AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mumbai Rain: ನೋಡನೋಡುತ್ತಿದ್ದಂತೆಯೇ ಮಾಯವಾದ ಕಾರು! ಮುಂಬೈ ಮಳೆ ಸೃಷ್ಟಿಸಿದ ಅವಾಂತರ ನೀವೂ ನೋಡಿ

ನೋಡನೋಡುತ್ತಿದ್ದಂತೆಯೇ ಕಾರು ಹೊಂಡದಲ್ಲಿ ಮುಳುಗಿ ಕಣ್ಣಿಗೆ ಕಾಣಿಸದಂತಾಗಿದೆ. ಮನೆ ಎದುರಿಗೆ ಕಾರ್​ ಪಾರ್ಕ್ ಮಾಡಿದ್ದೇನೆ, ಇನ್ಯಾವ ಭಯ ಇಲ್ಲ ಎಂದುಕೊಂಡ ಕಾರಿನ ಮಾಲೀಕ ಮಾತ್ರ ತಲೆ ಮೇಲೆ ಕೈ ಹೊತ್ತು ಕೂತಿದ್ದಾನಂತೆ.

Mumbai Rain: ನೋಡನೋಡುತ್ತಿದ್ದಂತೆಯೇ ಮಾಯವಾದ ಕಾರು! ಮುಂಬೈ ಮಳೆ ಸೃಷ್ಟಿಸಿದ ಅವಾಂತರ ನೀವೂ ನೋಡಿ
ಮನೆ ಮುಂದೆ ನಿಂತ ಕಾರು ನೋಡನೋಡುತ್ತಿದ್ದಂತೆಯೇ ಮಾಯ!
TV9 Web
| Edited By: |

Updated on:Jun 13, 2021 | 11:35 PM

Share

ಮುಂಬೈಯಲ್ಲಿ ಈಗ ಮಳೆಯ ಅಬ್ಬರ ಜೋರಾಗಿದೆ.  ಮಳೆಯ ಅಬ್ಬರಕ್ಕೆ ನೂರಾರು ಮರಗಳು ನೆಲಕ್ಕುರುಳಿವೆ. ರಸ್ತೆಗಳು ಹಾನಿಗೊಳಗಾಗಿವೆ. ಈ ಮುನ್ನವೂ ಮಳೆಯಿಂದ ರೈಲ್ವೆ ಹಳಿಗಳ ಮೇಲೆ ನೀರು ತುಂಬಿಹೋಗಿತ್ತು. ಮಳೆಯ ಅಬ್ಬರಕ್ಕೆ ಕೊವಿಡ್​ ನ ನಡುವೆಯೂ ಮುಂಬೈ ನಾಗರಿಕರು ಸ್ವಲ್ಪ ಹೆಚ್ಚೇ ಕಳವಳಗೊಂಡಿದ್ದರು. ಏಕೆಂದರೆ ಆ ಪ್ರಮಾಣದ ಮಳೆ ಮುಂಬೈನಲ್ಲಿ ಸುರಿದಿತ್ತು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹಡಿದಾಡುತ್ತಿರುವ ಮಳೆಯ ನಂತರದ ಮುಂಬೈನ ವಿಡಿಯೋವೊಂದು ಆಘಾತ ಮೂಡಿಸುವಂತಿದೆ.

ಸದ್ಯ ವೈರಲ್ ಆಗುತ್ತಿರುವ ಈ ವಿಡಿಯೋ ಮುಂಬೈನ ಘಾಟ್‌ಕೋಪರ್ ಪ್ರದೇಶದಲ್ಲಿ ನಡೆದಿದ್ದು ಎಂದು ಹೇಳಲಾಗಿದೆ. ಮನೆಯ ಮುಂದೆ ಕಾರನ್ನು ನಿಲ್ಲಿಸಲಾಗಿತ್ತು. ಆದರೆ, ಧಾರಾಕಾರ ಮಳೆಯಿಂದಾಗಿ ಈ ಪ್ರದೇಶದಲ್ಲಿ ಸಾಕಷ್ಟು ನೀರು ಸಂಗ್ರಹವಾಗಿತ್ತು. ರಸ್ತೆಯಲ್ಲಿ ನಿಂತ ನೀರು ಹರಿದುಹೋಗಿರಲೇ ಇಲ್ಲ. ಕಾರಿನ ಮುಂಭಾಗದಲ್ಲೇ ರಸ್ತೆಯೊಳಗಿನ ಹೊಂಡ ನೀರು ನಿಂತದ್ದೇ ನೆವವಾಗಿ ಬಾಯ್ತೆರೆದುಬಿಟ್ಟಿದೆ. ಅಷ್ಟೇ, ಆ ಹೊಂಡ ಕಾರನ್ನು ನುಂಗಿಬಿಟ್ಟಿದೆ. ದೂರದಿಂದ ಇದನ್ನೆಲ್ಲ ನೋಡುತ್ತಿರುವವರು ಆಕ್ಷಣ ಏನನ್ನೂ ಮಾಡಲಾರದೇ ದಂಗಾಗಿಬಿಟ್ಟಿದ್ದಾರೆ. ಯಾರೋ ಮಹಾನುಭಾವರು ಈ ವಿಡಿಯೋ ಚಿತ್ರಿಸಿ ಸಾಮಾಜಿಕ ಜಾಲತಾಣಗಳಿಗೆ ಹರಿಯಬಿಟ್ಟಿದ್ದಾರೆ.

ನೋಡನೋಡುತ್ತಿದ್ದಂತೆಯೇ ಕಾರು ಹೊಂಡದಲ್ಲಿ ಮುಳುಗಿ ಕಣ್ಣಿಗೆ ಕಾಣಿಸದಂತಾಗಿದೆ. ದೂರದಲ್ಲಿ ನಿಂತು ನೋಡುತ್ತಿದ್ದವರು ಆಘಾತಕ್ಕೊಳಗಾಗಿ ಉದ್ಘಾರವೆತ್ತುವುದನ್ನು ಸಹ ವಿಡಿಯೊದಲ್ಲಿ ಕೇಳಿಸಿಕೊಳ್ಳಬಹುದಾಗಿದೆ. ಮನೆ ಎದುರಿಗೆ ಕಾರ್​ ಪಾರ್ಕ್ ಮಾಡಿದ್ದೇನೆ, ಇನ್ಯಾವ ಭಯ ಇಲ್ಲ ಎಂದುಕೊಂಡ ಕಾರಿನ ಮಾಲೀಕ ಮಾತ್ರ ತಲೆ ಮೇಲೆ ಕೈ ಹೊತ್ತು ಕೂತಿದ್ದಾನಂತೆ.

ಇದನ್ನೂ ಓದಿ: Happy birthday Disha Patani: 19ನೇ ವಯಸ್ಸಿಗೆ ದಿಶಾ ಕೊಟ್ಟ ಮೊದಲ ಆಡಿಷನ್​ ವಿಡಿಯೋ ವೈರಲ್​

Viral Video: ಮಾಸ್ಕ್ ಧರಿಸದೆ ಓಡಾಡಿದವರಿಗೆ ಮಂಗಳಾರತಿ ಬೆಳಗಿ ಹಾಡು ಹೇಳಿದ ಮಹಿಳಾ ಪೊಲೀಸ್ ಅಧಿಕಾರಿ, ವಿಡಿಯೋ ವೈರಲ್

(Car sunk in ditch in Mumbai due to heavy rain video viral)

Published On - 5:01 pm, Sun, 13 June 21

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್