AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jerusalem Shootout: ಜೆರುಸಲೆಮ್ ಮಂದಿರದಲ್ಲಿ ಶೂಟೌಟ್; 7 ಮಂದಿ ಸಾವು; ದುಷ್ಕರ್ಮಿಯೂ ಹತ್ಯೆ

Terror Attack: ಇಸ್ರೇಲ್​ನ ಜೆರುಸಲೆಂ ನಗರದ ನೆವೆ ಯಾಕೋವ್ ಎಂಬ ಪ್ರದೇಶದ ಮಂದಿರದ ಮೇಲೆ ಸ್ಥಳೀಯ ಕಾಲಮಾನದಲ್ಲಿ ಶುಕ್ರವಾರ ರಾತ್ರಿ 8:30ಕ್ಕೆ (ಭಾರತೀಯ ಕಾಲಮಾನದಲ್ಲಿ ಮಧ್ಯರಾತ್ರಿ 12ಕ್ಕೆ) ಈ ಶೂಟೌಟ್ ನಡೆದಿದಿರುವುದು ಪೊಲೀಸ್ ಇಲಾಖೆಯ ಹೇಳಿಕೆಯಿಂದ ತಿಳಿದುಬಂದಿದೆ.

Jerusalem Shootout: ಜೆರುಸಲೆಮ್ ಮಂದಿರದಲ್ಲಿ ಶೂಟೌಟ್; 7 ಮಂದಿ ಸಾವು; ದುಷ್ಕರ್ಮಿಯೂ ಹತ್ಯೆ
Israel PoliceImage Credit source: AFP
TV9 Web
| Edited By: |

Updated on:Jan 28, 2023 | 9:09 AM

Share

ಜೆರುಸಲೆಂ: ಇಸ್ರೇಲ್ ಸ್ವಾಮ್ಯದಲ್ಲಿರುವ ಜೆರುಸಲೆಂನ ಯಹೂದಿ ಮಂದಿರೊಂದರದ (Jerusalem Synagogue) ಬಳಿ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ (Gun Attack) ನಡೆಸಿ ಏಳಕ್ಕೂ ಹೆಚ್ಚು ಮಂದಿಯನ್ನು ಹತ್ಯೆ ಮಾಡಿದ ಘೋರ ಘಟನೆ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಇನ್ನೂ ಕೆಲವಾರು ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯ ಪೊಲೀಸರು ನೀಡಿದ ಮಾಹಿತಿ ಪ್ರಕಾರ ದಾಳಿಕೋರನೂ ಹತ್ಯೆಯಾಗಿದ್ದಾನೆ.

ಜೆರುಸಲೆಂನ ನೆವೆ ಯಾಕೋವ್ ಎಂಬ ಪ್ರದೇಶದ ಮಂದಿರದ ಮೇಲೆ ಸ್ಥಳೀಯ ಕಾಲಮಾನದಲ್ಲಿ ಶುಕ್ರವಾರ ರಾತ್ರಿ 8:30ಕ್ಕೆ (ಭಾರತೀಯ ಕಾಲಮಾನದಲ್ಲಿ ಮಧ್ಯರಾತ್ರಿ 12ಕ್ಕೆ) ಈ ಶೂಟೌಟ್ ನಡೆದಿದಿರುವುದು ಪೊಲೀಸ್ ಇಲಾಖೆಯ ಹೇಳಿಕೆಯಿಂದ ತಿಳಿದುಬಂದಿದೆ.

ಪೊಲೀಸರ ಪ್ರಕಾರ ಏಳು ಮಂದಿ ಈ ದಾಳಿ ಘಟನೆಯಲ್ಲಿ ಬಲಿಯಾಗಿದ್ದಾರೆ. ಮಾಗೆಲ್ ಡೇವಿಡ್ ಅಡೋಮ್ (MDA- Magel David Adom) ಎಂಬ ತುರ್ತು ಸ್ಪಂದನಾ ಸಂಸ್ಥೆಯ (Emergency Response Agency) ಪ್ರಕಾರ ಉಗ್ರನ ಗುಂಡಿನ ದಾಳಿಗೆ 10 ಮಂದಿ ಸಾವನ್ನಪ್ಪಿದ್ದಾರೆ. ಇವರ ಪೈಕಿ 14 ವರ್ಷದ ಒಬ್ಬ ಬಾಲಕ ಮತ್ತು 70 ವರ್ಷದ ವಯೋವೃದ್ಧರೊಬ್ಬರೂ ಸೇರಿದ್ದಾರೆ.

ಶೂಟೌಟ್ ನಡೆಯುತ್ತಿದ್ದಂತೆಯೇ ಸ್ಥಳೀಯ ಪೊಲೀಸ್ ಪಡೆಗಳು ತ್ವರಿತವಾಗಿ ಘಟನಾ ಸ್ಥಳಕ್ಕೆ ಆಗಮಿಸಿ ಉಗ್ರನನ್ನು ಕೊಂದು ಹೆಚ್ಚಿನ ಅನಾಹುತವನ್ನು ತಪ್ಪಿಸಿದರೆನ್ನಲಾಗಿದೆ.

ಪ್ಯಾಲೆಸ್ಟೀನ್ ಉಗ್ರರ ಕೈವಾಡ?

ಜೆರುಸಲೆಂ ಸಿನಗೋಗ್​ನಲ್ಲಿ ಶುಕ್ರವಾರ ದಾಳಿ ನಡೆಸಿದ ದುಷ್ಕರ್ಮಿ ಯಾರು, ಯಾವ ಸಂಘಟನೆಗೆ ಸೇರಿದವ ಎಂಬ ಸ್ಪಷ್ಟ ಮಾಹಿತಿ ಸದ್ಯ ಲಭ್ಯವಾಗಿಲ್ಲ. ಪ್ಯಾಲೆಸ್ಟೀನ್ ಪ್ರತ್ಯೇಕತೆಗೆ ಹೋರಾಡುತ್ತಿರುವ ಹಮಾಸ್ ಸಂಘಟನೆಗೆ ಸೇರಿದ ಉಗ್ರ ಇವ ಇರಬಹುದು ಎಂಬ ಶಂಕೆ ಇದೆ.

ಈ ಹೊಸ ವರ್ಷದ ಮೂರು ವಾರಗಳಲ್ಲಿ ಪ್ಯಾಲೆಸ್ಟೀನ್ ಉಗ್ರರು ಮತ್ತು ಇಸ್ರೇಲ್ ಮಧ್ಯೆ ದಾಳಿ ಮತ್ತು ಪ್ರತಿದಾಳಿಗಳು ನಿರಂತರವಾಗಿ ನಡೆದಿವೆ. ಗುರುವಾರ ಹಮಾಸ್ ಉಗ್ರರು ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ್ದರು. ಅದಕ್ಕೆ ಪ್ರತಿಯಾಗಿ ಇಸ್ರೇಲ್ ಸೇನಾ ಪಡೆಗಳು ಗಾಜಾ ಪಟ್ಟಿಯಲ್ಲಿ ವೈಮಾನಿಕ ದಾಳಿ ನಡೆಸಿ ಹಮಾಸ್ ಉಗ್ರರ ನೆಲೆಯೊಂದನ್ನು ನಾಶ ಮಾಡಿದ್ದವು.

Published On - 8:58 am, Sat, 28 January 23

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