AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾನ್ಸರ್​ ರೋಗಿಗಳಿಗೆ ಕೂದಲು ದಾನ ಮಾಡಿದ ಎರಡು ವರ್ಷದ ಬಾಲಕ!

ಫ್ರೆಂಡ್ಸ್​ ಆಫ್​ ಕ್ಯಾನ್ಸರ್​ ಪೇಷಂಟ್​ ಹೆಸರಿನ ಚ್ಯಾರಿಟಿ ಕೂದಲು ದಾನ ಮಾಡಿ ಎನ್ನುವ ಆಂದೋಲನ ಆರಂಭಿಸಿತ್ತು. ಈ ಆಂದೋಲನಕ್ಕೆ ತಕ್ಷ್​ ಕೂಡ ಬೆಂಬಲ ಸೂಚಿಸಿದ್ದಾನೆ.

ಕ್ಯಾನ್ಸರ್​ ರೋಗಿಗಳಿಗೆ ಕೂದಲು ದಾನ ಮಾಡಿದ ಎರಡು ವರ್ಷದ ಬಾಲಕ!
ಸಾಂದರ್ಭಿಕ ಚಿತ್ರ
ರಾಜೇಶ್ ದುಗ್ಗುಮನೆ
| Edited By: |

Updated on: Feb 05, 2021 | 8:15 PM

Share

ದುಬೈ: ಭಾರತ ಮೂಲದ ಎರಡು ವರ್ಷದ ಬಾಲಕ ಯುಎಇನಲ್ಲಿ ಕ್ಯಾನ್ಸರ್​ ರೋಗಿಗಳಿಗೆ ಕೂದಲನ್ನು ದಾನ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾನೆ. ಅಷ್ಟೇ ಅಲ್ಲ, ಕ್ಯಾನರ್​ ರೋಗಿಗೆ ಕೂದಲು ನೀಡಿದ ಅತಿ ಸಣ್ಣ ವಯಸ್ಸಿನ ಹುಡುಗ ಈತ ಎನ್ನುವ ಖ್ಯಾತಿಗೆ ಪಾತ್ರನಾಗಿದ್ದಾನೆ.

ಭಾರತ ಮೂಲದ ತಕ್ಷ್​ ಜೈನ್​ ಕೂದಲು ದಾನ ಮಾಡಿದ ಬಾಲಕ. ಈತನ ವಯಸ್ಸು ಕೇವಲ 2 ವರ್ಷದ ಹತ್ತು ತಿಂಗಳು. ಫ್ರೆಂಡ್ಸ್​ ಆಫ್​ ಕ್ಯಾನ್ಸರ್​ ಪೇಷಂಟ್​ ಹೆಸರಿನ ಚ್ಯಾರಿಟಿ ಕೂದಲು ದಾನ ಮಾಡಿ ಎನ್ನುವ ಆಂದೋಲನ ಆರಂಭಿಸಿತ್ತು. ಈ ಆಂದೋಲನಕ್ಕೆ ತಕ್ಷ್​ ಕೂಡ ಬೆಂಬಲ ಸೂಚಿಸಿದ್ದಾನೆ.

ನನ್ನ ಮಗಳು 2019ರಲ್ಲಿ ಕ್ಯಾನ್ಸರ್​ ರೋಗಿಗಳಿಗೆ ಕೂದಲು ನೀಡಿದ್ದಳು. ಇದನ್ನು ನೋಡಿ ತಕ್ಷ್​ ಸ್ಫೂರ್ತಿ ಪಡೆದುಕೊಂಡಿದ್ದ. ಆತ ಸದಾ ಕೂದಲು ದಾನ ನೀಡಬೇಕು ಎಂದು ಹೇಳಿಕೊಳ್ಳುತ್ತಿದ್ದ. ಇದು ನನಗೆ ತುಂಬಾ ಖುಷಿ ನೀಡಿತ್ತು. ಹೀಗಾಗಿ, ಆತನ ತಲೆ ಕೂದಲನ್ನು ಬೆಳೆಯಲು ಬಿಟ್ಟಿದ್ದೆ ಎಂದು ಹೇಳಿದ್ದಾರೆ ತಕ್ಷ್​ನ ತಾಯಿ.

ಗುರುವಾರ ಫ್ರೆಂಡ್ಸ್​ ಆಫ್​ ಕ್ಯಾನ್ಸರ್​ ಪೇಷಂಟ್ ಚ್ಯಾರಿಟಿ ಕೂದಲು ದಾನ ಮಾಡಿ ಎನ್ನುವ ಆಂದೋಲನ ಆರಂಭಿಸಿತ್ತು. ಯುಎಇನ ಒಟ್ಟು 7 ಶಾಲೆಗಳು ಇದರ ಭಾಗವಾಗಿದೆ. ತಕ್ಷ್​ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇವರ ಕೆಲಸದಿಂದ ಸ್ಫೂರ್ತಿ ಪಡೆದ ಅನೇಕರು ಕೂದಲು ದಾನ ಮಾಡಲು ಮುಂದೆ ಬಂದಿದ್ದಾರೆ.

World Cancer Day 2021 ‘ಕ್ಯಾನ್ಸರ್ ಬಂದಾಕ್ಷಣ ಹೆದರಬೇಡ್ರಿ’- ಖ್ಯಾತ ಕ್ಯಾನ್ಸರ್​ ತಜ್ಞೆ ಡಾ.ವಿಜಯಲಕ್ಷ್ಮೀ ದೇಶಮಾನೆ

ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?
ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು