AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕಿಕ್ಕಿರಿದು ನಿಂತ ಮೆಟ್ರೋ ರೈಲಿನಲ್ಲಿ ಸೀಟು ಪಡೆಯಲು ಯುವಕನ ಸಕತ್​ ಪ್ಲಾನ್​! ವಿಡಿಯೋ ವೈರಲ್​

ಯುಟ್ಯೂಬ್​ ಇಂಡಿಯನ್​ ಎಂಬ ಖಾತೆಯಿಂದ ವಿಡಿಯೋ ಹಂಚಿಕೊಳ್ಳಲಾಗಿದ್ದು ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೂರಾರು ಕಾಮೆಂಟ್​ಗಳು ಕೂಡಾ ಲಭ್ಯವಾಗಿದೆ.

Viral Video: ಕಿಕ್ಕಿರಿದು ನಿಂತ ಮೆಟ್ರೋ ರೈಲಿನಲ್ಲಿ ಸೀಟು ಪಡೆಯಲು ಯುವಕನ ಸಕತ್​ ಪ್ಲಾನ್​! ವಿಡಿಯೋ ವೈರಲ್​
ಜನಜಂಗುಳಿಯಲ್ಲಿ ಸೀಟು ಪಡೆಯಲು ಯುವಕನ ಪ್ಲಾನ್​!
TV9 Web
| Edited By: |

Updated on:Jun 13, 2021 | 5:11 PM

Share

ಬಸ್​, ರೈಲುಗಳಲ್ಲಿ ಜನಸಾಗರ. ಸೀಟು ಇಲ್ಲದೇ ಅದೆಷ್ಟೋ ದಿನ ನಿಂತೆ ಸಾಗಿದ್ದಿದೆ. ಕುಳಿತುಕೊಳ್ಳಲು ಒಂದು ಸೀಟು ಸಹ ಇರುವುದಿಲ್ಲ. ಅಷ್ಟೊಂದು ಜನಜಂಗುಳಿ ಎಂದು ಕೆಲವು ಬಾರಿ ಹೇಳಿರುವುದೂ ಇದೆ. ಹಾಗಿರುವಾಗ ಮುಂದಿನ ನಿಲ್ದಾಣದಲ್ಲಿ ಯಾರು ಇಳಿಯುತ್ತಾರೆ ಎಂದು ಕಾಯುತ್ತಾ ನಿಂತಿರುತ್ತೇವೆ. ಹಾಗೆಯೇ ಈ ಯುವಕನ ಪರಿಸ್ಥಿತಿ ಕೂಡಾ! ಕುಳಿತುಕೊಳ್ಳಲು ಮಾತ್ರ ಆಸನವೇ ಸಿಕ್ಕಿರುವುದಿಲ್ಲ. ಹಾಗಾಗಿ ಸೀಟು ಪಡೆದುಕೊಳ್ಳಲು ಯುವಕ ಸಕ್ಕತ್​​ ಪ್ಲಾನ್​ ಮಾಡಿ ಯಶಸ್ವಿಯಾಗಿದ್ದಾನೆ. ಈತನ ಪ್ಲಾನ್​ ನೋಡಿದ ನೆಟ್ಟಿಗರು ಬಾರೀ ಚಾಣಾಕಿ ಈತ ಎಂದು ತಮಾಷೆಯಾಗಿ ಹೇಳಿದ್ದಾರೆ.

ಸೋಷಿಯಲ್​ ಮಿಡಿಯಾದಲ್ಲಿ ಹರಿದಾಡುತ್ತಿದ್ದಂತೆಯೇ ಯುವಕನ ಪರ ಮತ್ತು ವಿರೋಧ ಚರ್ಚೆಗಳು ಕೇಳಿಬಂದಿವೆ. ಕೆಲವರು ಈತನ ಪ್ಲಾನ್​ ಸಕತ್ತಾಗಿದೆ ಎಂದು ಹೇಳಿದರೆ, ಇನ್ನು ಕೆಲವರು ಈತ ಮೋಸ ಮಾಡಿದಂತೆ ಆಗಿಲ್ವೇ? ಎಂದು ಪ್ರಶ್ನೆ ಮಾಡಿದ್ದಾರೆ. ಅದೇನೇ ಆಗಿದ್ದರೂ ಸಹ ಕಾಮೆಂಟ್ಸ್​ ವಿಭಾಗದಲ್ಲಿ ಹೆಚ್ಚು ಉಲ್ಲಾಸದ ಪ್ರತಿಕ್ರಿಯೆಗಳೇ ಬಂದಿವೆ.

