AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈರಾ, ಕೈರಾ, ನೈನಾ… ಡಿಜಿಟಲ್ ಲೋಕದಲ್ಲಿ ‘AI ಇನ್‌ಫ್ಲುಯೆನ್ಸರ್ಸ್’ ಹವಾ; ಯಂತ್ರಿಣಿಯರ ಮಧ್ಯೆ ಮನುಷ್ಯರಿಗಿದೆಯಾ ಬೆಲೆ?

Human Creators Thrive Amidst AI Influencers: ಬ್ರ್ಯಾಂಡ್‌ಗಳು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಜನರನ್ನು ತಲುಪಲು AI ಇನ್‌ಫ್ಲುಯೆನ್ಸರ್‌ಗಳನ್ನು ಬಳಸುತ್ತಿವೆ. ಮ್ಯಾನ್‌ಫೋರ್ಸ್‌ನ 'ಮೈರಾ ಕಪೂರ್' ಮತ್ತು ಕ್ಯಾರಟ್‌ಲೇನ್‌ನ 'ಕೈರಾ' ಇದಕ್ಕೆ ಉದಾಹರಣೆ. ಆದರೆ, ಕೃತಕ ಬುದ್ಧಿಮತ್ತೆಯ ಪಾತ್ರಗಳು ಹೆಚ್ಚುತ್ತಿದ್ದರೂ, ನೈಜ ಮತ್ತು ವಿಶ್ವಾಸಾರ್ಹ ಫಾಲೋವರ್ಸ್ ಹೊಂದಿರುವ ಮಾನವ ಕ್ರಿಯೇಟರ್ಸ್‌ಗಳಿಗೆ ಬೇಡಿಕೆ, ಮೌಲ್ಯ ಹಾಗೂ ಸಂಭಾವನೆ ಮತ್ತಷ್ಟು ಹೆಚ್ಚುತ್ತಿದೆ. ವಿಶ್ವಾಸಾರ್ಹತೆಯೇ ಡಿಜಿಟಲ್ ಮಾರುಕಟ್ಟೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.

ಮೈರಾ, ಕೈರಾ, ನೈನಾ... ಡಿಜಿಟಲ್ ಲೋಕದಲ್ಲಿ 'AI ಇನ್‌ಫ್ಲುಯೆನ್ಸರ್ಸ್' ಹವಾ; ಯಂತ್ರಿಣಿಯರ ಮಧ್ಯೆ ಮನುಷ್ಯರಿಗಿದೆಯಾ ಬೆಲೆ?
AI ಇನ್‌ಫ್ಲುಯೆನ್ಸರ್ಸ್Image Credit source: Whosthat and Anandbazar
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 26, 2026 | 4:56 PM

Share

ಬೆಂಗಳೂರು, ಮೇ 26: ಇತ್ತೀಚಿನ ದಿನಗಳಲ್ಲಿ ಪ್ರಮುಖ ಬ್ರ್ಯಾಂಡ್‌ಗಳು ತಮ್ಮ ಮಾರ್ಕೆಟಿಂಗ್ ಬಜೆಟ್ ಅನ್ನು ಮರುಹಂಚಿಕೆ ಮಾಡುತ್ತಿವೆ. ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಜನರನ್ನು ತಲುಪುವ ಉದ್ದೇಶದಿಂದ, ಬ್ರ್ಯಾಂಡ್‌ಗಳು ಈಗ ನ್ಯಾನೋ ಮತ್ತು ಮೈಕ್ರೋ ಕಂಟೆಂಟ್ ಕ್ರಿಯೇಟರ್ಸ್‌ಗಳ ಬದಲಿಗೆ ಕೃತಕ ಬುದ್ಧಿಮತ್ತೆ (AI) ಮೂಲಕ ಸೃಷ್ಟಿಸಲಾದ ವರ್ಚುವಲ್ ವ್ಯಕ್ತಿತ್ವಗಳನ್ನು (AI Influencers) ಬಳಸಿಕೊಳ್ಳಲು ಮುಂದಾಗುತ್ತಿವೆ. ಆದರೆ, ಮಾರುಕಟ್ಟೆಯಲ್ಲಿ ಇಂತಹ ಸಿಂಥೆಟಿಕ್ ಇನ್‌ಫ್ಲುಯೆನ್ಸರ್‌ಗಳ ಸಂಖ್ಯೆ ಹೆಚ್ಚುತ್ತಿದ್ದರೂ, ನೈಜ ಮತ್ತು ವಿಶ್ವಾಸಾರ್ಹ ಫಾಲೋವರ್ಸ್ ಹೊಂದಿರುವ ಹ್ಯೂಮನ್ ಕ್ರಿಯೇಟರ್ಸ್‌ಗಳಿಗೆ (ಕಂಟೆಂಟ್ ಸೃಷ್ಟಿಸುವ ವ್ಯಕ್ತಿಗಳು) ಬೇಡಿಕೆ, ಮೌಲ್ಯ ಹಾಗೂ ಸಂಭಾವನೆ ಮತ್ತಷ್ಟು ಹೆಚ್ಚುತ್ತಿದೆ ಎಂದು ದಿ ಮಿಂಟ್ ಪತ್ರಿಕೆಯ ವಿಶೇಷ ವರದಿಯಲ್ಲಿ ಹೇಳಲಾಗಿದೆ.

