ಮುರಿಡ್ಕೆ ಮೇಲೆ ಭಾರತ ದಾಳಿ ಮಾಡಿದ್ದು ಹೌದು, ಸತ್ಯ ಒಪ್ಪಿಕೊಂಡ ಎಲ್ಇಟಿ ಕಮಾಂಡರ್
ಮುರಿಡ್ಕೆಯಲ್ಲಿರುವ ಉಗ್ರರ ಶಿಬಿರದ ಮೇಲೆ ಆಪರೇಷನ್ ಸಿಂಧೂರ್(Operation Sindoor) ಸಮಯದಲ್ಲಿ ಭಾರತ ದಾಳಿ ಮಾಡಿ ಸಂಪೂರ್ಣ ನಾಶ ಪಡಿಸಿದ್ದು ಸತ್ಯ ಎಂದು ಲಷ್ಕರ್-ಎ-ತೊಯ್ಬಾದ ಕಮಾಂಡರ್ ಒಪ್ಪಿಕೊಂಡಿದ್ದಾನೆ. ಭಯೋತ್ಪಾದಕ ಕಮಾಂಡರ್ ಸ್ವತಃ ಅವಶೇಷಗಳ ನಡುವೆ ನಿಂತು ಸತ್ಯವನ್ನು ಒಪ್ಪಿಕೊಂಡಿದ್ದಾನೆ. ಪಾಕಿಸ್ತಾನದ ಸುಳ್ಳುಗಳನ್ನು ಬಹಿರಂಗಪಡಿಸಿದ ಹಫೀಜ್ ಸಯೀದ್ ನಿಧಿ ಸಂಗ್ರಹಿಸುವುದನ್ನು ಮುಂದುವರೆಸಿದ್ದಾರೆ. ಪಹಲ್ಗಾಮ್ ದಾಳಿಗೆ ಭಾರತ ಸೂಕ್ತ ಉತ್ತರ ಇದಾಗಿತ್ತು.

ಇಸ್ಲಾಮಾಬಾದ್, ಸೆಪ್ಟೆಂಬರ್ 19: ಮುರಿಡ್ಕೆಯಲ್ಲಿರುವ ಉಗ್ರರ ಶಿಬಿರದ ಮೇಲೆ ಆಪರೇಷನ್ ಸಿಂಧೂರ್(Operation Sindoor) ಸಮಯದಲ್ಲಿ ಭಾರತ ದಾಳಿ ಮಾಡಿ ಸಂಪೂರ್ಣ ನಾಶ ಪಡಿಸಿದ್ದು ಸತ್ಯ ಎಂದು ಲಷ್ಕರ್-ಎ-ತೊಯ್ಬಾದ ಕಮಾಂಡರ್ ಒಪ್ಪಿಕೊಂಡಿದ್ದಾನೆ. ಭಯೋತ್ಪಾದಕ ಕಮಾಂಡರ್ ಸ್ವತಃ ಅವಶೇಷಗಳ ನಡುವೆ ನಿಂತು ಸತ್ಯವನ್ನು ಒಪ್ಪಿಕೊಂಡಿದ್ದಾನೆ. ಪಾಕಿಸ್ತಾನದ ಸುಳ್ಳುಗಳನ್ನು ಬಹಿರಂಗಪಡಿಸಿದ ಹಫೀಜ್ ಸಯೀದ್ ನಿಧಿ ಸಂಗ್ರಹಿಸುವುದನ್ನು ಮುಂದುವರೆಸಿದ್ದಾರೆ. ಪಹಲ್ಗಾಮ್ ದಾಳಿಗೆ ಭಾರತ ಸೂಕ್ತ ಉತ್ತರ ಇದಾಗಿತ್ತು.
ಭಾರತ ಮತ್ತು ಪಾಕಿಸ್ತಾನ ಆಗಾಗ ಗುಂಡಿನ ಚಕಮಕಿ, ವಾಕ್ಚಾತುರ್ಯ ಮತ್ತು ರಾಜತಾಂತ್ರಿಕತೆಯ ಮೂಲಕ ಘರ್ಷಣೆ ನಡೆಯುತ್ತಿರುತ್ತವೆ. ಆದರೆ ಈ ಬಾರಿ ಕಥೆ ವಿಭಿನ್ನವಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿ 26 ಜನರನ್ನು ಕೊಂದಿತ್ತು. ಭಾರತ ಪ್ರತೀಕಾರ ತೀರಿಸಿಕೊಂಡಿತು ಮಾತ್ರವಲ್ಲದೆ, ಭಯೋತ್ಪಾದಕ ಸಂಘಟನೆಗಳ ಪ್ರಧಾನ ಕಚೇರಿಯನ್ನು ಸಹ ನಡುಗಿಸುವ ಹೊಡೆತವನ್ನು ನೀಡಿತ್ತು.
