AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

8 Years Of Modi Government: ನರೇಂದ್ರ ಮೋದಿ ನೇತೃತ್ವ ಸರ್ಕಾರದ ಡಿಜಿಟಲ್ ಕ್ರಾಂತಿ; ಎಂಟು ವರ್ಷದಲ್ಲಿ ಎಷ್ಟೆಲ್ಲ ಬದಲಾವಣೆ!

Narendra Modi Govt. Schemes: ಕಳೆದ ಎಂಟು ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರವು ಸಮಾಜದ ವಿವಿಧ ಸ್ತರಗಳಿಗೆ ನೇರವಾಗಿ ಪ್ರಯೋಜನವಾಗುವಂತೆ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ತಂದಿರುವ ಬದಲಾವಣೆಗಳ ವಿವರ ಇಲ್ಲಿದೆ.

8 Years Of Modi Government: ನರೇಂದ್ರ ಮೋದಿ ನೇತೃತ್ವ ಸರ್ಕಾರದ ಡಿಜಿಟಲ್ ಕ್ರಾಂತಿ; ಎಂಟು ವರ್ಷದಲ್ಲಿ ಎಷ್ಟೆಲ್ಲ ಬದಲಾವಣೆ!
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: May 25, 2022 | 12:16 PM

Share

ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಕೇಂದ್ರದಲ್ಲಿ ಬಿಜೆಪಿ ಮುಂದಾಳತ್ವದ ಎನ್​ಡಿಎ ಸರ್ಕಾರ ಅಧಿಕಾರ ಹಿಡಿದು 8 ವರ್ಷ ಪೂರ್ಣಗೊಂಡಿದೆ. 2014ನೇ ಇಸವಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ನಂತರದಲ್ಲಿ ದೇಶದ ಡಿಜಿಟಲ್ ವ್ಯವಸ್ಥೆಯಲ್ಲೇ ಕ್ರಾಂತಿಕಾರಿ ಬದಲಾವಣೆಗಳಾಗಿವೆ. 2013-14ರ ವರೆಗೆ ಡಿಜಿಟಲ್ ಮೂಲಸೌಕರ್ಯದ ಕೊರತೆಯಿಂದಾಗಿ ಭಾರತದ ಪಾವತಿ ಎಕೋ ಸಿಸ್ಟಮ್ ಹೆಚ್ಚಾಗಿ ಭೌತಿಕ ವಿಧಾನಗಳಲ್ಲಿ – ನಗದು, ಚೆಕ್ ಇತ್ಯಾದಿಗಳಲ್ಲಿ ನಡೆಯುತ್ತಿತ್ತು; ಆ ಹೊತ್ತಿಗೆ ಇ-ಪೇಮೆಂಟ್​ ಆಯ್ಕೆಗಳು ಇದ್ದಾಗಲೂ ಆ ರೀತಿಯ ಬಳಕೆ ಹೆಚ್ಚಾಗಿತ್ತು. 2013-14ರಲ್ಲಿ ಭಾರತದಲ್ಲಿ ಕೇವಲ 220 ಕೋಟಿ ಇ-ವಹಿವಾಟುಗಳು ನಡೆದಿವೆ. ಇದು ವಿಶ್ವಾದ್ಯಂತ ಡಿಜಿಟಲ್ ವಹಿವಾಟಿನ ಒಂದು ಸಣ್ಣ ಭಾಗವಾಗಿತ್ತು. ದೊಡ್ಡ ಪ್ರಮಾಣದ ಭೌತಿಕ ವಿತ್ತೀಯ ವಹಿವಾಟುಗಳು ತೆರಿಗೆ ವಂಚನೆಗೆ ಸಹಾಯ ಮಾಡಿತ್ತು ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗೆ ಪರ್ಯಾಯವಾಗಿ ವಹಿವಾಟುಗಳನ್ನು ಸುಗಮಗೊಳಿಸಿತು. ಮೋದಿ ಸರ್ಕಾರವು ಅಧಿಕಾರ ವಹಿಸಿಕೊಂಡ ನಂತರ ಸಮಾಜದ ಎಲ್ಲ ವರ್ಗಗಳಿಗೆ ಹಣಕಾಸು ವಹಿವಾಟಿನ ಆದ್ಯತೆ ವಿಧಾನವನ್ನಾಗಿ ಮಾಡುವ ದೃಷ್ಟಿಯಿಂದ ಡಿಜಿಟಲ್ ಪಾವತಿ ಎಕೋ ಸಿಸ್ಟಮ್ ಅಭಿವೃದ್ಧಿಪಡಿಸಲು ಶೀಘ್ರವಾಗಿ ಮುನ್ನಡೆಸಿತು. ಈ ಪ್ರಯತ್ನದ ಫಲಿತಾಂಶಗಳು ಅದ್ಭುತವಾಗಿವೆ.

