AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿಯ ದೀಪಗಳು ಕತ್ತಲೆಯನ್ನು ಓಡಿಸಿ ನಿರೀಕ್ಷೆಯ ಬೆಳಕನ್ನು ಮೂಡಿಸಲಿ: ಜಾನ್ಸನ್ | UK PM wishes British Hindus Jains and Sikhs on Deepavali

ಯುನೈಟಿಡ್ ಕಿಂಗ್​ಡಮ್ ಪ್ರಧಾನ ಮಂತ್ರಿ ಬೊರಿಸ್ ಜಾನ್ಸನ್, ಬ್ರಿಟಿಷ್ ಹಿಂದೂಗಳು, ಸಿಕ್ಖರು ಮತ್ತು ಜೈನರಿಗೆ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ವಿಡಿಯೊವೊಂದನ್ನು ಬಿಡುಗಡೆ ಮಾಡಿರುವ ಅವರು, ಕೊವಿಡ್-19 ಪ್ಯಾಂಡಿಮಿಕ್​ನ ಸಂಕಷ್ಟದ ಸಮಯದಲ್ಲಿ ಭಾರತೀಯ ಮೂಲದ ಬ್ರಿಟನ್​ಗಳು ಜನರಿಗೆ ಮಾಡಿರುವ ಸಹಾಯವನ್ನು ಮನಸಾರೆ ಕೊಂಡಾಡಿದ್ದಾರೆ. ‘ಈ ಪಿಡುಗನ್ನು ನಾವು ಮಟ್ಟಹಾಕುತ್ತೇವೆ’ ಎಂದು ಅವರು ಅದೇ ವಿಡಿಯೊದಲ್ಲಿ ಹೇಳಿದ್ದಾರೆ. ‘‘ನಮಸ್ತೆ ಮತ್ತು ಹ್ಯಾಪಿ ದೀಪಾವಳಿ, ಎಲ್ಲರಿಗೂ ದೀಪಾವಳಿ ಹಬ್ಬದ ಶುಭಕಾಮನೆಗಳು. ಈ ಸುಂದರವಾದ, ಸಂತಸಮಯ ದೀಪಾವಳಿ ಹಬ್ಬದ ಪ್ರಯುಕ್ತ, […]

ದೀಪಾವಳಿಯ ದೀಪಗಳು ಕತ್ತಲೆಯನ್ನು ಓಡಿಸಿ ನಿರೀಕ್ಷೆಯ ಬೆಳಕನ್ನು ಮೂಡಿಸಲಿ: ಜಾನ್ಸನ್ | UK PM wishes British Hindus Jains and Sikhs on Deepavali
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Nov 14, 2020 | 7:48 PM

Share

ಯುನೈಟಿಡ್ ಕಿಂಗ್​ಡಮ್ ಪ್ರಧಾನ ಮಂತ್ರಿ ಬೊರಿಸ್ ಜಾನ್ಸನ್, ಬ್ರಿಟಿಷ್ ಹಿಂದೂಗಳು, ಸಿಕ್ಖರು ಮತ್ತು ಜೈನರಿಗೆ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ವಿಡಿಯೊವೊಂದನ್ನು ಬಿಡುಗಡೆ ಮಾಡಿರುವ ಅವರು, ಕೊವಿಡ್-19 ಪ್ಯಾಂಡಿಮಿಕ್​ನ ಸಂಕಷ್ಟದ ಸಮಯದಲ್ಲಿ ಭಾರತೀಯ ಮೂಲದ ಬ್ರಿಟನ್​ಗಳು ಜನರಿಗೆ ಮಾಡಿರುವ ಸಹಾಯವನ್ನು ಮನಸಾರೆ ಕೊಂಡಾಡಿದ್ದಾರೆ. ‘ಈ ಪಿಡುಗನ್ನು ನಾವು ಮಟ್ಟಹಾಕುತ್ತೇವೆ’ ಎಂದು ಅವರು ಅದೇ ವಿಡಿಯೊದಲ್ಲಿ ಹೇಳಿದ್ದಾರೆ.

