AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲ ಮಾಡಿ ತೀರಿಸಲು ಕಷ್ಟ ಪಡ್ತಾ ಇದ್ರೆ ಇಲ್ಲಿವೆ ಸಿಂಪಲ್ ಟ್ರಿಕ್ಸ್‌

ಸಾಲ ಮಾಡಿ ತುಪ್ಪ ತಿನ್ನೋ ಅನ್ನೋ ಮಾತಿದೆ. ಆದರೆ ಸಾಲ ಮಾಡಿದ ಮೇಲೆ ಅದನ್ನು ತೀರಿಸೋದು ದೊಡ್ಡ ತಲೆ ನೋವು. ಹೀಗಾಗಿ ಮಾಡಿದ ಸಾಲವನ್ನು ಅದಷ್ಟು ಬೇಗ ಕ್ಲಿಯರ್ ಮಾಡೋದು ಉತ್ತಮ. ನೀವು ನಿಮ್ಮ ತಿಂಗಳ ಸಂಬಳ, ಇಎಂಐ ಮೊತ್ತ, ಬಡ್ಡಿದರ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟು ಸಾಲ ಮರುಪಾವತಿ ಮಾಡಿದ್ರೆ ಆರ್ಥಿಕ ಹೊರೆಯಿಂದ ಮುಕ್ತರಾಗುವುದು ಖಂಡಿತ.

ಸಾಲ ಮಾಡಿ ತೀರಿಸಲು ಕಷ್ಟ ಪಡ್ತಾ ಇದ್ರೆ ಇಲ್ಲಿವೆ ಸಿಂಪಲ್ ಟ್ರಿಕ್ಸ್‌
ಸಾಂದರ್ಭಿಕ ಚಿತ್ರImage Credit source: Getty Images
ಸಾಯಿನಂದಾ
|

Updated on: Jul 29, 2026 | 5:07 PM

Share

ಮುಖ್ಯಾಂಶಗಳು

  • ಆರ್ಥಿಕ ಪರಿಸ್ಥಿತಿ ಎದುರಾದಾಗ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುತ್ತೇವೆ
  • ಸಾಲದ ಪಡೆಯುವಾಗ ಮುನ್ನ ಸಾಲದ ಮೇಲಿನ ಬಡ್ಡಿದರದ ಬಗ್ಗೆ ತಿಳಿದಿರಲಿ
  • ಸಾಲದಿಂದ ಮುಕ್ತರಾಗಲು ಈ ಕೆಲವು ಟ್ರಿಕ್ಸ್ ಬಳಸುವುದು ಉತ್ತಮ.

ಹಣಕಾಸು ಸಮಸ್ಯೆ (financial problem), ಆರ್ಥಿಕ ಸ್ಥಿತಿ ಹದಗೆಟ್ಟಾಗ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುತ್ತೇವೆ. ಸಾಲ ಪಡೆಯುವಾಗ ಇರುವ ಖುಷಿ ಮರುಪಾವತಿಸುವಾಗ ಇರಲ್ಲ.  ಹೌದು, ಪಡೆದ ಸಾಲಕ್ಕಿಂತ, ಅದರ ಮೇಲಿನ ಬಡ್ಡಿಯೇ ಹೆಚ್ಚಾಗಿರುತ್ತದೆ. ಸಾಲ ಪಡೆದು ತೀರಿಸಲಾಗದೇ ಒದ್ದಾಡ್ತಾ ಇರಬಹುದು. ನೀವು ಈ ಸಾಲದಿಂದ (loan) ಮುಕ್ತರಾಗಲು ಈ ಕೆಲವು ಟ್ರಿಕ್ಸ್ ಬಳಸುವುದು ಉತ್ತಮ. ಕಡಿಮೆ ಬಡ್ಡಿದರದಲ್ಲಿ ಇರುವ ಸಾಲ ಪಡೆಯುವುದು, ಇಎಂಐ ಮೊತ್ತದಲ್ಲಿ ಹೆಚ್ಚಳ ಈ ಕೆಲವು ಅಂಶಗಳ ಮೇಲೆ ಗಮನ ಹರಿಸುವುದು ಸಾಲದಿಂದ ಬಹುಬೇಗನೇ ಮುಕ್ತರಾಗಲು ದಾರಿ ಮಾಡಿಕೊಡುತ್ತದೆ.

ಸಾಲದಿಂದ ಮುಕ್ತರಾಗುವುದು ಹೇಗೆ?

