AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಕೊರಿಯಾದಲ್ಲಿ 11 ದಿನ ರಾಷ್ಟ್ರೀಯ ಶೋಕಾಚರಣೆ; ನಗೋದು ಕೂಡ ಬ್ಯಾನ್! ಕಾರಣವೇನು ಗೊತ್ತಾ?

North Korea: ಉತ್ತರ ಕೊರಿಯಾದಲ್ಲಿ ಮಾಜಿ ಅಧ್ಯಕ್ಷ ಕಿಮ್ ಜಾಂಗ್ ಇಲ್ 10ನೇ ವರ್ಷದ ಸ್ಮರಣಾರ್ಥ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ದೇಶದಲ್ಲಿ ಯಾರೂ ಸಂತೋಷ ವ್ಯಕ್ತಪಡಿಸಲೇಬಾರದು ಎಂದು ಸರ್ಕಾರ ಆದೇಶಿಸಿದ್ದಾಗಿ ವರದಿಯಾಗಿದೆ.

ಉತ್ತರ ಕೊರಿಯಾದಲ್ಲಿ 11 ದಿನ ರಾಷ್ಟ್ರೀಯ ಶೋಕಾಚರಣೆ; ನಗೋದು ಕೂಡ ಬ್ಯಾನ್! ಕಾರಣವೇನು ಗೊತ್ತಾ?
ಉತ್ತರ ಕೊರಿಯಾ ಮಾಜಿ ಅಧ್ಯಕ್ಷ ಕಿಮ್ ಜಾಂಗ್ ಇಲ್ ಮತ್ತು ಉತ್ತರ ಕೊರಿಯಾ ಹಾಲಿ ಅಧ್ಯಕ್ಷ ಕಿಮ್ ಜಾಂಗ್ ಉನ್
TV9 Web
| Updated By: shivaprasad.hs|

Updated on:Dec 17, 2021 | 8:50 AM

Share

ಉತ್ತರ ಕೊರಿಯಾದ ಮಾಜಿ ನಾಯಕ ಕಿಮ್ ಜಾಂಗ್ ಇಲ್ (Kim Jong Il) ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರಸ್ತುತ ಆಳ್ವಿಕೆ ನಡೆಸುತ್ತಿರುವ ಕಿಮ್ ಜಾಂಗ್ ಉನ್ (Kim Jong Un) ಸರ್ಕಾರವು 11 ದಿನಗಳ ಶೋಕಾಚರಣೆಗೆ ಆದೇಶ ನೀಡಿದೆ. ಕಿಮ್ ಜಾಂಗ್ ಇಲ್ 1994 ರಿಂದ 2011ರ ಡಿಸೆಂಬರ್ 17ರವೆಗೆ ಆಳ್ವಿಕೆ ನಡೆಸಿದ್ದರು. ನಂತರ ಅವರ ಪುತ್ರ ಕಿಮ್ ಜಾಂಗ್ ಉನ್ ಆಳ್ವಿಕೆ ಮುಂದುವರೆಸುತ್ತಿದ್ದು, ತಮ್ಮ ತಂದೆಗೆ ಸ್ಮರಣಾರ್ಥ 11 ದಿನಗಳವರೆಗೆ ಯಾವುದೇ ಸಂತೋಷದ ಲಕ್ಷಣಗಳನ್ನು ವ್ಯಕ್ತಪಡಿಸದಂತೆ ಸಾರ್ವಜನಿಕರಿಗೆ ಆದೇಶ ನೀಡಿದೆ ಎಂದು ಡೈಲಿ ಮೈಲ್ ವರದಿ ಮಾಡಿದೆ. ಈ ರಾಷ್ಟ್ರೀಯ ಶೋಕಾಚರಣೆಯ ಸಂದರ್ಭದಲ್ಲಿ ಉತ್ತರ ಕೊರಿಯಾದ (North Korea) ಪ್ರಜೆಗಳು ಮದ್ಯಪಾನ ಮಾಡುವುದಕ್ಕೆ ಅವಕಾಶವಿಲ್ಲ. ತುಸು ನಗುವುದಕ್ಕೂ ಅವಕಾಶ ನೀಡಲಾಗಿಲ್ಲ. ಹಾಗೆಯೇ ನಾಗರಿಕರು ವಿನೋದದ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು ಎಂದು ಖಡಕ್ ಆದೇಶ ನೀಡಲಾಗಿದೆ.