ಈ ಪ್ರತೀಕಾರದ ಕ್ರಮಕ್ಕೆ ಆಪರೇಷನ್ ಸಿಂಧೂರ್ ಎಂದು ಹೆಸರಿಸಲಾಯಿತು. ಮೇ 7 ರಂದು ನಡೆದ ಈ ಕಾರ್ಯಾಚರಣೆಯಲ್ಲಿ, ಭಾರತೀಯ ಸೇನೆಯು ಮುರಿಡ್ಕೆ (ಪಂಜಾಬ್, ಪಾಕಿಸ್ತಾನ) ದಲ್ಲಿರುವ ಲಷ್ಕರ್-ಎ-ತೊಯ್ಬಾದ ಅತಿದೊಡ್ಡ ನೆಲೆಯಾದ ಮರ್ಕಜ್-ಎ-ತೊಯ್ಬಾವನ್ನು ನಾಶಪಡಿಸಿತ್ತು.
ಈ ಸ್ಥಳವು ಮದರಸಾ ಮತ್ತು ದತ್ತಿ ಕೇಂದ್ರ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು. ಆದರೆ ಈಗ, ಲಷ್ಕರ್ನ ಉನ್ನತ ಕಮಾಂಡರ್ ಖಾಸಿಮ್, ನಾನು ಮರ್ಕಜ್-ಎ-ತೊಯ್ಬಾದ ಅವಶೇಷಗಳ ಮುಂದೆ ನಿಂತಿದ್ದೇನೆ. ಈ ದಾಳಿಯನ್ನು ಆಪರೇಷನ್ ಸಿಂಧೂರ್ನಲ್ಲಿ ನಾಶಪಡಿಸಲಾಯಿತು ಎಂದು ಹೇಳುವ ವಿಡಿಯೋ ವೈರಲ್ ಆಗಿದೆ.
ಮತ್ತಷ್ಟು ಓದಿ: ಆಪರೇಷನ್ ಸಿಂಧೂರ್ನಿಂದ ಮಸೂದ್ ಅಜರ್ ಕುಟುಂಬ ಛಿದ್ರವಾಯಿತು; ಕೊನೆಗೂ ಒಪ್ಪಿಕೊಂಡ ಜೈಶ್ ಕಮಾಂಡರ್
2000 ರಲ್ಲಿ ಸ್ಥಾಪನೆಯಾದ ಈ ಶಿಬಿರವನ್ನು ಭಯೋತ್ಪಾದಕ ಸಂಘಟನೆಯ ಅತಿದೊಡ್ಡ ತರಬೇತಿ ವಿಶ್ವವಿದ್ಯಾಲಯವೆಂದು ಪರಿಗಣಿಸಲಾಗಿದೆ. ಇದು ಧಾರ್ಮಿಕ ಬೋಧನೆಗಳು ಮತ್ತು ಜಿಹಾದಿ ತರಬೇತಿಯನ್ನು ಸಂಯೋಜಿಸುವ ದೌರಾ-ಎ-ಸುಫ್ಫಾ ಕಾರ್ಯಕ್ರಮವನ್ನು ನಡೆಸಿತು. ಕಮಾಂಡರ್ ಖಾಸಿಮ್ ಅವರ ಮತ್ತೊಂದು ವೀಡಿಯೊ ಈ ಶಿಬಿರದ ಗಂಭೀರತೆಯನ್ನು ಬಹಿರಂಗಪಡಿಸುತ್ತದೆ. ಅವರು ಯುವಕರಿಗೆ ಬಂದು ಸೇರಲು ಮನವಿ ಮಾಡುತ್ತಾರೆ.
🚨 🇵🇰👺 After Jaish commander ilyas kashmiri now Lashkar-e-Taiba Commander Qaasim has torn apart Pakistan’s lies on Muridke terror camps.
👉 Standing in front of the demolished Markaz E Taiba camp, which destroyed in #OperationSindoor, he admits that many terrorists… pic.twitter.com/S80p9wLSFy
— OsintTV 📺 (@OsintTV) September 19, 2025
ಮೇ.7ರ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ನಾಶವಾದ ಮುರಿಡ್ಕೆ ಭಯೋತ್ಪಾದಕ ಶಿಬಿರವನ್ನು ಹಿಂದಿಗಿಂತ ದೊಡ್ಡದಾಗಿ ಪುನರ್ನಿರ್ಮಿಸಲಾಗುತ್ತಿದೆ ಎಂದು ಎಲ್ಇಟಿ ಕಮಾಂಡರ್ ಖಾಸಿಮ್ ಒಪ್ಪಿಕೊಂಡಿದ್ದಾರೆ. ಇದೀಗ ಈತನ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮುರಿಡ್ಕೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಶೇಖುಪುರ ಜಿಲ್ಲೆಯ ಒಂದು ನಗರವಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:22 pm, Fri, 19 September 25




