AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೇಟಿಎಂ ಕಂಪೆನಿಯ ಹಾಲಿ ಹಾಗೂ ಮಾಜಿ ಉದ್ಯೋಗಿಗಳು ಸೇರಿ 350 ಮಂದಿ ಆಗಲಿದ್ದಾರೆ ಕೋಟ್ಯಧಿಪತಿ

ಪೇಟಿಎಂ ಲಿಸ್ಟಿಂಗ್ ನಂತರ ಸದ್ಯದ ಮತ್ತು ಮಾಜಿ ಉದ್ಯೋಗಿಗಳು 350 ಮಂದಿ ಮಿಲಿಯನೇರ್​ಗಳು ಆಗಲಿದ್ದಾರೆ. ಇಲ್ಲಿದೆ ಕಂಪೆನಿಯ ಲಿಸ್ಟಿಂಗ್ ವಿವರ.

ಪೇಟಿಎಂ ಕಂಪೆನಿಯ ಹಾಲಿ ಹಾಗೂ ಮಾಜಿ ಉದ್ಯೋಗಿಗಳು ಸೇರಿ 350 ಮಂದಿ ಆಗಲಿದ್ದಾರೆ ಕೋಟ್ಯಧಿಪತಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Nov 13, 2021 | 10:18 PM

Share

ಪೇಟಿಎಂ ಕಂಪೆನಿಯ 250 ಕೋಟಿ ಅಮೆರಿಕನ್ ಡಾಲರ್​ನ ಐಪಿಒಗೆ ಕೆಲವರು ಧನ್ಯವಾದಗಳು ಅಂತ ಹೇಳಲೇಬೇಕಿದೆ. ಡಿಜಿಟಲ್ ಪಾವತಿಗಳು ಮತ್ತು ಹಣಕಾಸು ಸೇವೆಗಳ ಪ್ಲಾಟ್​ಫಾರ್ಮ್​ ಪೇಟಿಎಂನ ಸುಮಾರು 350 ಮಾಜಿ ಹಾಗೂ ಸದ್ಯದ ಉದ್ಯೋಗಿಗಳು ಕೋಟ್ಯಧಿಪತಿಗಳಾಗಲು ಸಿದ್ಧರಾಗಿದ್ದಾರೆ. ರಾಯಿಟರ್ಸ್ ವರದಿಯ ಪ್ರಕಾರ, ಈ ಪ್ರತಿಯೊಬ್ಬ ಪೇಟಿಎಂ ಉದ್ಯೋಗಿ ಈಗ ಕನಿಷ್ಠ 1 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯವನ್ನು ಹೊಂದಲಿದ್ದಾರೆ. ಗಮನಾರ್ಹ ಅಂಶ ಏನೆಂದರೆ, ರೂ. 18,300 ಕೋಟಿ ಷೇರು ಮಾರಾಟದೊಂದಿಗೆ ಪೇಟಿಎಂ ಐಪಿಒ ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ಅತಿದೊಡ್ಡ ಫಿನ್‌ಟೆಕ್ ಐಪಿಒ ಆಗಿದೆ.