– ಎಲ್ಲ ಭಾರತೀಯರಿಗೆ ಡಿಜಿಟಲ್ ಪೇಮೆಂಟ್​ಗಳು ಈಗ ಅತ್ಯಂತ ಜನಪ್ರಿಯ ವಹಿವಾಟು ವಿಧಾನವಾಗಿದೆ.

– ಡಿಜಿಟಲ್ ಪೇಮೆಂಟ್​ಗಳನ್ನು ಸಕ್ರಿಯಗೊಳಿಸಲು ಹೆಚ್ಚಿನ ಸ್ಮಾರ್ಟ್‌ಫೋನ್ ಬಳಕೆ ಇದೆ.

– 45 ಕೋಟಿಗೂ ಹೆಚ್ಚು ಜನ್ ಧನ್ ಖಾತೆಗಳು, UPI, ರುಪೇ ಕಾರ್ಡ್‌ಗಳಂತಹ ವಿಶ್ವಾಸಾರ್ಹ ಪಾವತಿ ಆಯ್ಕೆಗಳಿವೆ.

– ಭಾರತವು ಈಗ ವಿಶ್ವದ ಅತಿದೊಡ್ಡ ಡಿಜಿಟಲ್ ಪಾವತಿ ಎಕೋ ಸಿಸ್ಟಮ್ ವ್ಯವಸ್ಥೆಯನ್ನು ಹೊಂದಿದ್ದು, ಇದನ್ನು 10 ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ನಿರ್ಮಿಸಲಾಗಿದೆ.  2020-21ರಲ್ಲಿ ಭಾರತವು 5,554 ಕೋಟಿ ಡಿಜಿಟಲ್ ಪಾವತಿ ವಹಿವಾಟುಗಳನ್ನು ದಾಖಲಿಸಿದೆ. ಇದು 2021-22ರಲ್ಲಿ 7,422 ಕೋಟಿ ಡಿಜಿಟಲ್ ವಹಿವಾಟುಗಳಿಗೆ ಏರಿಕೆಯಾಗಿದೆ.

– 2020 ಮತ್ತು 2021ರಲ್ಲಿ, ಚೀನಾ, ದಕ್ಷಿಣ ಕೊರಿಯಾ ಮತ್ತು ಅಮೆರಿಕಾಗಿಂತ ಭಾರತವು ರಿಯಲ್​ ಟೈಮ್ ಆನ್‌ಲೈನ್ ಪಾವತಿಗಳಲ್ಲಿ ವಿಶ್ವಕ್ಕೇ ನಂಬರ್​ 1 ಆಗಿ ಹೊರಹೊಮ್ಮಿದೆ.

