ಕ್ಯಾಷ್​ಲೆಸ್ ಪೇಮೆಂಟ್ಸ್; ಅಮೆರಿಕನ್ನರು 3 ವರ್ಷದಲ್ಲಿ ಮಾಡುವುದಕ್ಕಿಂತ ಭಾರತೀಯರು 1 ತಿಂಗಳಲ್ಲಿ ಹೆಚ್ಚು ವಹಿವಾಟು ಮಾಡುತ್ತಾರೆ: ಜೈಶಂಕರ್

Union Minister S Jaishankar at Nigeria: ಭಾರತೀಯರು ಒಂದು ತಿಂಗಳಲ್ಲಿ ಮಾಡುವ ಕ್ಯಾಷ್ಲೆಸ್ ವಹಿವಾಟು ಅಮೆರಿಕದವರು 3 ವರ್ಷದಲ್ಲಿ ಮಾಡುವುದಕ್ಕಿಂತ ಹೆಚ್ಚು. ನೈಜೀರಿಯಾದಲ್ಲಿ ಜನವರಿ 21ರಂದು ಭಾರತೀಯ ಸಮುದಾಯವನ್ನುದ್ದೇಶಿಸಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಾತನಾಡಿದರು. ಭಾರತದಲ್ಲಿ 2017-18ರಲ್ಲಿ 1 ಲಕ್ಷ ಕೋಟಿ ರೂನಷ್ಟು ಯುಪಿಐ ವಹಿವಾಟು ನಡೆದಿತ್ತು. 2022-23ರಲ್ಲಿ 139 ಲಕ್ಷ ಕೋಟಿ ರೂನಷ್ಟು ವಹಿವಾಟು ಆಗಿದೆ.

ಕ್ಯಾಷ್​ಲೆಸ್ ಪೇಮೆಂಟ್ಸ್; ಅಮೆರಿಕನ್ನರು 3 ವರ್ಷದಲ್ಲಿ ಮಾಡುವುದಕ್ಕಿಂತ ಭಾರತೀಯರು 1 ತಿಂಗಳಲ್ಲಿ ಹೆಚ್ಚು ವಹಿವಾಟು ಮಾಡುತ್ತಾರೆ: ಜೈಶಂಕರ್
ಜೈಶಂಕರ್
Follow us
|

Updated on: Jan 22, 2024 | 1:48 PM

ನವದೆಹಲಿ, ಜನವರಿ 22: ಭಾರತದಲ್ಲಿ ಕಳೆದ ಒಂದು ದಶಕದಲ್ಲಿ ಡಿಜಿಟಲ್ ಕ್ರಾಂತಿ ನಡೆಯಲು ಪ್ರಮುಖ ಕಾರಣಗಳಲ್ಲಿ ಯುಪಿಐ ಇದೆ. ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI- Unified Payment Interface) ಎಂಬುದು ಹಲವು ಡಿಜಿಟಲ್ ಪಾವತಿ ಆಯ್ಕೆಗಳಲ್ಲಿ ಒಂದು. ಜನಸಾಮಾನ್ಯರ ಕ್ಯಾಷ್​ಲೆಸ್ ಪೇಮೆಂಟ್​ನ ಪ್ರಮುಖ ಆಯ್ಕೆ ಯುಪಿಐ ಆಗಿದೆ. ಹಲವು ದೇಶಗಳೂ ಕೂಡ ಭಾರತದ ಯುಪಿಐನಂತಹ ಪೇಮೆಂಟ್ ಸಿಸ್ಟಂ ಅನ್ನು ಅಳವಡಿಸಿಕೊಳ್ಳಲು ಆಸಕ್ತಿ ತೋರಿವೆ. ಭಾರತದಲ್ಲಿ ಒಂದು ವರ್ಷದಲ್ಲಿ ಲಕ್ಷಾಂತರ ಕೋಟಿ ರೂ ಮೌಲ್ಯದ ಹಣ ವಹಿವಾಟು ಯುಪಿಐ ಮೂಲಕ ನಡೆಯುತ್ತದೆ. ನೈಜೀರಿಯಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ನಿನ್ನೆ (ಜ. 21) ಮಾತನಾಡಿದ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಭಾರತ ಮತ್ತು ಅಮೆರಿಕದಲ್ಲಿನ ಕ್ಯಾಷ್​ಲೆಸ್ ಪಾವತಿ ವಿಚಾರವನ್ನು ತುಲನೆ ಮಾಡಿದ್ದಾರೆ.

‘ಪ್ರತಿಯೊಬ್ಬ ಭಾರತೀಯ ಪ್ರಜೆಯ ಬದುಕು ಈಗ ಸುಗಮಗೊಂಡಿದೆ. ತಂತ್ರಜ್ಞಾನವನ್ನು ನಾವು ಬಹಳ ಚೆನ್ನಾಗಿ ಅಳವಡಿಸಿಕೊಂಡಿರುವುದು ಇದಕ್ಕೆ ಕಾರಣ. ನೀವು ಇದನ್ನು ಪೇಮೆಂಟ್ ವಿಧಾನದ ಮೂಲಕ ತಿಳಿಯಬಹುದು. ನಗದು ಹಣ ಪಾವತಿಸುವ ಜನರು ಬಹಳ ಕಡಿಮೆ. ನಗದು ಹಣ ಸ್ವೀಕರಿಸುವವರೂ ಬಹಳ ಕಡಿಮೆ. ಭಾರತದಲ್ಲಿ ಒಂದು ತಿಂಗಳಲ್ಲಿ ನಡೆಯುವ ಕ್ಯಾಷ್​ಲೆಸ್ ಪೇಮೆಂಟ್​ಗಳು ಅಮೆರಿಕದಲ್ಲಿ ಮೂರು ವರ್ಷದಲ್ಲಿ ಅಗುವುದಕ್ಕಿಂತ ಹೆಚ್ಚು’ ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: Banks & Dravid: ಬ್ಯಾಂಕುಗಳು ರಾಹುಲ್ ದ್ರಾವಿಡ್​ರಂತೆ ಆಡಬೇಕು: ಆರ್​ಬಿಐ ಗವರ್ನರ್ ಕರೆ; ಕ್ರಿಕೆಟಿಗನಿಗೂ ಬ್ಯಾಂಕಿಗೂ ಏನು ಸಂಬಂಧ?

