AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಯೋತ್ಪಾದನೆ ನಮ್ಮ ವ್ಯವಸ್ಥೆಯ ಭಾಗವಾಗಿಬಿಟ್ಟಿದೆ, ಅದನ್ನು ಅಳಿಸಿಹಾಕಲು ಒಂದು ಬ್ಲೂಪ್ರಿಂಟ್ ಬೇಕು: ಸಂತೋಷ್ ಲಾಡ್

ಭಯೋತ್ಪಾದನೆ ನಮ್ಮ ವ್ಯವಸ್ಥೆಯ ಭಾಗವಾಗಿಬಿಟ್ಟಿದೆ, ಅದನ್ನು ಅಳಿಸಿಹಾಕಲು ಒಂದು ಬ್ಲೂಪ್ರಿಂಟ್ ಬೇಕು: ಸಂತೋಷ್ ಲಾಡ್

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 24, 2025 | 4:14 PM

ಭಯೋತ್ಪಾದಕರ ಕೃತ್ಯಗಳಿಂದ ಅಮಾಯಕ ಜನ ಸಾಯುತ್ತಿದ್ದಾರೆ, ಆದರೆ ಈ ಕೃತ್ಯಗಳೊಂದಿಗೆ ಸಮುದಾಯಗಳನ್ನು ಥಳುಕು ಹಾಕುವುದು ಬೇಡ ಎನ್ನುವ ಸಚಿವ ಲಾಡ್ ತಾನು ಯಾವುದೇ ಸಮುದಾಯವನ್ನು ಸಮರ್ಥನೆ ಮಾಡುವ ಪ್ರಯತ್ನ ಮಾಡುತ್ತಿಲ್ಲ, ನಡೆದಿರುವುದು ನೀಚ ಕೃತ್ಯವೇ, ಆದರೆ ಜಮ್ಮು ಮತ್ತು ಕಾಶ್ಮೀರದ ಸಂಸ್ಕೃತಿ ಬಹಳ ಅದ್ಭುತವಾಗಿದೆ ಮತ್ತು ಅಲ್ಲಿ ವಾಸ ಮಾಡುವ ಜನ ಬಹಳ ಚೆನ್ನಾಗಿದ್ದಾರೆ ಎಂದರು.

ದೇವನಹಳ್ಳಿ, ಏಪ್ರಿಲ್ 23: ಕಾಶ್ಮೀರದಲ್ಲಿ ಸಿಲುಕಿಕೊಂಡಿದ್ದ 178 ಕನ್ನಡಿಗರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತಂದಿರುವ ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್, ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋಗದಂತೆ ಕರ್ನಾಟಕದ ಜನರಲ್ಲಿ ಮನವಿ ಮಾಡಿಕೊಂಡರು. ಉಗ್ರರ ಕೃತ್ಯದ ಬಳಿಕ ನರೇಂದ್ರ ಮೋದಿ ನೇತೃತ್ವದ ಸರ್ಕಾರ ತೆಗೆದುಕೊಂಡಿರುವ ಎಲ್ಲ ಕ್ರಮಗಳನ್ನ ಸ್ವಾಗತಸಿದ ಅವರು, ತಮ್ಮ ಪಕ್ಷ ಕೇಂದ್ರದೊಂದಿಗಿದೆ ಎಂದರು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಭಯೋತ್ಪಾದಕ ಕೃತ್ಯಗಳು ನಡೆದಿವೆ, ಭಯೋತ್ಪಾದನೆ ನಮ್ಮ ವ್ಯವಸ್ಥೆಯ ಒಂದು ಭಾಗವಾಗಿಬಿಟ್ಟಿದೆ, ಹಾಗಾಗಿ ಇದನ್ನು ಅಳಸಿಹಾಕಲು ಒಂದು ನೀಲಿನಕ್ಷೆಯನ್ನು ರೂಪಿಸಬೇಕಿದೆ ಎಂದು ಲಾಡ್ ಹೇಳಿದರು.

ಇದನ್ನೂ ಓದಿ:  ಪಹಲ್ಗಾಮ್‌ನ ಸ್ಥಳೀಯ ಜನ ತುಂಬಾನೇ ಫ್ರೆಂಡ್ಲಿ ಆಗ್ತಿದ್ರು; ಕಾಶ್ಮೀರ ಪ್ರವಾಸದ ಅನುಭವ ಹಂಚಿಕೊಂಡ ಮಂಗಳೂರಿನ ದಂಪತಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