AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಡಹಗಲೇ ಹೆಂಡ್ತಿಗೆ ಚಾಕು ಇರಿದು ಕೊಲೆಗೈದ, Dubai ಕೋರ್ಟ್​ ಕೊಟ್ಟ ಶಿಕ್ಷೆ ಏನು ಗೊತ್ತಾ?

ಪತ್ನಿಯ ಶೀಲ ಶಂಕಿಸಿ ಆಕೆಯನ್ನ ಕೊಲೆಗೈದ ಪತಿ ಮಹಾಶಯನಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಪ್ರಕರಣ ಮಧ್ಯಪ್ರಾಚ್ಯದ ದುಬೈ ನಗರದಲ್ಲಿ ಬೆಳಕಿಗೆ ಬಂದಿದೆ. 44 ವರ್ಷದ ಕೇರಳ ಮೂಲದ ಉಘೇಶ್ ಜೀವಾವಧಿ ಶಿಕ್ಷೆ ಪಡೆದ ಪತಿರಾಯ. ಕಳೆದ ಸೆಪ್ಟಂಬರ್​ನಲ್ಲಿ ತನ್ನ ಪತ್ನಿ, 40 ವರ್ಷದ ವಿದ್ಯಾಚಂದ್ರನ್​ ಪತಿ ಉಘೇಶ್​, ವಿದ್ಯಾರ ಆಫೀಸ್​ ಪಾರ್ಕಿಂಗ್​ ಏರಿಯಾದಲ್ಲಿ ಹಾಡಹಗಲೇ ಚಾಕು ಇರಿದು ಪರಾರಿಯಾಗಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿದ್ಯಾ ತೀವ್ರ ರಕ್ತಸ್ರಾವದಿಂದ ಅಸುನೀಗಿದ್ದರು. ಇನ್ನು ಆರೋಪಿಯ ಬೆನ್ನುಹತ್ತಿದ್ದ ಪೊಲೀಸರು ಉಘೇಶ್​ನನ್ನ ಅಂದೇ […]

ಹಾಡಹಗಲೇ ಹೆಂಡ್ತಿಗೆ ಚಾಕು ಇರಿದು ಕೊಲೆಗೈದ,  Dubai ಕೋರ್ಟ್​ ಕೊಟ್ಟ ಶಿಕ್ಷೆ ಏನು ಗೊತ್ತಾ?
ಪ್ರಾತಿನಿಧಿಕ ಚಿತ್ರ
KUSHAL V
| Edited By: |

Updated on:Jul 27, 2020 | 9:36 PM

Share

ಪತ್ನಿಯ ಶೀಲ ಶಂಕಿಸಿ ಆಕೆಯನ್ನ ಕೊಲೆಗೈದ ಪತಿ ಮಹಾಶಯನಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಪ್ರಕರಣ ಮಧ್ಯಪ್ರಾಚ್ಯದ ದುಬೈ ನಗರದಲ್ಲಿ ಬೆಳಕಿಗೆ ಬಂದಿದೆ. 44 ವರ್ಷದ ಕೇರಳ ಮೂಲದ ಉಘೇಶ್ ಜೀವಾವಧಿ ಶಿಕ್ಷೆ ಪಡೆದ ಪತಿರಾಯ.

ಕಳೆದ ಸೆಪ್ಟಂಬರ್​ನಲ್ಲಿ ತನ್ನ ಪತ್ನಿ, 40 ವರ್ಷದ ವಿದ್ಯಾಚಂದ್ರನ್​ ಪತಿ ಉಘೇಶ್​, ವಿದ್ಯಾರ ಆಫೀಸ್​ ಪಾರ್ಕಿಂಗ್​ ಏರಿಯಾದಲ್ಲಿ ಹಾಡಹಗಲೇ ಚಾಕು ಇರಿದು ಪರಾರಿಯಾಗಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿದ್ಯಾ ತೀವ್ರ ರಕ್ತಸ್ರಾವದಿಂದ ಅಸುನೀಗಿದ್ದರು. ಇನ್ನು ಆರೋಪಿಯ ಬೆನ್ನುಹತ್ತಿದ್ದ ಪೊಲೀಸರು ಉಘೇಶ್​ನನ್ನ ಅಂದೇ ಬಂಧಿಸಿದ್ದರು.