ಈಶಾನ್ಯ ಗಡಿ ನಗರವಾದ ಸಿನುಯಿಜುವಿನ ಒಬ್ಬ ನಾಗರಿಕ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ‘‘ಶೋಕ ಸಮಯದಲ್ಲಿ, ನಾವು ಮದ್ಯಪಾನ ಮಾಡಬಾರದು, ನಗಬಾರದು ಅಥವಾ ವಿರಾಮ ಚಟುವಟಿಕೆಗಳಲ್ಲಿ ತೊಡಗಬಾರದು’’ ಎಂದಿದ್ದಾರೆ. ಡಿಸೆಂಬರ್ 17 ಅಂದರೆ ಇಂದು ಉತ್ತರ ಕೊರಿಯನ್ನರಿಗೆ ದಿನಸಿ ಶಾಪಿಂಗ್ ಮಾಡಲು ಸಹ ಅನುಮತಿಸಲಾಗಿಲ್ಲ. ರೇಡಿಯೊ ಫ್ರೀ ಏಷ್ಯಾದೊಂದಿಗೆ ಮಾತನಾಡಿದ ಅವರು, ‘‘ಹಿಂದೆ ಶೋಕಾಚರಣೆಯ ಸಮಯದಲ್ಲಿ ಮದ್ಯಪಾನ ಅಥವಾ ಅಮಲಿನಲ್ಲಿ ಸಿಕ್ಕಿಬಿದ್ದ ಅನೇಕ ಜನರನ್ನು ಬಂಧಿಸಗಿತ್ತು. ಅವರನ್ನು ಸೈದ್ಧಾಂತಿಕ ಅಪರಾಧಿಗಳೆಂದು ಪರಿಗಣಿಸಿ ಕರೆದೊಯ್ಯಲಾಗಿತ್ತು. ಮತ್ತೆಂದೂ ಅವರು ಕಾಣಸಿಗಲಿಲ್ಲ’’ ಎಂದು ಆಘಾತಕಾರಿ ಮಾಹಿತಿ ಹೊರಹಾಕಿದ್ದಾರೆ.

Kim Jong Un

ಕಿಮ್ ಜಾಂಗ್ ಉನ್ (ಸಾಂದರ್ಭಿಕ ಚಿತ್ರ)

‘‘ಶೋಕ ಸಮಯದಲ್ಲಿ ಕುಟುಂಬದ ಸದಸ್ಯರು ಸತ್ತರೂ, ಜೋರಾಗಿ ಅಳಲು ಅನುಮತಿಸಲಾಗುವುದಿಲ್ಲ. ಶೋಕಾಚರಣೆ ಮುಗಿದ ನಂತರವೇ ದೇಹವನ್ನು ಹೊರತೆಗೆಯಬೇಕು. ಜನರ ಜನ್ಮದಿನಗಳು ಶೋಕ ದಿನದ ಅವಧಿಯಲ್ಲಿದ್ದರೆ ಅದರ ಆಚರಣೆಯೂ ಸಾಧ್ಯವಿಲ್ಲ’’ ಎಂದು ಮೂಲವು ತಿಳಿಸಿದೆ.

