AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಥಾಯ್ಲೆಂಡ್‌ನ ಶಾಲೆಯಲ್ಲಿ ಗುಂಡಿನ ದಾಳಿ; ಶಿಕ್ಷಕರು, ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿಟ್ಟುಕೊಂಡ ಗನ್ ಮ್ಯಾನ್

ಥೈಲ್ಯಾಂಡ್​​ನಲ್ಲಿ ಬಂದೂಕುಧಾರಿಯೊಬ್ಬ ಶಾಲೆಗೆ ನುಗ್ಗಿ ಆ ಶಾಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದು, ಒಂದು ಮಗು ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. 3 ಜನರಿಗೆ ಗಾಯವಾಗಿದೆ ಎನ್ನಲಾಗಿದೆ. ಆದರೆ, ಆತ ಯಾವ ಕಾರಣಕ್ಕೆ ಮಕ್ಕಳನ್ನು ಟಾರ್ಗೆಟ್ ಮಾಡಿದ್ದಾನೆ ಎಂಬುದು ಬಯಲಾಗಿಲ್ಲ. ಬುಧವಾರ ಥೈಲ್ಯಾಂಡ್‌ನ ಶಾಲೆಯೊಂದರಲ್ಲಿ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ ಪರಿಣಾಮ ಶಾಲಾ ನಿರ್ದೇಶಕರೊಬ್ಬರು ಸಾವನ್ನಪ್ಪಿದ್ದು, ವಿದ್ಯಾರ್ಥಿ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ. ಅಧಿಕಾರಿಗಳ ಪ್ರಕಾರ, ಈ ಘಟನೆಯಲ್ಲಿ 18 ವರ್ಷದ ಯುವಕ ಗುಂಡಿನ ದಾಳಿ ನಡೆಸಿದ್ದು, ಆತನನ್ನು ಬಂಧಿಸಲಾಗಿದೆ.

ಥಾಯ್ಲೆಂಡ್‌ನ ಶಾಲೆಯಲ್ಲಿ ಗುಂಡಿನ ದಾಳಿ; ಶಿಕ್ಷಕರು, ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿಟ್ಟುಕೊಂಡ ಗನ್ ಮ್ಯಾನ್
Thailand Firing
ಸುಷ್ಮಾ ಚಕ್ರೆ
|

Updated on: Feb 11, 2026 | 7:34 PM

Share

ಬ್ಯಾಂಕಾಕ್, ಫೆಬ್ರವರಿ 11: ಇಂದು ಮಧ್ಯಾಹ್ನ ದಕ್ಷಿಣ ಥೈಲ್ಯಾಂಡ್‌ನ (Thailand) ಶಾಲೆಯಲ್ಲಿ 18 ವರ್ಷದ ಬಂದೂಕುಧಾರಿಯೊಬ್ಬ ಮೆಷಿನ್ ಗನ್‌ನೊಂದಿಗೆ ಕ್ಯಾಂಪಸ್‌ಗೆ ನುಗ್ಗಿ ಶಾಲಾ ಪ್ರಾಂಶುಪಾಲರನ್ನು ಗಾಯಗೊಳಿಸಿ, ಶಿಕ್ಷಕರು ಮತ್ತು ಮಕ್ಕಳನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡ ನಂತರ ಭಯಾನಕ ಘಟನೆ ನಡೆದಿದೆ. ಮಲೇಷ್ಯಾ ಗಡಿಯ ಸಮೀಪವಿರುವ ಹ್ಯಾಟ್ ಯೈ ಜಿಲ್ಲೆಯ ಪಟೋಂಗ್ ಪ್ರಥಾನ್ ಕಿರಿವತ್ ಶಾಲೆಯಲ್ಲಿ ತರಗತಿ ಮುಗಿದ ಸ್ವಲ್ಪ ಸಮಯದ ನಂತರ ಈ ದಾಳಿ ಪ್ರಾರಂಭವಾಯಿತು.

ಮೆಷಿನ್ ಗನ್ ಹಿಡಿದಿದ್ದ ವ್ಯಕ್ತಿಯೊಬ್ಬ ಮೈದಾನದಲ್ಲಿ ನಡೆದುಕೊಂಡು ಬರುವಾಗ ಗುಂಡು ಹಾರಿಸುತ್ತಿದ್ದ. ಇದನ್ನು ಕಂಡ ವಿದ್ಯಾರ್ಥಿಗಳು ಕಂಗಾಲಾಗಿ ಹೊರಗೆ ಓಡಿದ್ದಾರೆ. ಕೆಲವರು ಆತನ ಕೈಗೆ ಸಿಕ್ಕಿಬಿದ್ದಿದ್ದಾರೆ. ಆರಂಭದಲ್ಲಿ ಆತ ಶಾಲೆಯ ಮುಖ್ಯೋಪಾಧ್ಯಾಯರಿಗೆ ಗುಂಡು ಹಾರಿಸಿದ. ಭದ್ರತಾ ಸಿಬ್ಬಂದಿಯ ಹೊಟ್ಟೆಗೂ ಶೂಟ್ ಮಾಡಿದ್ದ. ನಂತರ ಆತ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಒತ್ತೆಯಾಳಾಗಿಟ್ಟುಕೊಂಡಿದ್ದಾನೆ.