2014ರಿಂದೀಚೆ ದೇಶದಲ್ಲಿ ಆದ ಪ್ರಮುಖ ಪರಿವರ್ತನೆ ಬಗ್ಗೆ ಮಾತನಾಡಿದ ಜೈಶಂಕರ್, ಈ ಪರಿವರ್ತನೆಯಲ್ಲಿ ಯುಪಿಐ ಜೊತೆಗೆ 5ಜಿ, ಕೊರೋನಾ ಲಸಿಕೆ ಇತ್ಯಾದಿ ಐದು ಪ್ರಮುಖ ಅಂಶಗಳನ್ನು ಹೆಸರಿಸಿದ್ದಾರೆ.

‘ಒಂದು ದೇಶ ಹೇಗೆ ಸಮಸ್ಯೆ, ಸವಾಲುಗಳನ್ನು ಎದುರಿಸಿ ಪ್ರಬಲ ಆರ್ಥಿಕ ವೃದ್ಧಿ ಸಾಧಿಸಿ ಸಾಮಾನ್ಯ ನಾಗರಿಕನ ಜೀವನವನ್ನು ಉತ್ತಮಗೊಳಿಸಬಲ್ಲುದು ಎಂಬುದೇ ಸೋಜಿಗ. 2020ರಲ್ಲಿ ಕೋವಿಡ್ ಆರಂಭವಾದಾಗ, ಭಾರತಕ್ಕೆ ಈ ಸಮಸ್ಯೆ ಎದುರಿಸುವ ಶಕ್ತಿ ಇಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಎರಡು ವರ್ಷದ ಬಳಿಕ ಕೋವಿಡ್ ಅಲೆ ಮತ್ತು ಲಾಕ್​ಡೌನ್ ಅನ್ನು ನಾವು ಯಶಸ್ವಿಯಾಗಿ ದಾಟಿದ್ದೆವು. ವಿಶ್ವದ ಇತರ ಭಾಗಗಳಿಗೆ ಔಷಧ ತಯಾರಿಸತೊಡಗಿದ್ದೆವು’ ಎಂದು ವಿದೇಶಾಂಗ ಸಚಿವ ಜೈಶಂಕರ್ ತಿಳಿಸಿದ್ದಾರೆ.

ಇದನ್ನೂ ಓದಿ: Expectations On PLI: ಹೆಚ್ಚು ಉದ್ಯೋಗ ಸೃಷ್ಟಿಸುವ ಉದ್ಯಮಗಳಿಗೆ ಬೇಕು ಪಿಎಲ್​ಐ ಬೆಂಬಲ; ಬಜೆಟ್​ನಲ್ಲಿ ಸ್ಕೀಮ್ ವಿಸ್ತರಣೆ ಆಗುತ್ತಾ?

ಕೋವಿಡ್ ಸಾಂಕ್ರಾಮಿಕ ರೋಗ ಬಂದಾಗ ದೇಶದ ವೈದ್ಯಕೀಯ ವ್ಯವಸ್ಥೆ ಬಗ್ಗೆ ಬಹಳಷ್ಟು ಅನುಮಾನಗಳಿದ್ದವು. ಸಂದರ್ಭಕ್ಕೆ ತಕ್ಕಂತೆ ವೈದ್ಯಕೀಯ ವ್ಯವಸ್ಥೆ ಬಲಗೊಂಡಿತು. ಕೋವಿಡ್ ಸಂಕಷ್ಟದಿಂದ ಹೊರಬರುವುದರ ಜೊತೆ ಜೊತೆಗೆ ದೇಶದಲ್ಲಿ ಡಿಜಿಟಲ್ ಕ್ರಾಂತಿ ಬಲಗೊಂಡಿದ್ದು ಗಮನಾರ್ಹ. ನೋಟ್ ಬ್ಯಾನ್ ಬಳಿಕ ಸಖತ್ ಏರಿಕೆಯಾಗಿದ್ದ ಯುಪಿಐ ವಹಿವಾಟು 2020ರ ಬಳಿಕ ಇನ್ನೂ ವಿಸ್ತೃತಗೊಂಡಿತ್ತು.

2017-18ರ ಹಣಕಾಸು ವರ್ಷದಲ್ಲಿ ಯುಪಿಐ ಮೂಲಕ ನಡೆದ ವಹಿವಾಟು 1 ಲಕ್ಷ ಕೋಟಿ ರೂ ಇತ್ತು. 2022-23ರ ವರ್ಷದಲ್ಲಿ 139 ಲಕ್ಷ ಕೋಟಿ ರೂನಷ್ಟು ವಹಿವಾಟು ಆಗಿದೆ. 2023ರ ಡಿಸೆಂಬರ್ ಒಂದೇ ತಿಂಗಳಲ್ಲಿ 17.4 ಲಕ್ಷ ಕೋಟಿ ರೂ ಮೌಲ್ಯದ ಹಣ ವಹಿವಾಟು ಯುಪಿಐ ಮೂಲಕ ನಡೆದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