AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೋನಸ್ ಷೇರು ಬಿಡುಗಡೆಯಾಗಿ ಎರಡೇ ದಿನಕ್ಕೆ ಅಕೌಂಟ್ ಸೇರಲಿದೆ; ಸೆಬಿ ನಡೆಯಿಂದ ಯಾರಿಗೆ ಲಾಭ?

SEBI T+2 rule for bonus shares: ಬೋನಸ್ ಷೇರು ಹಂಚಿಕೆ ಮಾಡಿದ ಬಳಿಕ ಎರಡು ಕಾರ್ಯ ದಿನಗಳಲ್ಲಿ ಅದು ಟ್ರೇಡಿಂಗ್​ಗೆ ಲಭ್ಯ ಆಗುವಂತಾಗಬೇಕು ಎಂದು ಸೆಬಿ ಹೊಸ ನಿಯಮ ಮಾಡಿದೆ. ಸದ್ಯ ಇರುವ ವ್ಯವಸ್ಥೆಯಲ್ಲಿ ಬೋನಸ್ ಷೇರು ಹಂಚಿಕೆಯಾಗಿ ಎರಡು ವಾರದಲ್ಲಿ ಅದು ಟ್ರೇಡಿಂಗ್​ಗೆ ಸಿಗುತ್ತದೆ. ಈಗ ಸೆಬಿ ರೂಪಿಸಿರುವ ಟಿ+2 ನಿಯಮವು ಅಕ್ಟೋಬರ್​ನಿಂದ ಜಾರಿಗೆ ಬರಬಹುದು.

ಬೋನಸ್ ಷೇರು ಬಿಡುಗಡೆಯಾಗಿ ಎರಡೇ ದಿನಕ್ಕೆ ಅಕೌಂಟ್ ಸೇರಲಿದೆ; ಸೆಬಿ ನಡೆಯಿಂದ ಯಾರಿಗೆ ಲಾಭ?
ಸೆಬಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 18, 2024 | 10:46 AM

Share

ನವದೆಹಲಿ, ಸೆಪ್ಟೆಂಬರ್ 18: ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಕಂಪನಿಗಳು ಬೋನಸ್ ಷೇರುಗಳನ್ನು ನೀಡಿದರೆ ಅವುಗಳು ಇನ್ಮುಂದೆ ತ್ವರಿತವಾಗಿ ಲಭ್ಯ ಇರಲಿವೆ. ಬೋನಸ್ ಷೇರು ಎರಡೇ ದಿನಕ್ಕೆ ಟ್ರೇಡಿಂಗ್​ಗೆ ಲಭ್ಯ ಇರುವಂತೆ ಸೆಬಿ (SEBI) ನಿಯಮ ಬದಲಿಸಿದೆ. ಅಕ್ಟೋಬರ್ 1ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ಸದ್ಯ ಇರುವ ನಿಯಮದ ಪ್ರಕಾರ ಬೋನಸ್ ಷೇರು ನೀಡುವ ರೆಕಾರ್ಡ್ ಡೇಟ್​ನಿಂದ ಎರಡು ವಾರದ ಬಳಿಕ ಆ ಬೋನಸ್ ಷೇರುಗಳನ್ನು ಟ್ರೇಡಿಂಗ್ ಮಾಡಬಹುದು. ಮೊನ್ನೆ (ಸೆ. 16) ಸೆಬಿ ಹೊರಡಿಸಿದ ಸುತ್ತೋಲೆಯಲ್ಲಿ ಟಿ+2 ನಿಯಮ ಪಾಲನೆಗೆ ಸೂಚಿಸಲಾಗಿದೆ. ಟಿ ಎಂದರೆ ಇಲ್ಲಿ ಬೋನಸ್ ಷೇರು ನೀಡುವ ದಿನಾಂಕವಾಗಿರುತ್ತದೆ. ಎರಡು ಕಾರ್ಯಕಾರಿ ದಿನ ಅಥವಾ ವರ್ಕಿಂಗ್ ಡೇನಲ್ಲಿ ಬೋನಸ್ ಷೇರುಗಳು ಟ್ರೇಡಿಂಗ್​ಗೆ ಲಭ್ಯ ಇರಬೇಕು ಎನ್ನುತ್ತದೆ ಸೆಬಿ ನಿಯಮ.

ವರ್ಕಿಂಗ್ ಡೇ ಎಂದರೆ ಷೇರು ಮಾರುಕಟ್ಟೆ ತೆರೆದಿರುವ ದಿನ. ಶನಿವಾರ ಮತ್ತು ಭಾನುವಾರ ಇತ್ಯಾದಿ ರಜಾ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳು ವರ್ಕಿಂಗ್ ಡೇಗಳಾಗಿರುತ್ತವೆ. ಶುಕ್ರವಾರ ಒಂದು ಕಂಪನಿ ಬೋನಸ್ ಷೇರು ಒದಗಿಸಿದರೆ ಆ ಷೇರುಗಳು ಮಂಗಳವಾರ ಟ್ರೇಡಿಂಗ್​ಗೆ ಲಭ್ಯ ಇರುತ್ತವೆ.

