AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ರೇನ್ ಪೊಲೀಸ್ ಮುಖ್ಯಸ್ಥರ ಪ್ರಕಾರ ಬುಚಾನಲ್ಲಿ ಬಲಿಯಾದವರ ಪೈಕಿ ಹೆಚ್ಚಿನವರನ್ನು ಗುಂಡಿಟ್ಟು ಕೊಲ್ಲಲಾಗಿದೆ

ರಷ್ಯನ್ ಸೇನೆ ಬುಚಾ ಪ್ರಾಂತ್ಯದಿಂದ ಹೊರಟು ಹೋದ ಮೇಲೆ ಸಾದಾ ಉಡುಪಿನಲ್ಲಿದ್ದ, ಮತ್ತು ಎರಡೂ ಕೈಗಳನ್ನ ಬೆನ್ನ ಹಿಂದೆ ಕಟ್ಟಿದ ದೇಹಗಳು ಬೀದಿಗಳಲ್ಲಿ ಚದುರಿದಂತೆ ಬಿದ್ದಿದ್ದ ದೃಶ್ಯ ವಿಶ್ವದ ಗಮನಕ್ಕೆ ಬಂತು.

ಉಕ್ರೇನ್ ಪೊಲೀಸ್ ಮುಖ್ಯಸ್ಥರ ಪ್ರಕಾರ ಬುಚಾನಲ್ಲಿ ಬಲಿಯಾದವರ ಪೈಕಿ ಹೆಚ್ಚಿನವರನ್ನು ಗುಂಡಿಟ್ಟು ಕೊಲ್ಲಲಾಗಿದೆ
ಬುಚಾ ಜನರ ಅನಾಥ ಶವಗಳು
TV9 Web
| Edited By: |

Updated on: Apr 16, 2022 | 8:06 AM

Share

ಕೀವ್, ಉಕ್ರೇನ್: ಉಕ್ರೇನ್ ರಾಜಧಾನಿ ಕೀವ್ (Kyiv) ನಗರದ ಹೊರವಲಯಲ್ಲಿರುವ ಬುಚಾನಲ್ಲಿ (Bucha) ರಷ್ಯನ ಸೈನಿಕರು ನಡೆಸಿದ ಮಾರಣಹೋಮದಲ್ಲಿ ಮೃತಪಟ್ಟ ಜನರಲ್ಲಿ ಹೆಚ್ಚಿನವರು ಗುಂಡೇಟಿನಿಂದ ಸತ್ತಿದ್ದಾರೆ ಎಂದು ಆ ಭಾಗದ ಪೊಲೀಸ್ ಮುಖ್ಯಸ್ಥ ಶುಕ್ರವಾರ ಹೇಳಿದ್ದಾರೆ. ರಷ್ಯಾ ಸೇನೆ ವಶಪಡಿಸಿಕೊಂಡಿದ್ದ ಬುಚಾ ಪ್ರದೇಶವನ್ನು ತನ್ನ ವಶಕ್ಕೆ ವಾಪಸ್ಸು ಪಡೆದುಕೊಂಡಿದೆ. ಸತ್ತವರಲ್ಲಿ ಶೇಕಾಡಾ 95 ರಷ್ಟು ಬಂದೂಕುಧಾರಿಗಳ ಗುಂಡೇಟಿಗೆ ಬಲಿಯಾಗಿದ್ದಾರೆ. ಜನರನ್ನು ಕೊಲ್ಲಲು ಚಿಕ್ಕಗಾತ್ರದ ಆಯುಧಗಳನ್ನು ಸಹ ಬಳಸಲಾಗಿದೆ ಎಂದು ಕೀವ್ ಪ್ರಾದೇಶಿಕ ಮುಖ್ಯಸ್ಥ ಆಂಡ್ರಿ ನೆಬಿಟೋವ್ (Andriy Nebitov) ಹೇಳಿರುವರೆಂದು ಉಕ್ರೇನ್ ಇಂಟರ್ ಫ್ಯಾಕ್ಸ್ ನ್ಯೂಸ್ ಏಜೆನ್ಸಿ ಪತ್ರಿಕಾ ಗೋಷ್ಟಿಯೊಂದರಲ್ಲಿ ತಿಳಿಸಿದೆ.

‘ರಷ್ಯಾದ ಸೇನೆ ಬುಚಾ ಪ್ರದೇಶವನ್ನು ಆಕ್ರಮಿಸಿಕೊಂಡ ಸಮಯದಲ್ಲಿ ಅಲ್ಲಿ ವಾಸವಾಗಿದ್ದ ಉಕ್ರೇನಿಯನ್ನರನ್ನು ಸುಖಾಸುಮ್ಮನೆ, ಯಾವುದೇ ಪ್ರಚೋದನೆ ಇಲ್ಲದೆ ಗುಂಡು ಹಾರಿಸಿ ಕೊಂದರು. ಈ ಸತ್ಯಾಂಶವು ದಾಖಲಾಗಿದೆ. ಈ ಬಗೆಯ ಅಪರಾಧಗಳನ್ನು 21 ನೇ ಶತಮಾನದಲ್ಲಿ ಮುಚ್ಚಿಡುವುದು ಸಾಧ್ಯವಿಲ್ಲ. ಈ ಘೋರ ಕೃತ್ಯಗಳನ್ನು ಜನ ಕಣ್ಣಾರೆ ಕಂಡಿದ್ದಾರೆ ಮತ್ತು ಕೆಮೆರಾಗಳಲ್ಲೂ ಸೆರೆಯಾಗಿವೆ,’ ಎಂದು ನೆಬಿಟೋವ್ ಹೇಳಿದರು.

