AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Inspiring: ಎನ್​ವಿಡಿಯಾ ಸಿಇಒ: ಒಬ್ಬ ಸಾಧಾರಣ ವೈಟರ್ ವಿಶ್ವದ ಶ್ರೀಮಂತ ವ್ಯಕ್ತಿಯಾದ ಇಂಟರೆಸ್ಟಿಂಗ್ ಕಥೆ

NVidia CEO Jensen Huang's Inspiring Story: ಅಡ್ವಾನ್ಸ್ಡ್ ಚಿಪ್ ತಯಾರಿಸುವ ಕಂಪನಿಯಾದ ಎನ್​ವಿಡಿಯಾದ ಸಿಇಒ ಜೆನ್ಸೆನ್ ಹುವಾಂಗ್ ವಿಶ್ವದ 23ನೇ ಅತಿಶ್ರೀಮಂತ ವ್ಯಕ್ತಿಯಾಗಿದ್ದಾರೆ. ಕಾಲೇಜು ಓದಿನ ಬಳಿಕ ಹೋಟೆಲ್​ನಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದಾಗಲೇ ಸ್ನೇಹಿತರ ಜೊತೆ ಎನ್​ವಿಡಿಯಾ ಕಂಪನಿ ಸ್ಥಾಪಿಸಿದ್ದರು. ತೈವಾನ್ ಸಂಜಾತರಾದ ಜೆನ್ಸೆನ್ ಚಿಪ್ ತಯಾರಿಕಾ ಕ್ಷೇತ್ರದಲ್ಲಿ ಕಿಂಗ್ ಎನಿಸಿದ್ದಾರೆ. ಎನ್​ವಿಡಿಯಾ ತಯಾರಿಸುವ ಚಿಪ್ ಎಐ ಕ್ಷೇತ್ರದ ಬೆಳವಣಿಗೆಗೆ ಸಹಾಯಕವಾಗಿದೆ.

Inspiring: ಎನ್​ವಿಡಿಯಾ ಸಿಇಒ: ಒಬ್ಬ ಸಾಧಾರಣ ವೈಟರ್ ವಿಶ್ವದ ಶ್ರೀಮಂತ ವ್ಯಕ್ತಿಯಾದ ಇಂಟರೆಸ್ಟಿಂಗ್ ಕಥೆ
ಜೆನ್ಸೆನ್ ಹುವಾಂಗ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 19, 2024 | 6:17 PM

Share

ಮನಸು ಮರ್ಕಟ ಎನ್ನುವವರು ಇದ್ದಾರೆ. ಹಾಗೆಯೇ, ಮನಸ್ಸಿದ್ದರೆ ಮಾರ್ಗ, ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎನ್ನುವವರೂ ಇದ್ದಾರೆ. ಈ ಎರಡನೇ ಗುಂಪಿಗೆ ಸೇರಿದವರು ಎನ್​ವಿಡಿಯಾ (NVidia) ಸಿಇಒ ಜೆನ್ಸೆನ್ ಹುವಾಂಗ್. ಹೋಟೆಲ್​ನಲ್ಲಿ ಸಾಧಾರಣ ವೈಟರ್ ಕೆಲಸ ಮಾಡುತ್ತಿದ್ದ ಇವರು ಇವತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರಕ್ಕೆ ರೆಕ್ಕೆಪುಕ್ಕ ಕೊಡುವ ಅತ್ಯಾಧುನಿಕ ಚಿಪ್​ಗಳ ತಯಾರಿಕೆಯಲ್ಲಿ ಕಿಂಗ್ ಎನಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಇವರು ಸ್ಥಾಪಿಸಿರುವ ಎನ್​​ವಿಡಿಯಾದ ಮಾರುಕಟ್ಟೆ ಬಂಡವಾಳ (Market capital) ರಿಲಾಯನ್ಸ್ ಇಂಡಸ್ಟ್ರೀಸ್​ಗಿಂತ ಎಂಟು ಪಟ್ಟು ದೊಡ್ಡದು. ವೈಯಕ್ತಿಕವಾಗಿ ಜೆನ್ಸೆನ್ ಹುವಾಂಗ್ (Jensen Huang) 64 ಬಿಲಿಯನ್ ಡಾಲರ್ ಸಂಪತ್ತಿನ ಒಡೆಯರಾಗಿದ್ದು, ವಿಶ್ವದಲ್ಲೇ 23ನೇ ಅತಿದೊಡ್ಡ ಶ್ರೀಮಂತ ಎನಿಸಿದ್ದಾರೆ.

