೀನಾ ಭಾರತೀಯ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಮುಖ ಎಂದೇ ಹೇಳಬಹುದು, ಸಾವಿರಾರು ವಿದ್ಯಾರ್ಥಿಗಳು ಚೀನಾದ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದಿದ್ದಾರೆ. ಸಾಂಕ್ರಾಮಿಕ ರೋಗದಿಂದ ಉಂಟಾದ ಅಡೆತಡೆಗಳ ನಂತರ ವಿದ್ಯಾರ್ಥಿಗಳ ಪ್ರಯಾಣದ ಪುನರಾರಂಭ ಹೆಚ್ಚುತ್ತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?