AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದ ಕೆಂಟಕಿ ಸೇರಿ ಹಲವೆಡೆ ಸುಂಟರಗಾಳಿ ಆರ್ಭಟ; 50ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆಂದ ಗವರ್ನರ್​

ಅಷ್ಟೇ ಅಲ್ಲ, ಯುಎಸ್​ನ ಇಲ್ಲಿನೊಯಿಸ್​ ರಾಜ್ಯದ ಅಮೇಜಾನ್​ ವೇರ್​ಹೌಸ್​​ನ ಮೇಲ್ಛಾವಣಿ ಕೂಡ ಕುಸಿದುಬಿದ್ದಿದೆ. ಅದರಲ್ಲಿ ಕೂಡ 100ಕ್ಕೂ ಹೆಚ್ಚು ಮಂದಿ ಸಿಲುಕಿದ್ದರು. ಶನಿವಾರ ಮುಂಜಾನೆಯವರೆಗೂ ಅವರ ರಕ್ಷಣಾ ಕಾರ್ಯಾಚರಣೆ ನಡೆದಿದೆ.

ಅಮೆರಿಕದ ಕೆಂಟಕಿ ಸೇರಿ ಹಲವೆಡೆ ಸುಂಟರಗಾಳಿ ಆರ್ಭಟ; 50ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆಂದ ಗವರ್ನರ್​
ಅಮೇಜಾನ್ ವೇರ್​ಹೌಸ್ ಮೇಲ್ಛಾವಣಿ ಕುಸಿತ
TV9 Web
| Edited By: |

Updated on: Dec 11, 2021 | 6:34 PM

Share

ಯುಎಸ್​ನ ಆಗ್ನೇಯ ರಾಜ್ಯವಾದ ಕೆಂಟಕಿ ಮತ್ತು ಇತರ ನಗರಗಳಲ್ಲಿ ಶುಕ್ರವಾರ ಸಂಜೆಯಿಂದ ಶುರುವಾದ ಸುಂಟರಗಾಳಿಯಿಂದ  ಇದುವರೆಗೆ 50ಕ್ಕೂ ಹೆಚ್ಚು ಬಲಿಯಾಗಿರಬಹುದು ಎಂದು ಅಲ್ಲಿನ ರಾಜ್ಯಪಾಲರು ಹೇಳಿದ್ದಾರೆ. ಕೆಂಟಕಿ ಸೇರಿ ಯುಎಸ್​ನ ಇನ್ನೂ ಹಲವು ದೊಡ್ಡ ನಗರಗಳಲ್ಲಿ ಈ ಸುಂಟರಗಾಳಿ ತೀವ್ರ ಹಾನಿ ಮಾಡಿದೆ. ಅದರಲ್ಲೂ ಕೆಂಟಕಿ ರಾಜ್ಯದ ಅನೇಕ ಪ್ರದೇಶಗಳು ನಾಶವಾಗಿವೆ ಎಂದೂ ರಾಜ್ಯಪಾಲ ಆ್ಯಂಡಿ ಬೆಶಿಯರ್ ಮಾಹಿತಿ ನೀಡಿದ್ದಾರೆ. 

ಶುಕ್ರವಾರ ರಾತ್ರಿ 12ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಸುಂಟರಗಾಳಿ ಎದ್ದಿದೆ. ಅದರಲ್ಲೂ ಮೊದಲು ಎದ್ದ ಸುಂಟರಗಾಳಿ ಕೆಂಟಕಿಯಾದ್ಯಂತ 200 ಮೈಲುಗಳ ದೂರ ಸಂಚರಿಸಿ ಅವಘಡ ಸೃಷ್ಟಿಸಿದೆ. ಕಂಟಕಿಯ ಇತಿಹಾಸದಲ್ಲೇ ಅತ್ಯಂತ ಭೀಕರ ಸುಂಟರಗಾಳಿ ಇದಾಗಿದ್ದು, 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ನನಗೂ ಕೂಡ ಇದರ ಭೀಕರತೆ ನೋಡಿ ಭಯವಾಯಿತು ಎಂದು ರಾಜ್ಯಪಾಲರು ಹೇಳಿಕೊಂಡಿದ್ದಾರೆ. ಮೇಫೀಲ್ಡ್​ ನಗರದಲ್ಲಿ ಒಂದು ಮೇಣದಬತ್ತಿ ಕಾರ್ಖಾನೆಯ ಮೇಲ್ಛಾವಣಿ ಕುಸಿದಿದೆ.  ಈ ವೇಳೆ ಅದರಲ್ಲಿ 110 ಮಂದಿ ಕೆಲಸ ಮಾಡುತ್ತಲೇ ಇದ್ದರು. ಮಧ್ಯರಾತ್ರಿ ಹೊತ್ತಲ್ಲಿ ನಾನು ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದೇನೆ ಎಂದು ಬೆಶಿಯರ್ ಮಾಹಿತಿ ನೀಡಿದ್ದಾರೆ.

ಅಷ್ಟೇ ಅಲ್ಲ, ಯುಎಸ್​ನ ಇಲ್ಲಿನೊಯಿಸ್​ ರಾಜ್ಯದ ಅಮೇಜಾನ್​ ವೇರ್​ಹೌಸ್​​ನ ಮೇಲ್ಛಾವಣಿ ಕೂಡ ಕುಸಿದುಬಿದ್ದಿದೆ. ಅದರಲ್ಲಿ ಕೂಡ 100ಕ್ಕೂ ಹೆಚ್ಚು ಮಂದಿ ಸಿಲುಕಿದ್ದರು. ಶನಿವಾರ ಮುಂಜಾನೆಯವರೆಗೂ ಅವರ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಅರ್ಕಾನ್ಸಾಸ್‌ ಎಂಬಲ್ಲಿ ಇರುವ ಮೊನೆಟ್ ಮ್ಯಾನರ್ ನರ್ಸಿಂಗ್​ ಹೋಂಗೆ ಸುಂಟರಗಾಳಿ ಅಪ್ಪಳಿಸಿದ ಪರಿಣಾಮ ಒಬ್ಬರು ಮೃತಪಟ್ಟಿದ್ದಾರೆ. ಯುಎಸ್​ ಮಾಧ್ಯಮಗಳಲ್ಲಿ ಈ ಸುಂಟರಗಾಳಿ ಸೃಷ್ಟಿಸಿದ ಅನಾಹುತಗಳ ವಿಡಿಯೋ, ಫೋಟೋಗಳು ವೈರಲ್ ಆಗುತ್ತಿವೆ.

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಈ ಮೂವರು ಆಟಗಾರರಿಗೆ ಕೊನೆಯ ಅವಕಾಶ

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