ನೈಋತ್ಯ ಪ್ರಾಂತ್ಯದ ದಕ್ಷಿಣ ಹ್ವಾಂಗ್‌ಹೇಯ ಮತ್ತೊಂದು ಮೂಲವು ತನ್ನ ಪ್ರತಿಕ್ರಿಯೆಯಲ್ಲಿ, ಶೋಕಾಚರಣೆಯ ಅವಧಿಯಲ್ಲಿ ಸೂಕ್ತವಾಗಿ ದುಃಖ ವ್ಯಕ್ತಪಡಿಸಲು ವಿಫಲರಾದ ಜನರನ್ನು ವೀಕ್ಷಿಸಲೆಂದೇ ಪೊಲೀಸ್ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು. ‘‘ಡಿಸೆಂಬರ್ ಮೊದಲ ದಿನದಿಂದ, ಸಾಮೂಹಿಕ ಶೋಕಾಚರಣೆಯ ಮನಸ್ಥಿತಿಗೆ ಹಾನಿ ಮಾಡುವವರನ್ನು ದಮನ ಮಾಡುವ ವಿಶೇಷ ಕರ್ತವ್ಯವನ್ನು ಪೊಲೀಸರು ಹೊಂದಿರುತ್ತಾರೆ. ಇದು ಪೊಲೀಸರಿಗೆ ಒಂದು ತಿಂಗಳ ವಿಶೇಷ ಕರ್ತವ್ಯವಾಗಿದ್ದು, ಕಾನೂನು ಜಾರಿ ಅಧಿಕಾರಿಗಳು ನಿದ್ರಿಸಲೂ ಸಮಯವಿಲ್ಲ ಎಂದು ನಾನು ಕೇಳಿದೆ’’ ಎಂದು ಪ್ರತಿಕ್ರಿಯಿಸಿದ್ದಾರೆ.

Kim Jong Un

ಕಿಮ್ ಜಾಂಗ್ ಇಲ್​ಗೆ ನಮನ ಸಲ್ಲಿಸಲು ಉತ್ತರ ಕೊರಿಯಾದ ಪ್ಯೋಗ್ಯಾಂಗ್​ನಲ್ಲಿ ಬುಧವಾರ ನಡೆದ ಕಾರ್ಯಕ್ರಮ (ಚಿತ್ರ: ಎಪಿ)

ಉತ್ತರ ಕೊರಿಯಾದಲ್ಲಿ ಸದ್ಯ ಆಹಾರ ಬಿಕ್ಕಟ್ಟಿನ ಸಮಸ್ಯೆಯಿದೆ. ಆದ್ದರಿಂದ ಶೋಕಾಚರಣೆಯ ಅವಧಿಯಲ್ಲಿ ಬಡತನದಲ್ಲಿರುವವರನ್ನು ನೋಡಿಕೊಳ್ಳಲು ನಾಗರಿಕರ ಗುಂಪುಗಳು ಮತ್ತು ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಆದೇಶಿಸಲಾಗಿದೆ ಎಂದು ಮೂಲವು ತಿಳಿಸಿದೆ.

ಇದನ್ನೂ ಓದಿ:

ಈ ಗ್ರಹದಲ್ಲಿ ಪ್ರತಿ 16 ಗಂಟೆಗೊಮ್ಮೆ ಹೊಸ ವರ್ಷ!; ವಿಜ್ಞಾನಿಗಳು ಕಂಡುಹಿಡಿದ ಹೊಸ ಗ್ರಹದ ಮಾಹಿತಿ ಇಲ್ಲಿದೆ

ಉತ್ತರ ಕೊರಿಯಾದಲ್ಲಿ ಸ್ಕ್ವಿಡ್​ ಗೇಮ್​ ಶೋ ಪ್ರತಿ ವಿತರಿಸಿದ್ದಕ್ಕೆ ವಿದ್ಯಾರ್ಥಿಗೆ ಮರಣದಂಡನೆ; 6 ಮಂದಿಗೆ ಜೈಲು ಶಿಕ್ಷೆ

Published On - 8:49 am, Fri, 17 December 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