AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ಉಲ್ಟಾ ಝೂ! ಇಲ್ಲಿ ಪ್ರವಾಸಿಗರನ್ನು ಭೇಟಿ ಮಾಡಲು ವನ್ಯ ಮೃಗಗಳೇ ಧಾವಿಸಿ ಬರುತ್ತವೆ!

Viral Video: ಇದು ಉಲ್ಟಾ ಝೂ! ಇದೊಂಥರಾ ವಿಚಿತ್ರ. ಇಲ್ಲಿ ಪ್ರವಾಸಿಗರನ್ನು ಭೇಟಿ ಮಾಡಲು ವನ್ಯ ಮೃಗಗಳೇ ಧಾವಿಸಿ ಬರುತ್ತವೆ! ಎಲ್ಲಿ ಗೊತ್ತಾ? ಏನಿದರ ವಿಶೇಷತೆ.

ಇದು ಉಲ್ಟಾ ಝೂ! ಇಲ್ಲಿ ಪ್ರವಾಸಿಗರನ್ನು ಭೇಟಿ ಮಾಡಲು ವನ್ಯ ಮೃಗಗಳೇ ಧಾವಿಸಿ ಬರುತ್ತವೆ!
ಇದು ಉಲ್ಟಾ ಝೂ! ಇಲ್ಲಿ ಪ್ರವಾಸಿಗರನ್ನು ಭೇಟಿ ಮಾಡಲು ವನ್ಯ ಮೃಗಗಳೇ ಧಾವಿಸಿ ಬರುತ್ತವೆ!
TV9 Web
| Updated By: ಸಾಧು ಶ್ರೀನಾಥ್​|

Updated on: Aug 23, 2022 | 8:01 PM

Share

ಈ ವನ್ಯಜೀವಿ ಮೃಗಾಲಯದಲ್ಲಿ ಮುಕ್ತವಾಗಿ ವಿಹರಿಸಲು ಪ್ರಾಣಿಗಳಿಗೆ ವ್ಯವಸ್ಥೆ ಮಾಡಲಾಗಿದೆ. ಆದರೆ ಈ ಮೃಗಾಲಯದಲ್ಲಿ ಮನುಷ್ಯರನ್ನು ಪಂಜರದಲ್ಲಿ ಇರಿಸಲಾಗಿದೆ! ಹುಲಿ, ಸಿಂಹ ಮತ್ತು ಕರಡಿಗಳಂತಹ ಕಾಡು ಪ್ರಾಣಿಗಳು ಪರಸ್ಪರ ಅಟ್ಟಿಸಿಕೊಂಡು ಹೋಗುವುದನ್ನು ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶವಿದೆ.

ವೈರಲ್ ನ್ಯೂಸ್: ಸಿಂಹ, ಹುಲಿಗಳಂತಹ ಶಕ್ತಿಶಾಲಿ ಮತ್ತು ಕ್ರೂರ ಕಾಡುಪ್ರಾಣಿಗಳನ್ನು ಪಂಜರದಲ್ಲಿ ಬಂಧಿಸಿಡುವುದನ್ನು ನಾವು ಆಗಾಗ ನೋಡುತ್ತೇವೆ.. ಜನರ ಮನರಂಜನೆಗಾಗಿ ಮೃಗಾಲಯಗಳಿಗೆ ಬೀಗ ಹಾಕುವುದು ಮತ್ತು ಕೆಲವು ಸಂದರ್ಭಗಳಲ್ಲಿ ಪ್ರದರ್ಶನಕ್ಕೆ ಇಡುವುದು ಒಂದು ರೀತಿ ದುಃಖಕರ ಸಂಗತಿಯೆ. ಕಾಡಿನಲ್ಲಿ ಮುಕ್ತವಾಗಿ ವಿಹರಿಸುವ ಈ ಪ್ರಾಣಿಗಳನ್ನು ಅವುಗಳ ನೈಸರ್ಗಿಕ ವಾಸ ಸ್ಥಾನಗಳಿಂದ ಸ್ಥಳಾಂತರಿಸಲಾಗುತ್ತದೆ ಮತ್ತು ಸೆರೆಯಲ್ಲಿ ಇರಿಸಲಾಗುತ್ತದೆ. ಆದಾಗ್ಯೂ, ಚೀನಾದಲ್ಲಿ ವಿಶಿಷ್ಟವಾದ ಮೃಗಾಲಯವಿದೆ. ಇಲ್ಲಿ ಪ್ರಾಣಿಗಳಲ್ಲ, ಆದರೆ ಮನುಷ್ಯರನ್ನೇ ಪಂಜರದಲ್ಲಿ ಇರಿಸಲಾಗುತ್ತದೆ. ಸಿಂಹ, ಹುಲಿಯಂತಹ ವನ್ಯಮೃಗಗಳು ಮನುಷ್ಯರನ್ನು ಕಂಡರೆ ವಿಚಿತ್ರವಾಗಿ ವರ್ತಿಸುವುದನ್ನು ಇಲ್ಲಿ ಕಾಣಬಹುದು.. ಇನ್ನು ಈ ಪ್ರಾಣಿ ಸಂಗ್ರಹಾಲಯದ ಸಂಪೂರ್ಣ ವಿವರಕ್ಕೆ ಹೋದರೆ…

