ಲಾಹೋರ್: ಉಗ್ರ ಹಫೀಜ್ ಸಯೀದ್ ಆಪ್ತ ಆಮಿರ್ ಹಮ್ಜಾಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ಪಾಕಿಸ್ತಾನದಲ್ಲಿ ಮತ್ತೊಬ್ಬ ಭಯೋತ್ಪಾದಕ ಆಮಿರ್ ಹಮ್ಜಾ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ. ಆತನ ಮೇಲೆ ಗುಂಡಿನ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಲಾಹೋರ್​ನಲ್ಲಿ ಅಪರಿಚಿತ ದಾಳಿಕೋರರು ಹಮ್ಜಾ ಮೇಲೆ ದಾಳಿ ನಡೆಸಿದ್ದಾರೆ. ಅಮೀರ್ ಹಮ್ಜಾ ಲಷ್ಕರ್​-ಎ-ತೊಯ್ಬಾ ಸಹ ಸಂಸ್ಥಾಪಕರಲ್ಲಿ ಒಬ್ಬ. ಆತನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗಿದೆ.ಇದಕ್ಕೂ ಮುನ್ನ ಭಾನುವಾರ ಪಾಕಿಸ್ತಾನದ ಸಿಂಧ್​ನಲ್ಲಿರುವ ಅಬು ಸೈಫುಲ್ಲಾ ಖಾಲಿದ್ ಅವರ ಮನೆಯಲ್ಲಿ ಅಪರಿಚಿತ ಬಂಧೂಕುಧಾರಿಗಳು ದಾಳಿ ನಡೆಸಿದ್ದರು. ಇದರಲ್ಲಿ ಆತ ಸಾವನ್ನಪ್ಪಿದ್ದ.

ಲಾಹೋರ್: ಉಗ್ರ ಹಫೀಜ್ ಸಯೀದ್ ಆಪ್ತ ಆಮಿರ್ ಹಮ್ಜಾಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು
ಅಮೀರ್

Updated on: May 21, 2025 | 8:01 AM

ಲಾಹೋರ್, ಮೇ 21: ಸೈಫುಲ್ಲಾ ನಂತರ, ಪಾಕಿಸ್ತಾನ(Pakistan)ದಲ್ಲಿ ಮತ್ತೊಬ್ಬ ಭಯೋತ್ಪಾದಕ ಆಮಿರ್ ಹಮ್ಜಾ(Amir Hamza) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ. ಆತನ ಮೇಲೆ ಗುಂಡಿನ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಲಾಹೋರ್​ನಲ್ಲಿ ಅಪರಿಚಿತ ದಾಳಿಕೋರರು ಹಮ್ಜಾ ಮೇಲೆ ದಾಳಿ ನಡೆಸಿದ್ದಾರೆ. ಆಮಿರ್ ಹಮ್ಜಾ ಲಷ್ಕರ್​-ಎ-ತೊಯ್ಬಾ ಸಹ ಸಂಸ್ಥಾಪಕರಲ್ಲಿ ಒಬ್ಬ. ಆತನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗಿದೆ.

ಸಿಂಧ್​ನಲ್ಲಿ ಸೈಫುಲ್ಲಾ ಹತ್ಯೆ
ಇದಕ್ಕೂ ಮುನ್ನ ಭಾನುವಾರ ಪಾಕಿಸ್ತಾನದ ಸಿಂಧ್​ನಲ್ಲಿರುವ ಅಬು ಸೈಫುಲ್ಲಾ ಖಾಲಿದ್ ಅವರ ಮನೆಯಲ್ಲಿ ಅಪರಿಚಿತ ಬಂಧೂಕುಧಾರಿಗಳು ದಾಳಿ ನಡೆಸಿದ್ದರು. ಇದರಲ್ಲಿ ಆತ ಸಾವನ್ನಪ್ಪಿದ್ದ. ರಝಾವುಲ್ಲಾ ನಿಜಾಮಾನಿ ಖಾಲಿದ್ ಎಂದೂ ಆತನನ್ನು ಕರೆಯಲಾಗುತ್ತಿತ್ತು. ಲಷ್ಕರ್ ಸಂಘಟನೆಯ ಪ್ರಮುಖ ಭಯೋತ್ಪಾದಕ ಆತ.

ಆತ 2000ರಿಂದಲೂ ನೇಪಾಳದಲ್ಲಿದ್ದುಕೊಂಡು ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದ್ದ, ಭಾರತ-ನೇಪಾಲ ಗಡಿಯಲ್ಲಿ ಭಯೋತ್ಪಾದಕರ ನೇಮಕಾತಿ, ಹಣ,ಲಾಜಿಸ್ಟಿಕ್ಸ್​ ನಿರ್ವಹಿಸುತ್ತಿದ್ದ.

ಇದನ್ನೂ ಓದಿ
Video: ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಯ ವಿಡಿಯೋ ಇಲ್ಲಿದೆ
ಪಹಲ್ಗಾಮ್ ಉಗ್ರ ದಾಳಿ, ಎಕೆ-47 ಹಿಡಿದ ಶಂಕಿತ ಉಗ್ರನ ಫೋಟೋ ಬಹಿರಂಗ
ಪ್ಯಾಂಟ್​ ಬಿಚ್ಚಿ, ಐಡಿ ಪರಿಶೀಲಿಸಿ ಹಿಂದೂಗಳನ್ನು ಗುರಿಯಾಗಿಸಿ ಉಗ್ರರ ದಾಳಿ
ಪಹಲ್ಗಾಮ್ ಉಗ್ರ ದಾಳಿಯ ಮಾಸ್ಟರ್​ಮೈಂಡ್ ಸೈಫುಲ್ಲಾ ಖಾಲಿದ್ ಯಾರು?

