ಪಂಬಾಬ್​ನಲ್ಲಿ ನಡೆದ 14 ಸ್ಫೋಟಗಳ ಹಿಂದಿನ ಮಾಸ್ಟರ್​ಮೈಂಡ್ ಹರ್​ಪ್ರೀತ್​ ಸಿಂಗ್ ಅಮೆರಿಕದಲ್ಲಿ ಅರೆಸ್ಟ್​

ಪಂಜಾಬ್​ನಲ್ಲಿ ನಡೆದ 14 ಸ್ಫೋಟ(Blast)ಗಳ ಹಿಂದಿನ ಮಾಸ್ಟರ್​ಮೈಂಡ್​ ಹರ್​ಪ್ರೀತ್ ಸಿಂಗ್​ನನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ. ಅಮೆರಿಕ ಮೂಲದ ಉಗ್ರ ಹರ್‌ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಪಾಸಿಯಾನನ್ನು ಬಂಧಿಸಲಾಗಿದೆ. ಎಫ್‌ಬಿಐ ಮತ್ತು ಯುಎಸ್ ವಲಸೆ ಇಲಾಖೆ ಆತನನ್ನು ತಮ್ಮ ವಶಕ್ಕೆ ತೆಗೆದುಕೊಂಡಿವೆ. ಕಳೆದ ಆರು ತಿಂಗಳಲ್ಲಿ ಪಂಜಾಬ್‌ನಲ್ಲಿ ನಡೆದ 14 ಭಯೋತ್ಪಾದಕ ದಾಳಿಗಳಿಗೆ ಈತ ಕಾರಣ.

ಪಂಬಾಬ್​ನಲ್ಲಿ ನಡೆದ 14 ಸ್ಫೋಟಗಳ ಹಿಂದಿನ ಮಾಸ್ಟರ್​ಮೈಂಡ್ ಹರ್​ಪ್ರೀತ್​ ಸಿಂಗ್ ಅಮೆರಿಕದಲ್ಲಿ ಅರೆಸ್ಟ್​
ಹರ್​ಪ್ರೀತ್ ಸಿಂಗ್

Updated on: Apr 18, 2025 | 10:58 AM

ಪಂಜಾಬ್, ಏಪ್ರಿಲ್ 18: ಪಂಜಾಬ್​ನಲ್ಲಿ ನಡೆದ 14 ಸ್ಫೋಟ(Blast)ಗಳ ಹಿಂದಿನ ಮಾಸ್ಟರ್​ಮೈಂಡ್​ ಹರ್​ಪ್ರೀತ್ ಸಿಂಗ್​ನನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ. ಅಮೆರಿಕ ಮೂಲದ ಉಗ್ರ ಹರ್‌ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಪಾಸಿಯಾನನ್ನು ಬಂಧಿಸಲಾಗಿದೆ. ಎಫ್‌ಬಿಐ ಮತ್ತು ಯುಎಸ್ ವಲಸೆ ಇಲಾಖೆ ಆತನನ್ನು ತಮ್ಮ ವಶಕ್ಕೆ ತೆಗೆದುಕೊಂಡಿವೆ. ಕಳೆದ ಆರು ತಿಂಗಳಲ್ಲಿ ಪಂಜಾಬ್‌ನಲ್ಲಿ ನಡೆದ 14 ಭಯೋತ್ಪಾದಕ ದಾಳಿಗಳಿಗೆ ಈತ ಕಾರಣ.

