AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jerusalem Shootout: ಜೆರುಸಲೆಮ್ ಮಂದಿರದಲ್ಲಿ ಶೂಟೌಟ್; 7 ಮಂದಿ ಸಾವು; ದುಷ್ಕರ್ಮಿಯೂ ಹತ್ಯೆ

Terror Attack: ಇಸ್ರೇಲ್​ನ ಜೆರುಸಲೆಂ ನಗರದ ನೆವೆ ಯಾಕೋವ್ ಎಂಬ ಪ್ರದೇಶದ ಮಂದಿರದ ಮೇಲೆ ಸ್ಥಳೀಯ ಕಾಲಮಾನದಲ್ಲಿ ಶುಕ್ರವಾರ ರಾತ್ರಿ 8:30ಕ್ಕೆ (ಭಾರತೀಯ ಕಾಲಮಾನದಲ್ಲಿ ಮಧ್ಯರಾತ್ರಿ 12ಕ್ಕೆ) ಈ ಶೂಟೌಟ್ ನಡೆದಿದಿರುವುದು ಪೊಲೀಸ್ ಇಲಾಖೆಯ ಹೇಳಿಕೆಯಿಂದ ತಿಳಿದುಬಂದಿದೆ.

Jerusalem Shootout: ಜೆರುಸಲೆಮ್ ಮಂದಿರದಲ್ಲಿ ಶೂಟೌಟ್; 7 ಮಂದಿ ಸಾವು; ದುಷ್ಕರ್ಮಿಯೂ ಹತ್ಯೆ
Israel PoliceImage Credit source: AFP
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ|

Updated on:Jan 28, 2023 | 9:09 AM

Share

ಜೆರುಸಲೆಂ: ಇಸ್ರೇಲ್ ಸ್ವಾಮ್ಯದಲ್ಲಿರುವ ಜೆರುಸಲೆಂನ ಯಹೂದಿ ಮಂದಿರೊಂದರದ (Jerusalem Synagogue) ಬಳಿ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ (Gun Attack) ನಡೆಸಿ ಏಳಕ್ಕೂ ಹೆಚ್ಚು ಮಂದಿಯನ್ನು ಹತ್ಯೆ ಮಾಡಿದ ಘೋರ ಘಟನೆ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಇನ್ನೂ ಕೆಲವಾರು ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯ ಪೊಲೀಸರು ನೀಡಿದ ಮಾಹಿತಿ ಪ್ರಕಾರ ದಾಳಿಕೋರನೂ ಹತ್ಯೆಯಾಗಿದ್ದಾನೆ.

ಜೆರುಸಲೆಂನ ನೆವೆ ಯಾಕೋವ್ ಎಂಬ ಪ್ರದೇಶದ ಮಂದಿರದ ಮೇಲೆ ಸ್ಥಳೀಯ ಕಾಲಮಾನದಲ್ಲಿ ಶುಕ್ರವಾರ ರಾತ್ರಿ 8:30ಕ್ಕೆ (ಭಾರತೀಯ ಕಾಲಮಾನದಲ್ಲಿ ಮಧ್ಯರಾತ್ರಿ 12ಕ್ಕೆ) ಈ ಶೂಟೌಟ್ ನಡೆದಿದಿರುವುದು ಪೊಲೀಸ್ ಇಲಾಖೆಯ ಹೇಳಿಕೆಯಿಂದ ತಿಳಿದುಬಂದಿದೆ.

ಪೊಲೀಸರ ಪ್ರಕಾರ ಏಳು ಮಂದಿ ಈ ದಾಳಿ ಘಟನೆಯಲ್ಲಿ ಬಲಿಯಾಗಿದ್ದಾರೆ. ಮಾಗೆಲ್ ಡೇವಿಡ್ ಅಡೋಮ್ (MDA- Magel David Adom) ಎಂಬ ತುರ್ತು ಸ್ಪಂದನಾ ಸಂಸ್ಥೆಯ (Emergency Response Agency) ಪ್ರಕಾರ ಉಗ್ರನ ಗುಂಡಿನ ದಾಳಿಗೆ 10 ಮಂದಿ ಸಾವನ್ನಪ್ಪಿದ್ದಾರೆ. ಇವರ ಪೈಕಿ 14 ವರ್ಷದ ಒಬ್ಬ ಬಾಲಕ ಮತ್ತು 70 ವರ್ಷದ ವಯೋವೃದ್ಧರೊಬ್ಬರೂ ಸೇರಿದ್ದಾರೆ.

ಶೂಟೌಟ್ ನಡೆಯುತ್ತಿದ್ದಂತೆಯೇ ಸ್ಥಳೀಯ ಪೊಲೀಸ್ ಪಡೆಗಳು ತ್ವರಿತವಾಗಿ ಘಟನಾ ಸ್ಥಳಕ್ಕೆ ಆಗಮಿಸಿ ಉಗ್ರನನ್ನು ಕೊಂದು ಹೆಚ್ಚಿನ ಅನಾಹುತವನ್ನು ತಪ್ಪಿಸಿದರೆನ್ನಲಾಗಿದೆ.

ಪ್ಯಾಲೆಸ್ಟೀನ್ ಉಗ್ರರ ಕೈವಾಡ?

ಜೆರುಸಲೆಂ ಸಿನಗೋಗ್​ನಲ್ಲಿ ಶುಕ್ರವಾರ ದಾಳಿ ನಡೆಸಿದ ದುಷ್ಕರ್ಮಿ ಯಾರು, ಯಾವ ಸಂಘಟನೆಗೆ ಸೇರಿದವ ಎಂಬ ಸ್ಪಷ್ಟ ಮಾಹಿತಿ ಸದ್ಯ ಲಭ್ಯವಾಗಿಲ್ಲ. ಪ್ಯಾಲೆಸ್ಟೀನ್ ಪ್ರತ್ಯೇಕತೆಗೆ ಹೋರಾಡುತ್ತಿರುವ ಹಮಾಸ್ ಸಂಘಟನೆಗೆ ಸೇರಿದ ಉಗ್ರ ಇವ ಇರಬಹುದು ಎಂಬ ಶಂಕೆ ಇದೆ.

ಈ ಹೊಸ ವರ್ಷದ ಮೂರು ವಾರಗಳಲ್ಲಿ ಪ್ಯಾಲೆಸ್ಟೀನ್ ಉಗ್ರರು ಮತ್ತು ಇಸ್ರೇಲ್ ಮಧ್ಯೆ ದಾಳಿ ಮತ್ತು ಪ್ರತಿದಾಳಿಗಳು ನಿರಂತರವಾಗಿ ನಡೆದಿವೆ. ಗುರುವಾರ ಹಮಾಸ್ ಉಗ್ರರು ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ್ದರು. ಅದಕ್ಕೆ ಪ್ರತಿಯಾಗಿ ಇಸ್ರೇಲ್ ಸೇನಾ ಪಡೆಗಳು ಗಾಜಾ ಪಟ್ಟಿಯಲ್ಲಿ ವೈಮಾನಿಕ ದಾಳಿ ನಡೆಸಿ ಹಮಾಸ್ ಉಗ್ರರ ನೆಲೆಯೊಂದನ್ನು ನಾಶ ಮಾಡಿದ್ದವು.

Published On - 8:58 am, Sat, 28 January 23

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್