BSNL Masterplan: ಜಿಯೋ, ಏರ್ಟೆಲ್ ಪ್ರಾಬಲ್ಯ ತಡೆಯಲು ಬಿಎಸ್​ಎನ್​ಎಲ್​ನಿಂದ ಭರ್ಜರಿ ‘ವೊಡಾಫೋನ್’ ಐಡಿಯಾ

Telecom survival war: ಜಿಯೋ ಮತ್ತು ಏರ್ಟೆಲ್ ಎದುರು ಪೈಪೋಟಿಯಲ್ಲಿ ನಿಲ್ಲಲು ಹವಣಿಸುತ್ತಿರುವ ಬಿಎಸ್​ಎನ್​ಎಲ್ ಈ ನಿಟ್ಟಿನಲ್ಲಿ ವೊಡಾಫೋನ್ ಐಡಿಯಾ ನೆರವು ಪಡೆಯಲು ಆಸಕ್ತವಾಗಿದೆ. ವೊಡಾಫೋನ್ ಐಡಿಯಾದ 4ಜಿ ನೆಟ್ವರ್ಕ್ ಅನ್ನು ಬಳಸಲು ಅವಕಾಶ ದೊರಕಿಸಿಕೊಡುವಂತೆ ಕೋರಿ ಕೇಂದ್ರ ಸಚಿವರಿಗೆ ಬಿಎಸ್​ಎನ್​ಎಲ್ ಪ್ರಸ್ತಾಪ ಸಲ್ಲಿಸಿದೆ. ಟಿಸಿಎಸ್​ನಿಂದ ಬಿಎಸ್​ಎನ್​ಎಲ್​ಗೆ ದೇಶಾದ್ಯಂತ 4ಜಿ ನೆಟ್ವರ್ಕ್ ಅಳವಡಿಕೆ ಆಗುವವರೆಗೂ ವೊಡಾಫೋನ್ ಐಡಿಯಾದ ನೆಟ್ವರ್ಕ್ ಬಳಕೆಗೆ ಮನವಿ ಮಾಡಲಾಗಿದೆ.

BSNL Masterplan: ಜಿಯೋ, ಏರ್ಟೆಲ್ ಪ್ರಾಬಲ್ಯ ತಡೆಯಲು ಬಿಎಸ್​ಎನ್​ಎಲ್​ನಿಂದ ಭರ್ಜರಿ ‘ವೊಡಾಫೋನ್’ ಐಡಿಯಾ
ಬಿಎಸ್​ಎನ್​ಎಲ್
Follow us
|

Updated on: Feb 20, 2024 | 11:23 AM

ನವದೆಹಲಿ, ಫೆಬ್ರುವರಿ 20: ದೇಶದ ಟೆಲಿಕಾಂ ವಲಯದಲ್ಲಿ ರಿಲಾಯನ್ಸ್ ಜಿಯೋ ಮತ್ತು ಭಾರ್ತಿ ಏರ್ಟೆಲ್ ಸಂಸ್ಥೆಗಳ ಪ್ರಾಬಲ್ಯ ಎದುರಿಸಲು ಸರ್ಕಾರಿ ಸ್ವಾಮ್ಯದ ಬಿಎಸ್​ಎನ್​ಎಲ್ (BSNL) ಹೊಸ ಲೆಕ್ಕಾಚಾರ ಹಾಕಿದೆ. ಜಿಯೋ ಮತ್ತು ಏರ್ಟೆಲ್ ಎದುರು ಪೈಪೋಟಿ ನೀಡಲು ಪರದಾಡುತ್ತಿರುವ ಬಿಎಸ್​ಎನ್​ಎಲ್, ಇದೀಗ ತನ್ನಂತಹುದೇ ಸ್ಥಿತಿಯಲ್ಲಿರುವ ವೊಡಾಫೋನ್ ಐಡಿಯಾ (Vodafone-Idea) ಜೊತೆ ಕೈಜೋಡಿಸಲು ಬಯಸುತ್ತಿದೆ. ವೊಡಾಫೋನ್ ಐಡಿಯಾದ 4ಜಿ ನೆಟ್ವರ್ಕ್ ಬಳಕೆಗೆ ಅವಕಾಶ ಪಡೆಯಲು ಈಗ ಬಿಎಸ್​ಎನ್​ಎಲ್ ಪ್ರಯತ್ನಿಸುತ್ತಿದೆ. ಈ ಮೂಲಕ ಬಿಎಸ್​ಎನ್​ಎಲ್ ಗ್ರಾಹಕರು ಬೇರೆ ಕಡೆ ವಲಸೆ ಹೋಗುವುದನ್ನು ತಪ್ಪಿಸುವುದು ಮಾಸ್ಟರ್ ಪ್ಲಾನ್ ಆಗಿದೆ. ಬಿಎಸ್​ಎನ್​ಎಲ್​ನ ಉದ್ಯೋಗಿಗಳ ಒಕ್ಕೂಟ ಇಂಥದ್ದೊಂದು ಪ್ರಸ್ತಾಪವನ್ನು ಕೇಂದ್ರ ಟೆಲಿಕಾಂ ಮತ್ತು ಐಟಿ ಸಚಿವ ಡಾ. ಅಶ್ವಿನಿ ವೈಷ್ಣವ್ ಅವರಲ್ಲಿ ಸಲ್ಲಿಸಿದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ.

ವೊಡಾಫೋನ್​ನ 4ಜಿ ನೆಟವರ್ಕ್ ಬಳಕೆಯಿಂದ ಬಿಎಸ್​ಎನ್​ಎಲ್​ಗೆ ಏನು ಪ್ರಯೋಜನ?

ಸರ್ಕಾರಿ ಸ್ವಾಮ್ಯದ ಬಿಎಸ್​ಎನ್​ಎಲ್ ಒಂದು ಕಾಲದಲ್ಲಿ ಪ್ರಮುಖ ಟೆಲಿಕಾಂ ಕಂಪನಿಯಾಗಿತ್ತು. ಆದರೆ, ಟೆಕ್ನಾಲಜಿ ಅಪ್​ಗ್ರೇಡ್ ಆಗದೇ ಇದ್ದ ಪರಿಣಾಮ ಇವತ್ತು ಬಹಳಷ್ಟು ಗ್ರಾಹಕರನ್ನು ಕಳೆದುಕೊಂಡಿದೆ. ಬಿಎಸ್​ಎನ್​ಎಲ್ ನೆಟ್ವರ್ಕ್ ಇನ್ನೂ 3ಜಿ ಹಂತ ದಾಟಿ 4ಜಿಗೆ ಬಂದಿಲ್ಲ. ಹೀಗಾಗಿ, ಗ್ರಾಹಕರನ್ನು ಕಳೆದುಕೊಳ್ಳುತ್ತಿದೆ.

ಇದನ್ನೂ ಓದಿ: 16ನೇ ಹಣಕಾಸು ಆಯೋಗದ ಸದಸ್ಯ ನಿರಂಜನ್ ರಾಜಾಧ್ಯಕ್ಷ ಹೊರಕ್ಕೆ; ವೈಯಕ್ತಿಕ ಕಾರಣದಿಂದ ಹಿಂದೆ ಸರಿದ ಸದಸ್ಯ

ಇನ್ನೊಂದೆಡೆ ವೊಡಾಫೋನ್ ಐಡಿಯಾ ಬಳಿ ಉತ್ತಮವಾದ 4ಜಿ ನೆಟ್ವರ್ಕ್ ಇದೆ. ಆದರೆ, ಬೇರೆ ಬೇರೆ ಕಾರಣಕ್ಕೆ ಅದೂ ಕೂಡ ಅದರ ಗ್ರಾಹಕರು ಜಿಯೋ, ಏರ್ಟೆಲ್​ಗೆ ವಲಸೆ ಹೋಗುವುದು ತಪ್ಪಿಲ್ಲ. ಈಗ ವೊಡಾಫೋನ್ ಐಡಿಯಾದ 4ಜಿ ನೆಟ್ವರ್ಕ್ ಅನ್ನು ಬಳಕೆ ಮಾಡಲು ಬಿಎಸ್​ಎನ್​ಎಲ್​ಗೆ ಅವಕಾಶ ದೊರಕಿಸಿಕೊಟ್ಟರೆ ಅದರಿಂದ ಎರಡೂ ಟೆಲಿಕಾಂ ಕಂಪನಿಗಳಿಗೆ ಅನುಕೂಲವಾಗುತ್ತದೆ ಎಂದು ಸಚಿವರಿಗೆ ಬರೆದ ಪತ್ರದಲ್ಲಿ ಬಿಎಸ್​ಎನ್​ಎಲ್ ಎಂಪ್ಲಾಯೀ ಯೂನಿಯನ್​ನ ಪ್ರಧಾನ ಕಾರ್ಯದರ್ಶಿ ಪಿ ಅಭಿಮನ್ಯು ವಿವರಿಸಿದ್ದಾರೆ.

