ಯೋಗ ಮತ್ತು ಆಯುರ್ವೇದ ಕ್ಷೇತ್ರದಲ್ಲಿ ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ ಪತಂಜಲಿ ಆಯುರ್ವೇದ ಸಂಸ್ಥೆಯು ಆರೋಗ್ಯ ಮತ್ತು ಫಿಟ್ನೆಸ್ಗೆ ತನ್ನದೇ ಆದ ಹೆಗ್ಗುರುತನ್ನು ಸೃಷ್ಟಿಸಿದೆ. ಇಂದು ಈ ಸಂಸ್ಥೆ ಆಯುರ್ವೇದ ಮತ್ತು ಹರ್ಬಲ್ (ಗಿಡಮೂಲಿಕೆ) ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ದೇಶಾದ್ಯಂತ ಕೋಟ್ಯಂತರ ಜನರು ಪತಂಜಲಿಯ ವಿವಿಧ ಉತ್ಪನ್ನಗಳ ಪ್ರಯೋಜನ ಪಡೆಯುತ್ತಿದ್ದಾರೆ. ಪತಂಜಲಿ ಕಂಪನಿಯು ಈಗ ಸಾಮಾಜಿಕ ಜವಾಬ್ದಾರಿಯ ಕ್ಷೇತ್ರದಲ್ಲಿ ಹಲವು ಪ್ರಮುಖ ಉಪಕ್ರಮಗಳನ್ನು ಕೈಗೊಂಡಿದೆ. ಅದು ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಮೂಲಕ ವ್ಯಾಪಕವಾದ ಸಾಮಾಜಿಕ ಸೇವೆಗಳಿಗೆ ಗಮನಹರಿಸುತ್ತಿದೆ.
ಪತಂಜಲಿಯ ಉಪಕ್ರಮಗಳು ಸಾಮಾನ್ಯ ಹಿಂದುಳಿದ ಜನರ ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣದ ಮೂಲ ಧ್ಯೇಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ. ಹಿಂದುಳಿದ ಸಮುದಾಯಗಳ ಸಬಲೀಕರಣ, ಕ್ರೀಡೆ ಮತ್ತು ಕಲಾ ಕ್ಷೇತ್ರದಲ್ಲಿ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮತ್ತು ಭಾರತದ ಯೋಗ ಮತ್ತು ಆಯುರ್ವೇದದ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸುವುದಕ್ಕೆ ಒತ್ತು ನೀಡಲಾಗುತ್ತದೆ.
ಇದನ್ನೂ ಓದಿ: ವಿಶ್ವಾದ್ಯಂತ ಯೋಗಕ್ಕೆ ವಿಶೇಷ ಗುರುತು ನೀಡಿದ ಪತಂಜಲಿ ಮತ್ತು ಬಾಬಾ ರಾಮದೇವ್
ಆಯುರ್ವೇದ ಮತ್ತು ಯೋಗದ ವಿಸ್ತರಣೆ: ಪತಂಜಲಿಯು ಸಮಗ್ರ ಆರೋಗ್ಯಕ್ಕಾಗಿ ಆಯುರ್ವೇದ ಮತ್ತು ಯೋಗವನ್ನು ಸಕ್ರಿಯವಾಗಿ ಉತ್ತೇಜಿಸುತ್ತದೆ. ಇದರ ಅಡಿಯಲ್ಲಿ, ಉಚಿತ ಯೋಗ ಶಿಬಿರಗಳನ್ನು ಆಯೋಜಿಸಲಾಗುತ್ತದೆ, ಅಲ್ಲಿ ಬಾಬಾ ರಾಮದೇವ್ ಭಾರತದಾದ್ಯಂತ ಉಚಿತ ಯೋಗ ಶಿಬಿರಗಳನ್ನು ಆಯೋಜಿಸುತ್ತಾರೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪುಷ್ಟಿ ನೀಡುತ್ತದೆ. ಲಕ್ಷಾಂತರ ಜನರು ಒಂದೇ ಸಮಯದಲ್ಲಿ ಒಂದೇ ಸ್ಥಳಕ್ಕೆ ಬರುತ್ತಾರೆ. ಹರಿದ್ವಾರದಲ್ಲಿ ಪತಂಜಲಿ ಸಂಶೋಧನಾ ಸಂಸ್ಥೆಯ ಮೂಲಕ ಆಯುರ್ವೇದ ಚಿಕಿತ್ಸೆಗಳು ಮತ್ತು ವೈಜ್ಞಾನಿಕ ಸಂಶೋಧನೆಗಳ ಕುರಿತು ತರಬೇತಿಯನ್ನು ನೀಡಲಾಗುತ್ತಿದೆ.
ಗ್ರಾಮೀಣಾಭಿವೃದ್ಧಿ ಮತ್ತು ರೈತ ಸಬಲೀಕರಣ: ಪತಂಜಲಿ ಸಂಸ್ಥೆಯು ಹಳ್ಳಿಯ ಜನರು ಮತ್ತು ರೈತರಿಗೆ ನೆರವು ನೀಡುತ್ತದೆ. ಈ ಯೋಜನೆಯಡಿಯಲ್ಲಿ, ರೈತರು ಸಾವಯವ ಕೃಷಿ ಮಾಡಲು ಪ್ರೋತ್ಸಾಹಿಸಲಾಗುತ್ತದೆ. ಆಧುನಿಕ ಕೃಷಿಗಾಗಿ ತರಬೇತಿ, ಬೀಜಗಳು ಮತ್ತು ಸಂಪನ್ಮೂಲಗಳನ್ನು ರೈತರಿಗೆ ಒದಗಿಸಲಾಗುತ್ತದೆ. ಕಂಪನಿಯು ರೈತರಿಗೆ ಕೃಷಿ ಸರಕುಗಳನ್ನು ಸಮಂಜಸವಾದ ಬೆಲೆಯಲ್ಲಿ ಒದಗಿಸುತ್ತದೆ.