ಮಾರುಕಟ್ಟೆಗೆ ಲಗ್ಗೆ ಇಟ್ಟ ‘ಮೈರಾ ಕಪೂರ್’ ಮತ್ತು ‘ಕೈರಾ’

ಖ್ಯಾತ ಕಾಂಡೋಮ್ ಬ್ರ್ಯಾಂಡ್ ‘ಮ್ಯಾನ್‌ಫೋರ್ಸ್’ ಇತ್ತೀಚೆಗೆ ‘ಮೈರಾ ಕಪೂರ್’ ಎಂಬಾಕೆಯನ್ನು ತನ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಘೋಷಿಸಿದೆ. ಆದರೆ ಅಚ್ಚರಿಯ ವಿಷಯವೆಂದರೆ, ಮೈರಾ ಎಂಬಾಕೆ ನಿಜವಾಗಿ ಅಸ್ತಿತ್ವದಲ್ಲೇ ಇಲ್ಲ! ಆಕೆ ಸಂಪೂರ್ಣವಾಗಿ ಬ್ರ್ಯಾಂಡ್ ಒಡೆತನದ ಒಂದು ಎಐ ಮಾಡೆಲ್.

“ಸಾಂಪ್ರದಾಯಿಕ ಅಂಬಾಸಿಡರ್‌ಗಳಿಗೆ ಹೋಲಿಸಿದರೆ, AI ಪಾತ್ರಗಳು (Character) ಹೆಚ್ಚಿನ ಕ್ರಿಯೇಟಿವಿಟಿಗೆ ಅವಕಾಶ (Creative flexibility) ನೀಡುತ್ತವೆ. ವಿವಿಧ ಪ್ರಚಾರಗಳು ಮತ್ತು ಪ್ಲಾಟ್‌ಫಾರ್ಮ್‌ಗಳಿಗೆ ತಕ್ಕಂತೆ ಇವುಗಳನ್ನು ಸುಲಭವಾಗಿ ಬಳಸಿಕೊಳ್ಳಬಹುದು” ಎಂದು ಮ್ಯಾನ್‌ಕೈಂಡ್ ಫಾರ್ಮಾ ಲಿಮಿಟೆಡ್‌ನ ಗ್ರಾಹಕ ವ್ಯವಹಾರಗಳ ಮಾರಾಟ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥ ಜಾಯ್ ಚಟರ್ಜಿ ತಿಳಿಸಿದ್ದಾರೆ. ಸಂಸ್ಥೆಯು ಮುಂದಿನ ದಿನಗಳಲ್ಲಿ ಕಂಟೆಂಟ್ ರಚನೆ ಮತ್ತು ಗ್ರಾಹಕರ ಸಂವಹನಕ್ಕಾಗಿ ಎಐ ಉಪಕರಣಗಳನ್ನು ವ್ಯಾಪಕವಾಗಿ ಬಳಸಲು ಯೋಜಿಸಿದೆ.

ಇದನ್ನೂ ಓದಿ: ಏರ್ಟೆಲ್​ನಿಂದ ಕಮರ್ಷಿಯಲ್ 5ಜಿ ನೆಟ್ವರ್ಕ್ ಸ್ಲೈಸಿಂಗ್ ಸರ್ವಿಸ್; ಉತ್ತಮ ವೇಗಕ್ಕೆ ಪ್ರೀಮಿಯಮ್ ದರ?

