AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rishi Sunak: ಸರ್ಕಾರ ಅನುದಾನ ನೀಡುವ ಸಂಸ್ಥೆಯಲ್ಲಿ ಅಕ್ಷತಾಮೂರ್ತಿ ಹೂಡಿಕೆ; ರಿಷಿ ಸುನಕ್​ಗೆ ಸಂಕಷ್ಟ

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಪತ್ನಿ ಅಕ್ಷತಾಮೂರ್ತಿ ಅವರ ಉದ್ಯಮ ಚಟುವಟಿಕೆಗೆ ಸಂಬಂಧಿಸಿ ತನಿಖೆ ಎದುರಿಸಬೇಕಾಗಲಿದೆ ಎಂದು ವರದಿಯಾಗಿದೆ. ಸುನಕ್ ವಿರುದ್ಧ ತನಿಖೆ ಆರಂಭಿಸಲಾಗಿದೆ ಎಂಬುದಾಗಿ ಬ್ರಿಟಿಷ್ ಪಾರ್ಲಿಮೆಂಟ್​​ನ ‘ಕಮಿಷನರ್ ಆಫ್ ಸ್ಟಾಂಡರ್ಡ್ಸ್’ ವೆಬ್​ಸೈಟ್ ಉಲ್ಲೇಖಿಸಿದೆ.

Rishi Sunak: ಸರ್ಕಾರ ಅನುದಾನ ನೀಡುವ ಸಂಸ್ಥೆಯಲ್ಲಿ ಅಕ್ಷತಾಮೂರ್ತಿ ಹೂಡಿಕೆ; ರಿಷಿ ಸುನಕ್​ಗೆ ಸಂಕಷ್ಟ
ರಿಷಿ ಸುನಕ್
ಗಣಪತಿ ಶರ್ಮಾ
|

Updated on: Apr 17, 2023 | 9:07 PM

Share

ಮುಖ್ಯಾಂಶಗಳು

  • ಸರ್ಕಾರ ಅನುದಾನ ನೀಡುವ ಸಂಸ್ಥೆಯಲ್ಲಿ ಅಕ್ಷತಾಮೂರ್ತಿ ಹೂಡಿಕೆ; ರಿಷಿ ಸುನಕ್​ಗೆ ಸಂಕಷ್ಟ
  • ಸುನಕ್ ವಿರುದ್ಧ ಟಿಷ್ ಪಾರ್ಲಿಮೆಂಟ್​​ನ ‘ಕಮಿಷನರ್ ಆಫ್ ಸ್ಟಾಂಡರ್ಡ್ಸ್’ ತನಿಖೆ
  • ಸರ್ಕಾರದಿಂದ ಪ್ರಯೋಜನ ಪಡೆಯುತ್ತಿರುವ ಚೈಲ್ಡ್​​ಕೇರ್ ಸಂಸ್ಥೆಯಲ್ಲಿ ಅಕ್ಷತಾಮೂರ್ತಿ ಪಾಲು

ಲಂಡನ್: ಬ್ರಿಟನ್ ಪ್ರಧಾನಿ ರಿಷಿ ಸುನಕ್ (Rishi Sunak) ಅವರು ಪತ್ನಿ ಅಕ್ಷತಾಮೂರ್ತಿ (Akshata Murthy) ಅವರ ಉದ್ಯಮ ಚಟುವಟಿಕೆಗೆ ಸಂಬಂಧಿಸಿ ತನಿಖೆ ಎದುರಿಸಬೇಕಾಗಲಿದೆ ಎಂದು ವರದಿಯಾಗಿದೆ. ಸುನಕ್ ವಿರುದ್ಧ ತನಿಖೆ ಆರಂಭಿಸಲಾಗಿದೆ ಎಂಬುದಾಗಿ ಬ್ರಿಟಿಷ್ ಪಾರ್ಲಿಮೆಂಟ್​​ನ ‘ಕಮಿಷನರ್ ಆಫ್ ಸ್ಟಾಂಡರ್ಡ್ಸ್’ ವೆಬ್​ಸೈಟ್ ಉಲ್ಲೇಖಿಸಿದೆ. ಉದ್ಯಮಕ್ಕೆ ಸಂಬಂಧಿಸಿದ ಮಾಹಿತಿ ವಿಚಾರದಲ್ಲಿ ಏಪ್ರಿಲ್ 13ರಂದು ತನಿಖೆ ಆರಂಭಿಸಲಾಗಿದೆ ವೆಬ್​ಸೈಟ್​ನಲ್ಲಿ ತಿಳಿಸಲಾಗಿದೆ. ತನಿಖೆ ನಡೆಯುತ್ತಿರುವುದು ಅಕ್ಷತಾಮೂರ್ತಿ ಅವರು ಚೈಲ್ಡ್​​ಕೇರ್ ಸಂಸ್ಥೆಯೊಂದರಲ್ಲಿ ಮಾಡಿರುವ ಹೂಡಿಕೆಗೆ ಸಂಬಂಧಿಸಿ ಎಂದು ರಿಷಿ ಸುನಕ್ ಅವರ ವಕ್ತಾರರು ತಿಳಿಸಿದ್ದಾರೆ.