‘‘ನಮಸ್ತೆ ಮತ್ತು ಹ್ಯಾಪಿ ದೀಪಾವಳಿ, ಎಲ್ಲರಿಗೂ ದೀಪಾವಳಿ ಹಬ್ಬದ ಶುಭಕಾಮನೆಗಳು. ಈ ಸುಂದರವಾದ, ಸಂತಸಮಯ ದೀಪಾವಳಿ ಹಬ್ಬದ ಪ್ರಯುಕ್ತ, ಲಕ್ಷಾಂತರ ದೀಪಗಳನ್ನು ಇಲ್ಲಿ ಮತ್ತೆ ಬೆಳಗಿಸಲಾಗಿದೆ. ಈ ವರ್ಷದ ಆಚರಣೆ ಭಿನ್ನವಾಗಿದೆ ಅಂತ ನನಗೆ ಗೊತ್ತಿದೆ. ದೇಶದಾದ್ಯಂತ ಜನರು ಮಾಡುತ್ತಿರುವ ತ್ಯಾಗಗಳ ಬಗ್ಗೆ ನನಗೆ ಗೊತ್ತಿದೆ. ಎಲ್ಲರ ಬದುಕು ನಿಂತಂತಾಗಿಬಿಟ್ಟಿದೆ. ನಿಮ್ಮ ಕೆಲಸಗಳು, ವ್ಯಾಪಾರದ ಮೇಲೆ ಭಾರಿ ಪರಿಣಾಮ ಬಿದ್ದಿರುವ ಸಂಗತಿಯನ್ನೂ ನಾನು ಬಲ್ಲೆ. ಆದರೆ ಈ ಮಹಾಮಾರಿ ಅಟ್ಟಹಾಸಗೈಯುತ್ತಿರುವ ಸಮಯದಲ್ಲಿ, ಬ್ರಿಟಿಷ್ ಹಿಂದೂಗಳು, ಸಿಕ್ಖರು ಮತ್ತು ಜೈನ್ ಸಮುದಾಯದವರು ತಮ್ಮ ಶಕ್ತಿ ಮೀರಿ ಜನರಿಗೆ ಸಹಾಯ ಮಾಡುತ್ತಿರುವುದನ್ನು ಕಂಡು ನನ್ನ ಹೃದಯ ತುಂಬಿಬಂದಿದೆ ಮತ್ತು ಅವರೆಡೆಗಿರುವ ಆದರ ಇನ್ನೂ ಹೆಚ್ಚಾಗಿದೆ. ಈ ದೀಪಾವಳಿ ಹಬ್ಬದಂದು ಬೆಳಗಿಸಲಾಗುವ ಲಕ್ಷಾಂತರ ದೀಪಗಳು ವಿಶ್ವದಾದ್ಯಂತ ಕತ್ತಲೆಯನ್ನು ಹೊಡೆದೋಡಿಸಿ, ಉಜ್ವಲ ಭವಿಷ್ಯದ ಬೆಳಕಿನ ಕಿರಣಗಳನ್ನು ಮೂಡಿಸುತ್ತವೆ ಎಂಬ ನಂಬಿಕೆ ನನ್ನಲ್ಲಿದೆ,’’ ಎಂದು ಜಾನ್ಸನ್ ಟ್ವೀಟ್ ಮಾಡಿದ್ದಾರೆ.