ಇದೇ ಹಾದಿಯಲ್ಲಿ, ಪ್ರಸಿದ್ಧ ಐಸ್‌ಕ್ರೀಮ್ ತಯಾರಕ ಸಂಸ್ಥೆ ‘ವಾಡಿಲಾಲ್’ ಮಾನವ ಮತ್ತು ಎಐ ಮಿಶ್ರಣದ ‘ವ್ಯಾಡಿ’ (Vaddy) ಎಂಬ ಮ್ಯಾಸ್ಕಾಟ್ ಅನ್ನು ಬಿಡುಗಡೆ ಮಾಡಿದೆ. ಪ್ರಮುಖ ಜ್ಯುವೆಲ್ಲರಿ ಬ್ರ್ಯಾಂಡ್ ‘ಕ್ಯಾರಟ್‌ಲೇನ್’ (Carat Lane) ಎಐ ಇನ್‌ಫ್ಲುಯೆನ್ಸರ್ ‘ಕೈರಾ’ (Kyra) ಜೊತೆ ಅಭಿಯಾನ ನಡೆಸಿದ್ದರೆ, ಮತ್ತೊಂದು ಜನಪ್ರಿಯ ಎಐ ಇನ್‌ಫ್ಲುಯೆನ್ಸರ್ ‘ನೈನಾ’ (Naina) ಈಗಾಗಲೇ ಒಪ್ಪೋ, ಕೋಟಕ್ ಮತ್ತು ಸೋಫಿ ಅಂತಹ ಬ್ರ್ಯಾಂಡ್‌ಗಳೊಂದಿಗೆ ಕೆಲಸ ಮಾಡಿದೆ.

ದೀರ್ಘಾವಧಿಯ ತಂತ್ರಗಾರಿಕೆ

‘ನೈನಾ’ ಎಐ ಪಾತ್ರವನ್ನು ಸೃಷ್ಟಿಸಿದ ‘ಅವತಾರ್ ಮೆಟಾ ಲ್ಯಾಬ್ಸ್’ನ ಸಹ-ಸ್ಥಾಪಕ ಅಭಿಷೇಕ್ ರಜ್ದಾನ್ ಮಾತನಾಡಿ, “ಹಿಂದೆ ಎಐ ಇನ್‌ಫ್ಲುಯೆನ್ಸರ್‌ಗಳನ್ನು ಕೇವಲ ಒಂದು ಪ್ರಚಾರದ ಪ್ರಯೋಗವಾಗಿ ನೋಡಲಾಗುತ್ತಿತ್ತು. ಆದರೆ ಇಂದು ಬ್ರ್ಯಾಂಡ್‌ಗಳು ಇದನ್ನು ದೀರ್ಘಾವಧಿಯ ವಿಷಯ ಮತ್ತು ಸಂವಹನ ತಂತ್ರವಾಗಿ ಪರಿಗಣಿಸುತ್ತಿವೆ,” ಎಂದಿದ್ದಾರೆ.

ಇದನ್ನೂ ಓದಿ: ವಿದೇಶೀ ಹೂಡಿಕೆದಾರರು ಸದ್ಯಕ್ಕೆ ಭಾರತಕ್ಕೆ ಬರಲ್ಲ ಎಂದ ಅಮರ್ ಅಂಬಾನಿ; ಎಫ್​ಐಐಗಳ ಆಗನಕ್ಕೆ ಬೇಕು ಈ 3 ಕಾರಣಗಳು

