AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಷ್ಯಾ-ಉಕ್ರೇನ್​ ನಡುವೆ ಯುದ್ಧಾತಂಕ; ನ್ಯಾಟೋ ಬಲವರ್ಧನೆಗೆ 3000 ಯೋಧರನ್ನು ಪೂರ್ವ ಯುರೋಪ್​ಗೆ ಕಳಿಸಿದ ಯುಎಸ್​​

ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್​ ಅವರು ತುಂಬ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದಾರೆ. ಅವರು ಹಾಗೆ ನಡೆದುಕೊಳ್ಳುವವರೆಗೂ ನಾವು ನ್ಯಾಟೋ ಮಿತ್ರರಾಷ್ಟ್ರಗಳು ಉಕ್ರೇನ್​ಗೆ ಎಲ್ಲ ರೀತಿಯ ಬೆಂಬಲವನ್ನೂ ನೀಡುತ್ತಲೇ ಇರುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್​ ಹೇಳಿದ್ದಾರೆ. 

ರಷ್ಯಾ-ಉಕ್ರೇನ್​ ನಡುವೆ ಯುದ್ಧಾತಂಕ; ನ್ಯಾಟೋ ಬಲವರ್ಧನೆಗೆ 3000 ಯೋಧರನ್ನು ಪೂರ್ವ ಯುರೋಪ್​ಗೆ ಕಳಿಸಿದ ಯುಎಸ್​​
ಉಕ್ರೇನ್​ ಗಡಿಯ ಸೆಟಲೈಟ್ ಚಿತ್ರ
TV9 Web
| Edited By: |

Updated on:Feb 12, 2022 | 4:09 PM

Share

ದೆಹಲಿ: ರಷ್ಯಾ ಮತ್ತು ಉಕ್ರೇನ್​ ಮಧ್ಯೆ ಯುದ್ಧ ಸನ್ನಿವೇಶ ಉಂಟಾಗಿದೆ. ಯಾವುದೇ ಕ್ಷಣದಲ್ಲೂ ಆಕ್ರಮಣ ತೀವ್ರಗೊಳ್ಳಬಹುದು ಎಂಬ ಆತಂಕದ ಮಧ್ಯೆಯೇ ರಷ್ಯಾ ಇದೀಗ ತನ್ನ ಸಾವಿರಾರು ಸೈನಿಕರನ್ನು, ಫಿರಂಗಿಗಳನ್ನು, ಯೋಧರಿಗಾಗಿ ರಕ್ಷಾಕವಚಗಳನ್ನು ಉಕ್ರೇನ್​ ಗಡಿಗೆ ಕಳಿಸುತ್ತಿರುವುದು ಸೆಟಲೈಟ್​ ಫೋಟೋದಲ್ಲಿ ಕಂಡುಬಂದಿದೆ. ಒಂದೆಡೆ ರಷ್ಯಾ ತನ್ನ ಸೈನ್ಯ ಬಲ ಏರಿಸುತ್ತಿದ್ದರೆ, ಇನ್ನೊಂದೆಡೆ  ಅಮೆರಿಕ ಮತ್ತು ಮಿತ್ರರಾಷ್ಟ್ರ ಗಳು ತಮ್ಮ ಸೇನಾ ಒಕ್ಕೂಟವಾದ  ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (North Atlantic Treaty Organization- NATO )ಯ ಪಡೆಯನ್ನು ಉಕ್ರೇನ್​ಗೆ ಕಳಿಸಿ, ಸಹಕಾರ ನೀಡುತ್ತಿವೆ.

ಯುಎಸ್​ ಬುಧವಾರ ಸುಮಾರು ಮೂರು ಸಾವಿರ ಸೈನಿಕರನ್ನು ಪೂರ್ವ ಯುರೋಪ್​ಗೆ ಕಳಿಸುವ ಮೂಲಕ ನ್ಯಾಟೋ ಪಡೆಯನ್ನು ಬಲಗೊಳಿಸಿದೆ.  ಉಕ್ರೇನ್ ಬಾರ್ಡರ್​ನಲ್ಲಿ ಲಕ್ಷಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿರುವ ರಷ್ಯಾ ಅವರನ್ನು ಹಿಂಪಡೆಯಲು ಹಿಂದೇಟು ಹಾಕುತ್ತಿದೆ. ಯುಎಸ್ ಮತ್ತು ಮಿತ್ರ ರಾಷ್ಟ್ರಗಳು ಈಗಾಗಲೇ ಉಕ್ರೇನ್​​ ಸಹಾಯಕ್ಕೆ ನಿಂತಿದ್ದು, ಯಾವುದೇ ಕ್ಷಣಕ್ಕೆ ಸಿದ್ಧವಾಗುವಂತೆ ಅಮೆರಿಕ ತನ್ನ ಸುಮಾರು 8500 ಯೋಧರಿಗೆ ಹೇಳಿದೆ. ಬುಧವಾರ ಜರ್ಮನಿಯಲ್ಲಿದ್ದ ಯುಎಸ್​ನ 1000 ಯೋಧರನ್ನು ರೋಮಾನಿಯಾಕ್ಕೆ ಕಳಿಸಲಾಗಿದ್ದು ಮತ್ತು ಯುಸ್​​ನಲ್ಲಿದ್ದ 2000 ಸೈನಿಕರನ್ನು ಜರ್ಮನಿ ಮತ್ತು ಪೋಲ್ಯಾಂಡ್​ಗೆ ಕಳಿಸಲಾಗಿದೆ.  ಒಟ್ಟಾರೆ ನ್ಯಾಟೋ ಪಡೆಗಳು ಉಕ್ರೇನ್​​ಗೆ ರಕ್ಷಾ ಕವಚದಂತೆ ನಿಂತಿವೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್​ ಅವರು ತುಂಬ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದಾರೆ. ಅವರು ಹಾಗೆ ನಡೆದುಕೊಳ್ಳುವವರೆಗೂ ನಾವು ನ್ಯಾಟೋ ಮಿತ್ರರಾಷ್ಟ್ರಗಳು ಉಕ್ರೇನ್​ಗೆ ಎಲ್ಲ ರೀತಿಯ ಬೆಂಬಲವನ್ನೂ ನೀಡುತ್ತಲೇ ಇರುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್​ ಹೇಳಿದ್ದಾರೆ.  ಆದರೆ ಯುಎಸ್ ಹೆಚ್ಚುವರಿ ಸೈನಿಕರನ್ನು ಜಮಾವಣೆ ಮಾಡಿದ್ದಕ್ಕೆ ರಷ್ಯಾ ಕಿಡಿಕಾರಿದೆ. ಯುಎಸ್​ ವಿನಾಶಕಾರಿ ಹೆಜ್ಜೆಯನ್ನಟ್ಟಿದೆ ಎಂದು ರಷ್ಯಾ ವಿದೇಶಾಂಗ ವ್ಯವಹಾರಗಳ ಕಿರಿಯ ಸಚಿವ ಅಲೆಕ್ಸಾಂಡರ್  ಗ್ರುಷ್ಕೋ ಆರೋಪಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ಸ್ಮಾರ್ಟ್‌ಫೋನ್‌ ಬ್ಯಾಟರಿ ಬ್ಯಾಕ್​ಅಪ್​ನ್ನು ಹೆಚ್ಚಿಸಲು ಇಲ್ಲಿವೆ ಆರು ಉಪಯುಕ್ತ ಮಾಹಿತಿ

Published On - 11:51 am, Thu, 3 February 22

Follow Us
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್