ಅಲ್ಲದೇ, ವೊಡಾಫೋನ್ ಐಡಿಯಾದಲ್ಲಿ ಸರ್ಕಾರದ ಷೇರುಪಾಲು ಶೇ. 33.1ರಷ್ಟಿರುವುದರಿಂದ ಅದರ 4ಜಿ ನೆಟ್ವರ್ಕ್ ಬಳಕೆಗೆ ಅವಕಾಶ ಕೊಡಿಸುವುದು ಕಷ್ಟವೇನಲ್ಲ ಎಂದು ಅಭಿಮನ್ಯು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಟಿಸಿಎಸ್​ನಿಂದ ಬಿಎಸ್​ಎನ್​ಎಲ್​ಗೆ 4ಜಿ ಅಳವಡಿಕೆ

ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಈಗಾಗಲೇ 5ಜಿ ಅಳವಡಿಕೆ ಮಾಡುತ್ತಿವೆ. ಆದರೆ, ಈ ರೇಸ್​ನಲ್ಲಿ ಬಿಎಸ್​ಎನ್​ಎಲ್ ತೀರಾ ಹಿಂದುಳಿದಿದೆ. 3ಜಿಯಲ್ಲೇ ಇರುವ ಬಿಎಸ್​ಎನ್​ಎಲ್ ಈಗ 4ಜಿಗೆ ಅಪ್​ಗ್ರೇಡ್ ಆಗುತ್ತಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆ ಬಿಎಸ್​ಎನ್​ಎಲ್​ಗೆ 4ಜಿ ನೆಟ್ವರ್ಕ್ ಅಳವಡಿಕೆ ಮಾಡುತ್ತಿದೆ. ದೇಶಾದ್ಯಂತ ಇನ್ನೂ ಪೂರ್ಣವಾಗಿ ಇದರ ಅಳವಡಿಕೆ ಆಗಿಲ್ಲ. ಹೀಗಾಗಿ, ಬಹಳಷ್ಟು ಬಿಎಸ್​ಎನ್​ಎಲ್ ಗ್ರಾಹಕರು ಜಿಯೋ ಅಥವಾ ಏರ್ಟೆಲ್ ಕಡೆಗೆ ವಾಲುತ್ತಿದ್ದಾರೆ.

ಇದನ್ನೂ ಓದಿ: ಎನ್​ವಿಡಿಯಾ ಸಿಇಒ: ಒಬ್ಬ ಸಾಧಾರಣ ವೈಟರ್ ವಿಶ್ವದ ಶ್ರೀಮಂತ ವ್ಯಕ್ತಿಯಾದ ಇಂಟರೆಸ್ಟಿಂಗ್ ಕಥೆ

ಟಿಸಿಎಸ್​​ನಿಂದ 4ಜಿ ನೆಟ್ವರ್ಕ್ ಪೂರ್ಣ ಆಗುವವರೆಗೂ ವೊಡಾಫೋನ್ ಐಡಿಯಾದ 4ಜಿ ನೆಟ್ವರ್ಕ್ ಅನ್ನು ಬಳಸುವುದರಿಂದ ಗ್ರಾಹಕರ ವಲಸೆಯನ್ನು ತತ್​ಕ್ಷಣಕ್ಕೆ ತಡೆಯಬಹುದು. ಇದು ತಾತ್ಕಾಲಿಕ ವ್ಯವಸ್ಥೆ ಮಾತ್ರ ಎಂಬುದು ಬಿಎಸ್​ಎನ್​ಎಲ್​ನ ಲೆಕ್ಕಾಚಾರ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ತುಮಕೂರಿನಲ್ಲಿ ವಿದ್ಯುತ್​ ಟ್ರಾನ್ಸ್​ಫಾರ್ಮರ್ ಏರಿ ​​ವ್ಯಕ್ತಿಯ ಹುಚ್ಚಾಟ
ತುಮಕೂರಿನಲ್ಲಿ ವಿದ್ಯುತ್​ ಟ್ರಾನ್ಸ್​ಫಾರ್ಮರ್ ಏರಿ ​​ವ್ಯಕ್ತಿಯ ಹುಚ್ಚಾಟ
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