ಚೀನಾದ ಚಾಂಗ್‌ಕಿಂಗ್‌ನಲ್ಲಿರುವ ಲೆಹೆ ಲೆಡು ವನ್ಯಜೀವಿ ಮೃಗಾಲಯವು ಪ್ರಾಣಿಗಳಿಗೆ ಮುಕ್ತವಾಗಿ ವಿಹರಿಸಲು ವ್ಯವಸ್ಥೆ ಮಾಡಿದೆ. ಆದರೆ ಈ ಮೃಗಾಲಯದಲ್ಲಿ ಜನರನ್ನು ಪಂಜರದಲ್ಲಿ ಬಂಧಿಸಲಾಗಿದೆ. ಹುಲಿ, ಸಿಂಹ ಮತ್ತು ಕರಡಿಗಳಂತಹ ಕಾಡು ಪ್ರಾಣಿಗಳನ್ನು ಅಟ್ಟಿಸಿಕೊಂಡು ಹೋಗುವುದನ್ನು ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶವಿದೆ. ಇದಕ್ಕಾಗಿ ಪ್ರತ್ಯೇಕ ಟಿಕೆಟ್ ವ್ಯವಸ್ಥೆ ಇದೆ. ಬ್ಯಾರಿಕೇಡ್ ಮಾಡಿದ ಟ್ರಕ್‌ನ ಬಾರ್‌ಗಳಿಗೆ ಹಸಿ ಮಾಂಸದ ಉಂಡೆಗಳನ್ನು ಕಟ್ಟಿರುತ್ತಾರೆ. ಸಂದರ್ಶಕರು ಅಂತಹ ಪ್ರಾಣಿಗಳನ್ನು ಹೆಚ್ಚು ಹತ್ತಿರದಿಂದ ನೋಡುವ ಅವಕಾಶವನ್ನು ಹೊಂದಿರುತ್ತಾರೆ. ಪ್ರಾಣಿಗಳು ಆಹಾರದ ನಿರೀಕ್ಷೆಯಲ್ಲಿ ಮನುಷ್ಯರು ಇರುವ ಪಂಜರಗಳತ್ತ ಸುಳಿಯುತ್ತವೆ. ಕೆಲವೊಮ್ಮೆ ಅವು ಮನುಷ್ಯರನ್ನು ಇರಿಸಲಾಗಿರುವ ಪಂಜರದ ಮೇಲೂ ಏರಿಬರುತ್ತವೆ.

ಈ ವೀಡಿಯೊವನ್ನು ತನ್ಸು ಯೆಗೆನ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ಇದು ಮಾನವ ಮೃಗಾಲಯವಾಗಿದ್ದು, ಪ್ರಾಣಿಗಳು ಪಂಜರ ಸೇರಿರುವ ಅಪಾಯಕಾರಿ ಮನುಷ್ಯರನ್ನು ನೋಡಬಹುದು” ಎಂದು ಶೀರ್ಷಿಕೆ ನೀಡಲಾಯಿತು.

ಅಲ್ಲದೆ, ಈ ವಿಡಿಯೋ 8,27,000 ಕ್ಕಿಂತ ಹೆಚ್ಚು ವೀಕ್ಷಣೆಗಳನ್ನು ಮತ್ತು 5,000 ಕ್ಕೂ ಹೆಚ್ಚು ರಿಟ್ವೀಟ್‌ಗಳನ್ನು ಗಳಿಸಿಸಿದೆ. ಇನ್ನು ಒಬ್ಬ ನೆಟ್ಟಿಗರಂತೂ “ಇದು ಎಲ್ಲೆಡೆಯೂ ಹೀಗಿರಬೇಕು. ಅಸಲಿಗೆ ಪ್ರಾಣಿಗಳನ್ನೇ ಏಕೆ ಪಂಜರದಲ್ಲಿ ಇಡಲು ಬಯಸುತ್ತಾರೆ? ಎಂದಿದ್ದಾರೆ.

To read in Telugu click here

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್