ಉದ್ಯೋಗ ಸೃಷ್ಟಿ: ಪತಂಜಲಿಯ ಸಾಮಾಜಿಕ ಉಪಕ್ರಮಗಳಲ್ಲಿ ಉದ್ಯೋಗಸೃಷ್ಟಿ ಒಂದು ಪ್ರಮುಖ ಅಂಶವಾಗಿದೆ. ಇದರ ಅಡಿಯಲ್ಲಿ, ಪತಂಜಲಿ ಗ್ರಾಮೀಣ ಪ್ರದೇಶಗಳಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಇದು ಗ್ರಾಮೀಣ ಆರ್ಥಿಕತೆಯನ್ನೂ ಬಲಪಡಿಸುತ್ತದೆ.
ಗಿಡಮೂಲಿಕೆ ಕೃಷಿ ಯೋಜನೆ: ಪತಂಜಲಿ ಆಯುರ್ವೇದ ಸಂಸ್ಥಾನವು ಔಷಧೀಯ ಸಸ್ಯಗಳು ಮತ್ತು ಗಿಡಮೂಲಿಕೆಗಳನ್ನು ಬೆಳೆಸಲು ರೈತರೊಂದಿಗೆ ಸಹಕರಿಸುತ್ತದೆ. ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ಅವರ ಜೀವನ ಮಟ್ಟ ಸುಧಾರಿಸುವುದು ಇದರ ಉದ್ದೇಶವಾಗಿದೆ.
ಇದನ್ನೂ ಓದಿ: ಆಯುರ್ವೇದಕ್ಕೆ ಪರಿಸರವೇ ಉಸಿರು; ಪತಂಜಲಿ ಇಟ್ಟಾಯ್ತು ಪರಿಸರ ಸಂರಕ್ಷಣೆ ಕೈಂಕರ್ಯದ ಹೆಜ್ಜೆ
ಇದೆಲ್ಲದರ ಹೊರತಾಗಿ, ಪತಂಜಲಿ ಸಂಸ್ಥೆ ಶ್ಲಾಘನೀಯ ಎನಿಸಬಹುದಅದ ಇನ್ನೂ ಅನೇಕ ಉಪಕ್ರಮಗಳನ್ನು ತೆಗೆದುಕೊಂಡಿದೆ. ಉದಾಹರಣೆಗೆ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಕ್ಷೇತ್ರದಲ್ಲಿ, ಪತಂಜಲಿ ಸಂಸ್ಥೆಯು ವಂಚಿತ ಸಮುದಾಯಗಳ ಅಭಿವೃದ್ಧಿಗೆ ಒತ್ತು ನೀಡುತ್ತದೆ. ಆಚಾರ್ಯಕುಲಂ ಶಾಲೆಯ ಅಡಿಯಲ್ಲಿ ಸಾಂಪ್ರದಾಯಿಕ ಭಾರತೀಯ ಮೌಲ್ಯಗಳು ಮತ್ತು ವೈದಿಕ ಜ್ಞಾನದ ಜೊತೆಗೆ ಆಧುನಿಕ ಶಿಕ್ಷಣವನ್ನು ಕಲಿಸಲಅಗುತ್ತದೆ.
ಪತಂಜಲಿ ಗುರುಕುಲವು ಪ್ರಾಚೀನ ಗುರುಕುಲ ಪದ್ಧತಿಯಡಿಯಲ್ಲಿ ವಿದ್ಯಾರ್ಥಿಗಳಿಗೆ ಸಮಗ್ರ ಶಿಕ್ಷಣವನ್ನು ನೀಡುವ ಗುರಿಯನ್ನು ಹೊಂದಿದೆ. ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ, ಪತಂಜಲಿ ಆಹಾರ ಸಂಸ್ಕರಣೆ, ಆಯುರ್ವೇದ ಮತ್ತು ಯೋಗದಂತಹ ಕ್ಷೇತ್ರಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.
ಇದನ್ನೂ ಓದಿ: ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಸಾಂಸ್ಕೃತಿಕ ರಾಯಭಾರಿಯಂತಿರುವ ಪತಂಜಲಿ
ಇದಲ್ಲದೆ, ರೈತ ಸಬಲೀಕರಣ, ಸಾವಯವ ಕೃಷಿಗಾರಿಕೆ ಕ್ಷೇತ್ರದಲ್ಲಿ ಗೋಲ್ಡನ್ ಪೀಕಾಕ್ ಪ್ರಶಸ್ತಿ; ಆರೋಗ್ಯ ಪಾಲನೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಭಾರತ್ ಸಿಎಸ್ಆರ್ ಇಂಪ್ಯಾಕ್ಟ್ ಪ್ರಶಸ್ತಿ; ಸಂಸ್ಕೃತ ಸಂರಕ್ಷಣೆ ಮತ್ತು ಪ್ರಚಾರದಲ್ಲಿ ಕೊಡುಗೆಗಾಗಿ ಸಂಸ್ಕೃತ ಸಂವರ್ಧನ್ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