ಹೋಟೆಲ್​ನಲ್ಲಿ ವೈಟರ್ ಕೆಲಸದಿಂದ…

ಜೆನ್ಸೆನ್ ಹುವಾಂಗ್ ಅವರದ್ದು ತೀರಾ ಬಡತನ ಇದ್ದ ಕುಟುಂಬವಲ್ಲ. ತೈವಾನ್​ನಲ್ಲಿ 1963ರಲ್ಲಿ ಜನಿಸಿದ ಹುವಾಂಗ್ ಐದು ವರ್ಷ ವಯಸ್ಸಿದ್ದಾಗ ಕುಟುಂಬದ ಜೊತೆ ಥಾಯ್ಲೆಂಡ್​ಗೆ ವಲಸೆ ಹೋದರು. ಒಂಬತ್ತನೇ ವಯಸ್ಸಿನಲ್ಲಿ ತನ್ನ ಸಹೋದರನ ಜೊತೆ ಅಮೆರಿಕದ ವಾಷಿಂಗ್ಟನ್​ನಲ್ಲಿದ್ದ ನಂಟರ ಮನೆಗೆ ಹೋದರು. ಕೆಂಟುಕಿ, ಪೋರ್ಟ್​ಲ್ಯಾಂಡ್​ನಲ್ಲಿ ಓದಿದ ಬಳಿಕ ಅವರು ಡೆನಿಸ್ ರೆಸ್ಟೋರೆಂಟ್​ನಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದರು.

ಅಮೆರಿಕದಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಸಾಲ ತೀರಿಸಲು ಈ ರೀತಿ ಸಣ್ಣ ಪುಟ್ಟ ಕೆಲಸ ಮಾಡುವುದು ಸಾಮಾನ್ಯ. ಇದೇ ಕಾರಣಕ್ಕೆ ಜೆನ್ಸೆನ್ ಹುವಾಂಗ್ ಕೂಡ ಹೋಟೆಲ್​ನಲ್ಲಿ ಕೆಲಸ ಮಾಡಿದ್ದಿರಬಹುದು. ಕುತೂಹಲವೆಂದರೆ ಇಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದಾಗಲೇ ಹುವಾಂಗ್ ಅವರು ಎನ್​​ವಿಡಿಯಾ ಕಂಪನಿಯನ್ನು ಸ್ಥಾಪಿಸಿದ್ದರು.

ಇದನ್ನೂ ಓದಿ: ಪಾಕಿಸ್ತಾನದ ಆರ್ಥಿಕತೆಗಿಂತಲೂ ದೊಡ್ಡದು ಟಾಟಾ ಗ್ರೂಪ್ ಮಾರುಕಟ್ಟೆ ಬಂಡವಾಳ

ಎನ್​ವಿಡಿಯಾ ಹೆಸರಿನ ಹಿಂದಿನ ಕುತೂಹಲದ ವಿಚಾರ…

1993ರಲ್ಲಿ ಜೆನ್ಸೆನ್ ಹುವಾಂಗ್, ಕ್ರಿಸ್ ಮಲಾಚೋವಸ್ಕಿ ಮತ್ತು ಕರ್ಟಿಸ್ ಪ್ರಿಯೆಮ್ ಅವರು ಎನ್​ವಿಡಿಯಾ ಕಂಪನಿಯನ್ನು ಸ್ಥಾಪಿಸಿದರು. ಜೆನ್ಸೆನ್ ಕೆಲಸ ಮಾಡುತ್ತಿದ್ದ ಡೆನಿಸ್​ನ ರಸ್ತೆಬದಿ ರೆಸ್ಟೋರೆಂಟ್​ನಲ್ಲೇ ಕೂತು ಈ ಮೂವರು ಸ್ನೇಹಿತರು ಹೊಸ ಕಂಪನಿ ಹುಟ್ಟುಹಾಕಿದ್ದರು.