ಭಾರತದಲ್ಲಿ ನಡೆದ ಹಲವು ದಾಳಿಗಳ ಹಿಂದಿನ ಮಾಸ್ಟರ್​ಮೈಂಡ್ ಆಗಿದ್ದ ಸೈಫುಲ್ಲಾ
2006ರಲ್ಲಿ ನಾಗ್ಪುರದ ಆರ್​ಎಸ್​ಎಸ್​ ಕೇಂದ್ರ ಕಚೇರಿಯ ಮೇಲೆ ನಡೆದ ದಾಳಿಯ ಪ್ರಮುಖ ಸಂಚುಕೋರ ಖಾಲಿದ್ ಆಗಿದ್ದ, ಇದರಲ್ಲಿ ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದರು. 2005 ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮೇಲೆ ನಡೆದ ದಾಳಿಯಲ್ಲೂ ಈತನ ಸಂಬಂಧವಿತ್ತು, ಈ ದಾಳಿಯಲ್ಲಿ ಪ್ರಾಧ್ಯಾಪಕ ಮುನೀಶ್ ಚಂದ್ರ ಪುರಿ ಸಾವನ್ನಪ್ಪಿದರು ಮತ್ತು ಇತರ ನಾಲ್ವರು ಗಾಯಗೊಂಡರು. ಆ ದಾಳಿಕೋರರು ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ ಖಾಲಿದ್‌ನ ಆಪ್ತ ಸಹಚರ ಅಬು ಅನಸ್ ವಿರುದ್ಧ ಆರೋಪಪಟ್ಟಿ ದಾಖಲಾಗಿದ್ದರೂ, ಅವನು ಇನ್ನೂ ತಲೆಮರೆಸಿಕೊಂಡಿದ್ದಾನೆ. 26/11 ಮುಂಬೈ ದಾಳಿಯ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಕೂಡ ಹಮ್ಜಾ.

ಮತ್ತಷ್ಟು ಓದಿ: ಬೆಂಗಳೂರಿನ ಐಐಎಸ್​ಸಿ ಮೇಲಿನ ದಾಳಿಯ ರುವಾರಿ ಉಗ್ರ ಸೈಫುಲ್ಲಾ ಖಾಲಿದ್ ಹತ್ಯೆ

ಆತನ ಹಣೆ, ಮೂಗಿನಿಂದ ತೀವ್ರ ರಕ್ತಸ್ರಾವವಾಗುತ್ತಿತ್ತು, ಆತನ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಹಫೀಜ್ ಮತ್ತು ಇತರರು ಹಮ್ಜಾ ಅವರನ್ನು ಕೇಳದೆ ಯಾವುದೇ ಕೆಲಸ ಮಾಡುತ್ತಿರಲಿಲ್ಲ ಎಂದು ಹೇಳಲಾಗುತ್ತದೆ. ಹಮ್ಜಾ ಲಷ್ಕರೆ ಸಂಘಟನೆಯ ಜಮಾತ್ ಉಟ್ ದವಾದ ಮುಖ್ಯಸ್ಥರೂ ಆಗಿದ್ದ.
2012 ರಲ್ಲಿ ಅಮೆರಿಕ ಆತನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಿತು.

2018 ರಲ್ಲಿ, ಲಷ್ಕರ್‌ಗಾಗಿ ಸಂಗ್ರಹಿಸಿದ ನಿಧಿಯ ಬಗ್ಗೆ ಅಮೀರ್ ಹಮ್ಜಾ ಮತ್ತು ಹಫೀಜ್ ಸಯೀದ್ ನಡುವೆ ಬಿರುಕು ಉಂಟಾಗಿತ್ತು. ಏಕೆಂದರೆ ಪಾಕಿಸ್ತಾನ ಸರ್ಕಾರವು ಅಂತಾರಾಷ್ಟ್ರೀಯ ಒತ್ತಡದ ಮೇರೆಗೆ ಈ ಸಂಘಟನೆಗೆ ಹಣ ಪಡೆಯುವುದನ್ನು ನಿಷೇಧಿಸಿತ್ತು.

ಅದಾದ ನಂತರ ಹಮ್ಜಾ ಜೈಶ್ ಇ ಮಂಕಫಾ ಎಂಬ ಪ್ರತ್ಯೇಕ ಸಂಘಟನೆಯನ್ನು ಸ್ಥಾಪಿಸಿ ನಿಧಿ ಸಂಗ್ರಹಿಸಲು ಕೆಲಸ ಮಾಡಿದ್ದ.ಹಫೀಜ್‌ನಿಂದ ದೂರವಿರುವುದರಿಂದ, ಹಮ್ಜಾ ಕಳೆದ ಕೆಲವು ವರ್ಷಗಳಿಂದ ಸಕ್ರಿಯ ಕಾರ್ಯಾಚರಣೆಗಳಲ್ಲಿ ಭಾಗವಹಿಸುತ್ತಿರಲಿಲ್ಲ, ಆದರೆ ಅವನು ಭಯೋತ್ಪಾದಕರ ಬ್ರೈನ್‌ವಾಶ್ ಮಾಡುವುದನ್ನು ಮುಂದುವರೆಸಿದ್ದ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