AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಂಗಾಪುರ ಸಂಸತ್ತಿನಲ್ಲಿ ಜವಾಹರ್​ ಲಾಲ್​ ನೆಹರೂ ಉಲ್ಲೇಖ; ಭಾರತಕ್ಕೆ ಶ್ರೇಷ್ಠ ಮೌಲ್ಯಗಳ ಅಡಿಪಾಯ ಹಾಕಲಾಗಿದೆ ಎಂದ ಪ್ರಧಾನಿ ಲಿ ಸೇನ್​​​​ ಲೂಂಗ್

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮತ್ತು ಅದನ್ನು ಗೆದ್ದ ನಾಯಕರು ಮಹಾನ್ ಧೈರ್ಯಶಾಲಿಗಳಾದ ಅಸಾಧಾರಣ ವ್ಯಕ್ತಿಗಳು. ವಿವಿಧ ದೇಶಗಳಲ್ಲಿ ಇಂಥ ಮಹಾನ್ ನಾಯಕರಿದ್ದಾರೆ ಎಂದು ಲಿ ಸೀನ್​ ಲೂಂಗ್​ ಹೇಳಿದ್ದಾರೆ.

ಸಿಂಗಾಪುರ ಸಂಸತ್ತಿನಲ್ಲಿ ಜವಾಹರ್​ ಲಾಲ್​ ನೆಹರೂ ಉಲ್ಲೇಖ; ಭಾರತಕ್ಕೆ ಶ್ರೇಷ್ಠ ಮೌಲ್ಯಗಳ ಅಡಿಪಾಯ ಹಾಕಲಾಗಿದೆ ಎಂದ ಪ್ರಧಾನಿ ಲಿ ಸೇನ್​​​​ ಲೂಂಗ್
ಸಿಂಗಾಪುರ ಪ್ರಧಾನಿ
TV9 Web
| Edited By: |

Updated on: Feb 17, 2022 | 3:33 PM

Share

ಸಿಂಗಾಪುರ ಪಾರ್ಲಿಮೆಂಟ್​​ನಲ್ಲಿ ಭಾರತದ ಪ್ರಥಮ ಪ್ರಧಾನಿ ಜವಾಹರ್​ ಲಾಲ್​ ನೆಹರೂ ಬಗ್ಗೆ ಮಾತನಾಡಲಾಗಿದೆ. ಜವಾಹರ್ ಲಾಲ್​ ನೆಹರೂ ಅವರ ಪರಂಪರೆಯನ್ನು ಉಲ್ಲೇಖಿಸಿ ಸಂಸತ್ತಿನಲ್ಲಿ ಮಾತನಾಡಿದ್ದು ಬೇರೆ ಯಾರೂ ಅಲ್ಲ, ಸಿಂಗಾಪುರದ ಪ್ರಧಾನಮಂತ್ರಿ ಲಿ ಸೇನ್​​​​ ಲೂಂಗ್(Singapore, Prime Minister Lee Hsien Loong). ಸ್ವತಂತ್ರ ಭಾರತಕ್ಕೆ ಅತ್ಯುನ್ನತ ಆದರ್ಶ ಮತ್ತು ಶ್ರೇಷ್ಠ ಮೌಲ್ಯಗಳ ಅಡಿಪಾಯ ಹಾಕಲಾಗಿದೆ ಎಂದು ಲಿ ಸೇನ್​​​​ ಲೂಂಗ್ ಹೇಳಿದ್ದಾರೆ. ಸಿಂಗಾಪುರ್​ನ ವರ್ಕರ್ಸ್ ಪಾರ್ಟಿಯ ಮಾಜಿ ಸಂಸದೆ ರಯೀಸಾ ಖಾನ್ ಅವರು ಇತ್ತೀಚೆಗೆ ತನ್ನ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ಸಂಸತ್ತಿನಲ್ಲಿ ಹೇಳಿದ್ದರು. ಆದರೆ ಅದು ಕಟ್ಟುಕತೆಯಾಗಿತ್ತು. ನಂತರ ಇದೇ ಎಡವಟ್ಟಿನ ಕಾರಣಕ್ಕೆ ಅವರು ರಾಜೀನಾಮೆಯನ್ನೂ ಕೊಟ್ಟಿದ್ದಾರೆ. ಆದರೆ ರಯೀಸಾ ಖಾನ್​ ಹೇಳಿಕೆಗಳನ್ನು ಪರಿಶೀಲಿಸಿ, ತನಿಖೆ ನಡೆಸುವ ಸಂಬಂಧ ಒಂದು ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿ ಫೆ.10ರಂದು ತನ್ನ ತನಿಖಾ ವರದಿ ನೀಡಿದ್ದು, ಸದ್ಯ ಸಿಂಗಾಪುರ ಸಂಸತ್ತಿನಲ್ಲಿ ಈ ವರದಿ ಮೇಲೆ ಚರ್ಚೆ ನಡೆಯುತ್ತಿದೆ. ಇದೇ ವೇಳೆ ಮಾತನಾಡಿದ ಪ್ರಧಾನಮಂತ್ರಿ  ಭಾರತ ಮತ್ತು ಅದರ ಮೊದಲ ಪ್ರಧಾನಮಂತ್ರಿ ಬಗ್ಗೆ ಉಲ್ಲೇಖಿಸಿದ್ದಾರೆ.