ಈ ಯುವಕ ಮಾಡಿ ಪ್ಲಾನ್​ ಆದ್ರೂ ಏನು? ಎಂಬ ಕುತೂಹಲ ಕೆಣಕಿರಬೇಕಲ್ವೆ? ವಿಡಿಯೋದಲ್ಲಿ ನೀವು ನೋಡುವಂತೆ ಸುತ್ತಲೂ ಜನರು. ಕುಳಿತುಕೊಳ್ಳಲು ಒಂದು ಸೀಟ್​ ಕೂಡಾ ಇಲ್ಲ. ಪಕ್ಕದಲ್ಲಿ ಮಹಿಳೆಯರ ದಂಡೇ ನಿಂತಿದೆ. ತುಂಬಾ ಹೊತ್ತಿನಿಂದ ನಿಂತೇ ಇದ್ದ ಆ ಯುವಕ ಇದ್ದಕ್ಕಿದ್ದಂತೆಯೇ ನಡುಗಲು ಪ್ರಾರಂಭಿಸುತ್ತಾನೆ. ಆತನ ತಲೆಯ ಮೇಲಿರುವ ಟೋಪಿ ಕೆಳಗೆ ಬೀಳುತ್ತದೆ. ಇದನ್ನು ನೋಡಿದ ಸುತ್ತಮುತ್ತ ಕೂತ ಜನ ಕಂಗಾಲಾಗುತ್ತಾರೆ. ಎದುರಿಗೆ ಕೂತಿದ್ದ ಮಹಿಳೆಯೋರ್ವರು ಆತನನ್ನು ನೋಡಿ ಭಯಗೊಂಡು ದೂರ ಹೋಗುತ್ತಾರೆ.

ಯುಟ್ಯೂಬ್​ ಇಂಡಿಯನ್​ ಎಂಬ ಖಾತೆಯಿಂದ ವಿಡಿಯೋ ಹಂಚಿಕೊಳ್ಳಲಾಗಿದ್ದು ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೂರಾರು ಕಾಮೆಂಟ್​ಗಳು ಕೂಡಾ ಲಭ್ಯವಾಗಿದೆ. ಕೆಲವರು ಯುವಕನ ಪ್ಲಾನ್​ ನೋಡಿದ್ರೆ ನಗುಬರುತ್ತಿದೆ ಎಂದು ಪ್ರತಿಕ್ರಿಯೆ ಹಂಚಿಕೊಂಡಿದ್ದರೆ, ಇನ್ನು ಕೆಲವರು ಜನರಿಗೆ ಮೋಸಮಾಡಿದ್ದಾನೆ ಎಂದು ಅಭಿಪ್ರಾಯ ಕೇಳಿಬಂದಿದೆ.

ಇದನ್ನೂ ಓದಿ: 

Viral Video: ಮನೆ ಮುಂದೆ ನಿಲ್ಲಿಸಿದ ಕಾರು ನೋಡನೋಡುತ್ತಿದ್ದಂತೆಯೇ ಮಾಯ!

Viral Video: ನೀರು ತುಂಬಿ ಹರಿಯುತ್ತಿರುವ ರಸ್ತೆ ಮೇಲೆ ಗುತ್ತಿಗೆದಾರನ ಕೂರಿಸಿ, ತಲೆ ಮೇಲೆ ಕಸ ಸುರಿಸಿದ ಶಾಸಕ !

Published On - 5:09 pm, Sun, 13 June 21

Follow Us
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?