ಫ್ರಾನ್ಸ್‌ನ ರಾಷ್ಟ್ರೀಯ ಜೆಂಡರ್‌ಮೇರಿಯ ವಿಧಿವಿಜ್ಞಾನ ವಿಭಾಗದ ತಜ್ಞರ ತಂಡವು ಧ್ವಂಸಗೊಂಡಿರುವ ಬುಚಾ ಪಟ್ಟಣದಲ್ಲಿ ಸಾಮೂಹಿಕ ಸಮಾಧಿಯಲ್ಲಿ ಹೂಳಲ್ಪಟ್ಟವರ ದೇಹಗಳನ್ನು ಪರೀಕ್ಷಿಸುವ ಮತ್ತು ಅವುಗಳನ್ನು ಗುರುತಿಸುವ ಪ್ರಯತ್ನಗಳನ್ನು ಹಲವಾರು ದಿನಗಳಿಂದ ಮಾಡುತ್ತಿದೆ. ಇದನ್ನು ಮಾನವ ಇತಿಹಾಸದ ಅತಿದೊಡ್ಡ ಸಾಮೂಹಿಕ ಸಮಾಧಿಗಳಲ್ಲಿ ಒಂದೆಂದು ಹೇಳಲಾಗುತ್ತಿದೆ.

ರಷ್ಯಾದ ಪಡೆಗಳು ಬುಚಾ ಪ್ರಾಂತ್ಯದ ಮೇಲೆ ದಾಳಿ ಮಾಡಿ ಜನರ ಮೇಲೆ ನಡೆಸಿದ ಹಿಂಸಾಚಾರವು ಜಗತ್ತನ್ನು ಬೆಚ್ಚಿಬೀಳಿಸಿದೆ.

ಒಂದು ತಿಂಗಳ ಆಕ್ರಮಣದ ನಂತರ ಮಾರ್ಚ್ 30 ರಂದು ರಷ್ಯಾ ತನ್ನ ಸೇನೆಯನ್ನು ಹಿಂತೆಗೆದುಕೊಂಡ ಬಳಿಕ ದಾಳಿಯಲ್ಲಿ ಸತ್ತ ಜನರ ರಕ್ತಸಿಕ್ತ, ಕೊಳೆಯುತ್ತಿದ್ದ ಮತ್ತು ಕ್ರಿಮಿಕೀಟಗಳಿಂದ ಮುಕ್ಕುರಿದ ದೇಹಗಳನ್ನು ಸ್ಥಳೀಯ ನಿವಾಸಿಗಳೇ ಮಣ್ಣಲ್ಲಿ ಹೂತರು.

ರಷ್ಯನ್ ಸೇನೆ ಬುಚಾ ಪ್ರಾಂತ್ಯದಿಂದ ಹೊರಟು ಹೋದ ಮೇಲೆ ಸಾದಾ ಉಡುಪಿನಲ್ಲಿದ್ದ, ಮತ್ತು ಎರಡೂ ಕೈಗಳನ್ನ ಬೆನ್ನ ಹಿಂದೆ ಕಟ್ಟಿದ ದೇಹಗಳು ಬೀದಿಗಳಲ್ಲಿ ಚದುರಿದಂತೆ ಬಿದ್ದಿದ್ದ ದೃಶ್ಯ ವಿಶ್ವದ ಗಮನಕ್ಕೆ ಬಂತು.

ಅಲ್ಲಿಂದೀಚೆಗೆ ಹಲವಾರು ಸಾಮೂಹಿಕ ಸಮಾಧಿಗಳು ಪತ್ತೆಯಾಗಿವೆ. ರಷ್ಯಾದ ಸೇನೆ ಬುಚಾದಿಂದ ಹಿಂತೆಗೆದ ಬಳಿಕ ಕನಿಷ್ಟ 400 ಶವಗಳು ಪತ್ತೆಯಾಗಿವೆ ಎಂದು ಅಲ್ಲಿನ ಮೇಯರ್ ಅನಾಟೊಲಿ ಫೆದೊರುಕ್ ಹೇಳಿದ್ದಾರೆ.

ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳೊಂದಿಗೆ ವ್ಯವಹರಿಸುವ ಹೇಗ್ ನಲ್ಲಿರುವ ಅಂತರರಾಷ್ಟ್ರೀಯ ಅಪರಾಧ ಕೋರ್ಟ್ ತನಿಖಾಧಿಕಾರಿಗಳ ತಂಡ ಪ್ರಸ್ತುತ ಉಕ್ರೇನಲ್ಲಿದ್ದು ಅದರ ಮುಖ್ಯಸ್ಥ ಈ ದೇಶವನ್ನು ‘ಅಪರಾಧದ ದೃಶ್ಯ’ ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ:   51ನೇ ದಿನಕ್ಕೆ ಉಕ್ರೇನ್ ಯುದ್ಧ: ಅತಿಮುಖ್ಯ ಸಮರನೌಕೆ ಕಳೆದುಕೊಂಡ ರಷ್ಯಾಕ್ಕೆ ಹಿನ್ನಡೆ, ಅಣ್ವಸ್ತ್ರ ದಾಳಿಯ ಭೀತಿ

Follow Us
Web contact
Web contact

TV9 Kannada

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!