ಸರ್ಕಾರದಿಂದ ಪ್ರಯೋಜನ ಪಡೆಯುತ್ತಿರುವ ಚೈಲ್ಡ್​​ಕೇರ್ ಸಂಸ್ಥೆಯಲ್ಲಿ ಅಕ್ಷತಾಮೂರ್ತಿ ಅವರು ಪಾಲು ಹೊಂದಿದ್ದಾರೆ ಎಂಬ ಮಾಧ್ಯಮ ವರದಿಗಳ ಬಗ್ಗೆ ತನಿಖೆಯಾಗಬೇಕು ಎಂದು ಲಿಬರಲ್ ಡೆಮಾಕ್ರಟ್​​ ಪಕ್ಷದ ನಾಯಕರು ಆಗ್ರಹಿಸಿದ್ದರು. ಮಾರ್ಚ್​​ನಲ್ಲಿ ಮಂಡನೆ ಮಾಡಿದ್ದ ಬಜೆಟ್​​ನಲ್ಲಿ ಆ ಚೈಲ್ಡ್​ಕೇರ್ ಸಂಸ್ಥೆಗೆ ಬ್ರಿಟನ್​ ಸರ್ಕಾರ ಅನುದಾನ ಘೋಷಿಸಿತ್ತು.

ಬ್ರಿಟನ್​ ಸಂಸತ್ತಿನ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ತನಿಖೆ ನಡೆಸುವುದು ‘ಕಮಿಷನರ್ ಆಫ್ ಸ್ಟಾಂಡರ್ಡ್ಸ್’ ಜವಾಬ್ದಾರಿಯಾಗಿದೆ. ರಿಷಿ ಸುನಕ್​ ವಿರುದ್ಧದ ತನಿಖೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ವೆಬ್​ಸೈಟ್​​ನಲ್ಲಿ ಬಹಿರಂಗಪಡಿಸಲಾಗಿಲ್ಲ.

ಇದನ್ನೂ ಓದಿ: Sudan conflict: ಸಂಘರ್ಷಪೀಡಿತ ಸುಡಾನ್​ನಲ್ಲಿ ಸಿಲುಕಿರುವ ಕನ್ನಡಿಗರಿಂದ ನೆರವಿಗಾಗಿ ಮೊರೆ

ನೀತಿ ಸಂಹಿತೆ ಪ್ರಕಾರ, ಸಂಸತ್​​ನ ಎಲ್ಲ ಸದಸ್ಯರು ಅವರ ಮತ್ತು ಅವರು ರೂಪಿಸುವ ನೀತಿಗಳ ಮೇಲೆ ಪ್ರಭಾವ ಬೀರಬಲ್ಲಂಥ ಸಮೀಪ ಸಂಬಂಧಿಗಳ ಉದ್ಯಮ ಹಿತಾಸಕ್ತಿಗಳ ವಿವರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ತನಿಖೆ ವೇಳೆ, ರಿಷಿ ಸುನಕ್ ಅವರು ನಿಯಮ ಉಲ್ಲಂಘಿಸಿದ್ದು ಕಂಡುಬಂದಲ್ಲಿ ಕ್ಷಮೆ ಕೋರುವಂತೆ ಅವರಿಗೆ ಸೂಚಿಸುವ ಮತ್ತು ಉದ್ಯಮ ಹಿತಾಸಕ್ತಿಗೆ ಸಂಬಂಧಿಸಿದ ವಿವರಗಳನ್ನು ನೀಡುವಂತೆ ನಿರ್ದೇಶನ ನೀಡುವ ಸಾಧ್ಯತೆಗಳಿವೆ. ಈ ಮೂಲಕ ಮುಂದೆ ಅಂಥ ಎಡವಟ್ಟುಗಳಾಗದಂತೆ ತಡೆಯಬಹುದಾಗಿದೆ ಎಂದು ಮಾಧ್ಯಮ ವರದಿಗಳು ಉಲ್ಲೇಖಿಸಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