AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ರೇನ್ ಪೊಲೀಸ್ ಮುಖ್ಯಸ್ಥರ ಪ್ರಕಾರ ಬುಚಾನಲ್ಲಿ ಬಲಿಯಾದವರ ಪೈಕಿ ಹೆಚ್ಚಿನವರನ್ನು ಗುಂಡಿಟ್ಟು ಕೊಲ್ಲಲಾಗಿದೆ

ರಷ್ಯನ್ ಸೇನೆ ಬುಚಾ ಪ್ರಾಂತ್ಯದಿಂದ ಹೊರಟು ಹೋದ ಮೇಲೆ ಸಾದಾ ಉಡುಪಿನಲ್ಲಿದ್ದ, ಮತ್ತು ಎರಡೂ ಕೈಗಳನ್ನ ಬೆನ್ನ ಹಿಂದೆ ಕಟ್ಟಿದ ದೇಹಗಳು ಬೀದಿಗಳಲ್ಲಿ ಚದುರಿದಂತೆ ಬಿದ್ದಿದ್ದ ದೃಶ್ಯ ವಿಶ್ವದ ಗಮನಕ್ಕೆ ಬಂತು.

ಉಕ್ರೇನ್ ಪೊಲೀಸ್ ಮುಖ್ಯಸ್ಥರ ಪ್ರಕಾರ ಬುಚಾನಲ್ಲಿ ಬಲಿಯಾದವರ ಪೈಕಿ ಹೆಚ್ಚಿನವರನ್ನು ಗುಂಡಿಟ್ಟು ಕೊಲ್ಲಲಾಗಿದೆ
ಬುಚಾ ಜನರ ಅನಾಥ ಶವಗಳು
TV9 Web
| Edited By: |

Updated on: Apr 16, 2022 | 8:06 AM

Share

ಕೀವ್, ಉಕ್ರೇನ್: ಉಕ್ರೇನ್ ರಾಜಧಾನಿ ಕೀವ್ (Kyiv) ನಗರದ ಹೊರವಲಯಲ್ಲಿರುವ ಬುಚಾನಲ್ಲಿ (Bucha) ರಷ್ಯನ ಸೈನಿಕರು ನಡೆಸಿದ ಮಾರಣಹೋಮದಲ್ಲಿ ಮೃತಪಟ್ಟ ಜನರಲ್ಲಿ ಹೆಚ್ಚಿನವರು ಗುಂಡೇಟಿನಿಂದ ಸತ್ತಿದ್ದಾರೆ ಎಂದು ಆ ಭಾಗದ ಪೊಲೀಸ್ ಮುಖ್ಯಸ್ಥ ಶುಕ್ರವಾರ ಹೇಳಿದ್ದಾರೆ. ರಷ್ಯಾ ಸೇನೆ ವಶಪಡಿಸಿಕೊಂಡಿದ್ದ ಬುಚಾ ಪ್ರದೇಶವನ್ನು ತನ್ನ ವಶಕ್ಕೆ ವಾಪಸ್ಸು ಪಡೆದುಕೊಂಡಿದೆ. ಸತ್ತವರಲ್ಲಿ ಶೇಕಾಡಾ 95 ರಷ್ಟು ಬಂದೂಕುಧಾರಿಗಳ ಗುಂಡೇಟಿಗೆ ಬಲಿಯಾಗಿದ್ದಾರೆ. ಜನರನ್ನು ಕೊಲ್ಲಲು ಚಿಕ್ಕಗಾತ್ರದ ಆಯುಧಗಳನ್ನು ಸಹ ಬಳಸಲಾಗಿದೆ ಎಂದು ಕೀವ್ ಪ್ರಾದೇಶಿಕ ಮುಖ್ಯಸ್ಥ ಆಂಡ್ರಿ ನೆಬಿಟೋವ್ (Andriy Nebitov) ಹೇಳಿರುವರೆಂದು ಉಕ್ರೇನ್ ಇಂಟರ್ ಫ್ಯಾಕ್ಸ್ ನ್ಯೂಸ್ ಏಜೆನ್ಸಿ ಪತ್ರಿಕಾ ಗೋಷ್ಟಿಯೊಂದರಲ್ಲಿ ತಿಳಿಸಿದೆ.

‘ರಷ್ಯಾದ ಸೇನೆ ಬುಚಾ ಪ್ರದೇಶವನ್ನು ಆಕ್ರಮಿಸಿಕೊಂಡ ಸಮಯದಲ್ಲಿ ಅಲ್ಲಿ ವಾಸವಾಗಿದ್ದ ಉಕ್ರೇನಿಯನ್ನರನ್ನು ಸುಖಾಸುಮ್ಮನೆ, ಯಾವುದೇ ಪ್ರಚೋದನೆ ಇಲ್ಲದೆ ಗುಂಡು ಹಾರಿಸಿ ಕೊಂದರು. ಈ ಸತ್ಯಾಂಶವು ದಾಖಲಾಗಿದೆ. ಈ ಬಗೆಯ ಅಪರಾಧಗಳನ್ನು 21 ನೇ ಶತಮಾನದಲ್ಲಿ ಮುಚ್ಚಿಡುವುದು ಸಾಧ್ಯವಿಲ್ಲ. ಈ ಘೋರ ಕೃತ್ಯಗಳನ್ನು ಜನ ಕಣ್ಣಾರೆ ಕಂಡಿದ್ದಾರೆ ಮತ್ತು ಕೆಮೆರಾಗಳಲ್ಲೂ ಸೆರೆಯಾಗಿವೆ,’ ಎಂದು ನೆಬಿಟೋವ್ ಹೇಳಿದರು.