ಆದರೆ, ಕೇವಲ ಎಐ ತಂತ್ರಜ್ಞಾನವಿದ್ದರೆ ಸಾಲದು, ಅದಕ್ಕೆ ಸಾಂಸ್ಕೃತಿಕ ಪ್ರಸ್ತುತತೆ ಮತ್ತು ಬಲವಾದ ಕಥೆ ಹೇಳುವ ಶೈಲಿ (Storytelling) ಬೇಕು. ಭವಿಷ್ಯದಲ್ಲಿ ಎಐ ಇನ್‌ಫ್ಲುಯೆನ್ಸರ್‌ಗಳು ಕೇವಲ ಪುನರಾವರ್ತಿತ ಬ್ರ್ಯಾಂಡ್ ಸಂವಹನಗಳನ್ನು ನಿಭಾಯಿಸಲಿದ್ದಾರೆ. ಆದರೆ ನೈಜ ವಿಶ್ವಾಸಾರ್ಹತೆಗಾಗಿ ಮಾನವ ಕ್ರಿಯೇಟರ್ಸ್‌ಗಳಿಗೆ ಹೆಚ್ಚಿನ ಬೇಡಿಕೆ ಮುಂದುವರಿಯಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ತಾಜ್ ಮಹಲ್​ ಮುಂದೆ ಪತ್ನಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ರೂಬಿಯೋ
ತಾಜ್ ಮಹಲ್​ ಮುಂದೆ ಪತ್ನಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ರೂಬಿಯೋ
ಗಲಾಟೆ ವೇಳೆ ಯುವಕನ ಕಾಲಿಗೆ ಗುಂಡು ಹಾರಿಸಿದ ಉದ್ಯಮಿಯ ಅಂಗರಕ್ಷಕ
ಗಲಾಟೆ ವೇಳೆ ಯುವಕನ ಕಾಲಿಗೆ ಗುಂಡು ಹಾರಿಸಿದ ಉದ್ಯಮಿಯ ಅಂಗರಕ್ಷಕ
ಸಿದ್ದರಾಮಯ್ಯ-ರಾಹುಲ್ ಗಾಂಧಿ ಹೈವೋಲ್ಟೇಜ್ ಸಭೆಯ ಇನ್ಸ್​​​ಸೈಡ್ ಮಾಹಿತಿ
ಸಿದ್ದರಾಮಯ್ಯ-ರಾಹುಲ್ ಗಾಂಧಿ ಹೈವೋಲ್ಟೇಜ್ ಸಭೆಯ ಇನ್ಸ್​​​ಸೈಡ್ ಮಾಹಿತಿ
ಬಿಜೆಪಿ ಹೈಕಮಾಂಡ್​ಗೆ ಬ್ಲಾಕ್​ಮೇಲ್ ತಂತ್ರ ಗೊತ್ತಾಗಿದೆ: ಯತ್ನಾಳ್
ಬಿಜೆಪಿ ಹೈಕಮಾಂಡ್​ಗೆ ಬ್ಲಾಕ್​ಮೇಲ್ ತಂತ್ರ ಗೊತ್ತಾಗಿದೆ: ಯತ್ನಾಳ್
ಗುರು ಸಂಚಾರ ಧನುಸ್ಸು ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಗುರು ಸಂಚಾರ ಧನುಸ್ಸು ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ: ಮುಸ್ಲಿಮರಿಂದ ಪ್ರತಿಭಟನೆ
ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ: ಮುಸ್ಲಿಮರಿಂದ ಪ್ರತಿಭಟನೆ
ಗುರು ಸಂಚಾರದಿಂದ ಈ ಒಂದು ರಾಶಿಗೆ ಡಬಲ್ ಧಮಾಕ!
ಗುರು ಸಂಚಾರದಿಂದ ಈ ಒಂದು ರಾಶಿಗೆ ಡಬಲ್ ಧಮಾಕ!
ಪರಮೇಶ್ವರ್ ಸಿಎಂ ಆಗಬೇಕು ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ!
ಪರಮೇಶ್ವರ್ ಸಿಎಂ ಆಗಬೇಕು ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ!
ಡಿಕೆಶಿ, ಸಿದ್ದರಾಮಯ್ಯ ಜೊತೆ ಹೈಕಮಾಂಡ್​​ ಸಭೆಯ ಕಾರಣ ಇನ್ನೂ ನಿಗೂಢ!
ಡಿಕೆಶಿ, ಸಿದ್ದರಾಮಯ್ಯ ಜೊತೆ ಹೈಕಮಾಂಡ್​​ ಸಭೆಯ ಕಾರಣ ಇನ್ನೂ ನಿಗೂಢ!
ರಾಜ್ಯದ ಜನತೆಗೆ ಸುಪ್ರೀಂ ಕೋರ್ಟ್‌ನಿಂದ ಸಿಕ್ತು ಬಂಪರ್ ಗುಡ್ ನ್ಯೂಸ್
ರಾಜ್ಯದ ಜನತೆಗೆ ಸುಪ್ರೀಂ ಕೋರ್ಟ್‌ನಿಂದ ಸಿಕ್ತು ಬಂಪರ್ ಗುಡ್ ನ್ಯೂಸ್