Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೌ ಬೌ ಬಿರಿಯಾನಿಗಾಗಿ ನಾಯಿ ಬೇಟೆಗೆ ಇಳಿದ ಸರ್ವಾಧಿಕಾರಿ ಕಿಮ್​: ಉ.ಕೊರಿಯಾ ಗಢಗಢ!

ಸರ್ವಾಧಿಕಾರದ ಕಪಿಮುಷ್ಟಿಯಲ್ಲಿ ಸಿಲುಕಿರುವ ಕೆಲವು ದೇಶಗಳಲ್ಲಿ ಉತ್ತರ ಕೊರಿಯಾ ಸಹ ಒಂದು. ಅಲ್ಲಿನ ಸರ್ವಾಧಿಕಾರಿ ಕಿಮ್ ಜಾಂಗ್​ ಉನ್​ ನುಡಿದಿದ್ದೇ ಆಜ್ಞೆ, ಬರೆದದ್ದೇ ಶಾಸನ! ಇದೀಗ ಈ ಹುಚ್ಚು ಮನಸ್ಸಿನ ಕೆಟ್ಟ ಹಠದ ಸರ್ವಾಧಿಕಾರಿ ಬಹು ಚಾಣಾಕ್ಷ ಆಜ್ಞೆಯೊಂದನ್ನ ಹೊರಡಿಸಿದ್ದಾನಂತೆ. ಕಿಮ್ ಹೊರಡಿಸಿರುವ ಆದೇಶದ ಪ್ರಕಾರ ಉತ್ತರ ಕೊರಿಯಾದಲ್ಲಿ ಶ್ವಾನಗಳನ್ನು ಸಾಕಿರುವ ಪ್ರತಿ ಮನೆತನವೂ ತಮ್ಮ ನೆಚ್ಚಿನ ಪ್ರಾಣಿಯನ್ನ ಸರ್ಕಾರಿ ಅಧಿಕಾರಿಗಳಿಗೆ ಒಪ್ಪಿಸಬೇಕಂತೆ. ಉನ್ನತ ಮೂಲಗಳ ಪ್ರಕಾರ ವಶಪಡಿಸಿಕೊಂಡ ಶ್ವಾನಗಳ ಮಾಂಸವನ್ನ ಆಹಾರಕ್ಕಾಗಿ ಬಳಸಲಾಗುವುದು ಎಂದು ತಿಳಿದುಬಂದಿದೆ. […]

ಬೌ ಬೌ ಬಿರಿಯಾನಿಗಾಗಿ ನಾಯಿ ಬೇಟೆಗೆ ಇಳಿದ ಸರ್ವಾಧಿಕಾರಿ ಕಿಮ್​: ಉ.ಕೊರಿಯಾ ಗಢಗಢ!
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Aug 19, 2020 | 2:47 PM

ಸರ್ವಾಧಿಕಾರದ ಕಪಿಮುಷ್ಟಿಯಲ್ಲಿ ಸಿಲುಕಿರುವ ಕೆಲವು ದೇಶಗಳಲ್ಲಿ ಉತ್ತರ ಕೊರಿಯಾ ಸಹ ಒಂದು. ಅಲ್ಲಿನ ಸರ್ವಾಧಿಕಾರಿ ಕಿಮ್ ಜಾಂಗ್​ ಉನ್​ ನುಡಿದಿದ್ದೇ ಆಜ್ಞೆ, ಬರೆದದ್ದೇ ಶಾಸನ! ಇದೀಗ ಈ ಹುಚ್ಚು ಮನಸ್ಸಿನ ಕೆಟ್ಟ ಹಠದ ಸರ್ವಾಧಿಕಾರಿ ಬಹು ಚಾಣಾಕ್ಷ ಆಜ್ಞೆಯೊಂದನ್ನ ಹೊರಡಿಸಿದ್ದಾನಂತೆ.