Follow Us
1800 ಕಿ.ಮೀ ಸೈಕಲ್ ಜರ್ನಿ; ಅಭಿಮಾನಿಯ ಅಭಿಮಾನಕ್ಕೆ ಹಾರ್ದಿಕ್ ಫಿದಾ
1800 ಕಿ.ಮೀ ಸೈಕಲ್ ಜರ್ನಿ; ಅಭಿಮಾನಿಯ ಅಭಿಮಾನಕ್ಕೆ ಹಾರ್ದಿಕ್ ಫಿದಾ
ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿ ಡಿಕೆಶಿ ಹೇಳಿದ್ದೇನು?
ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿ ಡಿಕೆಶಿ ಹೇಳಿದ್ದೇನು?
ಮಳೆಯಿಂದ ಅಪಾಯದ ಮಟ್ಟ ತಲುಪಿದ ಅಲಕಾನಂದ ನದಿ; ರುದ್ರಪ್ರಯಾಗದಲ್ಲಿ ಹೈ ಅಲರ್ಟ್
ಮಳೆಯಿಂದ ಅಪಾಯದ ಮಟ್ಟ ತಲುಪಿದ ಅಲಕಾನಂದ ನದಿ; ರುದ್ರಪ್ರಯಾಗದಲ್ಲಿ ಹೈ ಅಲರ್ಟ್
ನಟಿ ರಚಿತಾ ರಾಮ್ ನೋಡಲು ಮುಗಿಬಿದ್ದ ಫ್ಯಾನ್ಸ್; ಎಂಥಾ ಕ್ರೇಜ್ ನೋಡಿ..
ನಟಿ ರಚಿತಾ ರಾಮ್ ನೋಡಲು ಮುಗಿಬಿದ್ದ ಫ್ಯಾನ್ಸ್; ಎಂಥಾ ಕ್ರೇಜ್ ನೋಡಿ..
ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆಶಿ ಘೋಷಣೆ
ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆಶಿ ಘೋಷಣೆ
ಕಾಟನ್ ಪೇಟೆಯಲ್ಲಿ ವಾಲಿದ 2 ಅಂತಸ್ತಿನ ಕಟ್ಟಡ, ಅಕ್ಕಪಕ್ಕದವರಿಗೆ ಆತಂಕ
ಕಾಟನ್ ಪೇಟೆಯಲ್ಲಿ ವಾಲಿದ 2 ಅಂತಸ್ತಿನ ಕಟ್ಟಡ, ಅಕ್ಕಪಕ್ಕದವರಿಗೆ ಆತಂಕ
ಹುಟ್ಟುಹಬ್ಬದ ದಿನ ತಿರುಪತಿಗೆ ಭೇಟಿ ನೀಡಿದ ನಟ ‘ಗೋಲ್ಡನ್ ಸ್ಟಾರ್’ ಗಣೇಶ್
ಹುಟ್ಟುಹಬ್ಬದ ದಿನ ತಿರುಪತಿಗೆ ಭೇಟಿ ನೀಡಿದ ನಟ ‘ಗೋಲ್ಡನ್ ಸ್ಟಾರ್’ ಗಣೇಶ್
SIR​ ಪ್ರಕ್ರಿಯೆ: ಬಾಂಗ್ಲಾದಿಂದ ಬಂದವರ ಪೋಷಣೆ, ಕುಮಾರಸ್ವಾಮಿ ಗಂಭೀರ ಆರೋಪ
SIR​ ಪ್ರಕ್ರಿಯೆ: ಬಾಂಗ್ಲಾದಿಂದ ಬಂದವರ ಪೋಷಣೆ, ಕುಮಾರಸ್ವಾಮಿ ಗಂಭೀರ ಆರೋಪ
’ನನ್ನ ತಂಗಿ’; ಭಾರತಕ್ಕೆ ಬಂದಿರುವ ಜಪಾನ್ ಪ್ರಧಾನಿ ತಕೈಚಿಗೆ ಮೋದಿ ಮೆಚ್ಚುಗೆ
’ನನ್ನ ತಂಗಿ’; ಭಾರತಕ್ಕೆ ಬಂದಿರುವ ಜಪಾನ್ ಪ್ರಧಾನಿ ತಕೈಚಿಗೆ ಮೋದಿ ಮೆಚ್ಚುಗೆ
ಗ್ಯಾರಂಟಿ ಪರಿಷ್ಕರಣೆ ಹೆಸರಲ್ಲಿ ಚುನಾವಣೆಗೆ ಮಾಹಿತಿ ಸಂಗ್ರಹ: ಕುಮಾರಸ್ವಾಮಿ
ಗ್ಯಾರಂಟಿ ಪರಿಷ್ಕರಣೆ ಹೆಸರಲ್ಲಿ ಚುನಾವಣೆಗೆ ಮಾಹಿತಿ ಸಂಗ್ರಹ: ಕುಮಾರಸ್ವಾಮಿ