AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

51ನೇ ದಿನಕ್ಕೆ ಉಕ್ರೇನ್ ಯುದ್ಧ: ಅತಿಮುಖ್ಯ ಸಮರನೌಕೆ ಕಳೆದುಕೊಂಡ ರಷ್ಯಾಕ್ಕೆ ಹಿನ್ನಡೆ, ಅಣ್ವಸ್ತ್ರ ದಾಳಿಯ ಭೀತಿ

ಸತತ ಹಿನ್ನಡೆಗಳಿಂದ ಕಂಗಾಲಾಗಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಣ್ವಸ್ತ್ರ ದಾಳಿಗೆ ಮುಂದಾದರೂ ಆಶ್ಚರ್ಯವಿಲ್ಲ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ನಿರ್ದೇಶಕ ವಿಲಿಯಮ್ ಬರ್ನ್ಸ್ ಎಚ್ಚರಿಸಿದ್ದಾರೆ.

51ನೇ ದಿನಕ್ಕೆ ಉಕ್ರೇನ್ ಯುದ್ಧ: ಅತಿಮುಖ್ಯ ಸಮರನೌಕೆ ಕಳೆದುಕೊಂಡ ರಷ್ಯಾಕ್ಕೆ ಹಿನ್ನಡೆ, ಅಣ್ವಸ್ತ್ರ ದಾಳಿಯ ಭೀತಿ
ರಷ್ಯಾ ಟ್ಯಾಂಕ್​ಗೆ ಗುರಿಯಿಟ್ಟ ಉಕ್ರೇನ್ ಯೋಧ (ಸಂಗ್ರಹ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Apr 15, 2022 | 8:49 AM

ಉಕ್ರೇನ್ ನಿರ್ಮಿತ ಜಲಾಂತರ್ಗಾಮಿ ನಿರೋಧಕ ಕ್ಷಿಪಣಿಗಳು ರಷ್ಯಾದ ಪ್ರಮುಖ ಯುದ್ಧನೌಕೆ ‘ಮೊಸಕ್​ವಾ’ ಮೇಲೆ ಅಪ್ಪಳಿಸಿದ್ದು ಕಪ್ಪು ಸಮುದ್ರದಲ್ಲಿ ಯುದ್ಧನೌಕೆ ಮುಳುಗಿದೆ. ನೌಕೆಗೆ ಕ್ಷಿಪಣಿಗಗಳು ಅಪ್ಪಳಿಸಿದ ನಂತರ ಬೆಂಕಿ ಹೊತ್ತಿಕೊಂಡಿತು. ಹಡಗಿನಲ್ಲಿದ್ದ ಎಲ್ಲ 500 ಸಿಬ್ಬಂದಿಯನ್ನೂ ರಕ್ಷಿಸಲಾಗಿದೆ. ಸಮುದ್ರ ಪ್ರಕ್ಷುಬ್ಧವಾಗಿದ್ದರಿಂದ ಹಡಗು ಮುಳುಗಿತು ಎಂದು ರಷ್ಯಾದ ರಕ್ಷಣಾ ಇಲಾಖೆ ಹೇಳಿದೆ. ಉಕ್ರೇನ್-ರಷ್ಯಾ ಯುದ್ಧವು 51ನೇ ದಿನಕ್ಕೆ ಕಾಲಿಟ್ಟಿದೆ. ಸಮರನೌಕೆ ಮುಳುಗಿರುವುದು ರಷ್ಯಾಕ್ಕೆ ಆಗಿರುವ ದೊಡ್ಡ ನಷ್ಟ ಎಂದು ಅಮೆರಿಕ ವಿಶ್ಲೇಷಿಸಿದೆ. ಉಕ್ರೇನ್ ಮೇಲಿನ ರಷ್ಯಾ ದಾಳಿ ಆರಂಭವಾದ ನಂತರ ಮರಿಯುಪೋಲ್​ಗೆ ಮುತ್ತಿಗೆ ಹಾಕುವುದೂ ಸೇರಿದಂತೆ ಹಲವು ಕಾರ್ಯಾಚರಣೆಗಳಲ್ಲಿ ದಾಳಿಪಡೆಗಳನ್ನು ‘ಮೊಸಕ್​ವಾ’ ಯುದ್ಧನೌಕೆ ಮುನ್ನಡೆಸಿತ್ತು. ಈ ಹಿಂದೆ ಸಿರಿಯಾ ಮೇಲಿನ ರಷ್ಯಾ ದಾಳಿ ಸಂದರ್ಭದಲ್ಲಿಯೂ ಈ ಯುದ್ಧನೌಕೆ ಭಾಗಿಯಾಗಿತ್ತು.

ರಷ್ಯಾ ಉಕ್ರೇನ್ ಸಂಘರ್ಷವು 51ನೇ ದಿನಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಈವರೆಗಿನ 10 ಪ್ರಮುಖ ಬೆಳವಣಿಗೆಗಳ ವಿವರ ಇಲ್ಲಿದೆ.