ಕಿಮ್ ಹೊರಡಿಸಿರುವ ಆದೇಶದ ಪ್ರಕಾರ ಉತ್ತರ ಕೊರಿಯಾದಲ್ಲಿ ಶ್ವಾನಗಳನ್ನು ಸಾಕಿರುವ ಪ್ರತಿ ಮನೆತನವೂ ತಮ್ಮ ನೆಚ್ಚಿನ ಪ್ರಾಣಿಯನ್ನ ಸರ್ಕಾರಿ ಅಧಿಕಾರಿಗಳಿಗೆ ಒಪ್ಪಿಸಬೇಕಂತೆ. ಉನ್ನತ ಮೂಲಗಳ ಪ್ರಕಾರ ವಶಪಡಿಸಿಕೊಂಡ ಶ್ವಾನಗಳ ಮಾಂಸವನ್ನ ಆಹಾರಕ್ಕಾಗಿ ಬಳಸಲಾಗುವುದು ಎಂದು ತಿಳಿದುಬಂದಿದೆ. ಈ ಸಂಬಂಧ ಮನೆಮನೆಗೂ ತೆರಳುತ್ತಿರುವ ಅಧಿಕಾರಿಗಳು ಪ್ರತಿ ಮನೆಯಲ್ಲೂ ಇರುವ ಶ್ವಾನಗಳನ್ನು ಗೊತ್ತುಮಾಡಿ ವಶಕ್ಕೆ ಪಡೆಯುತ್ತಿದ್ದಾರಂತೆ. ಕಿಮ್​ನ ಈ ನಡೆಯಿಂದ ಹಲವರಿಗೆ ಕಸಿವಿಸಿ ಉಂಟಾಗಿದ್ರೂ ಸರ್ವಾಧಿಕಾರಿಯನ್ನ ಎದುರಾಕಿಕೊಳ್ಳೋ ತಾಕತ್ತು ಯಾರಿಗಿದೆ?

‘ಬಡವರು ಹಸು ಸಾಕುತ್ತಾರೆ, ಶ್ರೀಮಂತರು ಶ್ವಾನಗಳನ್ನು’ ಅಂದ ಹಾಗೆ, ಕಿಮ್​ ಜಾಂಗ್​ನ ಈ ನಡೆ ಕೊಂಚ ಜಿಗುಪ್ಸೆ ತರುವಂತಿದ್ರೂ ಅದರ ಹಿಂದಿನ ಯೋಚನೆ ನಿಜಕ್ಕೂ ಸರ್ವಾಧಿಕಾರಿಯ ಚಾಣಾಕ್ಷತೆಯನ್ನ ಎದ್ದುತೋರಿಸುತ್ತದೆ. ಕೊರೊನಾ ವೈರಸ್​ನಿಂದ ಜಗತ್ತಿನಾದ್ಯಂತ ಉಂಟಾಗಿರುವ ಆರ್ಥಿಕ ಸಂಕಷ್ಟ ಉತ್ತರ ಕೊರಿಯಾವನ್ನೂ ಬಿಟ್ಟಿಲ್ಲ. ಇದರ ಜೊತೆಗೆ, ದೇಶದಲ್ಲಿ ವರುಣನ ಆರ್ಭಟ ಜೋರಾಗಿದ್ದು ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ. ಹಾಗಾಗಿ, ಜನರು ತಿನ್ನೋಕೆ ಆಹಾರವಿಲ್ಲದೆ ಪರದಾಡುತ್ತಿದ್ದಾರೆ.

ಮನೆಗೊಂದು ಶ್ವಾನ ಹಿಡಿದು ತಿನ್ನಿ ಹಸಿದ ಹೊಟ್ಟೆ ಯಾರ ಮಾತಿಗೂ ಬಗ್ಗೋದಿಲ್ಲ ಅನ್ನೋದು ಕಿಮ್​ಗೆ ಚೆನ್ನಾಗಿ ಗೊತ್ತು. ಹೀಗಾಗಿ, ಆತ ದೇಶದಲ್ಲಿ ಬಹು ಜನಪ್ರಿಯವಾಗಿರುವ ಶ್ವಾನದ ಮಾಂಸವನ್ನು ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂಥ ವ್ಯವಸ್ಥೆ ಮಾಡಿದ್ದಾನೆ. ಜೊತೆಗೆ, ಉತ್ತರ ಕೊರಿಯಾದಲ್ಲಿ ಶ್ವಾನಗಳನ್ನ ಸಾಕುವುದು ಕೇವಲ ಶ್ರೀಮಂತರು. ಬಡವರಿಗೆ ಸಾಕು ಪ್ರಾಣಿ ಅಂದರೆ ಹಸು. ಹಂದಿ ಮತ್ತು ಎಮ್ಮೆಗಳು. ಹೀಗಾಗಿ, ತನಗೆ ಬಡವರ ಪರ ಕಾಳಜಿಯಿದೆ ಎಂಬ ಧೋರಣೆಯನ್ನ ಪ್ರದರ್ಶಿಸಲು ಕಿಮ್​ ಮುಂದಾಗಿದ್ದಾನಂತೆ. ಶ್ವಾನಗಳನ್ನು ಸಾಕುವುದು ಬಂಡವಾಳಶಾಹಿಯ ಪ್ರತೀಕ ಎಂಬ ನೆಪವೊಡ್ಡಿ ಬಡವರನ್ನ ಸಂತೈಸುವ ನಾಟಕಕ್ಕೆ ಮುಂದಾಗಿದ್ದಾನೆ.

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್