AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನುಷ್ಯರಿಂದ ನಾಯಿ, ಬೆಕ್ಕುಗಳಿಗೆ ಕೊರೊನಾ ಹರಡುವ ಸಾಧ್ಯತೆ! ಆದರೆ, ಅವುಗಳಿಂದ ಬೇರೆಯವರಿಗೆ ದಾಟುವುದು ಅನುಮಾನ: ಡಚ್ ಅಧ್ಯಯನ

ಐದರಲ್ಲಿ ಒಂದು ಸಾಕುಪ್ರಾಣಿಗೆ ಮನುಷ್ಯರಿಂದ ಸೋಂಕು ದಾಟುವ ಸಾಧ್ಯತೆ ಇದೆ. ಆದರೆ, ಅದೃಷ್ಟವಶಾತ್​ ಪ್ರಾಣಿಗಳಲ್ಲಿ ಅದು ತೀವ್ರವಾಗಿ ಬಾಧಿಸುವುದು ಇಲ್ಲಿಯ ತನಕ ಕಂಡುಬಂದಿಲ್ಲ. ಅಂತೆಯೇ, ಪ್ರಾಣಿಗಳಿಂದ ವಾಪಾಸ್ಸು ಮನುಷ್ಯರಿಗೆ ಸೋಂಕು ಹರಡುವುದು ಕೂಡಾ ಪತ್ತೆಯಾಗಿಲ್ಲ.

ಮನುಷ್ಯರಿಂದ ನಾಯಿ, ಬೆಕ್ಕುಗಳಿಗೆ ಕೊರೊನಾ ಹರಡುವ ಸಾಧ್ಯತೆ! ಆದರೆ, ಅವುಗಳಿಂದ ಬೇರೆಯವರಿಗೆ ದಾಟುವುದು ಅನುಮಾನ: ಡಚ್ ಅಧ್ಯಯನ
ಪ್ರಾಣಿಗಳಿಗೂ ಹರಡಬಹುದು ಕೊರೊನಾ (ಸಾಂಕೇತಿಕ ಚಿತ್ರ)
TV9 Web
| Edited By: |

Updated on:Jul 02, 2021 | 1:40 PM

Share

ಕೊರೊನಾ ಆರಂಭವಾಗಿ, ಜಗತ್ತಿನೆಲ್ಲೆಡೆ ವ್ಯಾಪಿಸಿ ಸುಮಾರು ಒಂದೂವರೆ ವರ್ಷವಾಗಿದೆ. ಒಂದೊಂದು ಕಡೆಯಲ್ಲಿ ಒಂದೊಂದು ತೆರನಾಗಿ ರೂಪಾಂತರಗೊಳ್ಳುತ್ತಿರುವ ಈ ವೈರಾಣುವಿನ ಸ್ವರೂಪದಲ್ಲಿ ಸಾಕಷ್ಟು ಬದಲಾವಣೆಗಳೂ ಆಗಿವೆ. ಆದರೆ, ಇಲ್ಲಿಯ ತನಕ ಕೆಲ ಮೃಗಾಲಯಗಳಲ್ಲಿ ಪ್ರಾಣಿಗಳಿಗೆ ಕೊರೊನಾ ಕಾಣಿಸಿಕೊಂಡಿದೆ ಎಂಬ ಬಗ್ಗೆ ವರದಿಯಾಗಿತ್ತಾದರೂ ಸಾಕು ಪ್ರಾಣಿಗಳಿಗೆ ವೈರಾಣು ತಗಲುವ ಬಗ್ಗೆ ಹೆಚ್ಚು ಆತಂಕವೇನು ಸೃಷ್ಟಿಯಾಗಿರಲಿಲ್ಲ. ಇದೀಗ ಡಚ್​ ತಜ್ಞರೊಬ್ಬರು ಸಿದ್ಧಪಡಿಸಿದ ವರದಿಯನ್ನು ನೋಡಿದರೆ ಕೊರೊನಾ ಸೋಂಕಿತರು ಸಾಕು ಪ್ರಾಣಿಗಳಿಂದ ದೂರ ಇರುವುದು ಒಳಿತು ಎಂಬ ಎಚ್ಚರಿಕೆಯ ಸಂದೇಶ ಕಾಣಿಸುತ್ತಿದೆ. ಅಚ್ಚರಿಯ ಸಂಖ್ಯೆಯಲ್ಲಿ ನಾಯಿ, ಬೆಕ್ಕುಗಳು ಕೊರೊನಾ ಸೋಂಕಿಗೆ ತುತ್ತಾಗಿರುವ ಸಾಧ್ಯತೆಯನ್ನು ಅಧ್ಯಯನದಲ್ಲಿ ವ್ಯಕ್ತಪಡಿಸಲಾಗಿದ್ದು, ಇದು ಹೊಸ ಆತಂಕಕ್ಕೂ ಕಾರಣವಾಗಿದೆ.

