ಇಸ್ರೇಲಿ ಕಮಾಂಡೋಗಳು ಹಮಾಸ್​​ ಭದ್ರಕೋಟೆಯಿಂದ ಒತ್ತೆಯಾಳುಗಳನ್ನು ರಕ್ಷಿಸಿದ್ದು ಹೇಗೆ?

ಹಮಾಸ್ ಸೆರೆಯಿಂದ ಇಸ್ರೇಲಿ ಪಡೆಗಳು ನಾಲ್ಕು ಇಸ್ರೇಲಿ ಒತ್ತೆಯಾಳುಗಳನ್ನು ರಕ್ಷಿಸಿದ ವಿಡಿಯೋವನ್ನು ಇಸ್ರೇಲ್​ ಹಂಚಿಕೊಂಡಿದೆ. ಈ ಕಾರ್ಯಾಚರಣೆಯು ಇಸ್ರೇಲಿ ಸೇನೆ (ಐಡಿಎಫ್) ಮತ್ತು ಅದರ ಗುಪ್ತಚರ ಸಂಸ್ಥೆಗಳ ಬಲವನ್ನು ಸಾಬೀತುಪಡಿಸಿದೆ. ವಿಶೇಷವೆಂದರೆ ಇಸ್ರೇಲ್ ಸೇನೆ ಹಗಲು ಹೊತ್ತಿನಲ್ಲಿ ಈ ಕಾರ್ಯಾಚರಣೆ ನಡೆಸಿದೆ.

ಇಸ್ರೇಲಿ ಕಮಾಂಡೋಗಳು ಹಮಾಸ್​​ ಭದ್ರಕೋಟೆಯಿಂದ ಒತ್ತೆಯಾಳುಗಳನ್ನು ರಕ್ಷಿಸಿದ್ದು ಹೇಗೆ?
Follow us
|

Updated on: Jun 10, 2024 | 10:43 AM

ಗಾಜಾದ ಹಮಾಸ್ ಭದ್ರಕೋಟೆ ಎಂದು ಪರಿಗಣಿಸಲಾದ ಪ್ರದೇಶದಲ್ಲಿ ಇಸ್ರೇಲ್(Israel) ಶನಿವಾರ ಕಾರ್ಯಾಚರಣೆ ನಡೆಸಿದ್ದು, ಭಯೋತ್ಪಾದಕ ಗುಂಪಿನ ವಶದಿಂದ ತನ್ನ ನಾಲ್ವರು ನಾಗರಿಕರನ್ನು ಸುರಕ್ಷಿತವಾಗಿ ರಕ್ಷಿಸಿದೆ. ಈ ಕಾರ್ಯಾಚರಣೆಯು ಇಸ್ರೇಲಿ ಸೇನೆ (ಐಡಿಎಫ್) ಮತ್ತು ಅದರ ಗುಪ್ತಚರ ಸಂಸ್ಥೆಗಳ ಬಲವನ್ನು ಸಾಬೀತುಪಡಿಸಿದೆ. ವಿಶೇಷವೆಂದರೆ ಇಸ್ರೇಲ್ ಸೇನೆ ಹಗಲು ಹೊತ್ತಿನಲ್ಲಿ ಈ ಕಾರ್ಯಾಚರಣೆ ನಡೆಸಿದೆ.

ಕಾರ್ಯಾಚರಣೆಯನ್ನು ಸೀಡ್ಸ್ ಆಫ್ ಸಮ್ಮರ್ ಎಂದು ಹೆಸರಿಸಲಾಯಿತು. ಆದರೆ ನಂತರ ಇಸ್ರೇಲಿ ಕಮಾಂಡೋ ಅರ್ನಾನ್ ಝಮೊರಾ ನಂತರ ಆಪರೇಷನ್ ಅರ್ನಾನ್ ಎಂದು ಬದಲಿಸಿದೆ.

ಮೂವರು ಒತ್ತೆಯಾಳುಗಳನ್ನು ರಕ್ಷಿಸುವಾಗ ಹಮಾಸ್ ಗುಂಡಿನ ದಾಳಿಯಿಂದ ಅರ್ನಾನ್ ಝಮೋರಾ ಗಂಭೀರವಾಗಿ ಗಾಯಗೊಂಡರು ಬಳಿಕ ಸಾವನ್ನಪ್ಪಿದ್ದಾರೆ, ಈ ಕಾರ್ಯಾಚರಣೆಯಲ್ಲಿ ಪ್ರಾಣ ಕಳೆದುಕೊಂಡ ಏಕೈಕ ಇಸ್ರೇಲ್ ಸೈನಿಕ. ಇಸ್ರೇಲಿ ಮಿಲಿಟರಿ ಅಧಿಕಾರಿಗಳು ಈ ಕಾರ್ಯಾಚರಣೆಯನ್ನು 1976 ರ ಎಂಟೆಬ್ಬೆ ಕಾರ್ಯಾಚರಣೆಯಂತೆಯೇ ವಿವರಿಸಿದ್ದಾರೆ.

ಎಂಟೆಬ್ಬೆ ಕಾರ್ಯಾಚರಣೆಯ ಭಾಗವಾಗಿ ಇಸ್ರೇಲಿ ಕಮಾಂಡೋಗಳು ಉಗಾಂಡಾದಲ್ಲಿ 100 ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ರಕ್ಷಿಸಿದರು. ಆಪರೇಷನ್ ಎಂಟೆಬ್ಬೆ ಸಮಯದಲ್ಲಿ, ಪ್ರಸ್ತುತ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸಹೋದರರಾಗಿದ್ದ ಇಸ್ರೇಲಿ ಸೇನೆಯ ಏಕೈಕ ಕಮಾಂಡೋ ಜೊನಾಥನ್ ನೆತನ್ಯಾಹು ಅವರು ತಮ್ಮ ಪ್ರಾಣವನ್ನು ಕಳೆದುಕೊಂಡರು.

ಶನಿವಾರ ಬೆಳಿಗ್ಗೆ 11 ಗಂಟೆಗೆ, ಯಮಮ್ ಮತ್ತು ಶಿನ್ ಬೆಟ್ ಕಮಾಂಡೋಗಳು ಗಾಜಾದ ನುಸ್ರತ್‌ನಲ್ಲಿರುವ ಎರಡು ಪ್ರತ್ಯೇಕ ಬಹುಮಹಡಿ ಕಟ್ಟಡಗಳ ಮೇಲೆ ದಾಳಿ ನಡೆಸಿದರು. ಈ ಎರಡು ಕಟ್ಟಡಗಳಲ್ಲಿ ಹಮಾಸ್ ಒತ್ತೆಯಾಳುಗಳನ್ನು ಇರಿಸಿತ್ತು. ನುಸ್ರತ್ ಗಾಜಾದ ಕೆಲವು ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಇದುವರೆಗೂ ತಲುಪಿರಲಿಲ್ಲ.

ಮತ್ತಷ್ಟು ಓದಿ: ಕದನ ವಿರಾಮ: 12 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್, ಇಸ್ರೇಲ್​ನಿಂದ 30 ಪ್ಯಾಲೆಸ್ತೀನಿಯನ್ ಕೈದಿಗಳ ಬಿಡುಗಡೆ

ಎರಡೂ ಕಟ್ಟಡಗಳು ಪರಸ್ಪರ 200 ಮೀಟರ್ ದೂರದಲ್ಲಿವೆ. ಪ್ರತ್ಯೇಕ ಕಾರ್ಯಾಚರಣೆಗಳನ್ನು ನಡೆಸುವ ಮೂಲಕ ಹಮಾಸ್ ಮತ್ತೊಂದು ಸ್ಥಳದಲ್ಲಿ ಒತ್ತೆಯಾಳುಗಳನ್ನು ಕೊಲ್ಲಬಹುದೆಂಬ ಕಾರಣಕ್ಕಾಗಿ ಏಕಕಾಲದಲ್ಲಿ ಎರಡೂ ದಾಳಿಯ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಈ ಪ್ರದೇಶವು ಸಶಸ್ತ್ರ ಭಯೋತ್ಪಾದಕರಿಂದ ತುಂಬಿತ್ತು ಎಂದು ಸೇನಾ ಮೂಲಗಳು ತಿಳಿಸಿವೆ.

ವಿಡಿಯೋ:

ಮೂವರು ಒತ್ತೆಯಾಳುಗಳು ಮತ್ತು ಝೊಮೊರೊ ಅವರನ್ನು ನುಸ್ರತ್‌ನಿಂದ ಹೊರಗೆ ಕರೆದೊಯ್ಯುವಾಗ, ವಾಹನದ ಮೇಲೆ ಇದ್ದಕ್ಕಿದ್ದಂತೆ ಗುಂಡಿನ ದಾಳಿ ಪ್ರಾರಂಭವಾಗಿತ್ತು. ಇದರಿಂದಾಗಿ ಅವರೆಲ್ಲರೂ ಸಿಕ್ಕಿಬಿದ್ದಿದ್ದರು.

ರಕ್ಷಿಸಲು ಇತರ ಪಡೆಗಳು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿವೆ. ಅವರನ್ನು ಗಾಜಾದಲ್ಲಿನ ತಾತ್ಕಾಲಿಕ ಹೆಲಿಪ್ಯಾಡ್‌ಗೆ ಕರೆದೊಯ್ಯಲಾಯಿತು, ಅಲ್ಲಿಂದ ಅವರನ್ನು ಹೆಲಿಕಾಪ್ಟರ್‌ನಲ್ಲಿ ಇಸ್ರೇಲ್‌ಗೆ ಕರೆದೊಯ್ಯಲಾಯಿತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್