ಪತ್ನಿಯ ಶೀಲದ ಮೇಲೆ ಪತಿರಾಯನ ಶಂಕೆ ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿದ್ದ ವಿದ್ಯಾ, ಕೆಲವು ವರ್ಷಗಳಿಂದ ಉದ್ಯೋಗಕ್ಕಾಗಿ ದುಬೈನಲ್ಲಿ ನೆಲೆಸಿದ್ದರಂತೆ. ಬಹಳ ಕಷ್ಟಪಟ್ಟು ಹಣ ಕೂಡಿಟ್ಟು ಮನೆಗೆ ಕಳಿಸುತ್ತಿದ್ದರಂತೆ. ಆದರೆ, ಉಘೇಶ್​ ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಕಿರುಕುಳ ನೀಡುತ್ತಿದ್ದ ಎಂದು ಮೃತಳ ಕುಟುಂಬದವರು ಆರೋಪಿಸಿದ್ದಾರೆ. ವಿದ್ಯಾ ಮತ್ತೊಂದು ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಗುಮಾನಿ ಸಹ ಅವನಿಗೆ ಇತ್ತಂತೆ.

ಅನೈತಿಕ ಗುಮಾನಿ, ಸಾಯಿಸಲೆಂದೇ ದುಬೈಗೆ ಹೋಗಿದ್ದ​! ಆದರೆ, ಆರೋಪಿ ನೀಡಿರುವ ಹೇಳಿಕೆ ಪ್ರಕಾರ ವಿದ್ಯಾಳ ಅನೈತಿಕ ಸಂಬಂಧದ ಬಗ್ಗೆ ಆಕೆಯ ಕಚೇರಿಯ ಮ್ಯಾನೇಜರ್​ ತನಗೆ ಮೆಸೇಜ್​ ಕಳಿಸಿದ್ದ. ಹಾಗಾಗಿ, ಇದರ ಬಗ್ಗೆ ವಿಚಾರಿಸಲು ಆ ದೇಶದ ವೀಸಾ ಪಡೆದು ದುಬೈಗೆ ಬಂದಿದ್ದೆ. ವಿದ್ಯಾಳ ಮ್ಯಾನೇಜರ್​ನೊಟ್ಟಿಗೆ ಇದರ ಬಗ್ಗೆ ಮಾತಡುವಾಗ ಅವಳು ಅಲ್ಲಿಗೆ ಬಂದಿದ್ದಳು. ಆಗ ವಿಚಾರ ತಿಳಿದು ಆಕೆಗೆ ಸಿಟ್ಟು ಬಂದು ನನ್ನೊಂದಿಗೆ ಜಗಳ ತೆಗೆದಿದ್ದಳು. ಈ ನಡುವೆ ಮಾತಿಗೆ ಮಾತು ಬೆಳೆದು ಕೊನೆಗೆ ಉಘೇಶ್​ ಅವಳಿಗೆ ಚಾಕು ಇರಿದು ಪರಾರಿಯಾಗಿದ್ದ.

ಇದೀಗ, ಉಘೇಶ್​ಗೆ ಅಲ್ಲಿನ ನ್ಯಾಯಲಯ ಜೀವಾವಧಿ ಶಿಕ್ಷೆ ವಿಧಿಸಿರೋದು ವಿದ್ಯಾಳ ಕುಟುಂಬಕ್ಕೆ ನೆಮ್ಮದಿ ತಂದಿದೆ. ಉಘೇಶ್​ ತನ್ನ 25 ವರ್ಷ ಕಾಲಾವಧಿಯ ಜೀವಾವಧಿ ಶಿಕ್ಷೆ ಮುಗಿಸಿದ ನಂತರ ಆತನನ್ನು ಭಾರತಕ್ಕೆ ಕಳುಹಿಸಬೇಕು ಎಂದು ದುಬೈ ಕೋರ್ಟ್​ ಆದೇಶ ನೀಡಿದೆ.

Published On - 11:05 am, Mon, 27 July 20

ಜ್ಯುವೆಲರಿ ಶಾಪ್‌ ದರೋಡೆ: ಕಳ್ಳರು ಸಿಕ್ಕಿಬಿದ್ದ ರೋಚಕತೆ ಬಿಚ್ಚಿಟ್ಟ ಎಸ್ಪಿ
ಜ್ಯುವೆಲರಿ ಶಾಪ್‌ ದರೋಡೆ: ಕಳ್ಳರು ಸಿಕ್ಕಿಬಿದ್ದ ರೋಚಕತೆ ಬಿಚ್ಚಿಟ್ಟ ಎಸ್ಪಿ
ರಾಹುಲ್ ಗಾಂಧಿ ನಾಯಕನ ಸ್ಥಾನ ತ್ಯಾಗ ಮಾಡಬೇಕು; AIUDF ನಾಯಕ ಪ್ರತಿಕ್ರಿಯೆ
ರಾಹುಲ್ ಗಾಂಧಿ ನಾಯಕನ ಸ್ಥಾನ ತ್ಯಾಗ ಮಾಡಬೇಕು; AIUDF ನಾಯಕ ಪ್ರತಿಕ್ರಿಯೆ
ಕರ್ನಾಟಕದ ಬ್ಯಾಟಿಂಗ್, ಬೌಲಿಂಗ್ ಸ್ಟ್ರೆಂತ್ ವಿವರಿಸಿದ ವಿನಯ್ ಕುಮಾರ್
ಕರ್ನಾಟಕದ ಬ್ಯಾಟಿಂಗ್, ಬೌಲಿಂಗ್ ಸ್ಟ್ರೆಂತ್ ವಿವರಿಸಿದ ವಿನಯ್ ಕುಮಾರ್
ಬೆಂಗಳೂರಿನಲ್ಲಿ ಮತ್ತೊಂದು ಬ್ಯಾಂಕ್ ದರೋಡೆಗೆ ಯತ್ನ
ಬೆಂಗಳೂರಿನಲ್ಲಿ ಮತ್ತೊಂದು ಬ್ಯಾಂಕ್ ದರೋಡೆಗೆ ಯತ್ನ
ತಂಬಾಕು ಬೆಲೆ ಕುಸಿತ: ಬೆಂಬಲ ಬೆಲೆ ನೀಡುವ ಕುರಿತು ಮೈಸೂರಲ್ಲಿ ಮಹತ್ವದ ಸಭೆ
ತಂಬಾಕು ಬೆಲೆ ಕುಸಿತ: ಬೆಂಬಲ ಬೆಲೆ ನೀಡುವ ಕುರಿತು ಮೈಸೂರಲ್ಲಿ ಮಹತ್ವದ ಸಭೆ
ಧೋನಿ ಆಪ್ತನ ಜೊತೆ ಸುತ್ತಾಡುತ್ತಿರುವ ಪರಮ ಸುಂದರಿ ಕೃತಿ ಸನನ್
ಧೋನಿ ಆಪ್ತನ ಜೊತೆ ಸುತ್ತಾಡುತ್ತಿರುವ ಪರಮ ಸುಂದರಿ ಕೃತಿ ಸನನ್
ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ; ನೆಹರು ಮೊದಲ ಪ್ರಧಾನಿಯಲ್ಲ: ಯತ್ನಾಳ್
ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ; ನೆಹರು ಮೊದಲ ಪ್ರಧಾನಿಯಲ್ಲ: ಯತ್ನಾಳ್
ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ
ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆಶಿ:ವಿಡಿಯೋ ನೋಡಿ
ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆಶಿ:ವಿಡಿಯೋ ನೋಡಿ