  1. ಯುದ್ಧಗ್ರಸ್ಥ ಉಕ್ರೇನ್​ಗೆ ಬೇಟಿ ನೀಡಲು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಅಧ್ಯಕ್ಷರ ಭೇಟಿಗೆ ಪೂರ್ವಭಾವಿಯಾಗಿ ಅಮೆರಿಕ ಆಡಳಿತವು ಉಕ್ರೇನ್​ಗೆ ಉನ್ನತ ಅಧಿಕಾರಿಗಳ ನಿಯೋಗವನ್ನು ಕಳುಹಿಸಿಕೊಡಲು ಸಮ್ಮತಿಸಿದೆ. ಉಕ್ರೇನ್ ಮೇಲೆ ರಷ್ಯಾ ಕಳೆದ ಫೆಬ್ರುವರಿ 24ರಂದು ದಾಳಿ ಆರಂಭಿಸಿತ್ತು.
  2. ಉಕ್ರೇನ್​ನ ರಾಜಧಾನಿ ಕೀವ್ ನಗರದಲ್ಲಿ ಮತ್ತೆ ಸ್ಫೋಟಕಗಳ ಸದ್ದು ಕೇಳಿಬಂದಿದೆ. ದಕ್ಷಿಣ ಉಕ್ರೇನ್​ನ ಪ್ರಮುಖ ನಗರ ಖೆರ್ಸೊನ್, ಪೂರ್ವ ಉಕ್ರೇನ್​ನ ಖಾರ್ಕಿವ್ ನಗರದ​ ಮೇಲೆಯೂ ರಷ್ಯಾ ಮತ್ತೆ ಬಾಂಬ್ ದಾಳಿ ಆರಂಬಿಸಿದೆ.
  3. ವಿಶ್ವಸಂಸ್ಥೆಯಲ್ಲಿರುವ ಅಮೆರಿಕ ಮತ್ತು ರಷ್ಯಾದ ಪ್ರತಿನಿಧಿಗಳು ಆಹಾರ ಬೆಲೆಗಳ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆಸಿದರು. ಉಕ್ರೇನ್​ನಿಂದ ಆಮದು ಮಾಡಿಕೊಳ್ಳುವ ಗೋಧಿಯನ್ನು ಅವಲಂಬಿಸಿದ್ದ ಯೆಮೆನ್​ನಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಇದನ್ನೇ ಪ್ರಸ್ತಾಪಿಸಿ ಅಮೆರಿಕದ ಪ್ರತಿನಿಧಿ ಲಿಂಡಾ ಥಾಮಸ್ ಗ್ರೀನ್​ಫೀಲ್ಡ್​ ವಿಶ್ವಸಂಸ್ಥೆಯ ಸಭೆಯಲ್ಲಿ ರಷ್ಯಾ ವಿರುದ್ಧ ವಾಗ್ದಾಳಿ ನಡೆಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಷ್ಯಾದ ಪ್ರತಿನಿಧಿ ಡಿಮಿತ್ರಿ ಪೊಲಿಂಸ್ಕಿ, ವಿಶ್ವಕ್ಕೆ ಸಹಾಯ ಮಾಡಬೇಕು ಎಂದಿದ್ದರೆ ನಿಮಗೆ ನೀವೇ ಹಾಕಿಕೊಂಡಿರುವ ನಿರ್ಬಂಧ ತೆರವುಗೊಳಿಸಿ. ಬಡದೇಶಗಳಿಗೆ ನೆರವಾಗಿ ಎಂದು ಆಗ್ರಹಿಸಿದರು.
  4. ಉಕ್ರೇನ್​ ಮೇಲೆ ರಷ್ಯಾ ದಾಳಿ ಆರಂಭಿಸಿದ ನಂತರ ಈವರೆಗೆ ಸುಮಾರು 50 ಲಕ್ಷ ಜನರು ದೇಶ ತೊರೆದು, ವಿವಿಧ ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ. ದೇಶದಲ್ಲಿ ಆಂತರಿಕವಾಗಿ ವಲಸೆ ಹೊರಟು ನಿರಾಶ್ರಿತರಾಗಿರುವವರ ಸಂಖ್ಯೆಯೂ ದೊಡ್ಡಮಟ್ಟದಲ್ಲಿದೆ.
  5. ಉಕ್ರೇನ್​ ಯುದ್ಧದಲ್ಲಿ ರಷ್ಯಾಕ್ಕೆ ನಿರೀಕ್ಷಿತ ಗೆಲುವು ಈವರೆಗೆ ಸಿಕ್ಕಿಲ್ಲ. ಸತತ ಹಿನ್ನಡೆಗಳಿಂದ ಕಂಗಾಲಾಗಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಣ್ವಸ್ತ್ರ ದಾಳಿಗೆ ಮುಂದಾದರೂ ಆಶ್ಚರ್ಯವಿಲ್ಲ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ನಿರ್ದೇಶಕ ವಿಲಿಯಮ್ ಬರ್ನ್ಸ್ ಎಚ್ಚರಿಸಿದ್ದಾರೆ.
  6. ಸ್ವೀಡನ್ ಮತ್ತು ಫಿನ್​ಲೆಂಡ್​ಗಳು ಸಹ ನ್ಯಾಟೊ ಒಪ್ಪಂದದ ಭಾಗವಾಗಲು ಚಿಂತನೆ ನಡೆಸುತ್ತಿವೆ. ಈ ದೇಶಗಳಿಗೆ ನ್ಯಾಟೊ ಸದಸ್ಯತ್ವ ನೀಡಿದರೆ ರಷ್ಯಾ ಇನ್ನಷ್ಟು ಕೆರಳಿ ಅಣ್ವಸ್ತ್ರ ದಾಳಿಗೆ ಮುಂದಾಗಬಹುದು ಎಂದು ರಷ್ಯಾದ ಮಿತ್ರರಾಷ್ಟ್ರವೊಂದು ಎಚ್ಚರಿಸಿದೆ.
  7. ರಷ್ಯಾ ಪಡೆಗಳು ಹಿಂದೆ ಸರಿದ ಪ್ರದೇಶದಲ್ಲಿ ಯುದ್ಧಾಪರಾಧಗಳು ಬೆಳಕಿಗೆ ಬರುತ್ತಿವೆ. ಜನರ ಕೈ ಹಿಂದಕ್ಕೆ ಕಟ್ಟಿ, ತಲೆಗೆ ಶೂಟ್ ಮಾಡಿ, ಶವಗಳನ್ನು ಹೂತುಹಾಕಿರುವ ಸಾಮೂಹಿಕ ಸಮಾಧಿಗಳು ಹಲವೆಡೆ ಪತ್ತೆಯಾಗಿವೆ. ಫಿರಂಗಿ ದಾಳಿಯಲ್ಲಿಯೂ ಸಾಕಷ್ಟು ಜನರು ಮೃತಪಟ್ಟಿದ್ದಾರೆ.
  8. ಉಕ್ರೇನ್ ಮೇಲಿನ ದಾಳಿಗೆಂದು ರಷ್ಯಾ ನಿಯೋಜಿಸಿದ್ದ ಯೋಧರ ಪೈಕಿ ಈವರೆಗೆ ಸುಮಾರು 20 ಸಾವಿರ ಮಂದಿ ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಸರ್ಕಾರ ಹೇಳಿದೆ.
  9. ರಷ್ಯಾ ತನ್ನ ಸೇನಾ ಕಾರ್ಯಾಚರಣೆಯ ನೀತಿಯನ್ನೇ ಬದಲಿಸಿಕೊಳ್ಳುತ್ತಿದೆ. ಫಿರಂಗಿ ದಾಳಿಯ ಜೊತೆಗೆ ಕ್ಷಿಪಣಿಗಳನ್ನೂ ಏಕಕಾಲಕ್ಕೆ ದಾಳಿಗೆ ಬಳಸಿಕೊಳ್ಳುವುದರ ಜೊತೆಗೆ ದೊಡ್ಡಮಟ್ಟದಲ್ಲಿ ಸೈನಿಕರನ್ನು ದಾಳಿಗೆ ನಿಯೋಜಿಸುತ್ತಿದೆ. ರಷ್ಯಾದ ಸಾಂಪ್ರದಾಯಿಕ ಯುದ್ಧತಂತ್ರಕ್ಕಿಂತ ಇದು ಭಿನ್ನ ಶೈಲಿ ಎಂದು ಬ್ರಿಟನ್​ನ ರಕ್ಷಣಾ ಇಲಾಖೆ ಹೇಳಿದೆ.
  10. ಉಕ್ರೇನ್​ನ ರಾಜಧಾನಿ ಕೀವ್ ನಗರ ಗೆಲ್ಲುವ ಕನಸು ಭಗ್ನವಾದ ಹಿನ್ನೆಲೆಯಲ್ಲಿ ಇದೀಗ ರಷ್ಯಾ ತನ್ನ ಪಡೆಗಳನ್ನು ಪೂರ್ವ ಉಕ್ರೇನ್​ನತ್ತ ಮರು ನಿಯೋಜಿಸಿದೆ. ಈ ಪ್ರದೇಶಗಳನ್ನು ಸಂಪೂರ್ಣವಾಗಿ ತನ್ನ ಸುಪರ್ದಿಗೆ ಪಡೆದುಕೊಳ್ಳಲು ದೊಡ್ಡಮಟ್ಟದ ದಾಳಿ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇದನ್ನೂ ಓದಿ: ಅತ್ಯಾಚಾರವನ್ನೂ ಆಯುಧವಾಗಿಸಿಕೊಂಡ ರಷ್ಯಾ ಸೇನೆ: ವಿಶ್ವಸಂಸ್ಥೆಯಲ್ಲಿ ಉಕ್ರೇನ್ ಗಂಭೀರ ಆರೋಪ

ಇದನ್ನೂ ಓದಿ: Russia-Ukraine War: ಕೀವ್​​ ವಶಪಡಿಸಿಕೊಳ್ಳಲು ವಿಫಲವಾದ ಹಿನ್ನೆಲೆ; ರಷ್ಯಾದಿಂದ ಉಕ್ರೇನ್​ಗೆ ಹೊಸ ಸೇನಾ ಕಮಾಂಡರ್​ ನೇಮಕ

Published On - 8:48 am, Fri, 15 April 22

‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