  • ಸಾಲವನ್ನು ಬೇಗ ತೀರಿಸಲು ಬಜೆಟ್ ರೂಪಿಸುವುದು ಬಹಳ ಮುಖ್ಯ.
  • ನಿಮ್ಮ ಸಂಪೂರ್ಣ ಖರ್ಚುಗಳನ್ನು ಬರೆದಿಟ್ಟು,  ಅನಗತ್ಯ ಖರ್ಚಿಗೆ ಲಗಾಮು ಹಾಕಿ ಸಾಲ ತೀರಿಸುವತ್ತ ಗಮನ ಕೊಡಿ.
  •  ತಿಂಗಳ ಆದಾಯದಲ್ಲಿ ಕನಿಷ್ಠ ಭಾಗವನ್ನು ಉಳಿಸಿ, ಅದನ್ನು ಸಾಲ ಮರುಪಾವತಿಗೆ ಬಳಸಿಕೊಳ್ಳಿ.
  •  ನೀವು ಪಡೆದ ಸಾಲದ ಬಡ್ಡಿದರ ತಿಳಿದುಕೊಳ್ಳಿ. ಮೊದಲು ಯಾವ ಸಾಲಕ್ಕೆ ಹೆಚ್ಚು ಬಡ್ಡಿ ಇದೆಯೋ ಅದನ್ನು ಮೊದಲು ತೀರಿಸಿ.
  • ಸಣ್ಣಪುಟ್ಟ ಸಾಲಗಳನ್ನು ಒಂದೊಂದಾಗಿ ಬೇಗ ಮುಗಿಸಿದ್ರೆ ಸಾಲದ ಹೊರೆ ಸ್ವಲ್ಪ ಕಡಿಮೆಯಾಗುತ್ತದೆ.
  • ಕೇವಲ ಕನಿಷ್ಠ ಇಎಂಐ ಕಟ್ಟದೆ, ಪ್ರತಿ ತಿಂಗಳು ಹೆಚ್ಚಿನ ಹಣವನ್ನು ಅಸಲಿಗೆ ಪಾವತಿಸಿ.
  • ಬೋನಸ್ ಅಥವಾ ಅನಿರೀಕ್ಷಿತ ಹಣ ಬಂದರೆ, ಆ ಹಣವನ್ನು ಸಾಲದ ಮುಂಗಡ ಪಾವತಿಗೆ ಬಳಸಿಕೊಳ್ಳಿ.
  • ಸಾಲ ಪಡೆಯುವ ಮುನ್ನ ನೂರು ಬಾರಿ ಯೋಚಿಸಿ, ಈಗಾಗಲೇ ಸಾಲದಲ್ಲಿ ಮುಳುಗಿ ಹೋಗಿದ್ದರೆ ಮತ್ತೆ ಸಾಲ ತೆಗೆಯುವ ಪ್ರಯತ್ನ ಬೇಡ.
  •  ಕಡಿಮೆ ಬಡ್ಡಿದರ ನೀಡುವ ಬೇರೆ ಬ್ಯಾಂಕಿಗೆ ನಿಮ್ಮ ಸಾಲವನ್ನು ವರ್ಗಾಯಿಸಿ. ಇದರಿಂದ ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಸಾಲವೆಂದರೆ ಮಾರುದೂರ ಹೋಗುತ್ತೀರಾ? ಕೆಟ್ಟಸಾಲ, ಒಳ್ಳೆಯ ಸಾಲದ ವ್ಯತ್ಯಾಸ ತಿಳಿದಿರಿ… ಇಲ್ಲಿವೆ ಕೆಲ ಟ್ರಿಕ್ಸ್

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಸಾಲದ ಹೊರೆ ಹೆಚ್ಚಾಗಲು ಕಾರಣವೇನು?

ಉತ್ತರ: ಅಸಲಿಗಿಂತ ಬಡ್ಡಿದರವೇ ಹೆಚ್ಚಾದರೆ ಸಾಲದ ಹೊರೆ ಹೆಚ್ಚಾಗುತ್ತದೆ.

ಪ್ರಶ್ನೆ: ಬ್ಯಾಂಕ್ ನಿಂದ ಸಾಲ ಪಡೆಯುವಾಗ ಯಾವ ಅಂಶವನ್ನು ಗಮನಿಸಬೇಕು?

ಉತ್ತರ: ಸಾಲದ ಪಡೆಯುವಾಗ ಮೊದಲು ಬಡ್ಡಿದರದ ಬಗ್ಗೆ ಗಮನವಿರಲಿ.

ಪ್ರಶ್ನೆ: ಸಾಲದಿಂದ ಮುಕ್ತರಾಗುವುದು ಹೇಗೆ?

ಉತ್ತರ: ಸಾಲದಿಂದ ಮುಕ್ತರಾಗಲು ಅನಗತ್ಯ ಖರ್ಚು ವೆಚ್ಚ ಕಡಿಮೆಯಿರಲಿ, ಇಎಂಐ ಪಾವತಿಯಲ್ಲಿ ಹೆಚ್ಚಿಸಿ, ಕಡಿಮೆ ಬಡ್ಡಿದರ ಇರುವ ಬ್ಯಾಂಕ್‌ಗೆ ಸಾಲ ವರ್ಗಾಯಿಸಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