ಫ್ರಾನ್ಸ್‌ನ ರಾಷ್ಟ್ರೀಯ ಜೆಂಡರ್‌ಮೇರಿಯ ವಿಧಿವಿಜ್ಞಾನ ವಿಭಾಗದ ತಜ್ಞರ ತಂಡವು ಧ್ವಂಸಗೊಂಡಿರುವ ಬುಚಾ ಪಟ್ಟಣದಲ್ಲಿ ಸಾಮೂಹಿಕ ಸಮಾಧಿಯಲ್ಲಿ ಹೂಳಲ್ಪಟ್ಟವರ ದೇಹಗಳನ್ನು ಪರೀಕ್ಷಿಸುವ ಮತ್ತು ಅವುಗಳನ್ನು ಗುರುತಿಸುವ ಪ್ರಯತ್ನಗಳನ್ನು ಹಲವಾರು ದಿನಗಳಿಂದ ಮಾಡುತ್ತಿದೆ. ಇದನ್ನು ಮಾನವ ಇತಿಹಾಸದ ಅತಿದೊಡ್ಡ ಸಾಮೂಹಿಕ ಸಮಾಧಿಗಳಲ್ಲಿ ಒಂದೆಂದು ಹೇಳಲಾಗುತ್ತಿದೆ.

ರಷ್ಯಾದ ಪಡೆಗಳು ಬುಚಾ ಪ್ರಾಂತ್ಯದ ಮೇಲೆ ದಾಳಿ ಮಾಡಿ ಜನರ ಮೇಲೆ ನಡೆಸಿದ ಹಿಂಸಾಚಾರವು ಜಗತ್ತನ್ನು ಬೆಚ್ಚಿಬೀಳಿಸಿದೆ.

ಒಂದು ತಿಂಗಳ ಆಕ್ರಮಣದ ನಂತರ ಮಾರ್ಚ್ 30 ರಂದು ರಷ್ಯಾ ತನ್ನ ಸೇನೆಯನ್ನು ಹಿಂತೆಗೆದುಕೊಂಡ ಬಳಿಕ ದಾಳಿಯಲ್ಲಿ ಸತ್ತ ಜನರ ರಕ್ತಸಿಕ್ತ, ಕೊಳೆಯುತ್ತಿದ್ದ ಮತ್ತು ಕ್ರಿಮಿಕೀಟಗಳಿಂದ ಮುಕ್ಕುರಿದ ದೇಹಗಳನ್ನು ಸ್ಥಳೀಯ ನಿವಾಸಿಗಳೇ ಮಣ್ಣಲ್ಲಿ ಹೂತರು.

ರಷ್ಯನ್ ಸೇನೆ ಬುಚಾ ಪ್ರಾಂತ್ಯದಿಂದ ಹೊರಟು ಹೋದ ಮೇಲೆ ಸಾದಾ ಉಡುಪಿನಲ್ಲಿದ್ದ, ಮತ್ತು ಎರಡೂ ಕೈಗಳನ್ನ ಬೆನ್ನ ಹಿಂದೆ ಕಟ್ಟಿದ ದೇಹಗಳು ಬೀದಿಗಳಲ್ಲಿ ಚದುರಿದಂತೆ ಬಿದ್ದಿದ್ದ ದೃಶ್ಯ ವಿಶ್ವದ ಗಮನಕ್ಕೆ ಬಂತು.

ಅಲ್ಲಿಂದೀಚೆಗೆ ಹಲವಾರು ಸಾಮೂಹಿಕ ಸಮಾಧಿಗಳು ಪತ್ತೆಯಾಗಿವೆ. ರಷ್ಯಾದ ಸೇನೆ ಬುಚಾದಿಂದ ಹಿಂತೆಗೆದ ಬಳಿಕ ಕನಿಷ್ಟ 400 ಶವಗಳು ಪತ್ತೆಯಾಗಿವೆ ಎಂದು ಅಲ್ಲಿನ ಮೇಯರ್ ಅನಾಟೊಲಿ ಫೆದೊರುಕ್ ಹೇಳಿದ್ದಾರೆ.

ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳೊಂದಿಗೆ ವ್ಯವಹರಿಸುವ ಹೇಗ್ ನಲ್ಲಿರುವ ಅಂತರರಾಷ್ಟ್ರೀಯ ಅಪರಾಧ ಕೋರ್ಟ್ ತನಿಖಾಧಿಕಾರಿಗಳ ತಂಡ ಪ್ರಸ್ತುತ ಉಕ್ರೇನಲ್ಲಿದ್ದು ಅದರ ಮುಖ್ಯಸ್ಥ ಈ ದೇಶವನ್ನು ‘ಅಪರಾಧದ ದೃಶ್ಯ’ ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ:   51ನೇ ದಿನಕ್ಕೆ ಉಕ್ರೇನ್ ಯುದ್ಧ: ಅತಿಮುಖ್ಯ ಸಮರನೌಕೆ ಕಳೆದುಕೊಂಡ ರಷ್ಯಾಕ್ಕೆ ಹಿನ್ನಡೆ, ಅಣ್ವಸ್ತ್ರ ದಾಳಿಯ ಭೀತಿ

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