AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌದಿ ಅರೇಬಿಯಾದಲ್ಲಿ ಮದುವೆಗೆ ಹೊಸ ನಿಯಮಗಳು; ವಿದೇಶಿ ಹುಡುಗಿ ಬೇಕು ಅಂದ್ರೆ ಇಷ್ಟೆಲ್ಲಾ ಕೆಲಸ ಮಾಡಬೇಕು

ಈಗಾಗಲೇ ಸೌದಿ ಅರೇಬಿಯಾದಲ್ಲಿ ಈ ನಾಲ್ಕು ದೇಶಗಳ 5 ಲಕ್ಷ ಮಹಿಳೆಯರು ಇದ್ದಾರೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ ಎಂದೂ ಮಾಹಿತಿ ಲಭ್ಯವಾಗಿದೆ.

ಸೌದಿ ಅರೇಬಿಯಾದಲ್ಲಿ ಮದುವೆಗೆ ಹೊಸ ನಿಯಮಗಳು; ವಿದೇಶಿ ಹುಡುಗಿ ಬೇಕು ಅಂದ್ರೆ ಇಷ್ಟೆಲ್ಲಾ ಕೆಲಸ ಮಾಡಬೇಕು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ganapathi bhat

Updated on:Apr 06, 2022 | 6:54 PM

ರಿಯಾದ್: ಇಲ್ಲಿನ ಪುರುಷರು ಪಾಕಿಸ್ತಾನ, ಬಾಂಗ್ಲಾದೇಶ, ಚಡ್ ಹಾಗೂ ಮಯನ್ಮಾರ್​ನ ಮಹಿಳೆಯರನ್ನು ಮದುವೆ ಆಗಬಾರದು ಎಂದು ಸೌದಿ ಅರೇಬಿಯಾ ಆದೇಶಿಸಿದೆ. ಈ ನಾಲ್ಕು ದೇಶಗಳ ಹುಡುಗಿಯರನ್ನು ಸೌದಿ ಅರೇಬಿಯಾ ಹುಡುಗರು ಮದುವೆ ಆಗಬಾರದು ಎಂದು ತಿಳಿಸಿರುವ ಬಗ್ಗೆ ಡಾವ್ನ್ ಸುದ್ದಿಸಂಸ್ಥೆ ವರದಿ ಮಾಡಿದೆ. ಈಗಾಗಲೇ ಸೌದಿ ಅರೇಬಿಯಾದಲ್ಲಿ ಈ ನಾಲ್ಕು ದೇಶಗಳ 5 ಲಕ್ಷ ಮಹಿಳೆಯರು ಇದ್ದಾರೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ ಎಂದೂ ಮಾಹಿತಿ ಲಭ್ಯವಾಗಿದೆ.

ಈ ನಿರ್ಬಂಧದಿಂದ ವಿದೇಶಿ ಹುಡುಗಿಯರನ್ನು ಮದುವೆ ಆಗಲು ಇಚ್ಛಿಸುವ ಸೌದಿ ಅರೇಬಿಯಾ ಹುಡುಗರಿಗೆ ಸಂಕಷ್ಟದ ಸ್ಥಿತಿ ಎದುರಾಗಿದೆ. ಸೌದಿ ಹುಡುಗರು ವಿದೇಶಿ ಹುಡುಗಿಯರೊಂದಿಗೆ ವಿವಾಹ ಸಂಬಂಧ ಬೆಳೆಸಬಾರದು ಎಂಬ ಉದ್ದೇಶದಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ. ವಿದೇಶದ ಹುಡುಗಿಯರನ್ನು ಮದುವೆ ಆಗಬೇಕಿದ್ದರೆ ವಿಶೇಷ ನಿಯಮಾವಳಿಗಳನ್ನು ಹಾಗೂ ಅನುಮತಿಯನ್ನು ಪಡೆಯಬೇಕು ಎಂಬ ಬಗ್ಗೆ ಡಾವ್ನ್ ವರದಿ ಮಾಡಿದೆ.

ಪಾಕಿಸ್ತಾನ, ಬಾಂಗ್ಲಾದೇಶ, ಚಡ್ ಮತ್ತು ಮಯನ್ಮಾರ್​ನ ಹುಡುಗಿಯರನ್ನು ಮದುವೆ ಆಗಲು ಇಚ್ಛಿಸುವ ಹುಡುಗರು ಮೊದಲು ಸರ್ಕಾರದ ಅನುಮತಿ ಪಡೆಯಬೇಕು. ಅಧಿಕೃತವಾಗಿ ವಿವಾಹ ಅರ್ಜಿಯನ್ನು ದಾಖಲಿಸಬೇಕು ಎಂದು ಮಕ್ಕಾ ಪೊಲೀಸ್ ನಿರ್ದೇಶಕ ಮೇಜರ್ ಜನರಲ್ ಅಸ್ಸಾಫ್ ಅಲ್-ಖುರೇಶಿ ತಿಳಿಸಿದ್ದಾರೆ.

ಜೊತೆಗೆ, ವಿಚ್ಛೇದನ ನೀಡಿರುವ ಪುರುಷರು ಆರು ತಿಂಗಳ ಒಳಗಾಗಿ ಮತ್ತೆ ಮದುವೆಗೆ ಅರ್ಜಿ ಸಲ್ಲಿಸುವಂತಿಲ್ಲ. ಅರ್ಜಿ ಸಲ್ಲಿಸುವ ಹುಡುಗರ ವಯೋಮಾನ 25 ದಾಟಿರಬೇಕು. ನಿಗದಿತ ದಾಖಲೆಗಳನ್ನು ಸ್ಥಳೀಯ ಜಿಲ್ಲಾ ಮೇಯರ್​ರ ಸಹಿಯೊಂದಿಗೆ ನೀಡಬೇಕು. ಫ್ಯಾಮಿಲಿ ಕಾರ್ಡ್​ನ್ನು ಕೂಡ ದಾಖಲೆಯಾಗಿ ಕೊಡಬೇಕು. ಅರ್ಜಿದಾರ ಈಗಾಗಲೇ ಮದುವೆ ಆಗಿದ್ದರೆ, ಆತನ ಮಡದಿ ಅನಾರೋಗ್ಯದಿಂದ ಇದ್ದಾಳೆ ಅಥವಾ ಬಂಜೆ ಎಂದು ಆಸ್ಪತ್ರೆಯಿಂದ ವರದಿ ಸಲ್ಲಿಸಬೇಕು ಎಂದೂ ಖುರೇಶಿ ಹೇಳಿದ್ದಾರೆ.

ಇದನ್ನೂ ಓದಿ: ಸೌದಿ ಅರೇಬಿಯಾಕ್ಕೆ ಸಡ್ಡು ಹೊಡೆದ ಭಾರತ, ಮೇ ತಿಂಗಳಿಂದ ತೈಲ ಆಮದು ಶೇ 25ರಷ್ಟು ಕಡಿತಕ್ಕೆ ಯೋಜನೆ

ಇದನ್ನೂ ಓದಿ: ಅಂಕಣಕಾರ ಖಶೋಗ್ಗಿ ಹತ್ಯೆಯಲ್ಲಿ ಸೌದಿ ರಾಜಕುಮಾರನ ಪಾತ್ರ; ವ್ಯಾಪಕ ಖಂಡನೆ

Published On - 9:07 pm, Sun, 21 March 21

ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