AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ರೇನ್ ವಿರುದ್ಧ ಹೋರಾಡಲು ನಿರಾಕರಿಸಿದ ಎಂದ ಸೈನಿಕರನ್ನು ಜೈಲಿಗೆ ಹಾಕಿ, ದೈಹಿಕ ಹಿಂಸೆ ನೀಡಿದ ರಷ್ಯಾ: ವರದಿ

ಉಕ್ರೇನ್ ಮೇಲೆ ಅತಿಕ್ರಮಣ ಆರಂಭವಾದಾಗ ಸೇನಾ ಪಡೆಗೆ ಸಿಕ್ಕಿದ ಕಡಿಮೆ ಬೆಂಬಲದಿಂದಾಗಿ ನಾನು ಯುದ್ಧದಲ್ಲಿ ಭಾಗಿಯಾಗಲು ನಿರಾಕರಿಸಿದೆ. ನನ್ನ ಈ ನಿಲುವಿನಿಂದಾಗಿ ನನಗೂ ಇತರ ಸೈನಿಕರನ್ನೂ ಬಂಧನದಲ್ಲಿಡಲಾಯಿತು.

ಉಕ್ರೇನ್ ವಿರುದ್ಧ ಹೋರಾಡಲು ನಿರಾಕರಿಸಿದ ಎಂದ ಸೈನಿಕರನ್ನು ಜೈಲಿಗೆ ಹಾಕಿ, ದೈಹಿಕ ಹಿಂಸೆ ನೀಡಿದ ರಷ್ಯಾ: ವರದಿ
ವ್ಲಾಡಿಮಿರ್ ಪುಟಿನ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Dec 13, 2022 | 1:11 PM

Share

ಉಕ್ರೇನ್ (Ukraine) ವಿರುದ್ಧ ಯುದ್ಧ ಮಾಡಲು ನಿರಾಕರಿಸಿದ ತನ್ನ ಸೇನೆಯ ಸೈನಿಕರಿಗೆ ರಷ್ಯಾ (Russia) ದೈಹಿಕ ಹಿಂಸೆ ನೀಡುತ್ತಿದೆ ಎಂದು ಬಿಬಿಸಿ ವರದಿ ಮಾಡಿದೆ. ಸೈನಿಕರನ್ನು ಜೈಲಿಗೆ ನೂಕಿ, ಥಳಿಸಲಾಗುತ್ತಿದೆ ಎಂದು ಬಿಬಿಸಿ ತಮ್ಮ ವರದಿಯಲ್ಲಿ ಹೇಳಿದೆ. ಯುದ್ಧಕ್ಕೆ ಬೇಕಾದ ಸರಿಯಾದ ಸಿದ್ಧತೆ ಅಥವಾ ಯೋಜನೆಗಳನ್ನು ರಷ್ಯಾ ಮಾಡಿಕೊಂಡಿಲ್ಲ ಎಂದು ರಷ್ಯಾದ ಯೋಧರು ಮತ್ತು ಅವರ ಕುಟುಂಬಗಳು ವಿವರಿಸಿವೆ. ಯೋಧರಿಗೆ ಸ್ವಲ್ಪವೇ ಮಾಹಿತಿ ನೀಡಿ ಯುದ್ಧಕ್ಕೆ ಅಣಿಯಾಗುವಂತೆ ಆದೇಶ ನೀಡಲಾಗುತ್ತಿದೆ ಎಂದು ಅವರು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ. ಇಬ್ಬರು ರಷ್ಯಾ ಯೋಧರ ಹೇಳಿಕೆಯನ್ನು ವರದಿ ಉಲ್ಲೇಖಿಸಿದ್ದು, ಇದರಲ್ಲಿ ಒಬ್ಬರು ಯೋಧರು, ಯೋಧರನ್ನು ಸಾವಿನೆಡೆಗೆ ಮುನ್ನಡೆಸಲು ನಿರಾಕರಿಸಿರುವುದಾಗಿ ಹೇಳಿದ್ದಾರೆ. ಉಕ್ರೇನ್ ಮೇಲೆ ಅತಿಕ್ರಮಣ ಆರಂಭವಾದಾಗ ಸೇನಾ ಪಡೆಗೆ ಸಿಕ್ಕಿದ ಕಡಿಮೆ ಬೆಂಬಲದಿಂದಾಗಿ ನಾನು ಯುದ್ಧದಲ್ಲಿ ಭಾಗಿಯಾಗಲು ನಿರಾಕರಿಸಿದೆ. ನನ್ನ ಈ ನಿಲುವಿನಿಂದಾಗಿ ನನಗೂ ಇತರ ಸೈನಿಕರನ್ನೂ ಬಂಧನದಲ್ಲಿಡಲಾಯಿತು. ನನಗೆ ಹೊಡೆದು, ನನ್ನ ಮೇಲೆ ಇನ್ನೇನು ಗುಂಡು ಹಾರಿಸುತ್ತಾರೆ ಎಂಬಂತೆ ಹೊರಗೆ ಎಳೆದುಕೊಂಡು ಹೋಗಲಾಯಿತು. ನೆಲದಲ್ಲಿ ಮಲಗಿ 10ರ ವರೆಗೆ ಎಣಿಸುವಂತೆ ಹೇಳಿದರು. ನಾನು ನಿರಾಕರಿಸಿದೆ. ಅವರು ಪಿಸ್ತೂಲ್​​ನಿಂದ ಹಲವು ಬಾರಿ ನನಗೆ ಹೊಡೆದರು. ನನ್ನ ಮುಖ ರಕ್ತಸಿಕ್ತವಾಗಿತ್ತು ಎಂದು ಯೋಧ ಹೇಳಿರುವುದಾಗಿ ಬಿಬಿಸಿ ವರದಿ ಹೇಳಿದೆ.

