AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Krutrim Record: ಒಂದು ಬಿಲಿಯನ್ ಡಾಲರ್ ಮೌಲ್ಯದ ಭಾರತದ ಮೊದಲ ಎಐ ಕಂಪನಿ; ಓಲಾ ಸ್ಥಾಪಕರ ಹೊಸ ಸಾಹಸಕ್ಕೆ ಫಲಶೃತಿ

AI Startup Krutrim Becomes Unicorn company: ಭವೀಶ್ ಅಗರ್ವಾಲ್ ಸ್ಥಾಪಿಸಿದ ಕೃತ್ರಿಮ್ ಕಂಪನಿ ಒಂದೇ ತಿಂಗಳಲ್ಲಿ 1 ಬಿಲಿಯನ್ ಡಾಲರ್ ಮೌಲ್ಯದ ಯೂನಿಕಾರ್ನ್ ಕಂಪನಿಯಾಗಿದೆ. ಭಾರತದ ಎಐ ಸ್ಟಾರ್ಟಪ್​ವೊಂದು ಯೂನಿಕಾರ್ನ್ ಆಗಿ ಬೆಳೆದದ್ದು ಇದೇ ಮೊದಲು. ಭವೀಶ್ ಅಗರ್ವಾಲ್ ಅವರಿಗೆ ತಮ್ಮ ಕಂಪನಿ ಎಐ ಇಕೋಸಿಸ್ಟಂಗೆ ಸರ್ವರ್ ಮತ್ತು ಸೂಪರ್ ಕಂಪ್ಯೂಟರ್ ತಯಾರಿಸುವ ಗುರಿ ಇಟ್ಟಿದ್ದಾರೆ.

Krutrim Record: ಒಂದು ಬಿಲಿಯನ್ ಡಾಲರ್ ಮೌಲ್ಯದ ಭಾರತದ ಮೊದಲ ಎಐ ಕಂಪನಿ; ಓಲಾ ಸ್ಥಾಪಕರ ಹೊಸ ಸಾಹಸಕ್ಕೆ ಫಲಶೃತಿ
ಭವೀಶ್ ಅಗರ್ವಾಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 26, 2024 | 5:01 PM

Share

ನವದೆಹಲಿ, ಜನವರಿ 26: ಒಲಾ ಸಂಸ್ಥೆಯ ಭವೀಶ್ ಅಗರ್ವಾಲ್ ಸ್ಥಾಪಿಸಿದ ಕೃತ್ರಿಮ್ (Krutrim) ಎಂಬ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಂಸ್ಥೆ ಕೃತ್ರಿಮ್ ಯೂನಿಕಾರ್ನ್ ಆಗಿ ಬೆಳೆದಿದೆ. ಮ್ಯಾಟ್ರಿಕ್ಸ್ ಪಾರ್ಟ್ನರ್ಸ್ ಇಂಡಿಯಾ ಸೇರಿದಂತೆ ವಿವಿಧ ಹೂಡಿಕೆದಾರರಿಗೆ ಕೃತ್ರಿಮ್​ಗೆ 50 ಮಿಲಿಯನ್ ಡಾಲರ್ ಫಂಡಿಂಗ್ ಸಿಕ್ಕಿದೆ. ಇದರೊಂದಿಗೆ ಈ ಸ್ಟಾರ್ಟಪ್​ಗೆ ಸಿಕ್ಕಿದ ಒಟ್ಟು ಹೂಡಿಕೆ ಮೊತ್ತ 1 ಬಿಲಿಯನ್ ಡಾಲರ್ ಗಡಿ ದಾಟಿದೆ. ಈ ಮೂಲಕ ಯೂನಿಕಾರ್ನ್ ಕಂಪನಿ ಎನಿಸಿದೆ. ಭಾರತದ ಎಐ ಸ್ಟಾರ್ಟಪ್​ವೊಂದು ಯೂನಿಕಾರ್ನ್ (unicorn company) ಎನಿಸಿದ್ದು ಇದೇ ಮೊದಲು.

ಅಚ್ಚರಿ ಎಂದರೆ ಕೃತ್ರಿಮ್ ಸಂಸ್ಥೆ ಒಂದು ತಿಂಗಳ ಹಿಂದಷ್ಟೇ ಶುರುವಾಗಿದ್ದು. ಇಷ್ಟು ಅಲ್ಪಾವಧಿಯಲ್ಲಿ ಬಿಲಿಯನ್ ಡಾಲರ್ ಮೌಲ್ಯದ ಕಂಪನಿಯಾಗಿ ಬೆಳೆದಿದ್ದು ಗಮನಾರ್ಹವೇ ಸರಿ.