ಸಾಂಗ್ಖ್ಲಾ ಪ್ರಾಂತ್ಯದ ಶಾಲೆಯ ಮೇಲೆ ಬಂದೂಕುಧಾರಿ ಹಲವು ಗುಂಡುಗಳನ್ನು ಹಾರಿಸಿ ಹಲವಾರು ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದ. ಕೊನೆಗೂ ಆತನನ್ನು ಬಂಧಿಸಿದ ಪೊಲೀಸರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಅರ್ಧಶತಕದಂಚಿನಲ್ಲಿ ಎಡವಿದ ವೈಭವ್ ಸೂರ್ಯವಂಶಿ
ಅರ್ಧಶತಕದಂಚಿನಲ್ಲಿ ಎಡವಿದ ವೈಭವ್ ಸೂರ್ಯವಂಶಿ
ಟೇಕ್ ಆಫ್ ಆಗುವಷ್ಟರಲ್ಲೇ ಪ್ರಯಾಣಿಕ ಅಸ್ವಸ್ಥ: ಮಾನವೀಯತೆಗೆ ಸಾಕ್ಷಿಯಾದ ಫ್ಲ
ಟೇಕ್ ಆಫ್ ಆಗುವಷ್ಟರಲ್ಲೇ ಪ್ರಯಾಣಿಕ ಅಸ್ವಸ್ಥ: ಮಾನವೀಯತೆಗೆ ಸಾಕ್ಷಿಯಾದ ಫ್ಲ
ಸುಟ್ಟಘಟ್ಟ ಗ್ರಾಮದ ತೋಟದಲ್ಲಿ ಪ್ರತ್ಯಕ್ಷವಾಯಿತು ಕಾಡಾನೆಗಳ ಹಿಂಡು!
ಸುಟ್ಟಘಟ್ಟ ಗ್ರಾಮದ ತೋಟದಲ್ಲಿ ಪ್ರತ್ಯಕ್ಷವಾಯಿತು ಕಾಡಾನೆಗಳ ಹಿಂಡು!
ಸಚಿವ ಜಮೀರ್‌ ಅಹ್ಮದ್‌ JDS ಕಡೆಗೆ? ಸ್ಪಷ್ಟನೆ ಕೊಟ್ಟ ಕುಮಾರಸ್ವಾಮಿ
ಸಚಿವ ಜಮೀರ್‌ ಅಹ್ಮದ್‌ JDS ಕಡೆಗೆ? ಸ್ಪಷ್ಟನೆ ಕೊಟ್ಟ ಕುಮಾರಸ್ವಾಮಿ
ಮೇ 5ರ ನಂತರ ರಾಜಕೀಯದಲ್ಲಿ ಏನೇನಾಗುತ್ತೆ ನೀವೇ ನೋಡಿ: HDK ಹೊಸ ಬಾಂಬ್
ಮೇ 5ರ ನಂತರ ರಾಜಕೀಯದಲ್ಲಿ ಏನೇನಾಗುತ್ತೆ ನೀವೇ ನೋಡಿ: HDK ಹೊಸ ಬಾಂಬ್
ಸಿಲಿಂಡರ್ ಸ್ಫೋಟಕ್ಕೆ ಮನೆ ಧಗಧಗ, 3 ಲಕ್ಷ ನಗದು ಸೇರಿ ಚಿನ್ನಾಭರಣ ಭಸ್ಮ!
ಸಿಲಿಂಡರ್ ಸ್ಫೋಟಕ್ಕೆ ಮನೆ ಧಗಧಗ, 3 ಲಕ್ಷ ನಗದು ಸೇರಿ ಚಿನ್ನಾಭರಣ ಭಸ್ಮ!
ಲಕ್ಷ ಲಕ್ಷ ಖರ್ಚು ಮಾಡಿ ಬೆಳೆದ ಗುಲಾಬಿ ಈರುಳ್ಳಿಯನ್ನು ಕೇಳೋರೆ ಇಲ್ಲ!
ಲಕ್ಷ ಲಕ್ಷ ಖರ್ಚು ಮಾಡಿ ಬೆಳೆದ ಗುಲಾಬಿ ಈರುಳ್ಳಿಯನ್ನು ಕೇಳೋರೆ ಇಲ್ಲ!
CSK ಫ್ಯಾನ್ಸ್​ನ ಸೈಲೆಂಟ್ ಮಾಡಿದ್ದೇವೆ... ಕಾವ್ಯ ಮಾರನ್ ವಿಡಿಯೋ ವೈರಲ್
CSK ಫ್ಯಾನ್ಸ್​ನ ಸೈಲೆಂಟ್ ಮಾಡಿದ್ದೇವೆ... ಕಾವ್ಯ ಮಾರನ್ ವಿಡಿಯೋ ವೈರಲ್
ಬೆಳ್ಳಂ ಬೆಳಿಗ್ಗೆ ರೌಡಿಶೀಟರ್‌ಗಳ ಬೆವರಿಳಿಸಿದ ಕೆಜಿಎಫ್​​ ಪೊಲೀಸರು
ಬೆಳ್ಳಂ ಬೆಳಿಗ್ಗೆ ರೌಡಿಶೀಟರ್‌ಗಳ ಬೆವರಿಳಿಸಿದ ಕೆಜಿಎಫ್​​ ಪೊಲೀಸರು
ಬಲಮುರಿ-ಎಡಮುರಿಗೆ ಪ್ರವಾಸಿಗರಿಗೆ ನಿರ್ಬಂಧ: ಕಾರಣ ಇಲ್ಲಿದೆ
ಬಲಮುರಿ-ಎಡಮುರಿಗೆ ಪ್ರವಾಸಿಗರಿಗೆ ನಿರ್ಬಂಧ: ಕಾರಣ ಇಲ್ಲಿದೆ