AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಜೆಟ್​​ ಬಗ್ಗೆ ನನಗೆ ಅರ್ಥವಾಗ್ತಿಲ್ಲ, ಆದ್ರೂ ಕೇಳೋಕೆ ಚೆನ್ನಾಗಿದೆ: ಸೋಶಿಯಲ್​ ಮೀಡಿಯಾದಲ್ಲಿ ಮೀಮ್ಸ್​​​ಗಳ ಹವಾ

ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳ ಮಹಾಪೂರವೇ ಹರಿದುಬಂದಿದೆ. ಮಧ್ಯಮ ವರ್ಗದವರ ತೆರಿಗೆ ವಿನಾಯಿತಿ ನಿರೀಕ್ಷೆಗಳು, 'ಫಿಸ್ಕಲ್ ಡೆಫಿಸಿಟ್'ನಂತಹ ಆರ್ಥಿಕ ಪದಗಳ ಗೊಂದಲ, ಮತ್ತು ಯಾವ ವಸ್ತುಗಳು ಅಗ್ಗವಾಗಿವೆ ಎಂಬ ಜನರ ಕುತೂಹಲ ಹಾಸ್ಯಮಯವಾಗಿ ಮೀಮ್‌ಗಳ ರೂಪದಲ್ಲಿ ವ್ಯಕ್ತವಾಗಿದೆ. ಬಜೆಟ್ ದಿನ 'ಅರ್ಥಶಾಸ್ತ್ರಜ್ಞರ' ಸಂಖ್ಯೆ ಹೆಚ್ಚಿದ ಕುರಿತ ಮೀಮ್‌ಗಳು ಜನರ ಗಮನ ಸೆಳೆದಿವೆ.

ಬಜೆಟ್​​ ಬಗ್ಗೆ ನನಗೆ ಅರ್ಥವಾಗ್ತಿಲ್ಲ, ಆದ್ರೂ ಕೇಳೋಕೆ ಚೆನ್ನಾಗಿದೆ: ಸೋಶಿಯಲ್​ ಮೀಡಿಯಾದಲ್ಲಿ ಮೀಮ್ಸ್​​​ಗಳ ಹವಾ
ಸಾಂದರ್ಭಿಕ ಚಿತ್ರ Image Credit source: social Media
ಅಕ್ಷಯ್​ ಪಲ್ಲಮಜಲು​​
|

Updated on: Feb 01, 2026 | 4:25 PM

Share

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸುತ್ತಿದ್ದಂತೆ, ಇತ್ತ ಸೋಶಿಯಲ್ ಮೀಡಿಯಾದಲ್ಲಿ ಮೀಮ್‌ಗಳ (Memes) ಮಹಾಪೂರವೇ ಹರಿದುಬಂದಿದೆ. ಪ್ರತಿ ವರ್ಷದಂತೆ ಈ ಬಾರಿಯೂ ನೆಟ್ಟಿಗರು ಹಾಸ್ಯ ಪ್ರಜ್ಞೆಯನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದಾರೆ. “ಹೊಸ ತೆರಿಗೆ ಪದ್ಧತಿಯಲ್ಲಿ ವಿನಾಯಿತಿ ಸಿಗುತ್ತೆ ಅಂತ ಕಾಯ್ತಿರೋ ಮಧ್ಯಮ ವರ್ಗದ ಜನ” ಎಂಬ ಶೀರ್ಷಿಕೆಯಡಿ, ಹಳೆಯ ಸಿನಿಮಾದ ಪೋಸ್ಟ್​​ಗಳನ್ನು ಹಂಚಿಕೊಳ್ಳುತ್ತಿದ್ದಾರೆ . ಸರ್ಕಾರ ನಮಗೆ ಏನು ಕೊಡುತ್ತೆ ಅನ್ನೋದಕ್ಕಿಂತ, ನಮ್ಮಿಂದ ಏನು ತಗೊಳ್ಳಲ್ಲ ಅನ್ನೋದೇ ದೊಡ್ಡ ಬಜೆಟ್” ಎಂಬ ಸಾಲುಗಳು ಸಿಕ್ಕಾಪಟ್ಟೆ ಶೇರ್ ಆಗುತ್ತಿವೆ.

ಬಜೆಟ್ ಭಾಷಣದ ವೇಳೆ ಸಚಿವರು ಬಳಸುವ ‘Fiscal Deficit’, ‘Capex’, ‘GDP Growth’ ಅಂತಹ ಪದಗಳನ್ನು ಕೇಳಿ ಸಾಮಾನ್ಯ ಜನರು ಗಾಬರಿಯಿಂದ ನೋಡುತ್ತಿರುವ ‘ರಿಯಾಕ್ಷನ್ ವಿಡಿಯೋ’ಗಳು ನಗು ತರಿಸುತ್ತಿದೆ. “ನನಗೆ ಅರ್ಥವಾಗ್ತಿಲ್ಲ, ಆದ್ರೂ ಕೇಳೋಕೆ ಚೆನ್ನಾಗಿದೆ” ಅನ್ನೋ ರೀತಿಯ ಬಾಲಿವುಡ್ ಮತ್ತು ಸ್ಯಾಂಡಲ್‌ವುಡ್ ಕಾಮಿಡಿ ದೃಶ್ಯಗಳನ್ನು ಜನ ಬಳಸುತ್ತಿದ್ದಾರೆ. ಇದರ ಜತೆಗೆ ಕಳೆದ ಬಜೆಟ್‌ಗಳಲ್ಲಿ ಮೈತ್ರಿ ಪಕ್ಷಗಳ ರಾಜ್ಯಗಳಿಗೆ ಸಿಕ್ಕ ಪ್ರಾಮುಖ್ಯತೆಯನ್ನು ನೆನಪಿಸಿಕೊಂಡು, ಈ ಬಾರಿಯೂ “ನಮಗೆ ಏನು ಸಿಗುತ್ತೆ?” ಅಂತ ಕಾಯುತ್ತಿರುವ ಪ್ರಾದೇಶಿಕ ನಾಯಕರ ಮೀಮ್‌ಗಳು ಸದ್ದು ಮಾಡುತ್ತಿವೆ.

