AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೌ ಬೌ ಬಿರಿಯಾನಿಗಾಗಿ ನಾಯಿ ಬೇಟೆಗೆ ಇಳಿದ ಸರ್ವಾಧಿಕಾರಿ ಕಿಮ್​: ಉ.ಕೊರಿಯಾ ಗಢಗಢ!

ಸರ್ವಾಧಿಕಾರದ ಕಪಿಮುಷ್ಟಿಯಲ್ಲಿ ಸಿಲುಕಿರುವ ಕೆಲವು ದೇಶಗಳಲ್ಲಿ ಉತ್ತರ ಕೊರಿಯಾ ಸಹ ಒಂದು. ಅಲ್ಲಿನ ಸರ್ವಾಧಿಕಾರಿ ಕಿಮ್ ಜಾಂಗ್​ ಉನ್​ ನುಡಿದಿದ್ದೇ ಆಜ್ಞೆ, ಬರೆದದ್ದೇ ಶಾಸನ! ಇದೀಗ ಈ ಹುಚ್ಚು ಮನಸ್ಸಿನ ಕೆಟ್ಟ ಹಠದ ಸರ್ವಾಧಿಕಾರಿ ಬಹು ಚಾಣಾಕ್ಷ ಆಜ್ಞೆಯೊಂದನ್ನ ಹೊರಡಿಸಿದ್ದಾನಂತೆ. ಕಿಮ್ ಹೊರಡಿಸಿರುವ ಆದೇಶದ ಪ್ರಕಾರ ಉತ್ತರ ಕೊರಿಯಾದಲ್ಲಿ ಶ್ವಾನಗಳನ್ನು ಸಾಕಿರುವ ಪ್ರತಿ ಮನೆತನವೂ ತಮ್ಮ ನೆಚ್ಚಿನ ಪ್ರಾಣಿಯನ್ನ ಸರ್ಕಾರಿ ಅಧಿಕಾರಿಗಳಿಗೆ ಒಪ್ಪಿಸಬೇಕಂತೆ. ಉನ್ನತ ಮೂಲಗಳ ಪ್ರಕಾರ ವಶಪಡಿಸಿಕೊಂಡ ಶ್ವಾನಗಳ ಮಾಂಸವನ್ನ ಆಹಾರಕ್ಕಾಗಿ ಬಳಸಲಾಗುವುದು ಎಂದು ತಿಳಿದುಬಂದಿದೆ. […]

ಬೌ ಬೌ ಬಿರಿಯಾನಿಗಾಗಿ ನಾಯಿ ಬೇಟೆಗೆ ಇಳಿದ ಸರ್ವಾಧಿಕಾರಿ ಕಿಮ್​: ಉ.ಕೊರಿಯಾ ಗಢಗಢ!
KUSHAL V
| Updated By: ಸಾಧು ಶ್ರೀನಾಥ್​|

Updated on: Aug 19, 2020 | 2:47 PM

Share

ಸರ್ವಾಧಿಕಾರದ ಕಪಿಮುಷ್ಟಿಯಲ್ಲಿ ಸಿಲುಕಿರುವ ಕೆಲವು ದೇಶಗಳಲ್ಲಿ ಉತ್ತರ ಕೊರಿಯಾ ಸಹ ಒಂದು. ಅಲ್ಲಿನ ಸರ್ವಾಧಿಕಾರಿ ಕಿಮ್ ಜಾಂಗ್​ ಉನ್​ ನುಡಿದಿದ್ದೇ ಆಜ್ಞೆ, ಬರೆದದ್ದೇ ಶಾಸನ! ಇದೀಗ ಈ ಹುಚ್ಚು ಮನಸ್ಸಿನ ಕೆಟ್ಟ ಹಠದ ಸರ್ವಾಧಿಕಾರಿ ಬಹು ಚಾಣಾಕ್ಷ ಆಜ್ಞೆಯೊಂದನ್ನ ಹೊರಡಿಸಿದ್ದಾನಂತೆ.

