AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಸ್ಟ್ರಾಡಾಮಸ್ 1555ರಲ್ಲೇ ಉಕ್ರೇನ್-​ ರಷ್ಯಾ ಯುದ್ಧದ ಬಗ್ಗೆ ಭವಿಷ್ಯ ನುಡಿದಿದ್ರಾ? ಇಲ್ಲಿದೆ ನೋಡಿ ಮಾಹಿತಿ

ಈ ಹಿಂದೆ ನಾಸ್ಟ್ರಾಡಾಮಸ್​ ಭವಿಷ್ಯ ವಾಣಿಯಂತೆ, ಲಂಡನ್​ನ ಮಹಾಬೆಂಕಿ ದುರಂತ, ಅಡಾಲ್ಫ್​ ಹಿಟ್ಲರ್​ ಮತ್ತು ನೆಪೋಲಿಯನ್​ನ ಜನನ, 9/11ರ ವರ್ಲ್ಡ್​ ಟ್ರೇಡ್​ ಸೆಂಟರ್​​ನ ಮೇಲಿನ ದಾಳಿ, ಜಾನ್​ ಎಫ್​ ಕೆನಡಿ ಹತ್ಯೆಯ ಬಗ್ಗೆ ಹೇಳಿದ್ದ ಭವಿಷ್ಯ ನಿಜವಾಗಿದೆ.

ನಾಸ್ಟ್ರಾಡಾಮಸ್ 1555ರಲ್ಲೇ ಉಕ್ರೇನ್-​ ರಷ್ಯಾ ಯುದ್ಧದ ಬಗ್ಗೆ ಭವಿಷ್ಯ ನುಡಿದಿದ್ರಾ? ಇಲ್ಲಿದೆ ನೋಡಿ ಮಾಹಿತಿ
ನಾಸ್ಟ್ರಾಡಾಮಸ್
TV9 Web
| Edited By: |

Updated on:Feb 25, 2022 | 12:48 PM

Share

ರಷ್ಯಾ- ಉಕ್ರೇನ್​ ನಡುವಿನ ಯುದ್ಧ(Russia-Ukraine War) ಆರಂಭವಾಗಿದೆ. ಬಲಿಷ್ಠ ರಾಷ್ಟ್ರ ರಷ್ಯಾ ದಾಳಿಗೆ ಉಕ್ರೇನ್​ ಅಕ್ಷರಶಃ ನಲುಗಿ ಹೋಗುತ್ತಿದೆ. ಬಾಂಬ್​, ಕ್ಷಿಪಣಿಗಳ ದಾಳಿಗೆ ನಾಗರಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ನಡುವೆ ಯುರೋಪ್​ (Europe)​ ರಾಷ್ಟ್ರಗಳಿಗೆ ಇಂತಹದ್ದೊಂದು ಯುದ್ಧದ ಪರಿಸ್ಥಿತಿ ಎದುರಾಗಲಿದೆ ಎಂದು ಪ್ರೆಂಚ್​ನ ನಾಸ್ಟ್ರಾಡಾಮಸ್(Nostradamus) ಈ ಹಿಂದೆಯೇ ತಮ್ಮ ಭವಿಷ್ಯ ವಾಣಿಯಲ್ಲಿ ಹೇಳಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ. ​ ನಾಸ್ಟ್ರಾಡಾಮಸ್  1555ರಲ್ಲಿಯೇ 942 ಮುನ್ಸೂಚನೆಗಳನ್ನು ಒಳಗೊಂಡ ಲೆಸ್ ಪ್ರೊಫೆಟೀಸ್‌ (Les Propheties) ಎನ್ನುವ ಪುಸ್ತಕ ಬರೆದಿದ್ದಾನೆ. ಅದರಲ್ಲಿ 2022 ರಲ್ಲಿ ಯುರೋಪಿನಲ್ಲಿ ಯುದ್ಧ ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದರು ಎನ್ನಲಾಗುತ್ತಿದೆ. ಸದ್ಯ ಈ ವಿಚಾರ ಎಲ್ಲೆಡೆ ವೈರಲ್​ ಆಗಿದೆ.