ಭಾರತಕ್ಕೆ ಶ್ರೇಷ್ಠ ಮೌಲ್ಯಗಳು, ಆದರ್ಶಗಳ ಅಡಿಪಾಯ ಹಾಕಲಾಗಿದೆ. ಆದರೂ ಜವಾಹರ್​ ಲಾಲ್​ ನೆಹರೂರವರ ಭಾರತದಲ್ಲಿಯೂ ಕೂಡ ಲೋಕಸಭೆಯಲ್ಲಿ ಅರ್ಧದಷ್ಟು ಸಂಸದರ ವಿರುದ್ಧ ಕ್ರಿಮಿನಲ್​ ಕೇಸ್​ಗಳು, ರೇಪ್​, ಮರ್ಡರ್​ ಕೇಸ್​​ಗಳು ಇವೆ ಎಂದು ಮಾಧ್ಯಮಗಳಲ್ಲಿ ವರದಿ ನೋಡಿದ್ದೇನೆ. ಆದರೆ ಅದರಲ್ಲಿ ಅನೇಕ ಕೇಸ್​ಗಳು ರಾಜಕೀಯ ಪ್ರೇರಿತವಾದದ್ದು ಎಂದೂ ಹೇಳಲಾಗಿದೆ ಎಂದು ಪ್ರಧಾನಿ ಲೂಂಗ್​ ಹೇಳಿದ್ದಾರೆ.  ಅಷ್ಟೇ ಅಲ್ಲ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮತ್ತು ಅದನ್ನು ಗೆದ್ದ ನಾಯಕರು ಮಹಾನ್ ಧೈರ್ಯಶಾಲಿಗಳಾದ ಅಸಾಧಾರಣ ವ್ಯಕ್ತಿಗಳು. ವಿವಿಧ ದೇಶಗಳಲ್ಲಿ ಇಂಥ ಮಹಾನ್ ನಾಯಕರಿದ್ದಾರೆ. ಡೇವಿಡ್​ ಬೆನ್​ ಗುರಿಯನ್ಸ್ ಇರಬಹುದು, ಜವಾಹರ್​ ಲಾಲ್​ ನೆಹರೂ ಇರಬಹುದು. ಹಾಗೇ, ನಮ್ಮ ದೇಶದಲ್ಲೂ ಇದ್ದಾರೆ ಎಂದು ಪ್ರಧಾನಿ ಹೇಳಿದರು. ಈ ಮೂಲಕ ರಾಜಕಾರಣಿಗಳಿಗೆ ಇರಬೇಕಾದ ಮೌಲ್ಯಗಳ ಬಗ್ಗೆ ಮಾತನಾಡಿದರು.

ಇದನ್ನೂ ಓದಿ:Redmi Smart TV X43: ಧೂಳೆಬ್ಬಿಸುತ್ತಿದೆ ನಂಬರ್ ಒನ್ ಸ್ಮಾರ್ಟ್​ ಟಿವಿ ಬ್ರ್ಯಾಂಡ್​ ಶವೋಮಿಯ ರೆಡ್ಮಿ ಸ್ಮಾರ್ಟ್‌ ಟಿವಿ X43: ಇದರ ಬೆಲೆ ಕೇವಲ …

ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್