ಆ ಭಯೋತ್ಪಾದಕ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬ. ಅವನ ಮೇಲೆ 5 ಲಕ್ಷ ರೂಪಾಯಿ ಬಹುಮಾನವಿತ್ತು. ಅವರು ಪ್ರಸ್ತುತ ICE (ವಲಸೆ ಮತ್ತು ಕಸ್ಟಮ್ಸ್ ಜಾರಿ) ವಶದಲ್ಲಿದ್ದಾರೆ. ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‌ಐ ಮತ್ತು ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ ಸಹಯೋಗದೊಂದಿಗೆ ಭಯೋತ್ಪಾದಕ ದಾಳಿಗಳನ್ನು ನಡೆಸಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸಿಂಗ್ ಪಂಜಾಬ್‌ನಲ್ಲಿ ಪೊಲೀಸ್ ಸಂಸ್ಥೆಗಳ ಮೇಲೆ ಹಲವಾರು ಭಯೋತ್ಪಾದಕ ದಾಳಿಗಳನ್ನು ನಡೆಸಿದ್ದಲ್ಲದೆ, ಸಾಮಾಜಿಕ ಮಾಧ್ಯಮದಲ್ಲಿ ಅವುಗಳ ಹೊಣೆ ಹೊತ್ತಿದ್ದ. ಇದಕ್ಕೂ ಮುನ್ನ ಮಾರ್ಚ್ 23 ರಂದು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 2024 ರ ಚಂಡೀಗಢ ಗ್ರೆನೇಡ್ ದಾಳಿ ಪ್ರಕರಣದಲ್ಲಿ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ಭಯೋತ್ಪಾದಕ ಸಂಘಟನೆಯ ನಾಲ್ವರು ಭಯೋತ್ಪಾದಕ ಕಾರ್ಯಕರ್ತರ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು.

ಇದನ್ನೂ ಓದಿ
ಬೆಂಗಳೂರಿನ ಹೋಟೆಲ್​ ಸಪ್ಲೈಯರ್​​ ಬಳಿ ಹ್ಯಾಂಡ್ ಗ್ರೆನೇಡ್ ಪತ್ತೆ!
ರಾಜೌರಿಯಲ್ಲಿ ಪೊಲೀಸ್ ಗಸ್ತು ಪಡೆಯ ವಾಹನದ ಮೇಲೆ ಗ್ರೆನೇಡ್​ ದಾಳಿ
ಅಸ್ಸಾಂ: ತಿನ್ಸುಕಿಯಾದಲ್ಲಿ ಆರ್ಮಿ ಕ್ಯಾಂಪ್ ಹೊರಗೆ ಗ್ರೆನೇಡ್​ ಸ್ಫೋಟ
ಸಂಸತ್ ಭವನದ ಮೇಲೆ ಉಗ್ರರ ದಾಳಿ ನಡೆದು 21 ವರ್ಷ; ಭಾರತ-ಪಾಕ್ ಸಂಬಂಧ ಈಗ ಹೇಗಿದೆ?

ಮತ್ತಷ್ಟು ಓದಿ: ಅಮೃತಸರ ದೇವಾಲಯದ ಮೇಲಿನ ಗ್ರೆನೇಡ್ ದಾಳಿ ಸಿಸಿಟಿವಿಯಲ್ಲಿ ಸೆರೆ; ಪಾಕಿಸ್ತಾನದ ನಂಟಿನ ಶಂಕೆ

ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂಡಾ ಮತ್ತು ಅಮೆರಿಕ ಮೂಲದ ಹರ್ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಪಾಸಿಯಾ ಹೆಸರೂ ಇದೆ. ಗ್ರೆನೇಡ್ ದಾಳಿ ನಡೆಸಲು ಅವರು ಚಂಡೀಗಢದಲ್ಲಿರುವ ಭಾರತದಲ್ಲಿರುವ ಉಗ್ರರಿಗೆ ಲಾಜಿಸ್ಟಿಕ್, ಭಯೋತ್ಪಾದಕ ನಿಧಿ, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಒದಗಿಸಿದ್ದ.

ಸೆಪ್ಟೆಂಬರ್​ನಲ್ಲಿ ನಡೆದ ದಾಳಿಯು ನಿವೃತ್ತ ಪಂಜಾಬ್ ಪೊಲೀಸ್ ಅಧಿಕಾರಿಯನ್ನು ಗುರಿಯಾಗಿಸಿಕೊಂಡು ನಡೆಸಲಾಗಿತ್ತು. ಗ್ರೆನೇಡ್ ದಾಳಿಯ ಮೂಲಕ ಕಾನೂನು ಜಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರಲ್ಲಿ ಭಯವನ್ನು ಹರಡಲು ರಿಂಡಾ, ಸಿಂಗ್ ಜೊತೆಗೂಡಿ ಸಂಚು ರೂಪಿಸಿದ್ದ. ಬಿಕೆಐನ ಭಯೋತ್ಪಾದಕ ಕಾರ್ಯಸೂಚಿಯನ್ನು ಉತ್ತೇಜಿಸುವುದು ಅವನ ಗುರಿಯಾಗಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:58 am, Fri, 18 April 25