ಈ ಹಿಂದೆ  ನಾಸ್ಟ್ರಾಡಾಮಸ್​ ಭವಿಷ್ಯ ವಾಣಿಯಲ್ಲಿ ಲಂಡನ್​ನ ಮಹಾಬೆಂಕಿ ದುರಂತ, ಅಡಾಲ್ಫ್​ ಹಿಟ್ಲರ್​ ಮತ್ತು ನೆಪೋಲಿಯನ್​ನ ಜನನ, 9/11ರ ವರ್ಲಡ್​ ಟ್ರೇಡ್​ ಸೆಂಟರ್​​ನ ಮೇಲಾದ ದಾಳಿ, ಜಾನ್​ ಎಫ್​ ಕೆನಡಿ ಹತ್ಯೆಯ ಬಗ್ಗೆ ಭವಿಷ್ಯ ನುಡಿದಿದ್ದರು. ಅವೆಲ್ಲವೂ ಸತ್ಯವಾಗಿತ್ತು. ಅದೇ ರೀತಿ ಈ ವರ್ಷವೂ ಯುದ್ಧ ನಡೆಯುವ ಬಗ್ಗೆ ಭವಿಷ್ಯದಲ್ಲಿ ಹೇಳಿದ್ದರು ಎಂದು ಹೇಳಲಾಗಿದೆ.

ಮೂರನೇ ಮಹಾಯುದ್ಧ, ಭೂಕಂಪ, ಮೂರನೇ ಆಂಟಿಕ್ರೈಸ್ಟ್ ಮುಂದಿನ ದಿನಗಳಲ್ಲಿ ಸಂಭವಿಸಬಹುದು ಎಂದು ಭವಿಷ್ಯದಲ್ಲಿ ಹೇಳಲಾಗಿದೆ.  ಇದರ ಜತೆಗೆ ಬ್ರಿಟಿಷ್​ ನಾಸ್ಟ್ರಾಡಾಮಸ್ ಬೋಬು ಶೈಲರ್​ ನುಡಿದ ಭವಿಷ್ಯದಲ್ಲಿ ಎಂಡ್​ ಆಫ್​ ಡೇಸ್​ ಸರಣಿಯಲ್ಲಿ ಭವಿಷ್ಯದಲ್ಲಿ ಭೂಮಿಯು ನಾಶವಾಗಲಿದೆ. ಆದರೆ ಇದು ಇನ್ನೂ 1,772 ವರ್ಷಗಳವರೆಗೆ ಆಗುವುದಿಲ್ಲ ಎಂದಿದ್ದಾರೆ.ಇದರೊಂದಿಗೆ ಯೆಲ್ಲೊಸ್ಟೋನ್ ರಾಷ್ಟ್ರೀಯ ಉದ್ಯಾನವನದಲ್ಲಿ ಜ್ವಾಲಾಮುಖಿ ಸ್ಫೋಟ ಮತ್ತು ಮುಂಬರುವ ವರ್ಷಗಳಲ್ಲಿ ಸಂಭವಿಸಬಹುದಾದ ಬೃಹತ್ ಸೌರ ಜ್ವಾಲೆ ಬಗ್ಗೆ ಎಚ್ಚರಿಸಿದ್ದಾರೆ.

ನಾಸ್ಟ್ರಾಡಾಮಸ್​ ಪ್ರಕಾರ ಭೂಮಿಯ ನಾಶ 3797ರ ಹೊತ್ತಿಗೆ ಸಂಭವಿಸಬಹುದು. ಅದನ್ನು ಹೊರತುಪಡಿಸಿ ಜಗತ್ತಿಗೆ ಒಂದಷ್ಟು ಸಂಕಷ್ಟಗಳು ಎದುರಾಗಲಿದೆ ಎಂದು ದಿ ಸನ್​ ವರದಿ ಮಾಡಿದೆ. ಇನ್ನು ಬ್ರಿಟಿಷ್​ ನಾಸ್ಟ್ರಾಡಾಮಸ್​ 100 ವರ್ಷಗಳವರೆಗೆ ಭೂಮಿಯ ನಾಶವಾಗುವುದಿಲ್ಲ. ಅದರ ನಂತರ ಆಗುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:

ರಷ್ಯಾ ದಾಳಿಗೆ ತತ್ತರಿಸಿದ ಉಕ್ರೇನ್​: ಯುದ್ಧದ ನಾಡಿನ ಮನಕಲಕುವ ಫೋಟೋಗಳು ಇಲ್ಲಿವೆ

Published On - 12:44 pm, Fri, 25 February 22

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