ಇದನ್ನೂ ಓದಿ: ಇಂದು ಎನ್​ಪಿಎಸ್ ವಾತ್ಸಲ್ಯ ಸ್ಕೀಮ್ ಲೋಕಾರ್ಪಣೆ; ಮಕ್ಕಳ ಉಜ್ವಲ ಭವಿಷ್ಯಕ್ಕಿರುವ ಈ ಯೋಜನೆ ಬಗ್ಗೆ ಸಮಗ್ರ ಮಾಹಿತಿ

ಸೆಬಿ ಹೊರಡಿಸಿದ ಸುತ್ತೋಲೆ ಪ್ರಕಾರ ಒಂದು ಕಂಪನಿಯು ಬೋನಸ್ ಷೇರು ನೀಡಲು ನಿರ್ಧರಿಸಿದರೆ, ಅದರ ಮಂಡಳಿ ಅನುಮೋದನೆ ಸಿಕ್ಕು ಐದು ಕಾರ್ಯ ದಿನದೊಳಗೆ ಷೇರು ವಿನಿಮಯ ಕೇಂದ್ರಗಳಿಂದಲೂ ಅನುಮೋದನೆಗೆ ಅರ್ಜಿ ಸಲ್ಲಿಸಬೇಕು. ಹಾಗೆಯೇ, ಬೋನಸ್ ಷೇರು ವಿತರಣೆಗೆ ಕಂಪನಿಯು ರೆಕಾರ್ಡ್ ಡೇಟ್ ನಿಗದಿ ಮಾಡಿ ಅದರ ಮಾಹಿತಿಯನ್ನು ಸ್ಟಾಕ್ ಎಕ್ಸ್​ಚೇಂಜ್​ಗೂ ನೀಡಿರಬೇಕು.

ಬೋನಸ್ ಷೇರುಗಳ ದಾಖಲು ದಿನ ಅಥವಾ ರೆಕಾರ್ಡ್ ಡೇಟ್ ಆಗಿ ಒಂದು ಕಾರ್ಯ ದಿನದ ಬಳಿಕ ಆ ಷೇರುಗಳನ್ನು ಅಲಾಟ್ಮೆಂಟ್ ಮಾಡಬೇಕು. ಅಲಾಟ್ಮೆಂಟ್ ದಿನದಂದು ಮಧ್ಯಾಹ್ನದ ವೇಳೆಗೆ ಡೆಪಾಸಿಟರಿ ಸಿಸ್ಟಂಗೆ ಬೋನಸ್ ಷೇರುಗಳನ್ನು ಕಳುಹಿಸಬೇಕು. ಬೋನಸ್ ಷೇರು ಸಂಬಂಧ ಸೆಬಿ ಹೊರಡಿಸಿದ ಈ ಟಿ+2 ನಿಯಮದಿಂದ ಕಂಪನಿ, ಹೂಡಿಕೆದಾರರು, ಬ್ರೋಕರ್​ಗಳು ಮತ್ತು ಷೇರು ವಿನಿಮಯ ಕೇಂದ್ರಗಳು ಎಲ್ಲರಿಗೂ ಅನುಕೂಲವಾಗುತ್ತದೆ.

ಇದನ್ನೂ ಓದಿ: ಪೌಂಡ್ ಸ್ಟರ್ಲಿಂಗ್​ಗೆ 14 ಶತಮಾನಗಳ ಇತಿಹಾಸ; ವಿಶ್ವದ ಅತ್ಯಂತ ಹಳೆಯ ಕರೆನ್ಸಿಯ ಕುತೂಹಲಕಾರಿ ಕಥೆ

ಇತ್ತೀಚೆಗೆ, ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ 1:1 ಅನುಪಾತದಲ್ಲಿ ಬೋನಸ್ ಷೇರುಗಳನ್ನು ವಿತರಿಸುವುದಾಗಿ ಹೇಳಿದೆ. ಅದರ ರೆಕಾರ್ಡ್ ಡೇಟ್ ಇನ್ನೂ ಘೋಷಣೆ ಆಗಿಲ್ಲ. ಅಕ್ಟೋಬರ್​ನಲ್ಲಿ ಆಗುವ ನಿರೀಕ್ಷೆ ಇದೆ.

ಬೋನಸ್ ಷೇರು ಎಂದರೇನು?

ಬೋನಸ್ ಷೇರು ಎಂದರೆ ಒಂದು ಕಂಪನಿ ಈಗಿರುವ ಷೇರುಗಳಿಗೆ ಹೆಚ್ಚುವರಿಯಾಗಿ ಇನ್ನಷ್ಟು ಷೇರುಗಳನ್ನು ಹಂಚುತ್ತದೆ. ಷೇರು ವಿಭಜನೆಗೂ ಬೋನಸ್ ಷೇರಿಗೂ ವ್ಯತ್ಯಾಸ ಇದೆ. ಷೇರು ವಿಭಜನೆಯಲ್ಲಿ ಒಂದು ಷೇರನ್ನು ನಿರ್ದಿಷ್ಟ ಭಾಗಗಳಾಗಿ ವಿಭಜನೆ ಮಾಡಲಾಗುತ್ತದೆ. ಅದರ ಷೇರುಮೌಲ್ಯವೂ ಅಷ್ಟೇ ಪ್ರಮಾಣದಲ್ಲಿ ಕಡಿಮೆ ಮಾಡಲಾಗುತ್ತದೆ. ಅದರ ಫೇಸ್ ವ್ಯಾಲ್ಯೂ ಕೂಡ ಅದೇ ರೀತಿ ಕಡಿಮೆ ಆಗುತ್ತದೆ. ಬೋನಸ್ ಷೇರಿನಲ್ಲೂ ಷೇರುಮೌಲ್ಯ ಒಟ್ಟಾರೆ ಅಷ್ಟೇ ಇರುತ್ತದಾದರೂ ಒಂದು ಷೇರಿನ ಫೇಸ್​​ವ್ಯಾಲ್ಯೂನಲ್ಲಿ ಬದಲಾವಣೆ ಆಗುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