ತಂದೆಯ ಆಕ್ಷೇಪಣೆ ಹೊರತಾಗಿಯೂ ಒಂಬತ್ತು ವರ್ಷಗಳ ಹಿಂದೆ ಪೇಟಿಎಂಗೆ ಸೇರಿದ್ದ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ಸಿದ್ಧಾರ್ಥ್ ಪಾಂಡೆ, ಮುಂದಿನ ವಾರ ಕಂಪೆನಿಯು ಲಿಸ್ಟಿಂಗ್ ಮಾಡಿದ ನಂತರ ಕೋಟ್ಯಧಿಪತಿ ಆಗಲು ಸಿದ್ಧರಾಗಿರುವವರಲ್ಲಿ ಒಬ್ಬರು. ಆ ಸಮಯದಲ್ಲಿ ಪೇಟಿಎಂ 1,000ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಸಣ್ಣ ಪೇಮೆಂಟ್ ಕಂಪೆನಿಯಾಗಿತ್ತು. 2013ರಲ್ಲಿ ತನ್ನ ತಂದೆಯೊಂದಿಗಿನ ಸಂಭಾಷಣೆಯನ್ನು ನೆನಪಿಸಿಕೊಳ್ಳುತ್ತಾ,: “ನನ್ನ ತಂದೆ ತುಂಬ ನಿರುತ್ಸಾಹಗೊಳಿಸಿದರು. ಅವರು ಹೇಳಿದಂತೆ, ‘ಈ ಪೇಟೈಮ್ ಎಂದರೇನು?!’ ‘ಒಮ್ಮೆ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಗೊತ್ತು,’” ಎಂದಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

“ಈಗ ಅವರು (ನನ್ನ ತಂದೆ) ನಿಸ್ಸಂದೇಹವಾಗಿ ತುಂಬಾ ಸಂತೋಷವಾಗಿದ್ದಾರೆ. ಅವರು ನನ್ನನ್ನು ನೆಲದ ಮೇಲೆ ಇರುವಂತೆ ಹೇಳಿದ್ದಾರೆ,” ಎಂದಿದ್ದಾರೆ. 39 ವರ್ಷದ ಪಾಂಡೆ ಅವರು ಪೇಟಿಎಂನಲ್ಲಿ ಕೆಲಸ ಮಾಡುತ್ತಿಲ್ಲ (ಅವರು ಮತ್ತೊಂದು ಸ್ಟಾರ್ಟ್‌ಅಪ್‌ಗೆ ಸೇರಿಕೊಂಡಿದ್ದಾರೆ). ಅವರು ಕಂಪನಿಯಲ್ಲಿದ್ದ ಏಳು ವರ್ಷಗಳಲ್ಲಿ ಅವರು ಹತ್ತು ಸಾವಿರ ಷೇರುಗಳನ್ನು ಸಂಗ್ರಹಿಸಿರುವುದಾಗಿ ಹೇಳಿದ್ದಾರೆ. ನವೆಂಬರ್ 12ರಂದು ಆ ಷೇರುಗಳ ಬೆಲೆ 2,150 ರೂಪಾಯಿ. ಅಂದರೆ, ಶೀಘ್ರದಲ್ಲೇ ಅವರು 75 ಲಕ್ಷ ರೂಪಾಯಿಗಿಂತಲೂ ಹೆಚ್ಚು ಮೌಲ್ಯವನ್ನು ಹೊಂದಿರುತ್ತಾರೆ. ಕಂಪೆನಿಯ ಸಂಸ್ಥಾಪಕರ ಬಗ್ಗೆ ಮಾತನಾಡುತ್ತಾ ಪಾಂಡೆ: “ಪೇಟಿಎಂ ಯಾವಾಗಲೂ ಉದಾರ ಪಾವತಿದಾರ. ವಿಜಯ್ (ಪೇಟಿಎಂ ಸಂಸ್ಥಾಪಕ ಶರ್ಮಾ) ಯಾವಾಗಲೂ ಜನರು ಹಣ ಸಂಪಾದಿಸಬೇಕು, ಅವರು ಜೀವನದಲ್ಲಿ ಮೇಲಕ್ಕೆ ಬರಬೇಕು ಎಂದು ಬಯಸುತ್ತಾರೆ,” ಎನ್ನುತ್ತಾರೆ.

ಇದನ್ನೂ ಓದಿ: Paytm IPO: ಪೇಟಿಎಂ ಐಪಿಒಗೆ ದೊರೆಯದ ಹೂಡಿಕೆದಾರರ ನಿರೀಕ್ಷಿತ ಸ್ವಾಗತ; ಸಮಸ್ಯೆ ಏನಂತ?

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್