AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕಿಕ್ಕಿರಿದು ನಿಂತ ಮೆಟ್ರೋ ರೈಲಿನಲ್ಲಿ ಸೀಟು ಪಡೆಯಲು ಯುವಕನ ಸಕತ್​ ಪ್ಲಾನ್​! ವಿಡಿಯೋ ವೈರಲ್​

ಯುಟ್ಯೂಬ್​ ಇಂಡಿಯನ್​ ಎಂಬ ಖಾತೆಯಿಂದ ವಿಡಿಯೋ ಹಂಚಿಕೊಳ್ಳಲಾಗಿದ್ದು ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೂರಾರು ಕಾಮೆಂಟ್​ಗಳು ಕೂಡಾ ಲಭ್ಯವಾಗಿದೆ.

Viral Video: ಕಿಕ್ಕಿರಿದು ನಿಂತ ಮೆಟ್ರೋ ರೈಲಿನಲ್ಲಿ ಸೀಟು ಪಡೆಯಲು ಯುವಕನ ಸಕತ್​ ಪ್ಲಾನ್​! ವಿಡಿಯೋ ವೈರಲ್​
ಜನಜಂಗುಳಿಯಲ್ಲಿ ಸೀಟು ಪಡೆಯಲು ಯುವಕನ ಪ್ಲಾನ್​!
TV9 Web
| Edited By: |

Updated on:Jun 13, 2021 | 5:11 PM

Share

ಬಸ್​, ರೈಲುಗಳಲ್ಲಿ ಜನಸಾಗರ. ಸೀಟು ಇಲ್ಲದೇ ಅದೆಷ್ಟೋ ದಿನ ನಿಂತೆ ಸಾಗಿದ್ದಿದೆ. ಕುಳಿತುಕೊಳ್ಳಲು ಒಂದು ಸೀಟು ಸಹ ಇರುವುದಿಲ್ಲ. ಅಷ್ಟೊಂದು ಜನಜಂಗುಳಿ ಎಂದು ಕೆಲವು ಬಾರಿ ಹೇಳಿರುವುದೂ ಇದೆ. ಹಾಗಿರುವಾಗ ಮುಂದಿನ ನಿಲ್ದಾಣದಲ್ಲಿ ಯಾರು ಇಳಿಯುತ್ತಾರೆ ಎಂದು ಕಾಯುತ್ತಾ ನಿಂತಿರುತ್ತೇವೆ. ಹಾಗೆಯೇ ಈ ಯುವಕನ ಪರಿಸ್ಥಿತಿ ಕೂಡಾ! ಕುಳಿತುಕೊಳ್ಳಲು ಮಾತ್ರ ಆಸನವೇ ಸಿಕ್ಕಿರುವುದಿಲ್ಲ. ಹಾಗಾಗಿ ಸೀಟು ಪಡೆದುಕೊಳ್ಳಲು ಯುವಕ ಸಕ್ಕತ್​​ ಪ್ಲಾನ್​ ಮಾಡಿ ಯಶಸ್ವಿಯಾಗಿದ್ದಾನೆ. ಈತನ ಪ್ಲಾನ್​ ನೋಡಿದ ನೆಟ್ಟಿಗರು ಬಾರೀ ಚಾಣಾಕಿ ಈತ ಎಂದು ತಮಾಷೆಯಾಗಿ ಹೇಳಿದ್ದಾರೆ.

ಸೋಷಿಯಲ್​ ಮಿಡಿಯಾದಲ್ಲಿ ಹರಿದಾಡುತ್ತಿದ್ದಂತೆಯೇ ಯುವಕನ ಪರ ಮತ್ತು ವಿರೋಧ ಚರ್ಚೆಗಳು ಕೇಳಿಬಂದಿವೆ. ಕೆಲವರು ಈತನ ಪ್ಲಾನ್​ ಸಕತ್ತಾಗಿದೆ ಎಂದು ಹೇಳಿದರೆ, ಇನ್ನು ಕೆಲವರು ಈತ ಮೋಸ ಮಾಡಿದಂತೆ ಆಗಿಲ್ವೇ? ಎಂದು ಪ್ರಶ್ನೆ ಮಾಡಿದ್ದಾರೆ. ಅದೇನೇ ಆಗಿದ್ದರೂ ಸಹ ಕಾಮೆಂಟ್ಸ್​ ವಿಭಾಗದಲ್ಲಿ ಹೆಚ್ಚು ಉಲ್ಲಾಸದ ಪ್ರತಿಕ್ರಿಯೆಗಳೇ ಬಂದಿವೆ.