ನೆದರ್​ಲ್ಯಾಂಡ್​ನ ಯುಟ್ರೆಕ್ಟ್​ ವಿಶ್ವವಿದ್ಯಾನಿಲಯದ ಡಾ.ಎಲ್ಸ್​ ಬ್ರೋನ್ಸ್​ ಹೇಳುವಂತೆ, ಐದರಲ್ಲಿ ಒಂದು ಸಾಕುಪ್ರಾಣಿಗೆ ಮನುಷ್ಯರಿಂದ ಸೋಂಕು ದಾಟುವ ಸಾಧ್ಯತೆ ಇದೆ. ಆದರೆ, ಅದೃಷ್ಟವಶಾತ್​ ಪ್ರಾಣಿಗಳಲ್ಲಿ ಅದು ತೀವ್ರವಾಗಿ ಬಾಧಿಸುವುದು ಇಲ್ಲಿಯ ತನಕ ಕಂಡುಬಂದಿಲ್ಲ. ಅಂತೆಯೇ, ಪ್ರಾಣಿಗಳಿಂದ ವಾಪಾಸ್ಸು ಮನುಷ್ಯರಿಗೆ ಸೋಂಕು ಹರಡುವುದು ಕೂಡಾ ಪತ್ತೆಯಾಗಿಲ್ಲ.

ಯುರೋಪಿಯನ್​ ಕಾಂಗ್ರೆಸ್​ ಮೈಕ್ರೋಬಯಲಾಜಿ ಮತ್ತು ಇನ್​ಫೆಕ್ಷಿಯಸ್​ ಡಿಸೀಸ್​ನಲ್ಲಿ ಡಾ.ಎಲ್ಸ್​ ಬ್ರೋನ್ಸ್​ ತಮ್ಮ ಅಧ್ಯಯನದ ವರದಿಯನ್ನು ಬಹಿರಂಗಪಡಿಸಿದ್ದಾರೆ. ಸುಮಾರು 196 ಕೊರೊನಾ ಸೋಂಕಿತರ ಮನೆಗಳಿಂದ ನಡೆಸಲಾದ ಈ ಅಧ್ಯಯನದಲ್ಲಿ 156 ನಾಯಿಗಳು ಹಾಗೂ 154 ಬೆಕ್ಕುಗಳು ಕೊರೊನಾ ಸೋಂಕಿಗೆ ತುತ್ತಾಗಿರುವುದು ಕಂಡುಬಂದಿದೆ. ಇನ್ನೊಂದು ಅಚ್ಚರಿಯ ಸಂಗತಿ ಎಂದರೆ ಇವುಗಳಲ್ಲಿ ಶೇ.17ರಷ್ಟು ಪ್ರಾಣಿಗಳು ಅಂದರೆ 31 ಬೆಕ್ಕು ಹಾಗೂ 23 ನಾಯಿಗಳ ದೇಹದಲ್ಲಿ ಕೊರೊನಾ ವೈರಾಣುವಿನ ವಿರುದ್ಧ ಹೋರಾಡುವ ಪ್ರತಿಕಾಯಗಳು ಸೃಷ್ಟಿಯಾಗಿರುವುದೂ ಕಂಡುಬಂದಿದೆ.