ಕಿಮ್ ಹೊರಡಿಸಿರುವ ಆದೇಶದ ಪ್ರಕಾರ ಉತ್ತರ ಕೊರಿಯಾದಲ್ಲಿ ಶ್ವಾನಗಳನ್ನು ಸಾಕಿರುವ ಪ್ರತಿ ಮನೆತನವೂ ತಮ್ಮ ನೆಚ್ಚಿನ ಪ್ರಾಣಿಯನ್ನ ಸರ್ಕಾರಿ ಅಧಿಕಾರಿಗಳಿಗೆ ಒಪ್ಪಿಸಬೇಕಂತೆ. ಉನ್ನತ ಮೂಲಗಳ ಪ್ರಕಾರ ವಶಪಡಿಸಿಕೊಂಡ ಶ್ವಾನಗಳ ಮಾಂಸವನ್ನ ಆಹಾರಕ್ಕಾಗಿ ಬಳಸಲಾಗುವುದು ಎಂದು ತಿಳಿದುಬಂದಿದೆ. ಈ ಸಂಬಂಧ ಮನೆಮನೆಗೂ ತೆರಳುತ್ತಿರುವ ಅಧಿಕಾರಿಗಳು ಪ್ರತಿ ಮನೆಯಲ್ಲೂ ಇರುವ ಶ್ವಾನಗಳನ್ನು ಗೊತ್ತುಮಾಡಿ ವಶಕ್ಕೆ ಪಡೆಯುತ್ತಿದ್ದಾರಂತೆ. ಕಿಮ್​ನ ಈ ನಡೆಯಿಂದ ಹಲವರಿಗೆ ಕಸಿವಿಸಿ ಉಂಟಾಗಿದ್ರೂ ಸರ್ವಾಧಿಕಾರಿಯನ್ನ ಎದುರಾಕಿಕೊಳ್ಳೋ ತಾಕತ್ತು ಯಾರಿಗಿದೆ?

‘ಬಡವರು ಹಸು ಸಾಕುತ್ತಾರೆ, ಶ್ರೀಮಂತರು ಶ್ವಾನಗಳನ್ನು’ ಅಂದ ಹಾಗೆ, ಕಿಮ್​ ಜಾಂಗ್​ನ ಈ ನಡೆ ಕೊಂಚ ಜಿಗುಪ್ಸೆ ತರುವಂತಿದ್ರೂ ಅದರ ಹಿಂದಿನ ಯೋಚನೆ ನಿಜಕ್ಕೂ ಸರ್ವಾಧಿಕಾರಿಯ ಚಾಣಾಕ್ಷತೆಯನ್ನ ಎದ್ದುತೋರಿಸುತ್ತದೆ. ಕೊರೊನಾ ವೈರಸ್​ನಿಂದ ಜಗತ್ತಿನಾದ್ಯಂತ ಉಂಟಾಗಿರುವ ಆರ್ಥಿಕ ಸಂಕಷ್ಟ ಉತ್ತರ ಕೊರಿಯಾವನ್ನೂ ಬಿಟ್ಟಿಲ್ಲ. ಇದರ ಜೊತೆಗೆ, ದೇಶದಲ್ಲಿ ವರುಣನ ಆರ್ಭಟ ಜೋರಾಗಿದ್ದು ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ. ಹಾಗಾಗಿ, ಜನರು ತಿನ್ನೋಕೆ ಆಹಾರವಿಲ್ಲದೆ ಪರದಾಡುತ್ತಿದ್ದಾರೆ.

ಮನೆಗೊಂದು ಶ್ವಾನ ಹಿಡಿದು ತಿನ್ನಿ ಹಸಿದ ಹೊಟ್ಟೆ ಯಾರ ಮಾತಿಗೂ ಬಗ್ಗೋದಿಲ್ಲ ಅನ್ನೋದು ಕಿಮ್​ಗೆ ಚೆನ್ನಾಗಿ ಗೊತ್ತು. ಹೀಗಾಗಿ, ಆತ ದೇಶದಲ್ಲಿ ಬಹು ಜನಪ್ರಿಯವಾಗಿರುವ ಶ್ವಾನದ ಮಾಂಸವನ್ನು ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂಥ ವ್ಯವಸ್ಥೆ ಮಾಡಿದ್ದಾನೆ. ಜೊತೆಗೆ, ಉತ್ತರ ಕೊರಿಯಾದಲ್ಲಿ ಶ್ವಾನಗಳನ್ನ ಸಾಕುವುದು ಕೇವಲ ಶ್ರೀಮಂತರು. ಬಡವರಿಗೆ ಸಾಕು ಪ್ರಾಣಿ ಅಂದರೆ ಹಸು. ಹಂದಿ ಮತ್ತು ಎಮ್ಮೆಗಳು. ಹೀಗಾಗಿ, ತನಗೆ ಬಡವರ ಪರ ಕಾಳಜಿಯಿದೆ ಎಂಬ ಧೋರಣೆಯನ್ನ ಪ್ರದರ್ಶಿಸಲು ಕಿಮ್​ ಮುಂದಾಗಿದ್ದಾನಂತೆ. ಶ್ವಾನಗಳನ್ನು ಸಾಕುವುದು ಬಂಡವಾಳಶಾಹಿಯ ಪ್ರತೀಕ ಎಂಬ ನೆಪವೊಡ್ಡಿ ಬಡವರನ್ನ ಸಂತೈಸುವ ನಾಟಕಕ್ಕೆ ಮುಂದಾಗಿದ್ದಾನೆ.

ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್