ಕೃತ್ರಿಮ್ ಸಂಸ್ಥೆ ಲಾರ್ಜ್ ಲ್ಯಾಂಗ್ವೇಜ್ ಮಾಡಲ್ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದೆ. ಹಾಗೆಯೇ, ಡಾಟಾ ಸೆಂಟರ್​ಗಳನ್ನೂ ತಯಾರಿಸುತ್ತಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇಕೋಸಿಸ್ಟಂಗೆ ಬೇಕಾದ ಸರ್ವರ್ ಮತ್ತು ಸೂಪರ್ ಕಂಪ್ಯೂಟರ್​ಗಳ ನಿರ್ಮಾಣ ಮಾಡುವುದು ಕೃತ್ರಿಮ್​ನ ಗುರಿ ಎನ್ನಲಾಗಿದೆ.

ಇದನ್ನೂ ಓದಿ: CEO Drives Cab: ಹಗಲಿನಲ್ಲಿ ಸಿಇಒ, ರಾತ್ರಿಯಲ್ಲಿ ಬೆಂಗಳೂರಿನ ಕ್ಯಾಬ್ ಡ್ರೈವರ್; ಹೀಗೂ ಇರುತ್ತಾರಾ ಒಂದು ಸಂಸ್ಥೆಯ ಮುಖ್ಯಸ್ಥರು?

ಭಾರತಕ್ಕೆ ತನ್ನದೇ ಆದ ಎಐ ನಿರ್ಮಾಣವಾಗಬೇಕು. ದೇಶದ ಮೊದಲ ಪೂರ್ಣ ಎಐ ಕಂಪ್ಯೂಟಿಂಗ್ ಸ್ಟ್ಯಾಕ್ ಅನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ ಎಂದು ಭವೀಶ್ ಅಗರ್ವಾಲ್ ಹೇಳಿದ್ದಾರೆ.

ಮೈಕ್ರೋಸಾಫ್ಟ್ ಬೆಂಬಲಿತ ಓಪನ್​ಎಐ ಸಂಸ್ಥೆ ಚ್ಯಾಟ್​ಜಿಪಿಟಿ ಶುರು ಮಾಡಿದ ಬಳಿಕ ಜಾಗತಿಕವಾಗಿ ಹಲವು ಕಂಪನಿಗಳು ಎಐ ರೇಸ್​ನಲ್ಲಿ ನಿರತವಾಗಿವೆ. ದೊಡ್ಡ ಬಂಡವಾಳ ಹೊಂದಿರುವ ಗೂಗಲ್ ಮುಂತಾದ ಕಂಪನಿಗಳು ಮುಂದೋಡುತ್ತಿವೆ. ಈ ರೇಸ್​ಗೆ ಭಾರತೀಯ ಕಂಪನಿಗಳೂ ಪ್ರವೇಶ ಪಡೆದಿವೆ. ಆದರೆ, ತಂತ್ರಜ್ಞಾನ ಮತ್ತು ಬಂಡವಾಳದ ಕೊರತೆ ಇರುವ ಈ ಓಟದಲ್ಲಿ ಹಿಂದುಳಿದಿವೆ. ಆದರೂ ಕೂಡ ಭಾರತೀಯ ಭಾಷೆಗಳಲ್ಲಿ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್​ಗಳನ್ನು ರಚಿಸುವ ಪ್ರಯತ್ನಗಳಾಗುತ್ತಿವೆ.

ಇದನ್ನೂ ಓದಿ: Calligo: ಬೆಂಗಳೂರಿನ ಕ್ಯಾಲಿಗೋ ಸಾಧನೆ; ಪೊಸಿಟ್ ಎನೇಬಲ್ಡ್ ಸಿಲಿಕಾನ್ ರಚಿಸಿದ ವಿಶ್ವದ ಮೊದಲ ಕಂಪನಿ

ಸದ್ಯ ಎಐ ತಂತ್ರಜ್ಞಾನದಲ್ಲಿ ಅಮೆರಿಕ ಮತ್ತು ಚೀನಾ ಹೆಚ್ಚು ಪ್ರಾಬಲ್ಯ ಹೊಂದಿವೆ. ಇದರ ಮಧ್ಯೆ ಬೇರೆ ದೇಶಗಳಲ್ಲಿ ಅವುಗಳ ಮಟ್ಟದಲ್ಲಿ ಎಐ ಇಕೋಸಿಸ್ಟಂ ರೂಪಿಸುವ ಪ್ರಯತ್ನ ಇದೆ. ಸರ್ವಂ ಎಂಬ ಭಾರತೀಯ ಕಂಪನಿಯೊಂದು ಓಪನ್ ಹಾಥಿ ಎಂಬ ಮೊದಲ ಹಿಂದಿ ಎಲ್​ಎಲ್​ಎಂ ಅನ್ನು ಆರಂಭಿಸಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