ಆ ಪೈಕಿ ಅಧ್ಯಯನ ನಡೆಸುವ ಸಂದರ್ಭಲ್ಲಿ ಶೇ.4.2ರಷ್ಟು ಪ್ರಾಣಿಗಳಲ್ಲಿ ಅಂದರೆ 6 ಬೆಕ್ಕು ಹಾಗೂ 7 ನಾಯಿಗಳಲ್ಲಿ ಸಕ್ರಿಯ ಕೊರೊನಾ ಸೋಂಕು ಇರುವುದು ಪಿಸಿಆರ್​ ಟೆಸ್ಟ್​​ನಿಂದ ದೃಢಪಟ್ಟಿದೆ. ನಂತರದಲ್ಲಿ ಆ ಪ್ರಾಣಿಗಳೂ ಬೇಗನೆ ಗುಣಮುಖವಾಗಿದೆ. ಜತೆಗೆ, ಅದೇ ಮನೆಯಲ್ಲಿದ್ದ ಬೇರೆ ಪ್ರಾಣಿಗಳಿಗೆ ಹರಡಿಯೂ ಇಲ್ಲವೆಂಬುದು ತಿಳಿದುಬಂದಿದೆ. ಆದರೆ, ಗಮನಾರ್ಹ ವಿಚಾರವೆಂದರೆ ಮಿಂಕ್ಸ್​ಗಳಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕು ಮಾತ್ರ ಅವುಗಳಿಂದ ಪುನಃ ಮನುಷ್ಯರಿಗೆ ಹಬ್ಬಿದೆ.

ಡಾ.ಬ್ರೋನ್ಸ್​ ಅವರ ಪ್ರಕಾರ ಮನೆಯ ಸದಸ್ಯರು ಸಾಕು ಪ್ರಾಣಿಗಳೊಂದಿಗೆ ತೀರಾ ನಿಕಟ ಸಂಪರ್ಕ ಹೊಂದಿರುವುದರಿಂದ, ಕೆಲವರು ಅವುಗಳೊಟ್ಟಿಗೇ ಮಲಗುವುದರಿಂದ ಸೋಂಕು ಪ್ರಾಣಿಗಳಿಗೆ ದಾಟಿರಬಹುದು ಎಂದು ಅಂದಾಜಿಸಲಾಗಿದೆ. ಅಂದರೆ, ಸೋಂಕಿತರಾದ ಮೇಲೂ ಪ್ರಾಣಿಗಳೊಟ್ಟಿಗೆ ತೀರಾ ಬೆರೆಯುವುದಕ್ಕಿಂತ ಅವುಗಳ ಹಿತದೃಷ್ಟಿಯಿಂದಲಾದರೂ ಕೊಂಚ ದೂರ ಉಳಿಯುವುದು ಉತ್ತಮ ಎನ್ನಲಾಗಿದೆ.

ಇದನ್ನೂ ಓದಿ: WHO on Delta Variant: ಜಗತ್ತಿನಲ್ಲಿ ಪಾರುಪತ್ಯ ಸಾಧಿಸಲಿದೆ ಡೆಲ್ಟಾ ತಳಿ; ಕೊರೊನಾ ಮಾದರಿಗಳ ಪೈಕಿ ಎಲ್ಲಕ್ಕಿಂತ ತೀವ್ರವಾಗಿ ಬಾಧಿಸಲಿದೆ 

ಕೊರೊನಾ ವೈರಾಣು ರೂಪಾಂತರ ಡೆಲ್ಟಾಕ್ಕೆ ನಿಲ್ಲುವುದಿಲ್ಲ; ಲ್ಯಾಂಬ್ಡಾ, ಕಪ್ಪಾ ಸೇರಿದಂತೆ ಒಟ್ಟು 4 ಮಾದರಿಗಳು ಈಗಾಗಲೇ ಪತ್ತೆ

Published On - 12:11 pm, Fri, 2 July 21

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು