AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿಯ ದೀಪಗಳು ಕತ್ತಲೆಯನ್ನು ಓಡಿಸಿ ನಿರೀಕ್ಷೆಯ ಬೆಳಕನ್ನು ಮೂಡಿಸಲಿ: ಜಾನ್ಸನ್ | UK PM wishes British Hindus Jains and Sikhs on Deepavali

ಯುನೈಟಿಡ್ ಕಿಂಗ್​ಡಮ್ ಪ್ರಧಾನ ಮಂತ್ರಿ ಬೊರಿಸ್ ಜಾನ್ಸನ್, ಬ್ರಿಟಿಷ್ ಹಿಂದೂಗಳು, ಸಿಕ್ಖರು ಮತ್ತು ಜೈನರಿಗೆ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ವಿಡಿಯೊವೊಂದನ್ನು ಬಿಡುಗಡೆ ಮಾಡಿರುವ ಅವರು, ಕೊವಿಡ್-19 ಪ್ಯಾಂಡಿಮಿಕ್​ನ ಸಂಕಷ್ಟದ ಸಮಯದಲ್ಲಿ ಭಾರತೀಯ ಮೂಲದ ಬ್ರಿಟನ್​ಗಳು ಜನರಿಗೆ ಮಾಡಿರುವ ಸಹಾಯವನ್ನು ಮನಸಾರೆ ಕೊಂಡಾಡಿದ್ದಾರೆ. ‘ಈ ಪಿಡುಗನ್ನು ನಾವು ಮಟ್ಟಹಾಕುತ್ತೇವೆ’ ಎಂದು ಅವರು ಅದೇ ವಿಡಿಯೊದಲ್ಲಿ ಹೇಳಿದ್ದಾರೆ. ‘‘ನಮಸ್ತೆ ಮತ್ತು ಹ್ಯಾಪಿ ದೀಪಾವಳಿ, ಎಲ್ಲರಿಗೂ ದೀಪಾವಳಿ ಹಬ್ಬದ ಶುಭಕಾಮನೆಗಳು. ಈ ಸುಂದರವಾದ, ಸಂತಸಮಯ ದೀಪಾವಳಿ ಹಬ್ಬದ ಪ್ರಯುಕ್ತ, […]

ದೀಪಾವಳಿಯ ದೀಪಗಳು ಕತ್ತಲೆಯನ್ನು ಓಡಿಸಿ ನಿರೀಕ್ಷೆಯ ಬೆಳಕನ್ನು ಮೂಡಿಸಲಿ: ಜಾನ್ಸನ್ | UK PM wishes British Hindus Jains and Sikhs on Deepavali
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 14, 2020 | 7:48 PM

Share

ಯುನೈಟಿಡ್ ಕಿಂಗ್​ಡಮ್ ಪ್ರಧಾನ ಮಂತ್ರಿ ಬೊರಿಸ್ ಜಾನ್ಸನ್, ಬ್ರಿಟಿಷ್ ಹಿಂದೂಗಳು, ಸಿಕ್ಖರು ಮತ್ತು ಜೈನರಿಗೆ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ವಿಡಿಯೊವೊಂದನ್ನು ಬಿಡುಗಡೆ ಮಾಡಿರುವ ಅವರು, ಕೊವಿಡ್-19 ಪ್ಯಾಂಡಿಮಿಕ್​ನ ಸಂಕಷ್ಟದ ಸಮಯದಲ್ಲಿ ಭಾರತೀಯ ಮೂಲದ ಬ್ರಿಟನ್​ಗಳು ಜನರಿಗೆ ಮಾಡಿರುವ ಸಹಾಯವನ್ನು ಮನಸಾರೆ ಕೊಂಡಾಡಿದ್ದಾರೆ. ‘ಈ ಪಿಡುಗನ್ನು ನಾವು ಮಟ್ಟಹಾಕುತ್ತೇವೆ’ ಎಂದು ಅವರು ಅದೇ ವಿಡಿಯೊದಲ್ಲಿ ಹೇಳಿದ್ದಾರೆ.

‘‘ನಮಸ್ತೆ ಮತ್ತು ಹ್ಯಾಪಿ ದೀಪಾವಳಿ, ಎಲ್ಲರಿಗೂ ದೀಪಾವಳಿ ಹಬ್ಬದ ಶುಭಕಾಮನೆಗಳು. ಈ ಸುಂದರವಾದ, ಸಂತಸಮಯ ದೀಪಾವಳಿ ಹಬ್ಬದ ಪ್ರಯುಕ್ತ, ಲಕ್ಷಾಂತರ ದೀಪಗಳನ್ನು ಇಲ್ಲಿ ಮತ್ತೆ ಬೆಳಗಿಸಲಾಗಿದೆ. ಈ ವರ್ಷದ ಆಚರಣೆ ಭಿನ್ನವಾಗಿದೆ ಅಂತ ನನಗೆ ಗೊತ್ತಿದೆ. ದೇಶದಾದ್ಯಂತ ಜನರು ಮಾಡುತ್ತಿರುವ ತ್ಯಾಗಗಳ ಬಗ್ಗೆ ನನಗೆ ಗೊತ್ತಿದೆ. ಎಲ್ಲರ ಬದುಕು ನಿಂತಂತಾಗಿಬಿಟ್ಟಿದೆ. ನಿಮ್ಮ ಕೆಲಸಗಳು, ವ್ಯಾಪಾರದ ಮೇಲೆ ಭಾರಿ ಪರಿಣಾಮ ಬಿದ್ದಿರುವ ಸಂಗತಿಯನ್ನೂ ನಾನು ಬಲ್ಲೆ. ಆದರೆ ಈ ಮಹಾಮಾರಿ ಅಟ್ಟಹಾಸಗೈಯುತ್ತಿರುವ ಸಮಯದಲ್ಲಿ, ಬ್ರಿಟಿಷ್ ಹಿಂದೂಗಳು, ಸಿಕ್ಖರು ಮತ್ತು ಜೈನ್ ಸಮುದಾಯದವರು ತಮ್ಮ ಶಕ್ತಿ ಮೀರಿ ಜನರಿಗೆ ಸಹಾಯ ಮಾಡುತ್ತಿರುವುದನ್ನು ಕಂಡು ನನ್ನ ಹೃದಯ ತುಂಬಿಬಂದಿದೆ ಮತ್ತು ಅವರೆಡೆಗಿರುವ ಆದರ ಇನ್ನೂ ಹೆಚ್ಚಾಗಿದೆ. ಈ ದೀಪಾವಳಿ ಹಬ್ಬದಂದು ಬೆಳಗಿಸಲಾಗುವ ಲಕ್ಷಾಂತರ ದೀಪಗಳು ವಿಶ್ವದಾದ್ಯಂತ ಕತ್ತಲೆಯನ್ನು ಹೊಡೆದೋಡಿಸಿ, ಉಜ್ವಲ ಭವಿಷ್ಯದ ಬೆಳಕಿನ ಕಿರಣಗಳನ್ನು ಮೂಡಿಸುತ್ತವೆ ಎಂಬ ನಂಬಿಕೆ ನನ್ನಲ್ಲಿದೆ,’’ ಎಂದು ಜಾನ್ಸನ್ ಟ್ವೀಟ್ ಮಾಡಿದ್ದಾರೆ.

ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?