ಈ ಯುವಕ ಮಾಡಿ ಪ್ಲಾನ್​ ಆದ್ರೂ ಏನು? ಎಂಬ ಕುತೂಹಲ ಕೆಣಕಿರಬೇಕಲ್ವೆ? ವಿಡಿಯೋದಲ್ಲಿ ನೀವು ನೋಡುವಂತೆ ಸುತ್ತಲೂ ಜನರು. ಕುಳಿತುಕೊಳ್ಳಲು ಒಂದು ಸೀಟ್​ ಕೂಡಾ ಇಲ್ಲ. ಪಕ್ಕದಲ್ಲಿ ಮಹಿಳೆಯರ ದಂಡೇ ನಿಂತಿದೆ. ತುಂಬಾ ಹೊತ್ತಿನಿಂದ ನಿಂತೇ ಇದ್ದ ಆ ಯುವಕ ಇದ್ದಕ್ಕಿದ್ದಂತೆಯೇ ನಡುಗಲು ಪ್ರಾರಂಭಿಸುತ್ತಾನೆ. ಆತನ ತಲೆಯ ಮೇಲಿರುವ ಟೋಪಿ ಕೆಳಗೆ ಬೀಳುತ್ತದೆ. ಇದನ್ನು ನೋಡಿದ ಸುತ್ತಮುತ್ತ ಕೂತ ಜನ ಕಂಗಾಲಾಗುತ್ತಾರೆ. ಎದುರಿಗೆ ಕೂತಿದ್ದ ಮಹಿಳೆಯೋರ್ವರು ಆತನನ್ನು ನೋಡಿ ಭಯಗೊಂಡು ದೂರ ಹೋಗುತ್ತಾರೆ.

ಯುಟ್ಯೂಬ್​ ಇಂಡಿಯನ್​ ಎಂಬ ಖಾತೆಯಿಂದ ವಿಡಿಯೋ ಹಂಚಿಕೊಳ್ಳಲಾಗಿದ್ದು ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೂರಾರು ಕಾಮೆಂಟ್​ಗಳು ಕೂಡಾ ಲಭ್ಯವಾಗಿದೆ. ಕೆಲವರು ಯುವಕನ ಪ್ಲಾನ್​ ನೋಡಿದ್ರೆ ನಗುಬರುತ್ತಿದೆ ಎಂದು ಪ್ರತಿಕ್ರಿಯೆ ಹಂಚಿಕೊಂಡಿದ್ದರೆ, ಇನ್ನು ಕೆಲವರು ಜನರಿಗೆ ಮೋಸಮಾಡಿದ್ದಾನೆ ಎಂದು ಅಭಿಪ್ರಾಯ ಕೇಳಿಬಂದಿದೆ.

ಇದನ್ನೂ ಓದಿ: 

Viral Video: ಮನೆ ಮುಂದೆ ನಿಲ್ಲಿಸಿದ ಕಾರು ನೋಡನೋಡುತ್ತಿದ್ದಂತೆಯೇ ಮಾಯ!

Viral Video: ನೀರು ತುಂಬಿ ಹರಿಯುತ್ತಿರುವ ರಸ್ತೆ ಮೇಲೆ ಗುತ್ತಿಗೆದಾರನ ಕೂರಿಸಿ, ತಲೆ ಮೇಲೆ ಕಸ ಸುರಿಸಿದ ಶಾಸಕ !

Published On - 5:09 pm, Sun, 13 June 21

Follow Us
ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ
ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ
ಹಿಜಾಬ್​​ಗೆ ಅವಕಾಶ ಬೆನ್ನಲ್ಲೇ ಕೇಸರಿ ಶಾಲು ಬಗ್ಗೆ ಸಚಿವರು ಹೇಳಿದ್ದೇನು?
ಹಿಜಾಬ್​​ಗೆ ಅವಕಾಶ ಬೆನ್ನಲ್ಲೇ ಕೇಸರಿ ಶಾಲು ಬಗ್ಗೆ ಸಚಿವರು ಹೇಳಿದ್ದೇನು?
ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಕೊಳಚೆ ಪ್ರವಾಹ
ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಕೊಳಚೆ ಪ್ರವಾಹ
ಮಗಳೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದರು ದಿಲೀಪ್ ರಾಜ್: ವಿಡಿಯೋ
ಮಗಳೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದರು ದಿಲೀಪ್ ರಾಜ್: ವಿಡಿಯೋ
ಹಿಜಾಬ್​​ಗೆ ಅನುಮತಿ ನೀಡಿರುವ ಬಗ್ಗೆ ಶಿಕ್ಷಣ ಸಚಿವ ಹೇಳಿದ್ದಿಷ್ಟು
ಹಿಜಾಬ್​​ಗೆ ಅನುಮತಿ ನೀಡಿರುವ ಬಗ್ಗೆ ಶಿಕ್ಷಣ ಸಚಿವ ಹೇಳಿದ್ದಿಷ್ಟು
‘ಧುರಂಧರ್’ ನಿರ್ದೇಶಕ ಆದಿತ್ಯ ಧರ್​​ಗೆ ಸಚಿವ ಸಂತೋಷ್ ಲಾಡ್ ಸವಾಲು
‘ಧುರಂಧರ್’ ನಿರ್ದೇಶಕ ಆದಿತ್ಯ ಧರ್​​ಗೆ ಸಚಿವ ಸಂತೋಷ್ ಲಾಡ್ ಸವಾಲು
10 ವರ್ಷದ ಬಳಿಕ ಚೀನಾಗೆ ತೆರಳಿದ ಟ್ರಂಪ್​ಗೆ ಅದ್ದೂರಿ ಸ್ವಾಗತ
10 ವರ್ಷದ ಬಳಿಕ ಚೀನಾಗೆ ತೆರಳಿದ ಟ್ರಂಪ್​ಗೆ ಅದ್ದೂರಿ ಸ್ವಾಗತ
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ಕಾಂಜಾವಾಲಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಬೆಂಕಿ ಅವಘಡ
ಕಾಂಜಾವಾಲಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಬೆಂಕಿ ಅವಘಡ
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು