AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಹುಲ್​ ಚೋಕ್ಸಿ ಡೊಮಿನಿಕಾದಿಂದ ಭಾರತಕ್ಕೆ ತೆರಳಲಿದ್ದಾರೆ ಎಂದ ಆಂಟಿಗುವಾ ಪ್ರಧಾನಿ; ಡೌಗ್ಲಾಸ್-ಚಾರ್ಲ್ಸ್ ಏರ್​ಪೋರ್ಟ್ ತಲುಪಿದ ಖಾಸಗಿ ಜೆಟ್​

ಕತಾರ್​​ನ ಬಾಂಬಾರ್ಡಿಯರ್ ಗ್ಲೋಬಲ್​ 5000 ಜೆಟ್​​ ಡೌಗ್ಲಾಸ್-ಚಾರ್ಲ್ಸ್ ವಿಮಾನ ನಿಲ್ದಾಣವನ್ನು ತಲುಪಿದೆ. ಇದು ಮೇ 28ರಂದು ದೆಹಲಿಯಿಂದ ಹೊರಟು ಮಾಡ್ರಿಡ್ ಮಾರ್ಗವಾಗಿ ಡೊಮಿನಿಕಾವನ್ನು ತಲುಪಿದೆ.

ಮೆಹುಲ್​ ಚೋಕ್ಸಿ ಡೊಮಿನಿಕಾದಿಂದ ಭಾರತಕ್ಕೆ ತೆರಳಲಿದ್ದಾರೆ ಎಂದ ಆಂಟಿಗುವಾ ಪ್ರಧಾನಿ; ಡೌಗ್ಲಾಸ್-ಚಾರ್ಲ್ಸ್ ಏರ್​ಪೋರ್ಟ್ ತಲುಪಿದ ಖಾಸಗಿ ಜೆಟ್​
ಮೆಹುಲ್ ಚೋಕ್ಸಿ
Lakshmi Hegde
|

Updated on:May 30, 2021 | 2:16 PM

Share

ಪಂಜಾಬ್​ ನ್ಯಾಷನಲ್​ ಬ್ಯಾಂಕ್​ ಹಗರಣದಲ್ಲಿ ಆರೋಪಿಯಾಗಿರುವ ದೇಶಭ್ರಷ್ಟ ಉದ್ಯಮಿ ಮೆಹುಲ್ ಚೋಕ್ಸಿ ಸದ್ಯ ಡೊಮಿನಿಕಾ ಪೊಲೀಸರ ವಶದಲ್ಲಿದ್ದಾರೆ. ಡೊಮಿನಿಕಾದಿಂದ ಆಂಟಿಗುವಾಕ್ಕೆ ಚೋಕ್ಸಿಯನ್ನು ಕಳಿಸಲು ಅವಕಾಶ ನೀಡುವುದಿಲ್ಲ ಎಂದು ಅಲ್ಲಿನ ಪ್ರಧಾನಿ ಗಸ್ಟನ್ ಬ್ರೌನ್​​​ ಈಗಾಗಲೇ ಹೇಳಿದ್ದಾರೆ. ಇದೀಗ ಚೋಕ್ಸಿಯನ್ನು ಭಾರತಕ್ಕೆ ಕಳಿಸುವ ಸಿದ್ಧತೆ ನಡೆದಿದೆ, ಅವರನ್ನು ಕರೆದೊಯ್ಯಲು ಖಾಸಗಿ ವಿಮಾನವೊಂದು ಡೊಮಿನಿಕಾದ ಡೌಗ್ಲಾಸ್-ಚಾರ್ಲ್ಸ್ ಏರ್​ಪೋರ್ಟ್ ತಲುಪಿದೆ ಎಂದು ಗಸ್ಟನ್​ ಬ್ರೌನ್​ ಹೇಳಿದ್ದಾರೆ. ಹಾಗೇ ಈ ಖಾಸಗಿ ಜೆಟ್​​ನ ಫೋಟೋ ಕೂಡ ಆಂಟಿಗುವಾ ಮಾಧ್ಯಮದಲ್ಲಿ ಪ್ರಕಟವಾಗಿದೆ.

ಮೆಹುಲ್ ಚೋಕ್ಸಿ ಭಾರತದಿಂದ ಪರಾರಿಯಾಗಿಯೇ ಆಂಟಿಗುವಾಕ್ಕೆ ಹೋಗಿದ್ದು ಎಂದು ದೃಢಪಡಿಸುವ ಕೆಲವು ದಾಖಲೆಗಳನ್ನು ಭಾರತ ಡೊಮಿನಿಕಾ ಕೋರ್ಟ್​ಗೆ ಸಲ್ಲಿಸಿದೆ. ಹಾಗೇ ದಾಖಲೆಗಳ ಪರಿಶೀಲನೆ ಮಾಡಿರುವ ನ್ಯಾಯಾಧೀಶರು ಜೂ.2ರವರೆಗೆ ಚೋಕ್ಸಿ ಗಡೀಪಾರಿಗೆ ತಡೆಹಿಡಿದಿದ್ದಾರೆ. ಖಂಡಿತ ಡೊಮಿನಿಕಾದಿಂದ ಭಾರತಕ್ಕೆ ವಾಪಸ್​ ಕರೆದೊಯ್ದು, ಅಲ್ಲಿನ ಕೋರ್ಟ್​​ನಲ್ಲಿ ವಿಚಾರಣೆ ನಡೆಯಲಿದೆ ಎಂಬುದು ನನ್ನ ಅರಿವಿಗೆ ಬಂದ ವಿಚಾರಗಳು ಎಂದು ಪ್ರಧಾನಿ ಗಸ್ಟನ್​ ಬ್ರೌನ್ ಅಲ್ಲಿನ ಎಫ್​ಎಂ ಚಾನಲ್​​ವೊಂದಕ್ಕೆ​ ಹೇಳಿದ್ದಾರೆ.

ಕತಾರ್​​ನ ಬಾಂಬಾರ್ಡಿಯರ್ ಗ್ಲೋಬಲ್​ 5000 ಜೆಟ್​​ ಡೌಗ್ಲಾಸ್-ಚಾರ್ಲ್ಸ್ ವಿಮಾನ ನಿಲ್ದಾಣವನ್ನು ತಲುಪಿದೆ. ಇದು ಮೇ 28ರಂದು ದೆಹಲಿಯಿಂದ ಹೊರಟು ಮಾಡ್ರಿಡ್ ಮಾರ್ಗವಾಗಿ ಡೊಮಿನಿಕಾವನ್ನು ತಲುಪಿದೆ. ಇನ್ನು ಚೋಕ್ಸಿ ಜೈಲಿನ ಹಿಂದೆ ಇರುವ, ಅವರ ಕೈ, ಮಣಿಕಟ್ಟಿನ ಮೇಲೆ ಗಾಯಗಳಾಗಿರುವ ಫೋಟೋ ಶನಿವಾರ ಬಿಡುಗಡೆಯಾಗಿದೆ. ಅವರ ಪರ ವಕೀಲರು ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಕ್ಕಳಲ್ಲಿಯೂ ಪತ್ತೆಯಾಗುತ್ತಿದೆ ಬ್ಲ್ಯಾಕ್ ಫಂಗಸ್; ಮೆದುಳಿಗೆ ಅಟ್ಯಾಕ್, ನಿಮ್ಹಾನ್ಸ್ನಲ್ಲಿ ಇಬ್ಬರು ಬಾಲಕರಿಗೆ ಚಿಕಿತ್ಸೆ

Published On - 2:15 pm, Sun, 30 May 21

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್