2020ರಲ್ಲಿ ಚೀನಾದ 25.4 ಬಿಲಿಯನ್‌ಗೆ ಹೋಲಿಸಿದರೆ ಭಾರತವು 25.5 ಬಿಲಿಯನ್ ರಿಯಲ್ ಟೈಮ್ ಡಿಜಿಟಲ್ ವಹಿವಾಟುಗಳನ್ನು ದಾಖಲಿಸಿದೆ

ಇದನ್ನೂ ಓದಿ: 8 Years of Modi Government ಎಂಟು ವರ್ಷಗಳ ಅಧಿಕಾರವಧಿಯಲ್ಲಿ ಜನಹಿತಕ್ಕಾಗಿ ಮೋದಿ ಸರ್ಕಾರ ತಂದ 8 ಪ್ರಮುಖ ಯೋಜನೆಗಳು

2021ರಲ್ಲಿ ಭಾರತವು 48.605 ಬಿಲಿಯನ್ ರಿಯಲ್ ಟೈಮ್ ಆನ್‌ಲೈನ್ ವಹಿವಾಟುಗಳನ್ನು ಮಾಡಿದೆ. ಇದು ಚೀನಾಕ್ಕಿಂತ 2.6 ಪಟ್ಟು ದೊಡ್ಡದಾಗಿದೆ.

2021ರಲ್ಲಿ ಶೇ 40ರಷ್ಟು ಜಾಗತಿಕ ರಿಯಲ್ ಟೈಮ್ ಆನ್‌ಲೈನ್ ವಹಿವಾಟುಗಳು ಭಾರತದಲ್ಲಿ ಆಗಿವೆ.

– ಅನೇಕ ಅಂದಾಜುಗಳು 2025ರ ವೇಳೆಗೆ ಭಾರತದಲ್ಲಿ ಪೂರ್ಣಗೊಂಡ ಒಟ್ಟು ವಹಿವಾಟುಗಳಲ್ಲಿ ಡಿಜಿಟಲ್ ಪಾವತಿಗಳ ಪಾಲು ಶೇ 71.7ಕ್ಕೆ ಬೆಳೆಯುತ್ತದೆ ಎಂದು ಹೇಳುತ್ತವೆ.

– ಈ ಆನ್‌ಲೈನ್ ಪಾವತಿಗಳಲ್ಲಿ ಹೆಚ್ಚಿನವು ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್) ಮೂಲಕ 2016ರಲ್ಲಿ ಮೋದಿ ಸರ್ಕಾರವು ಹೊರತಂದಿದೆ

ಹಣಕಾಸು ವರ್ಷ 2018ರಲ್ಲಿ ಈ ವಹಿವಾಟುಗಳ ಮೌಲ್ಯವು ಕೇವಲ ರೂ. 1,098 ಶತಕೋಟಿ ಇದ್ದದ್ದು, ಇದು ಭಾರಿ ಪ್ರಮಾಣದಲ್ಲಿ ಬೆಳೆದು, ಹಣಕಾಸು ವರ್ಷ 2022ರಲ್ಲಿ 68,629 ಬಿಲಿಯನ್​ ರೂಪಾಯಿಗೆ ತಲುಪಿದೆ. ಯುಪಿಐ ಪ್ಲಾಟ್‌ಫಾರ್ಮ್‌ನಲ್ಲಿ 316 ಬ್ಯಾಂಕ್‌ಗಳು ಲೈವ್ ಆಗಿವೆ. 2022ರಲ್ಲಿ ಕೇವಲ ಏಪ್ರಿಲ್ ತಿಂಗಳಿನಲ್ಲಿ 5.58 ಬಿಲಿಯನ್ ಆನ್‌ಲೈನ್ ವಹಿವಾಟುಗಳು ರೂ. 9.83 ಟ್ರಿಲಿಯನ್ ಮೌಲ್ಯದ್ದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Rajeev Chandrasekhar: ಸೈಬರ್ ಭದ್ರತೆ ನಿರ್ದೇಶನದ ಫ್ರೀಕ್ವೆಂಟ್ಲಿ ಆಸ್ಕಡ್ ಕ್ವೆಶ್ಚನ್​ಗಳ ಬಿಡುಗಡೆ ಮಾಡಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

Follow Us
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