ಮೊದಲಿಗೆ ಇದಕ್ಕೆ ಹೆಸರೇ ಇರಲಿಲ್ಲ. ಮೂರು ಮಂದಿ ಸೇರಿಕೊಂಡು ಚರ್ಚಿಸಿ ಎನ್​ವಿ ಎಂಬ ಆರಂಭಿಕ ಪದಗಳನ್ನು ನಿರ್ಧರಿಸಿದರು. ಎನ್​ವಿ ಎಂದರೆ ನೆಕ್ಸ್ಟ್​ ವರ್ಶನ್ ಎಂಬುದರ ಸಂಕ್ಷಿಪ್ತ ರೂಪ. ಬಳಿಕ ಎನ್​ವಿ ಅಕ್ಷರಳಿರುವ ಎಲ್ಲಾ ಪದಗಳನ್ನೂ ಡಿಕ್ಷನರಿಯಲ್ಲಿ ಜಾಲಾಡಿದರು. ಆಗ ಅವರ ಕಣ್ಣಿಗೆ ಬಿದ್ದದ್ದು invidia ಎಂಬ ಲ್ಯಾಟಿನ್ ಪದ. ಅದರ ಅರ್ಥ ಅಸೂಯೆ. ಬೇರೆಯವರು ಅಸೂಯೆ ಪಡುವಂಥ ಕಂಪನಿ ತಮ್ಮದಾಗಬೇಕೆಂದು ಬಯಸ್ಸಿದ್ದರು ಹುವಾಂಗ್ ಅಂಡ್ ಫ್ರೆಂಡ್ಸ್.

ಇದನ್ನೂ ಓದಿ: ಮಾಜಿ ಐಸಿಐಸಿಐ ಸಿಇಒ ಚಂದಾ ಕೋಚರ್ ಬಂಧನ, ಇದು ಅಧಿಕಾರ ದುರುಪಯೋಗ: ಸಿಬಿಐಗೆ ಹೈಕೋರ್ಟ್ ಛೀಮಾರಿ

ಆಗಿನ ಕಾಲಕ್ಕೆ ಈ ಮೂವರು ಬ್ಯಾಂಕಿನಲ್ಲಿ 40,000 ಡಾಲರ್ ಸಾಲ ಪಡೆದು ಕಂಪನಿಗೆ ಹಾಕಿದ್ದರು. ಆ ಬಳಿಕ ಒಂದಷ್ಟು ಹೂಡಿಕೆಗಳು ಹರಿದುಬಂದವು. ಚಿಪ್​ಗಳ ತಯಾರಿಕೆಯಲ್ಲಿ ಬಹಳ ದೊಡ್ಡ ಕಂಪನಿಯಾಗಿ ಬೆಳೆದಿದೆ. ಅಡ್ವಾನ್ಸ್ಡ್ ಚಿಪ್ಸ್ ತಯಾರಿಸುತ್ತದೆ. ಎಐ ಕಂಪ್ಯೂಟಿಂಗ್​ಗೆ ಈ ಚಿಪ್​ಗಳನ್ನು ಬಳಸಲಾಗುತ್ತದೆ. ಈ ಮೂಲಕ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದ ಬೆಳವಣಿಗೆಗೆ ಎನ್​ವಿಡಿಯಾ ಪಾತ್ರ ಬಹಳ ಗಮನಾರ್ಹವಾದುದು.

ಎನ್​ವಿಡಿಯಾದ ಮಾರುಕಟ್ಟೆ ಬಂಡವಾಳ ಫೇಸ್ಬುಕ್, ಗೂಗಲ್, ಅಮೇಜಾನ್​ಗಿಂತಲೂ ದೊಡ್ಡದಿದೆ. ವಿಶ್ವದ ನಾಲ್ಕನೇ ಅತಿದೊಡ್ಡ ಕಂಪನಿ ಎನಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