ನಾನು ನನ್ನ ಜತೆಗಿರುವ ಯೋಧರನ್ನು ಸಾವಿನೆಡೆಗೆ ಕರೆದೊಯ್ಯಲು ನಿರಾಕರಿಸಿದ್ದಕ್ಕಾಗಿ ನನ್ನ ಜತೆ ನಾಲ್ವರು ಸೇನಾ ಅಧಿಕಾರಿಗಳನ್ನು ಕಟ್ಟಡದ ಕೆಳಮಹಡಿಯಲ್ಲಿರಿಸಲಾಗಿತ್ತು. ಆ ಕಟ್ಟಡ ಶೆಲ್ ದಾಳಿಗೊಳಗಾಗಿದ್ದು, ಅವರೆಲ್ಲರೂ ನಾಪತ್ತೆಯಾಗಿದ್ದಾರೆ ಎಂದು ರಷ್ಯಾದ ಪಡೆ ಯೋಧನ ಅಮ್ಮನಲ್ಲಿ ಹೇಳಿತ್ತು.

ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತನ್ನ ದೇಶಕ್ಕೆ ಶಾಂತಿಯನ್ನು ತರಲು ಮೀಸಲಾಗಿರುವ ಚಳಿಗಾಲದಲ್ಲಿ ವಿಶೇಷ ಜಾಗತಿಕ ಶಾಂತಿ ಶೃಂಗಸಭೆಯನ್ನು ಕರೆಯುವ ತನ್ನ ಕಲ್ಪನೆಯನ್ನು ಬೆಂಬಲಿಸುವಂತೆ ಏಳು ರಾಷ್ಟ್ರಗಳ ಗುಂಪಿನ ನಾಯಕರನ್ನು ಒತ್ತಾಯಿಸಿರುವ ಬೆನ್ನಲ್ಲೇ ಈ ವರದಿ ಪ್ರಕಟವಾಗಿದೆ. ಉಕ್ರೇನಿಯನ್ ಶಾಂತಿ ಸೂತ್ರದ ಅಂಶಗಳನ್ನು ನಾವು ಹೇಗೆ ಮತ್ತು ಯಾವಾಗ ಕಾರ್ಯಗತಗೊಳಿಸಬಹುದು ಎಂಬುದನ್ನು ನಿರ್ಧರಿಸಲು ವಿಶೇಷ ಶೃಂಗಸಭೆ ಗ್ಲೋಬಲ್ ಪೀಸ್ ಫಾರ್ಮುಲಾ ಶೃಂಗಸಭೆಯನ್ನು ಕರೆಯಲು ನಾನು ಪ್ರಸ್ತಾಪಿಸುತ್ತೇನೆ ಎಂದು ವೊಲೊಡಿಮಿರ್ ಝೆಲೆನ್ಸ್ಕಿ G7 ಮುಖ್ಯಸ್ಥರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ:  ಜಾಗತಿಕ ಮಟ್ಟದ ಶಾಂತಿ ಸೂತ್ರ ಶೃಂಗಸಭೆಗೆ ಕರೆ ನೀಡಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