ಜೆಟ್‌ಗೆ ಮುನ್ನ ನಡೆದ ಹಲ್ವಾ ಸೆರೆಮನಿಯನ್ನು ಇಟ್ಟುಕೊಂಡು, “ಹಲ್ವಾ ತಿನ್ನೋರು ಅವರು, ನಮಗೆ ಹಲ್ವಾ ಕೊಡೋರು ಅವರು” (ನಮಗೆ ಮೋಸ ಮಾಡ್ತಾರೆ ಅನ್ನೋ ಅರ್ಥದಲ್ಲಿ) ಎಂಬ ಕಾಲೆಳೆಯುವ ಪೋಸ್ಟ್‌ಗಳು ಹರಿದಾಡುತ್ತಿವೆ.ಜೆಟ್ ಮುಗಿದ ತಕ್ಷಣ ಎಲ್ಲರೂ ಗೂಗಲ್‌ನಲ್ಲಿ “ಯಾವ ವಸ್ತುಗಳು ಅಗ್ಗವಾಗಿವೆ?” (What is cheaper?) ಅಂತ ಹುಡುಕುವ ವಿಡಿಯೋಗಳು ಮತ್ತು “ಸಿಗರೇಟ್ ಬೆಲೆ ಏರಿಕೆ” ಬಗ್ಗೆ ಬರುವ ತಮಾಷೆಯ ಪೋಸ್ಟ್‌ಗಳು ಟ್ರೆಂಡ್ ಆಗುತ್ತಿವೆ. ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ಭಾರಿ ವಿನಾಯಿತಿ ಸಿಗುತ್ತೆ ಎಂದು ಕಾದು ಕುಳಿತವರಿಗೆ ‘ಏನೂ ಸಿಗಲಿಲ್ಲ’ ಎಂಬ ಅರ್ಥದಲ್ಲಿ ಈ ಹಳೆಯ ಚಿತ್ರದ ದೃಶ್ಯ ಬಳಸಲಾಗುತ್ತಿದೆ.”ನನ್ನ ಅಕೌಂಟ್‌ನಲ್ಲಿ 470 ರೂ. ಇದೆ, ಆದ್ರೂ ನಾನು ಬಜೆಟ್ ನೋಡ್ತಿದ್ದೇನೆ” ಎಂಬ ಮೀಮ್ ಮಧ್ಯಮ ವರ್ಗದವರ ಪರಿಸ್ಥಿತಿಯನ್ನು ಹಾಸ್ಯಮಯವಾಗಿ ಬಿಂಬಿಸುತ್ತಿದೆ.

ಇದನ್ನೂ ಓದಿ: ಸೆಮಿಕಂಡಕ್ಟರ್ ಮಿಷನ್‌ಗೆ 40,000 ಕೋಟಿ ರೂ.; ಬಜೆಟ್ ಮಂಡನೆ ಬಳಿಕ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ

ಸರ್ಕಾರವು ಫ್ಯೂಚರ್ಸ್ ಮತ್ತು ಆಪ್ಷನ್ಸ್ (F&O) ಮೇಲಿನ ಸೆಕ್ಯೂರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (STT) ಅನ್ನು ಹೆಚ್ಚಿಸಿರುವುದರಿಂದ, ಟ್ರೇಡರ್‌ಗಳು ಎಂಬ ಲಗಾನ್ ಸಿನಿಮಾ ಶೈಲಿಯ ಮೀಮ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ರ್ಷಪೂರ್ತಿ ಹಣಕಾಸಿನ ಬಗ್ಗೆ ಅರಿವಿಲ್ಲದವರು ಬಜೆಟ್ ದಿನ ಮಾತ್ರ “ದೇಶದ ಜಿಡಿಪಿ ಹಾಗಿದೆ, ಫಿಸ್ಕಲ್ ಡೆಫಿಸಿಟ್ ಹೀಗಿದೆ” ಎಂದು ವಿಶ್ಲೇಷಣೆ ಮಾಡುವುದನ್ನು ಲೇವಡಿ ಮಾಡುವ ಮೀಮ್‌ಗಳು ವೈರಲ್ ಆಗಿವೆ. “ಬಜೆಟ್ ದಿನದಂದು ಅರ್ಥಶಾಸ್ತ್ರಜ್ಞರ ಸಂಖ್ಯೆಯಲ್ಲಿ ಭಾರಿ ಏರಿಕೆ” ಎಂಬ ಶೀರ್ಷಿಕೆಯಡಿ ಗಣಿತದ ಗ್ರಾಫ್‌ಗಳನ್ನು ಬಳಸಲಾಗುತ್ತಿದೆ.

ಬಜೆಟ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Akshay Pallamajalu
Akshay Pallamajalu

ನನ್ನ ಹೆಸರು ಅಕ್ಷಯ್ ಕುಮಾರ್ ಪಲ್ಲಮಜಲು, ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಡಿಜಿಟಲ್​ ವಿಭಾಗದಲ್ಲಿ 3 ವರ್ಷಗಳ ಅನುಭವ, ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಟಿವಿ9ನಲ್ಲೂ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದೇನೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಲೇಖನಗಳನ್ನು ಬರೆಯುತ್ತೇನೆ.

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